ಅಮೀರ್ ದಿಟ್ಟ ಉತ್ತರ

‘ಸತ್ಯಮೇವ ಜಯತೇ’ ಟಿ.ವಿ. ಷೋದ ಎರಡನೇ ಸರಣಿ ಮತ್ತೆ ಆರಂಭವಾಗಿದೆ. ಹಾಗಾಗಿ ಅಮೀರ್ ಖಾನ್ ಸುದ್ದಿಯಲ್ಲಿದ್ದಾರೆ. ಈ ಷೋಗೂ, ಅಮೀರ್ ರಾಜಕೀಯಕ್ಕೆ ಕಾಲಿಡಬಹುದೆಂಬ ಊಹೆಗೂ ಸಂಬಂಧವಿದೆ.
ಅದೇ ಕಾರಣಕ್ಕೆ ಅಮೀರ್, ಟಿ.ವಿ. ಷೋ ಪ್ರಚಾರಕ್ಕೆಂದು ಮಾತಿಗೆ ತೆರೆದುಕೊಂಡಾಗ ಅವರತ್ತ ರಾಜಕೀಯದ ಕುರಿತೇ ಪ್ರಶ್ನೆಗಳು ಹೊಮ್ಮಿದವು. ನೀವು ರಾಜಕೀಯ ಪ್ರವೇಶಿಸುವುದಿಲ್ಲವೇ? ರಾಹುಲ್ ಗಾಂಧಿ, ನರೇಂದ್ರ ಮೋದಿ ಅಲೆಯಲ್ಲಿ ಯಾವುದು ದೊಡ್ಡದು? ರಾಜಕೀಯದಲ್ಲಿ ನಟರ ಪಾತ್ರವೇನು?– ಇಂಥ ಪ್ರಶ್ನೆಗಳಿಗೆ ಅವರು ತುಂಬಾ ನಾಜೂಕಾಗಿಯೇ ಉತ್ತರ ಕೊಟ್ಟರು.
‘ಜನಸೇವೆಯ ದೃಷ್ಟಿಯಿಂದ ಅನೇಕರು ರಾಜಕೀಯಕ್ಕೆ ಇಳಿಯುತ್ತಾರೆ. ನನಗೂ ಜನರಿಗೆ ಏನಾದರೂ ಮಾಡಬೇಕೆಂಬ ಬಯಕೆ ಇದೆ. ಆದರೆ ಅದಕ್ಕೆ ನಾನು ರಾಜಕಾರಣಿಯೇ ಆಗಬೇಕಾಗಿಲ್ಲ. ಸಿನಿಮಾ ಮೂಲಕ ಇದುವರೆಗೆ ನಾನು ಮಾಡಿರುವ ಕೆಲಸ ತೃಪ್ತಿ ತಂದಿದೆ. ನೈತಿಕ ಎಳೆಗಳಲ್ಲಿ ಜನರನ್ನು ಕಟ್ಟಿಹಾಕುವ ದಿವ್ಯವಾದ ಶಕ್ತಿ ಸಿನಿಮಾ ಮಾಧ್ಯಮಕ್ಕಿದೆ. ಅದರ ಅರಿವಿಟ್ಟುಕೊಂಡೇ ನಾನು ಅಭಿನಯಿಸುತ್ತಾ ಇರುವುದು’ ಎನ್ನುವ ಅಮೀರ್ ತಾವು ಯಾವ ರೀತಿಯ ಸಮಾಜ ಸೇವೆ ಮಾಡುತ್ತಿರುವುದು ಎಂಬುದನ್ನು ಹೇಳಲು ಒಪ್ಪಲಿಲ್ಲ. ಬಲಗೈಲಿ ಕೊಟ್ಟದ್ದು ಎಡಗೈಗೆ ಗೊತ್ತಾಗಬಾರದು ಎಂಬುದು ಅವರ ಜಾಯಮಾನ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.