<p>ಹುಬ್ಬಳ್ಳಿ: `ಅಧಿಕಾರಕ್ಕಾಗಿ ಪಕ್ಷದ ವಿರುದ್ಧ ಬಂಡಾಯ ಏಳದೆ ತಾಳ್ಮೆಯಿಂದ ಕಾಯ್ದರೆ ಪಕ್ಷವೇ ಎಲ್ಲವನ್ನೂ ಕೊಡುತ್ತದೆ. ಮುಖ್ಯಮಂತ್ರಿಯಾಗಿ ನಿಮ್ಮ ಮುಂದೆ ನಿಂತಿರುವ ನಾನೇ ಈ ಮಾತಿಗೆ ಉದಾಹರಣೆ~ ಎಂದು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹೇಳಿದರು.<br /> <br /> ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಯಿಂದ ಸೋಮವಾರ ಏರ್ಪಡಿಸಲಾಗಿದ್ದ ಸಮಾರಂಭದಲ್ಲಿ ಪೌರ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. `ಪಕ್ಷಕ್ಕೆ ನಾವು ಕೊಟ್ಟಿದ್ದು ಮತ್ತು ಪಕ್ಷ ನಮಗೆ ಕೊಟ್ಟಿದ್ದು ಎರಡನ್ನೂ ತೂಗಿ ನೋಡಿದಾಗ ಪಕ್ಷದಿಂದ ನಾವು ಪಡೆದ ತೂಕವೇ ಹೆಚ್ಚಾಗುತ್ತದೆ. ಅಂತಹ ಪಕ್ಷದ ವಿರುದ್ಧ ಬಂಡಾಯ ಏಳುವ ಪ್ರವೃತ್ತಿ ಸಲ್ಲ. ಅಧಿಕಾರಕ್ಕಾಗಿ ಪಕ್ಷವನ್ನು ತೊರೆದು ಹೋಗುವ ಸಂಪ್ರದಾಯವೂ ಒಳ್ಳೆಯದಲ್ಲ~ ಎಂದು ಅವರು ಅಭಿಪ್ರಾಯಪಟ್ಟರು.<br /> <br /> `ಇಂದಿನ ಜನಕ್ಕೆ ಶಾಸಕರಾದ ಕೂಡಲೇ ಮಂತ್ರಿ ಪದವಿ ಬೇಕು. ಮಂತ್ರಿಯಾದ ಮೇಲೆ ಒಳ್ಳೆಯ ಖಾತೆ ಬೇಕು. ಅದೂ ಸಿಕ್ಕರೆ ಮುಖ್ಯಮಂತ್ರಿ ಹುದ್ದೆಯೇ ಬೇಕು. ಸ್ವಚ್ಛ ನಡತೆ, ಪ್ರಾಮಾಣಿಕ ಮನೋಭಾವ ಮತ್ತು ಬದ್ಧತೆ ಇದ್ದರೆ ಸ್ಥಾನಮಾನಗಳೇ ನಮ್ಮನ್ನು ಹುಡುಕಿ ಕೊಂಡು ಬರುತ್ತವೆ~ ಎಂದು ಶೆಟ್ಟರ್ ತಿಳಿಸಿದರು.<br /> <br /> `ಎರಡೂವರೆ ದಶಕಗಳ ನನ್ನ ರಾಜಕೀಯ ಜೀವನದಲ್ಲಿ ಪಕ್ಷ ನನಗೆ ಎಲ್ಲವನ್ನೂ ಕೊಟ್ಟಿದೆ. ಇಷ್ಟು ಬೇಗ ಅಷ್ಟೆಲ್ಲ ಅವಕಾಶ ಸಿಕ್ಕವೇ ಎಂಬುದನ್ನು ನೆನಪಿಸಿಕೊಂಡರೆ ಸೋಜಿಗವಾಗುತ್ತದೆ. ಇದೆಲ್ಲ ತಾಳ್ಮೆಯಿಂದ ಕಾಯ್ದಿದ್ದರ ಫಲ. ಎಲ್ಲರೂ ಇದನ್ನು ಅರ್ಥ ಮಾಡಿಕೊಳ್ಳ ಬೇಕು~ ಎಂದು ಅವರು ಭಾವುಕರಾಗಿ ನುಡಿದರು.<br /> <br /> `ಬಹುತೇಕರಿಗೆ ರಾಜಕಾರಣ ಚಟವಾಗಿದೆ. ಅದರಿಂದಲೇ ಎಲ್ಲವನ್ನೂ ಮಾಡಿಕೊಳ್ಳುತ್ತೇವೆ ಎನ್ನುವ ಭ್ರಮೆಯಲ್ಲಿ ಇರುತ್ತಾರೆ. ಇದೆಲ್ಲ ತಪ್ಪು ಕಲ್ಪನೆ. ಜನರ ಸೇವೆ ಮಾಡಲು ರಾಜ ಕಾರಣ ಅತ್ಯುತ್ತಮ ಕ್ಷೇತ್ರವಾಗಿದ್ದು, ಅವರ ಸಮಸ್ಯೆಗೆ ಸ್ಪಂದಿಸಿದರೆ ಅವರೇ ನಮ್ಮನ್ನು ನಾಯಕರನ್ನಾಗಿ ರೂಪಿಸುತ್ತಾರೆ~ ಎಂದು ವಿವರಿಸಿದರು.<br /> <br /> `ರಾಜಕೀಯದ ಬಗೆಗೆ ಕುತೂಹಲ ಇದ್ದರೂ ಕ್ರಿಯಾಶೀಲ ರಾಜಕಾರಣದ ವಿಷಯವಾಗಿ ನನಗೆ ಆಸಕ್ತಿಯೇ ಇರಲಿಲ್ಲ. ಯಡಿಯೂರಪ್ಪ ಮತ್ತು ಅನಂತಕುಮಾರ್ ಅವರ ಒತ್ತಾಯಕ್ಕೆ ಕಟ್ಟುಬಿದ್ದು ರಾಜಕೀಯಕ್ಕೆ ಬಂದೆ~ ಎಂದ ಅವರು, `ನಾನು ಪ್ರತಿನಿಧಿಸಿದ ಹುಬ್ಬಳ್ಳಿ ಗ್ರಾಮೀಣ ಕ್ಷೇತ್ರದ ಜನರ ಆಶೀರ್ವಾದಕ್ಕೆ ಭಾರಿ ಶಕ್ತಿ ಇದೆ. ಆದ್ದ ರಿಂದಲೇ ನಾನೂ ಸೇರಿದಂತೆ ಇಲ್ಲಿಂದ ಆಯ್ಕೆಯಾದ ಎಲ್ಲರೂ ದೊಡ್ಡ ಹುದ್ದೆ ಅಲಂಕರಿಸಿದ್ದೇವೆ~ ಎಂದರು.<br /> <br /> `ರಾಜಕೀಯ ದ್ವೇಷ ಎಂದಿಗೂ ಸಲ್ಲ. ಅದನ್ನು ನಮ್ಮನ್ನೇ ನಾಶ ಮಾಡುತ್ತದೆ~ ಎಂದ ಅವರು, `ನನ್ನ ವಿರುದ್ಧ ಸ್ಪರ್ಧಿ ಸಿದ್ದ ಬಸವರಾಜ ಬೊಮ್ಮಾಯಿ ಅವ ರಿಂದ ನನಗೆ ಅಪಾರ ಬೆಂಬಲ ಸಿಕ್ಕಿದೆ. ಚುನಾ ವಣೆಗೆ ಮಾತ್ರ ಪೈಪೋಟಿ, ಆಮೇಲೆ ಯಾವಾಗಲೂ ನಾವು ಸ್ನೇಹಿತರಾಗಿದ್ದೆವು~ ಎಂದು ನೆನೆದರು. <br /> <br /> ಈದ್ಗಾ ಮೈದಾನ, ಹೈಕೋರ್ಟ್ ಪೀಠ ಮತ್ತು ನೈರುತ್ಯ ರೈಲ್ವೆ ವಲಯ ಕ್ಕಾಗಿ ನಡೆಸಿದ ಹೋರಾಟಗಳಿಂದ ತಾವು ಬೆಳೆದು ಬಂದ ಬಗೆಯನ್ನು ಅವರು ಮೆಲುಕು ಹಾಕಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹುಬ್ಬಳ್ಳಿ: `ಅಧಿಕಾರಕ್ಕಾಗಿ ಪಕ್ಷದ ವಿರುದ್ಧ ಬಂಡಾಯ ಏಳದೆ ತಾಳ್ಮೆಯಿಂದ ಕಾಯ್ದರೆ ಪಕ್ಷವೇ ಎಲ್ಲವನ್ನೂ ಕೊಡುತ್ತದೆ. ಮುಖ್ಯಮಂತ್ರಿಯಾಗಿ ನಿಮ್ಮ ಮುಂದೆ ನಿಂತಿರುವ ನಾನೇ ಈ ಮಾತಿಗೆ ಉದಾಹರಣೆ~ ಎಂದು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹೇಳಿದರು.<br /> <br /> ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಯಿಂದ ಸೋಮವಾರ ಏರ್ಪಡಿಸಲಾಗಿದ್ದ ಸಮಾರಂಭದಲ್ಲಿ ಪೌರ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. `ಪಕ್ಷಕ್ಕೆ ನಾವು ಕೊಟ್ಟಿದ್ದು ಮತ್ತು ಪಕ್ಷ ನಮಗೆ ಕೊಟ್ಟಿದ್ದು ಎರಡನ್ನೂ ತೂಗಿ ನೋಡಿದಾಗ ಪಕ್ಷದಿಂದ ನಾವು ಪಡೆದ ತೂಕವೇ ಹೆಚ್ಚಾಗುತ್ತದೆ. ಅಂತಹ ಪಕ್ಷದ ವಿರುದ್ಧ ಬಂಡಾಯ ಏಳುವ ಪ್ರವೃತ್ತಿ ಸಲ್ಲ. ಅಧಿಕಾರಕ್ಕಾಗಿ ಪಕ್ಷವನ್ನು ತೊರೆದು ಹೋಗುವ ಸಂಪ್ರದಾಯವೂ ಒಳ್ಳೆಯದಲ್ಲ~ ಎಂದು ಅವರು ಅಭಿಪ್ರಾಯಪಟ್ಟರು.<br /> <br /> `ಇಂದಿನ ಜನಕ್ಕೆ ಶಾಸಕರಾದ ಕೂಡಲೇ ಮಂತ್ರಿ ಪದವಿ ಬೇಕು. ಮಂತ್ರಿಯಾದ ಮೇಲೆ ಒಳ್ಳೆಯ ಖಾತೆ ಬೇಕು. ಅದೂ ಸಿಕ್ಕರೆ ಮುಖ್ಯಮಂತ್ರಿ ಹುದ್ದೆಯೇ ಬೇಕು. ಸ್ವಚ್ಛ ನಡತೆ, ಪ್ರಾಮಾಣಿಕ ಮನೋಭಾವ ಮತ್ತು ಬದ್ಧತೆ ಇದ್ದರೆ ಸ್ಥಾನಮಾನಗಳೇ ನಮ್ಮನ್ನು ಹುಡುಕಿ ಕೊಂಡು ಬರುತ್ತವೆ~ ಎಂದು ಶೆಟ್ಟರ್ ತಿಳಿಸಿದರು.<br /> <br /> `ಎರಡೂವರೆ ದಶಕಗಳ ನನ್ನ ರಾಜಕೀಯ ಜೀವನದಲ್ಲಿ ಪಕ್ಷ ನನಗೆ ಎಲ್ಲವನ್ನೂ ಕೊಟ್ಟಿದೆ. ಇಷ್ಟು ಬೇಗ ಅಷ್ಟೆಲ್ಲ ಅವಕಾಶ ಸಿಕ್ಕವೇ ಎಂಬುದನ್ನು ನೆನಪಿಸಿಕೊಂಡರೆ ಸೋಜಿಗವಾಗುತ್ತದೆ. ಇದೆಲ್ಲ ತಾಳ್ಮೆಯಿಂದ ಕಾಯ್ದಿದ್ದರ ಫಲ. ಎಲ್ಲರೂ ಇದನ್ನು ಅರ್ಥ ಮಾಡಿಕೊಳ್ಳ ಬೇಕು~ ಎಂದು ಅವರು ಭಾವುಕರಾಗಿ ನುಡಿದರು.<br /> <br /> `ಬಹುತೇಕರಿಗೆ ರಾಜಕಾರಣ ಚಟವಾಗಿದೆ. ಅದರಿಂದಲೇ ಎಲ್ಲವನ್ನೂ ಮಾಡಿಕೊಳ್ಳುತ್ತೇವೆ ಎನ್ನುವ ಭ್ರಮೆಯಲ್ಲಿ ಇರುತ್ತಾರೆ. ಇದೆಲ್ಲ ತಪ್ಪು ಕಲ್ಪನೆ. ಜನರ ಸೇವೆ ಮಾಡಲು ರಾಜ ಕಾರಣ ಅತ್ಯುತ್ತಮ ಕ್ಷೇತ್ರವಾಗಿದ್ದು, ಅವರ ಸಮಸ್ಯೆಗೆ ಸ್ಪಂದಿಸಿದರೆ ಅವರೇ ನಮ್ಮನ್ನು ನಾಯಕರನ್ನಾಗಿ ರೂಪಿಸುತ್ತಾರೆ~ ಎಂದು ವಿವರಿಸಿದರು.<br /> <br /> `ರಾಜಕೀಯದ ಬಗೆಗೆ ಕುತೂಹಲ ಇದ್ದರೂ ಕ್ರಿಯಾಶೀಲ ರಾಜಕಾರಣದ ವಿಷಯವಾಗಿ ನನಗೆ ಆಸಕ್ತಿಯೇ ಇರಲಿಲ್ಲ. ಯಡಿಯೂರಪ್ಪ ಮತ್ತು ಅನಂತಕುಮಾರ್ ಅವರ ಒತ್ತಾಯಕ್ಕೆ ಕಟ್ಟುಬಿದ್ದು ರಾಜಕೀಯಕ್ಕೆ ಬಂದೆ~ ಎಂದ ಅವರು, `ನಾನು ಪ್ರತಿನಿಧಿಸಿದ ಹುಬ್ಬಳ್ಳಿ ಗ್ರಾಮೀಣ ಕ್ಷೇತ್ರದ ಜನರ ಆಶೀರ್ವಾದಕ್ಕೆ ಭಾರಿ ಶಕ್ತಿ ಇದೆ. ಆದ್ದ ರಿಂದಲೇ ನಾನೂ ಸೇರಿದಂತೆ ಇಲ್ಲಿಂದ ಆಯ್ಕೆಯಾದ ಎಲ್ಲರೂ ದೊಡ್ಡ ಹುದ್ದೆ ಅಲಂಕರಿಸಿದ್ದೇವೆ~ ಎಂದರು.<br /> <br /> `ರಾಜಕೀಯ ದ್ವೇಷ ಎಂದಿಗೂ ಸಲ್ಲ. ಅದನ್ನು ನಮ್ಮನ್ನೇ ನಾಶ ಮಾಡುತ್ತದೆ~ ಎಂದ ಅವರು, `ನನ್ನ ವಿರುದ್ಧ ಸ್ಪರ್ಧಿ ಸಿದ್ದ ಬಸವರಾಜ ಬೊಮ್ಮಾಯಿ ಅವ ರಿಂದ ನನಗೆ ಅಪಾರ ಬೆಂಬಲ ಸಿಕ್ಕಿದೆ. ಚುನಾ ವಣೆಗೆ ಮಾತ್ರ ಪೈಪೋಟಿ, ಆಮೇಲೆ ಯಾವಾಗಲೂ ನಾವು ಸ್ನೇಹಿತರಾಗಿದ್ದೆವು~ ಎಂದು ನೆನೆದರು. <br /> <br /> ಈದ್ಗಾ ಮೈದಾನ, ಹೈಕೋರ್ಟ್ ಪೀಠ ಮತ್ತು ನೈರುತ್ಯ ರೈಲ್ವೆ ವಲಯ ಕ್ಕಾಗಿ ನಡೆಸಿದ ಹೋರಾಟಗಳಿಂದ ತಾವು ಬೆಳೆದು ಬಂದ ಬಗೆಯನ್ನು ಅವರು ಮೆಲುಕು ಹಾಕಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>