<p>ಖಳನಟರ ಯಾವ ಲಕ್ಷಣವೂ ಇಲ್ಲದ `ತಣ್ಣನೆಯ ವಿಲನ್~ ಎಂದೇ ಹೆಸರಾದವರು ನಟ ಅಶೋಕ್ ರಾವ್. ಎತ್ತರದ ದೇಹ, ಸೌಮ್ಯ ಮುಖ, ಕಂಚಿನ ಕಂಠ, ಇರಿಯುವಂತಹ ನೋಟ- ಇವೆಲ್ಲ ಅಶೋಕ್ ರಾವ್ ನಟನೆಗೆ ಮೆರುಗು ತಂದಿವೆ.<br /> <br /> ಅಶೋಕ್ ಉಳಿದ ಖಳರಂತೆ ಆರ್ಭಟಿಸುವುದಿಲ್ಲ. ಆದರೆ ಕ್ರೌರ್ಯವನ್ನು ತಮ್ಮ ನಟನೆಯಲ್ಲಿ ಸಮರ್ಥವಾಗಿ ಹೊರಹೊಮ್ಮಿಸಬಲ್ಲರು. ತಮ್ಮ ಸಾಮರ್ಥ್ಯವನ್ನು ಇಂದು ಚಿತ್ರರಂಗ ಮರೆತಂತೆ ವರ್ತಿಸುತ್ತಿದೆ ಎಂಬುದು ಅವರ ನೋವು.<br /> <br /> ಅಶೋಕ್ ರಾವ್ ಇಂಗ್ಲಿಷ್ ರಂಗಭೂಮಿಯಿಂದ ಬಂದವರು. ಆ ಕಾರಣಕ್ಕಾಗಿಯೇ ಅವರ ಮಾತುಗಳಲ್ಲಿ ಇಂಗ್ಲಿಷ್ ಧಾರಾಳವಾಗಿ ಸುಳಿಯುತ್ತದೆ. ಊರು ಕಾಸರಗೋಡು. ಕೊಂಕಣಿ ಮಾತೃಭಾಷೆ. ರಂಗಭೂಮಿಯಲ್ಲಿ ನಿರತರಾಗಿದ್ದ ಅವರನ್ನು `ಪರಶುರಾಮ್~ ಚಿತ್ರದ ಖಳನ ಪಾತ್ರ ಹುಡುಕಿ ಬಂತು. ಮೊದಲ ಚಿತ್ರದಲ್ಲಿಯೇ ರಾಜ್ಕುಮಾರ್ ಜೊತೆ ನಟಿಸುವ ಅವಕಾಶ.<br /> <br /> `ಪರಶುರಾಮ್~ ಚಿತ್ರದಲ್ಲಿ ಸಿಕ್ಕ ಪ್ರಧಾನ ಖಳನ ಪಾತ್ರವನ್ನು ಕಂಡು ಹಲವರು ನೀವು ಅಣ್ಣಾವ್ರ ಕುಟುಂಬಕ್ಕೆ ಹತ್ತಿರದವರಾ? ಎಂದು ಕೇಳ್ದ್ದಿದೂ ಇದೆಯಂತೆ. `ಅದು ನನ್ನ ಪೂರ್ವ ಜನ್ಮದ ಪುಣ್ಯ~ ಎನ್ನುವ ಅಶೋಕ್, ಹಿರಿಯ ನಟ ಸಿ.ಆರ್.ಸಿಂಹ ತಮ್ಮನ್ನು ಆ ಪಾತ್ರಕ್ಕೆ ಶಿಫಾರಸು ಮಾಡಿದ್ದನ್ನು ನೆನಪಿಸಿಕೊಳ್ಳುತ್ತಾರೆ. <br /> <br /> `ಪರಶುರಾಮ್~ ನಂತರ ಎಷ್ಟೊಂದು ಅವಕಾಶಗಳು ಅವರನ್ನು ಹುಡುಕಿಕೊಂಡು ಬಂದವೆಂದರೆ, ರಾಜ್ಕುಮಾರರ ಮತ್ತೊಂದು ಚಿತ್ರ `ಆಕಸ್ಮಿಕ~ದಲ್ಲಿ ನಟಿಸಲು ಬಂದ ಕರೆಯನ್ನು ಒಪ್ಪಿಕೊಳ್ಳಲಾಗಲಿಲ್ಲ. ಆ ಅವಕಾಶ ಕೈತಪ್ಪಿದರೂ, ಆ ಬಳಿಕ ಶಿವರಾಜ್ ಕುಮಾರ್ ಮತ್ತು ರಾಘವೇಂದ್ರ ರಾಜ್ಕುಮಾರ್ ಅವರೊಂದಿಗೆ ನಟಿಸಿದ ಖುಷಿ ಅವರಿಗಿದೆ. <br /> <br /> `ಖಳನ ಪಾತ್ರ ನನ್ನ ವೈಶಿಷ್ಟ್ಯತೆ~ ಎಂದು ನಗುವ ಅವರು 250ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ನಿರಂತರವಾಗಿ ವಿಲನ್ ಪಾತ್ರಗಳನ್ನು ಮಾಡಿದರೂ ಅಶೋಕ್ ರಾವ್ ಬೇಸರ ಮಾಡಿಕೊಂಡಿಲ್ಲ. `ನಾನು ವಿಲನ್ ತರ ಕಾಣಲ್ಲ. ಅದೇ ನನಗೊಂದು ಸವಾಲು. ವಿಲನ್ ರೀತಿ ಇಲ್ಲದೆ ಇರುವವನು ವಿಲನ್ ಆಗಿ ನಟಿಸುವುದು ಹೆಚ್ಚು ಪರಿಣಾಮ ಬೀರುತ್ತದೆ. <br /> <br /> ನಾನು ಅನಿರೀಕ್ಷಿತ ವಿಲನ್ ಆಗಿಯೇ ಹೆಚ್ಚು ಪರಿಚಿತ. ಜನ ಇಂದಿಗೂ ನನ್ನನ್ನು ಗುರುತಿಸುವುದು, ಇಷ್ಟಪಡುವುದು ಅದಕ್ಕಾಗಿಯೇ. ಖಳನ ಪಾತ್ರಗಳು ಕಲಾವಿದನಾಗಿ ತೃಪ್ತಿ ನೀಡಿದವು. ಅದಕ್ಕೆ ಅವಕಾಶ ಮಾಡಿಕೊಟ್ಟ ಕನ್ನಡ ಚಿತ್ರರಂಗಕ್ಕೆ ನಾನು ಋಣಿ~ ಎನ್ನುತ್ತಾರೆ ಅಶೋಕ್ ರಾವ್. <br /> <br /> ಖಳನ ಪಾತ್ರಗಳ ನಡುವೆ `ಬಾ ನಲ್ಲೆ ಮಧುಚಂದ್ರಕೆ~ ಚಿತ್ರದಲ್ಲೊಂದು ಸಕಾರಾತ್ಮಕ ಪಾತ್ರ ಅವರಿಗೆ ಸಿಕ್ಕಿತು. ಆದರೂ ಅವರ ಇಮೇಜ್ ಬದಲಾಗಲಿಲ್ಲ. `ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ನೀವೇ ಇದಕ್ಕೆ ಸೂಕ್ತ ವ್ಯಕ್ತಿ ಎಂದು ಹೇಳಿ `ಬಾ ನಲ್ಲೆ ಮಧುಚಂದ್ರಕೆ~ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯ ಪಾತ್ರ ಕೊಟ್ಟರು. ಅದಾದ ನಂತರವೂ ನಾನು ಖಳನಾಗಿಯೇ ಉಳಿದುಕೊಂಡೆ. ಜನ ನನ್ನನ್ನು ಖಳನಾಗಿಯೇ ಇಷ್ಟಪಟ್ಟರು~ ಎನ್ನುತ್ತಾರೆ ಅವರು.<br /> <br /> `ಒಂದೇ ವರ್ಷದಲ್ಲಿ 15 ಸಿನಿಮಾದಲ್ಲಿ ನಟಿಸಿದ್ದೆ. ದಿನಕ್ಕೆ ಮೂರು ಸಿನಿಮಾಗಳಲ್ಲಿ ನಟಿಸುತ್ತಿದ್ದೆ. ಅಷ್ಟು ಬಿಜಿಯಾಗಿದ್ದ ದಿನಗಳಿದ್ದವು. ಇದೀಗ ತುಂಬಾ ಜನ ಕಲಾವಿದರು ಬಂದಿದ್ದಾರೆ. ಸ್ಪರ್ಧೆ ಜಾಸ್ತಿಯಾಗಿದೆ~ ಎನ್ನುವ ಅವರಿಗೆ ಇದೀಗ ತಮ್ಮ ಮೂಲ ನೆಲೆ ರಂಗಭೂಮಿಯಲ್ಲಿ ಮತ್ತೆ ಸಕ್ರಿಯರಾಬೇಕೆಂಬ ಹಂಬಲ.<br /> <br /> ತಮಿಳು, ತೆಲುಗು, ಹಿಂದಿ, ಇಂಗ್ಲಿಷ್, ಕೊಂಕಣಿ ಚಿತ್ರಗಳಲ್ಲಿಯೂ ನಟಿಸಿರುವ ಅವರು ರಾಜ್ಕುಮಾರ್, ವಿಷ್ಣುವರ್ಧನ್, ಅಂಬರೀಷ್, ಅನಂತನಾಗ್, ಶಂಕರ್ನಾಗ್, ಪ್ರಭಾಕರ್, ದೇವರಾಜ್ ಮುಂತಾದ ಪ್ರಮುಖ ನಟರೊಂದಿಗೆ ನಟಿಸಿದ ಅನುಭವ ಹೊಂದಿದ್ದಾರೆ.<br /> <br /> ಅಷ್ಟೇ ಅಲ್ಲದೇ ತಮಿಳಿನಲ್ಲಿ ಕಮಲ ಹಾಸನ್ ಮತ್ತು ರಜನಿಕಾಂತ್ ಚಿತ್ರಗಳಲ್ಲಿಯೂ ನಟಿಸಿದ್ದಾರೆ.<br /> <br /> `ಆವೇಶ~, `ಜೋಡಿಹಕ್ಕಿ~, `ಅರಳಿದ ಹೂವುಗಳು~, `ತಮಸ್ಸು~, `ಮತ್ತೆ ಹಾಡಿತು ಕೋಗಿಲೆ~, `ಕಾಲಚಕ್ರ~, `ಅಶ್ವಮೇಧ~, `ಅಶೋಕ ಚಕ್ರ~, `ಟುವ್ವಿ ಟುವ್ವಿ~ ಮುಂತಾದವು ಅವರು ನಟಿಸಿರುವ ಪ್ರಮುಖ ಚಿತ್ರಗಳು.<br /> <br /> ಸದ್ಯ ಅವರು `ಏಂಜಲ್~ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಝೀ ವಾಹಿನಿಯ `ಮಡದಿ~ ಧಾರಾವಾಹಿಯಲ್ಲೂ ನಟಿಸುತ್ತಿದ್ದಾರೆ. ಅದರಲ್ಲಿ ಕುಟುಂಬದ ಯಜಮಾನನ ಪಾತ್ರ ಅವರದು. ಈ ಹಿಂದೆ ಅವರು `ಉಯ್ಯಾಲೆ~, `ನಚಿಕೇತ~, `ಮಹಾಯಜ್ಞ~ ಧಾರಾವಾಹಿಗಳಲ್ಲಿ ನಟಿಸಿದ್ದರಂತೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಖಳನಟರ ಯಾವ ಲಕ್ಷಣವೂ ಇಲ್ಲದ `ತಣ್ಣನೆಯ ವಿಲನ್~ ಎಂದೇ ಹೆಸರಾದವರು ನಟ ಅಶೋಕ್ ರಾವ್. ಎತ್ತರದ ದೇಹ, ಸೌಮ್ಯ ಮುಖ, ಕಂಚಿನ ಕಂಠ, ಇರಿಯುವಂತಹ ನೋಟ- ಇವೆಲ್ಲ ಅಶೋಕ್ ರಾವ್ ನಟನೆಗೆ ಮೆರುಗು ತಂದಿವೆ.<br /> <br /> ಅಶೋಕ್ ಉಳಿದ ಖಳರಂತೆ ಆರ್ಭಟಿಸುವುದಿಲ್ಲ. ಆದರೆ ಕ್ರೌರ್ಯವನ್ನು ತಮ್ಮ ನಟನೆಯಲ್ಲಿ ಸಮರ್ಥವಾಗಿ ಹೊರಹೊಮ್ಮಿಸಬಲ್ಲರು. ತಮ್ಮ ಸಾಮರ್ಥ್ಯವನ್ನು ಇಂದು ಚಿತ್ರರಂಗ ಮರೆತಂತೆ ವರ್ತಿಸುತ್ತಿದೆ ಎಂಬುದು ಅವರ ನೋವು.<br /> <br /> ಅಶೋಕ್ ರಾವ್ ಇಂಗ್ಲಿಷ್ ರಂಗಭೂಮಿಯಿಂದ ಬಂದವರು. ಆ ಕಾರಣಕ್ಕಾಗಿಯೇ ಅವರ ಮಾತುಗಳಲ್ಲಿ ಇಂಗ್ಲಿಷ್ ಧಾರಾಳವಾಗಿ ಸುಳಿಯುತ್ತದೆ. ಊರು ಕಾಸರಗೋಡು. ಕೊಂಕಣಿ ಮಾತೃಭಾಷೆ. ರಂಗಭೂಮಿಯಲ್ಲಿ ನಿರತರಾಗಿದ್ದ ಅವರನ್ನು `ಪರಶುರಾಮ್~ ಚಿತ್ರದ ಖಳನ ಪಾತ್ರ ಹುಡುಕಿ ಬಂತು. ಮೊದಲ ಚಿತ್ರದಲ್ಲಿಯೇ ರಾಜ್ಕುಮಾರ್ ಜೊತೆ ನಟಿಸುವ ಅವಕಾಶ.<br /> <br /> `ಪರಶುರಾಮ್~ ಚಿತ್ರದಲ್ಲಿ ಸಿಕ್ಕ ಪ್ರಧಾನ ಖಳನ ಪಾತ್ರವನ್ನು ಕಂಡು ಹಲವರು ನೀವು ಅಣ್ಣಾವ್ರ ಕುಟುಂಬಕ್ಕೆ ಹತ್ತಿರದವರಾ? ಎಂದು ಕೇಳ್ದ್ದಿದೂ ಇದೆಯಂತೆ. `ಅದು ನನ್ನ ಪೂರ್ವ ಜನ್ಮದ ಪುಣ್ಯ~ ಎನ್ನುವ ಅಶೋಕ್, ಹಿರಿಯ ನಟ ಸಿ.ಆರ್.ಸಿಂಹ ತಮ್ಮನ್ನು ಆ ಪಾತ್ರಕ್ಕೆ ಶಿಫಾರಸು ಮಾಡಿದ್ದನ್ನು ನೆನಪಿಸಿಕೊಳ್ಳುತ್ತಾರೆ. <br /> <br /> `ಪರಶುರಾಮ್~ ನಂತರ ಎಷ್ಟೊಂದು ಅವಕಾಶಗಳು ಅವರನ್ನು ಹುಡುಕಿಕೊಂಡು ಬಂದವೆಂದರೆ, ರಾಜ್ಕುಮಾರರ ಮತ್ತೊಂದು ಚಿತ್ರ `ಆಕಸ್ಮಿಕ~ದಲ್ಲಿ ನಟಿಸಲು ಬಂದ ಕರೆಯನ್ನು ಒಪ್ಪಿಕೊಳ್ಳಲಾಗಲಿಲ್ಲ. ಆ ಅವಕಾಶ ಕೈತಪ್ಪಿದರೂ, ಆ ಬಳಿಕ ಶಿವರಾಜ್ ಕುಮಾರ್ ಮತ್ತು ರಾಘವೇಂದ್ರ ರಾಜ್ಕುಮಾರ್ ಅವರೊಂದಿಗೆ ನಟಿಸಿದ ಖುಷಿ ಅವರಿಗಿದೆ. <br /> <br /> `ಖಳನ ಪಾತ್ರ ನನ್ನ ವೈಶಿಷ್ಟ್ಯತೆ~ ಎಂದು ನಗುವ ಅವರು 250ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ನಿರಂತರವಾಗಿ ವಿಲನ್ ಪಾತ್ರಗಳನ್ನು ಮಾಡಿದರೂ ಅಶೋಕ್ ರಾವ್ ಬೇಸರ ಮಾಡಿಕೊಂಡಿಲ್ಲ. `ನಾನು ವಿಲನ್ ತರ ಕಾಣಲ್ಲ. ಅದೇ ನನಗೊಂದು ಸವಾಲು. ವಿಲನ್ ರೀತಿ ಇಲ್ಲದೆ ಇರುವವನು ವಿಲನ್ ಆಗಿ ನಟಿಸುವುದು ಹೆಚ್ಚು ಪರಿಣಾಮ ಬೀರುತ್ತದೆ. <br /> <br /> ನಾನು ಅನಿರೀಕ್ಷಿತ ವಿಲನ್ ಆಗಿಯೇ ಹೆಚ್ಚು ಪರಿಚಿತ. ಜನ ಇಂದಿಗೂ ನನ್ನನ್ನು ಗುರುತಿಸುವುದು, ಇಷ್ಟಪಡುವುದು ಅದಕ್ಕಾಗಿಯೇ. ಖಳನ ಪಾತ್ರಗಳು ಕಲಾವಿದನಾಗಿ ತೃಪ್ತಿ ನೀಡಿದವು. ಅದಕ್ಕೆ ಅವಕಾಶ ಮಾಡಿಕೊಟ್ಟ ಕನ್ನಡ ಚಿತ್ರರಂಗಕ್ಕೆ ನಾನು ಋಣಿ~ ಎನ್ನುತ್ತಾರೆ ಅಶೋಕ್ ರಾವ್. <br /> <br /> ಖಳನ ಪಾತ್ರಗಳ ನಡುವೆ `ಬಾ ನಲ್ಲೆ ಮಧುಚಂದ್ರಕೆ~ ಚಿತ್ರದಲ್ಲೊಂದು ಸಕಾರಾತ್ಮಕ ಪಾತ್ರ ಅವರಿಗೆ ಸಿಕ್ಕಿತು. ಆದರೂ ಅವರ ಇಮೇಜ್ ಬದಲಾಗಲಿಲ್ಲ. `ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ನೀವೇ ಇದಕ್ಕೆ ಸೂಕ್ತ ವ್ಯಕ್ತಿ ಎಂದು ಹೇಳಿ `ಬಾ ನಲ್ಲೆ ಮಧುಚಂದ್ರಕೆ~ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯ ಪಾತ್ರ ಕೊಟ್ಟರು. ಅದಾದ ನಂತರವೂ ನಾನು ಖಳನಾಗಿಯೇ ಉಳಿದುಕೊಂಡೆ. ಜನ ನನ್ನನ್ನು ಖಳನಾಗಿಯೇ ಇಷ್ಟಪಟ್ಟರು~ ಎನ್ನುತ್ತಾರೆ ಅವರು.<br /> <br /> `ಒಂದೇ ವರ್ಷದಲ್ಲಿ 15 ಸಿನಿಮಾದಲ್ಲಿ ನಟಿಸಿದ್ದೆ. ದಿನಕ್ಕೆ ಮೂರು ಸಿನಿಮಾಗಳಲ್ಲಿ ನಟಿಸುತ್ತಿದ್ದೆ. ಅಷ್ಟು ಬಿಜಿಯಾಗಿದ್ದ ದಿನಗಳಿದ್ದವು. ಇದೀಗ ತುಂಬಾ ಜನ ಕಲಾವಿದರು ಬಂದಿದ್ದಾರೆ. ಸ್ಪರ್ಧೆ ಜಾಸ್ತಿಯಾಗಿದೆ~ ಎನ್ನುವ ಅವರಿಗೆ ಇದೀಗ ತಮ್ಮ ಮೂಲ ನೆಲೆ ರಂಗಭೂಮಿಯಲ್ಲಿ ಮತ್ತೆ ಸಕ್ರಿಯರಾಬೇಕೆಂಬ ಹಂಬಲ.<br /> <br /> ತಮಿಳು, ತೆಲುಗು, ಹಿಂದಿ, ಇಂಗ್ಲಿಷ್, ಕೊಂಕಣಿ ಚಿತ್ರಗಳಲ್ಲಿಯೂ ನಟಿಸಿರುವ ಅವರು ರಾಜ್ಕುಮಾರ್, ವಿಷ್ಣುವರ್ಧನ್, ಅಂಬರೀಷ್, ಅನಂತನಾಗ್, ಶಂಕರ್ನಾಗ್, ಪ್ರಭಾಕರ್, ದೇವರಾಜ್ ಮುಂತಾದ ಪ್ರಮುಖ ನಟರೊಂದಿಗೆ ನಟಿಸಿದ ಅನುಭವ ಹೊಂದಿದ್ದಾರೆ.<br /> <br /> ಅಷ್ಟೇ ಅಲ್ಲದೇ ತಮಿಳಿನಲ್ಲಿ ಕಮಲ ಹಾಸನ್ ಮತ್ತು ರಜನಿಕಾಂತ್ ಚಿತ್ರಗಳಲ್ಲಿಯೂ ನಟಿಸಿದ್ದಾರೆ.<br /> <br /> `ಆವೇಶ~, `ಜೋಡಿಹಕ್ಕಿ~, `ಅರಳಿದ ಹೂವುಗಳು~, `ತಮಸ್ಸು~, `ಮತ್ತೆ ಹಾಡಿತು ಕೋಗಿಲೆ~, `ಕಾಲಚಕ್ರ~, `ಅಶ್ವಮೇಧ~, `ಅಶೋಕ ಚಕ್ರ~, `ಟುವ್ವಿ ಟುವ್ವಿ~ ಮುಂತಾದವು ಅವರು ನಟಿಸಿರುವ ಪ್ರಮುಖ ಚಿತ್ರಗಳು.<br /> <br /> ಸದ್ಯ ಅವರು `ಏಂಜಲ್~ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಝೀ ವಾಹಿನಿಯ `ಮಡದಿ~ ಧಾರಾವಾಹಿಯಲ್ಲೂ ನಟಿಸುತ್ತಿದ್ದಾರೆ. ಅದರಲ್ಲಿ ಕುಟುಂಬದ ಯಜಮಾನನ ಪಾತ್ರ ಅವರದು. ಈ ಹಿಂದೆ ಅವರು `ಉಯ್ಯಾಲೆ~, `ನಚಿಕೇತ~, `ಮಹಾಯಜ್ಞ~ ಧಾರಾವಾಹಿಗಳಲ್ಲಿ ನಟಿಸಿದ್ದರಂತೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>