<p><strong>ನವದೆಹಲಿ (ಪಿಟಿಐ): </strong>ಕಾಂಗ್ರೆಸ್ ಯುವ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಲು ಅಣ್ಣಾ ಹಜಾರೆ ಸ್ವಗ್ರಾಮ ರಾಳೆಗಣ ಸಿದ್ದಿಯ ಸರಪಂಚ್ ಮತ್ತವರ ತಂಡ `ಭೇಟಿ ಒಪ್ಪಿಗೆ~ ಸಿಗದೇ ಬರಿಗೈಲಿ ಹಿಂತಿರುಗಿದೆ.<br /> ಮುಂದೆ ಭೇಟಿ ಒಪ್ಪಿಗೆ ಸಿಕ್ಕರೂ ಒಪ್ಪಿಕೊಳ್ಳಬೇಕೋ ಅಥವಾ ಬಾರದೋ ಎಂಬುದನ್ನು ಗ್ರಾಮ ನಿರ್ಧರಿಸಲಿದೆ ಎಂದು ತಂಡ ಸ್ಪಷ್ಟಪಡಿಸಿದೆ.<br /> <br /> ಕಾಂಗ್ರೆಸ್ ಸಂಸದ ಪಿ.ಟಿ.ಥಾಮಸ್ ಏರ್ಪಡಿಸಿದ್ದ ಈ ಸಭೆ ಹಲವು ನಿರೀಕ್ಷೆಗಳನ್ನು ಹುಟ್ಟಿಹಾಕಿತ್ತು. ಈ ಬೆಳವಣಿಗೆಯ ನಂತರ ಥಾಮಸ್ ಹೇಳಿಕೆ ನೀಡಿ, `ಸಂವಹನ ದೋಷದಿಂದಾಗಿ ಈ ಗೊಂದಲವಾಗಿದೆ~ ಎಂದು ಕ್ಷಮೆ ಯಾಚಿಸಿದ್ದಾರೆ.<br /> <br /> ಆದರೆ ರಾಹುಲ್ಗಾಂಧಿ ಅವರಿಗೆ ಈ ಭೇಟಿ ಬಗ್ಗೆ ಯಾವುದೇ ಅರಿವು ಇರಲಿಲ್ಲ ಎಂದು ಕಾಂಗ್ರೆಸ್ ವಕ್ತಾರೆ ರೇಣುಕಾ ಚೌಧರಿ ವರದಿಗಾರರಿಗೆ ತಿಳಿಸಿದ್ದಾರೆ.`ಅ.18ರ ಬೆಳಿಗ್ಗೆ 9ಕ್ಕೆ ರಾಹುಲ್ ಗಾಂಧಿ ಭೇಟಿ ಮಾಡಲು ಒಪ್ಪಿಕೊಂಡಿದ್ದಾರೆ ಎಂಬ ಮಾಹಿತಿ ಸಂಸದರಿಂದ ಬಂದ ನಂತರವೇ ನಾವು ಇಲ್ಲಿಗೆ ಹೊರಟಿದ್ದು. ಈಗ ಸಂಸದರು ಸಂವಹನದಲ್ಲಿ ದೋಷವಾಗಿದೆ ಎನ್ನುತ್ತಿದ್ದಾರೆ. ನಾವು ಗ್ರಾಮಕ್ಕೆ ವಾಪಸು ಹೊರಡುತ್ತೇವೆ~ ಎಂದು ಸರಪಂಚ್ ನೇತೃತ್ವದ ಆರು ಜನರ ತಂಡ ಹೇಳಿದೆ.<br /> <br /> `ಸಂಸದರ ಸಲಹೆಯ ಮೇರೆಗೆ ನಾವು ರಾಹುಲ್ ಭೇಟಿಗೆ ಅವಕಾಶ ಕೋರಿದ್ದೆವು. ಭೇಟಿಗೆ ಒಪ್ಪಿಗೆ ಕೋರಿ ಬರೆದಿದ್ದ ಪತ್ರದಲ್ಲೂ ನಾವು ಇದನ್ನು ಸ್ಪಷ್ಟಪಡಿಸಿದ್ದೆವು. ಭೇಟಿಗೆ ಆಗಮಿಸುವಂತೆ ಸಂಸದರ ಕಚೇರಿಯವರು ಹಲವು ಬಾರಿ ನಮ್ಮನ್ನು ಸಂಪರ್ಕಿಸಿದ್ದವು. ಜತೆಗೆ, ರಾಹುಲ್ ಕಚೇರಿಯವರೂ ಹಲವು ಸಲ ಸಂಪರ್ಕಿಸಿದ್ದರು~ ಎಂದು ಹಜಾರೆ ಆಪ್ತ ಸುರೇಶ್ ಪಥಾರೆ ವಿವರಿಸಿದ್ದಾರೆ.<br /> <br /> ತಮ್ಮ ಸಲಹೆ ಮೇರೆಗೆ ರಾಹುಲ್ ಭೇಟಿಗೆ ತೆರಳಿದ್ದಾಗಿ ತಿಳಿಸಿರುವ ಗ್ರಾಮಸ್ಥರ ಹೇಳಿಕೆಯನ್ನು ಥಾಮಸ್ ಅಲ್ಲಗಳೆದಿದ್ದಾರೆ.ಹಜಾರೆ ತಮ್ಮ ಗ್ರಾಮದಲ್ಲಿ ಚಾಲನೆ ನೀಡಿರುವ ಅಭಿವೃದ್ಧಿ ಕಾರ್ಯಗಳನ್ನು ನೋಡಲು ತಿಂಗಳ ಹಿಂದೆ ಅಲ್ಲಿಗೆ ಭೇಟಿ ನೀಡಿದ್ದೆ. ಈ ಸಂದರ್ಭದಲ್ಲಿ ಗ್ರಾಮಸ್ಥರು, ಗ್ರಾಮಾಭಿವೃದ್ಧಿಯ ಬಗ್ಗೆ ಆಸಕ್ತ ಹೊಂದಿರುವ ರಾಹುಲ್ರನ್ನು ಭೇಟಿಯಾಗುವ ಅಪೇಕ್ಷೆ ವ್ಯಕ್ತಪಡಿಸಿದರು. ಅದಕ್ಕಾಗಿ ನೆರವು ನೀಡುವ ಭರವಸೆ ನೀಡಿದ್ದೆ~ ಎಂದು ಥಾಮಸ್ ಹೇಳಿದ್ದಾರೆ.<br /> <br /> ಈ ಭೇಟಿಯ ಹಿಂದೆ ಯಾವುದೇ ರಾಜಕೀಯ ಕಾರ್ಯಸೂಚಿ ಇರಲಿಲ್ಲ. ಅಣ್ಣಾ ತಂಡ ಜನಲೋಕಪಾಲ ಮಸೂದೆಗಾಗಿ ನಡೆಸುತ್ತಿರುವ ಹೋರಾಟಕ್ಕೂ ನಮ್ಮ ಭೇಟಿಗೂ ಯಾವುದೇ ಸಂಬಂಧ ಇಲ್ಲ ಎಂದು ಪಥಾರೆ ಸ್ಪಷ್ಟಪಡಿಸಿದ್ದಾರೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ (ಪಿಟಿಐ): </strong>ಕಾಂಗ್ರೆಸ್ ಯುವ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಲು ಅಣ್ಣಾ ಹಜಾರೆ ಸ್ವಗ್ರಾಮ ರಾಳೆಗಣ ಸಿದ್ದಿಯ ಸರಪಂಚ್ ಮತ್ತವರ ತಂಡ `ಭೇಟಿ ಒಪ್ಪಿಗೆ~ ಸಿಗದೇ ಬರಿಗೈಲಿ ಹಿಂತಿರುಗಿದೆ.<br /> ಮುಂದೆ ಭೇಟಿ ಒಪ್ಪಿಗೆ ಸಿಕ್ಕರೂ ಒಪ್ಪಿಕೊಳ್ಳಬೇಕೋ ಅಥವಾ ಬಾರದೋ ಎಂಬುದನ್ನು ಗ್ರಾಮ ನಿರ್ಧರಿಸಲಿದೆ ಎಂದು ತಂಡ ಸ್ಪಷ್ಟಪಡಿಸಿದೆ.<br /> <br /> ಕಾಂಗ್ರೆಸ್ ಸಂಸದ ಪಿ.ಟಿ.ಥಾಮಸ್ ಏರ್ಪಡಿಸಿದ್ದ ಈ ಸಭೆ ಹಲವು ನಿರೀಕ್ಷೆಗಳನ್ನು ಹುಟ್ಟಿಹಾಕಿತ್ತು. ಈ ಬೆಳವಣಿಗೆಯ ನಂತರ ಥಾಮಸ್ ಹೇಳಿಕೆ ನೀಡಿ, `ಸಂವಹನ ದೋಷದಿಂದಾಗಿ ಈ ಗೊಂದಲವಾಗಿದೆ~ ಎಂದು ಕ್ಷಮೆ ಯಾಚಿಸಿದ್ದಾರೆ.<br /> <br /> ಆದರೆ ರಾಹುಲ್ಗಾಂಧಿ ಅವರಿಗೆ ಈ ಭೇಟಿ ಬಗ್ಗೆ ಯಾವುದೇ ಅರಿವು ಇರಲಿಲ್ಲ ಎಂದು ಕಾಂಗ್ರೆಸ್ ವಕ್ತಾರೆ ರೇಣುಕಾ ಚೌಧರಿ ವರದಿಗಾರರಿಗೆ ತಿಳಿಸಿದ್ದಾರೆ.`ಅ.18ರ ಬೆಳಿಗ್ಗೆ 9ಕ್ಕೆ ರಾಹುಲ್ ಗಾಂಧಿ ಭೇಟಿ ಮಾಡಲು ಒಪ್ಪಿಕೊಂಡಿದ್ದಾರೆ ಎಂಬ ಮಾಹಿತಿ ಸಂಸದರಿಂದ ಬಂದ ನಂತರವೇ ನಾವು ಇಲ್ಲಿಗೆ ಹೊರಟಿದ್ದು. ಈಗ ಸಂಸದರು ಸಂವಹನದಲ್ಲಿ ದೋಷವಾಗಿದೆ ಎನ್ನುತ್ತಿದ್ದಾರೆ. ನಾವು ಗ್ರಾಮಕ್ಕೆ ವಾಪಸು ಹೊರಡುತ್ತೇವೆ~ ಎಂದು ಸರಪಂಚ್ ನೇತೃತ್ವದ ಆರು ಜನರ ತಂಡ ಹೇಳಿದೆ.<br /> <br /> `ಸಂಸದರ ಸಲಹೆಯ ಮೇರೆಗೆ ನಾವು ರಾಹುಲ್ ಭೇಟಿಗೆ ಅವಕಾಶ ಕೋರಿದ್ದೆವು. ಭೇಟಿಗೆ ಒಪ್ಪಿಗೆ ಕೋರಿ ಬರೆದಿದ್ದ ಪತ್ರದಲ್ಲೂ ನಾವು ಇದನ್ನು ಸ್ಪಷ್ಟಪಡಿಸಿದ್ದೆವು. ಭೇಟಿಗೆ ಆಗಮಿಸುವಂತೆ ಸಂಸದರ ಕಚೇರಿಯವರು ಹಲವು ಬಾರಿ ನಮ್ಮನ್ನು ಸಂಪರ್ಕಿಸಿದ್ದವು. ಜತೆಗೆ, ರಾಹುಲ್ ಕಚೇರಿಯವರೂ ಹಲವು ಸಲ ಸಂಪರ್ಕಿಸಿದ್ದರು~ ಎಂದು ಹಜಾರೆ ಆಪ್ತ ಸುರೇಶ್ ಪಥಾರೆ ವಿವರಿಸಿದ್ದಾರೆ.<br /> <br /> ತಮ್ಮ ಸಲಹೆ ಮೇರೆಗೆ ರಾಹುಲ್ ಭೇಟಿಗೆ ತೆರಳಿದ್ದಾಗಿ ತಿಳಿಸಿರುವ ಗ್ರಾಮಸ್ಥರ ಹೇಳಿಕೆಯನ್ನು ಥಾಮಸ್ ಅಲ್ಲಗಳೆದಿದ್ದಾರೆ.ಹಜಾರೆ ತಮ್ಮ ಗ್ರಾಮದಲ್ಲಿ ಚಾಲನೆ ನೀಡಿರುವ ಅಭಿವೃದ್ಧಿ ಕಾರ್ಯಗಳನ್ನು ನೋಡಲು ತಿಂಗಳ ಹಿಂದೆ ಅಲ್ಲಿಗೆ ಭೇಟಿ ನೀಡಿದ್ದೆ. ಈ ಸಂದರ್ಭದಲ್ಲಿ ಗ್ರಾಮಸ್ಥರು, ಗ್ರಾಮಾಭಿವೃದ್ಧಿಯ ಬಗ್ಗೆ ಆಸಕ್ತ ಹೊಂದಿರುವ ರಾಹುಲ್ರನ್ನು ಭೇಟಿಯಾಗುವ ಅಪೇಕ್ಷೆ ವ್ಯಕ್ತಪಡಿಸಿದರು. ಅದಕ್ಕಾಗಿ ನೆರವು ನೀಡುವ ಭರವಸೆ ನೀಡಿದ್ದೆ~ ಎಂದು ಥಾಮಸ್ ಹೇಳಿದ್ದಾರೆ.<br /> <br /> ಈ ಭೇಟಿಯ ಹಿಂದೆ ಯಾವುದೇ ರಾಜಕೀಯ ಕಾರ್ಯಸೂಚಿ ಇರಲಿಲ್ಲ. ಅಣ್ಣಾ ತಂಡ ಜನಲೋಕಪಾಲ ಮಸೂದೆಗಾಗಿ ನಡೆಸುತ್ತಿರುವ ಹೋರಾಟಕ್ಕೂ ನಮ್ಮ ಭೇಟಿಗೂ ಯಾವುದೇ ಸಂಬಂಧ ಇಲ್ಲ ಎಂದು ಪಥಾರೆ ಸ್ಪಷ್ಟಪಡಿಸಿದ್ದಾರೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>