<p>ಬಸ್ನಲ್ಲಿ ಪರಿಚಯವಾಗುವ ಮಗು ಕಥಾನಾಯಕಿ ನಳಿನಿಗೆ ಆತ್ಮೀಯವಾಗುತ್ತದೆ. ಅರ್ಧದಾರಿಯಲ್ಲೇ ಅದರ ಅಪ್ಪ ಇಳಿದು ಹೋದಾಗ ಆ ಮಗುವಿನ ಜವಾಬ್ದಾರಿ ನಳಿನಿಯ ಮೇಲೇ ಬೀಳುತ್ತದೆ. ಮಗುವನ್ನು ಮನೆಗೆ ಕರೆದುಕೊಂಡು ಬರುವ ನಳಿನಿ ಎದುರಿಸುವ ಸವಾಲುಗಳು `ಅನುವಾದ~ ಧಾರಾವಾಹಿಯ ಕಥಾವಸ್ತು. ನೂರು ಸಂಚಿಕೆಗಳನ್ನು ಯಶಸ್ವಿಯಾಗಿ ಪೂರೈಸಿ ಮುಂದುವರೆದಿರುವ ಧಾರಾವಾಹಿ ತಂಡ ಈಚೆಗೆ ಸಂತೋಷಕೂಟ ಹಮ್ಮಿಕೊಂಡಿತ್ತು. <br /> <br /> `ಅನುವಾದ~ ಜಯಂತ್ ನಿರ್ದೇಶನದ ಧಾರಾವಾಹಿ. ನಟಿ ವಿದ್ಯಾ ವೆಂಕಟರಾಮನ್ ನಿರ್ಮಿಸಿರುವ ಈ ದೈನಿಕ ಧಾರಾವಾಹಿ, `ಈಟೀವಿ~ಯಲ್ಲಿ ಸಂಜೆ 6ಕ್ಕೆ ಪ್ರಸಾರವಾಗುತ್ತದೆ. ಈ ಅವಧಿಯಲ್ಲಿ ಪ್ರಸಾರಗೊಳ್ಳುವ ಧಾರಾವಾಹಿಗಳು ಜನಪ್ರಿಯತೆ ಪಡೆಯುವುದು ಕಷ್ಟ ಎನ್ನುವ ನಂಬಿಕೆಯನ್ನು `ಅನುವಾದ~ ಸುಳ್ಳು ಮಾಡಿದೆ. ಇದು ಸಾಧ್ಯವಾಗಿರುವುದು ಜಯಂತ್ ಅವರ ಸಮರ್ಥ ನಿರ್ದೇಶನದಿಂದ ಎಂದು ತಂಡ ಮನದುಂಬಿ ಪ್ರಶಂಸಿಸಿತು.<br /> <br /> `ತಮ್ಮ ಧಾರಾವಾಹಿಯಲ್ಲಿ ಮನರಂಜನೆಯೊಂದಿಗೆ ಸಂಬಂಧದ ಮೌಲ್ಯಗಳನ್ನು ಹೇಳಲಾಗಿದೆ. ಸಂಭಾಷಣೆ ಬರೆದಿರುವ ಡಾ.ಕಶ್ಯಪ್ ಪಾತ್ರವೊಂದರಲ್ಲಿ ನಟಿಸಿಯೂ ಇದ್ದಾರೆ. ಈ ಧಾರಾವಾಹಿಯ ಎಲ್ಲಾ ಪಾತ್ರಗಳ್ಲ್ಲಲೂ ಎರಡು ಆಯಾಮಗಳಿರುವುದು ನೋಡುಗರಿಗೆ ಇಷ್ಟವಾಗಿದೆ~ ಎಂದು ಜಯಂತ್ ಬಣ್ಣಿಸಿದರು. <br /> <br /> ಎರಡು ನೂರು ಸಿನಿಮಾ ಮತ್ತು ನೂರು ಧಾರಾವಾಹಿಗಳಲ್ಲಿ ನಟಿಸಿರುವ ಹಿರಿಯ ನಟ ಬೆಂಗಳೂರು ನಾಗೇಶ್ ಅವರಿಗೆ ಇದುವರೆಗೂ ತಾವು ನಟಿಸದ ವಿಭಿನ್ನ ಪಾತ್ರ ಈ ಧಾರಾವಾಹಿಯಲ್ಲಿ ಸಿಕ್ಕಿರುವ ಸಂತಸ ಇದೆ. ಹಿರಿಯ ನಟಿ ಸುಂದರಶ್ರೀ ಜಯಂತ್ ಅವರ ವೃತ್ತಿಪರತೆಯನ್ನು ಕೊಂಡಾಡಿದರು. ಮೈಕೋ ಮಂಜುನಾಥ್, ಹನುಮಂತೇಗೌಡ್, ವಿದ್ಯಾ ವೆಂಕಟರಾಮನ್ ತಮ್ಮ ಅನುಭವ ಹಂಚಿಕೊಂಡರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬಸ್ನಲ್ಲಿ ಪರಿಚಯವಾಗುವ ಮಗು ಕಥಾನಾಯಕಿ ನಳಿನಿಗೆ ಆತ್ಮೀಯವಾಗುತ್ತದೆ. ಅರ್ಧದಾರಿಯಲ್ಲೇ ಅದರ ಅಪ್ಪ ಇಳಿದು ಹೋದಾಗ ಆ ಮಗುವಿನ ಜವಾಬ್ದಾರಿ ನಳಿನಿಯ ಮೇಲೇ ಬೀಳುತ್ತದೆ. ಮಗುವನ್ನು ಮನೆಗೆ ಕರೆದುಕೊಂಡು ಬರುವ ನಳಿನಿ ಎದುರಿಸುವ ಸವಾಲುಗಳು `ಅನುವಾದ~ ಧಾರಾವಾಹಿಯ ಕಥಾವಸ್ತು. ನೂರು ಸಂಚಿಕೆಗಳನ್ನು ಯಶಸ್ವಿಯಾಗಿ ಪೂರೈಸಿ ಮುಂದುವರೆದಿರುವ ಧಾರಾವಾಹಿ ತಂಡ ಈಚೆಗೆ ಸಂತೋಷಕೂಟ ಹಮ್ಮಿಕೊಂಡಿತ್ತು. <br /> <br /> `ಅನುವಾದ~ ಜಯಂತ್ ನಿರ್ದೇಶನದ ಧಾರಾವಾಹಿ. ನಟಿ ವಿದ್ಯಾ ವೆಂಕಟರಾಮನ್ ನಿರ್ಮಿಸಿರುವ ಈ ದೈನಿಕ ಧಾರಾವಾಹಿ, `ಈಟೀವಿ~ಯಲ್ಲಿ ಸಂಜೆ 6ಕ್ಕೆ ಪ್ರಸಾರವಾಗುತ್ತದೆ. ಈ ಅವಧಿಯಲ್ಲಿ ಪ್ರಸಾರಗೊಳ್ಳುವ ಧಾರಾವಾಹಿಗಳು ಜನಪ್ರಿಯತೆ ಪಡೆಯುವುದು ಕಷ್ಟ ಎನ್ನುವ ನಂಬಿಕೆಯನ್ನು `ಅನುವಾದ~ ಸುಳ್ಳು ಮಾಡಿದೆ. ಇದು ಸಾಧ್ಯವಾಗಿರುವುದು ಜಯಂತ್ ಅವರ ಸಮರ್ಥ ನಿರ್ದೇಶನದಿಂದ ಎಂದು ತಂಡ ಮನದುಂಬಿ ಪ್ರಶಂಸಿಸಿತು.<br /> <br /> `ತಮ್ಮ ಧಾರಾವಾಹಿಯಲ್ಲಿ ಮನರಂಜನೆಯೊಂದಿಗೆ ಸಂಬಂಧದ ಮೌಲ್ಯಗಳನ್ನು ಹೇಳಲಾಗಿದೆ. ಸಂಭಾಷಣೆ ಬರೆದಿರುವ ಡಾ.ಕಶ್ಯಪ್ ಪಾತ್ರವೊಂದರಲ್ಲಿ ನಟಿಸಿಯೂ ಇದ್ದಾರೆ. ಈ ಧಾರಾವಾಹಿಯ ಎಲ್ಲಾ ಪಾತ್ರಗಳ್ಲ್ಲಲೂ ಎರಡು ಆಯಾಮಗಳಿರುವುದು ನೋಡುಗರಿಗೆ ಇಷ್ಟವಾಗಿದೆ~ ಎಂದು ಜಯಂತ್ ಬಣ್ಣಿಸಿದರು. <br /> <br /> ಎರಡು ನೂರು ಸಿನಿಮಾ ಮತ್ತು ನೂರು ಧಾರಾವಾಹಿಗಳಲ್ಲಿ ನಟಿಸಿರುವ ಹಿರಿಯ ನಟ ಬೆಂಗಳೂರು ನಾಗೇಶ್ ಅವರಿಗೆ ಇದುವರೆಗೂ ತಾವು ನಟಿಸದ ವಿಭಿನ್ನ ಪಾತ್ರ ಈ ಧಾರಾವಾಹಿಯಲ್ಲಿ ಸಿಕ್ಕಿರುವ ಸಂತಸ ಇದೆ. ಹಿರಿಯ ನಟಿ ಸುಂದರಶ್ರೀ ಜಯಂತ್ ಅವರ ವೃತ್ತಿಪರತೆಯನ್ನು ಕೊಂಡಾಡಿದರು. ಮೈಕೋ ಮಂಜುನಾಥ್, ಹನುಮಂತೇಗೌಡ್, ವಿದ್ಯಾ ವೆಂಕಟರಾಮನ್ ತಮ್ಮ ಅನುಭವ ಹಂಚಿಕೊಂಡರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>