<p><span style="font-size: 26px;"><strong>ಮಲೇಬೆನ್ನೂರು:</strong> ಪ್ರಸಕ್ತ ಸಾಲಿನ ಗ್ರಾಮದೇವತೆ ಒಂದು ವಾರದ ಉತ್ಸವಕ್ಕೆ ಗ್ರಾಮ ಸನ್ನದ್ಧವಾಗಿದ್ದು ನವ ವಧುವಿನಂತೆ ಬೀದಿಗಳು ತಳಿರು ತೋರಣ, ಬ್ಯಾನರ್ಗಳಿಂದ ಶೃಂಗರಿತವಾಗಿವೆ.</span><br /> <br /> <strong>ಐತಿಹ್ಯ</strong>: ಗ್ರಾಮದೇವತೆ ಏಕನಾಥೇಶ್ವರಿ ಪುರಾಣ ಪ್ರಸಿದ್ಧಳು, ಹೊರವಲಯದಲ್ಲಿ ನೆಲೆ ನಿಂತು ಭಕ್ತರಿಗೆ ದರ್ಶನ ನೀಡುತ್ತಿದ್ದಾಳೆ.<br /> ವಿಚಿತ್ರ ಎಂದರೆ ಮೂಲ ಗ್ರಾಮದೇವತೆ `ಕೋಡಿಮಾರೇಶ್ವರಿ'. ಹಳೆ ಊರಿನ ಪ್ರದೇಶವಾದ `ರಾಜನಗಿರಿ` ಜಮೀನಿನಲ್ಲಿರುವ ದೇವಾಲಯದಲ್ಲಿ ನೆಲೆಯಾಗಿದ್ದಾಳೆ.<br /> <br /> ಇತಿಹಾಸದಲ್ಲಿ `ಏಕನಾಥೇಶ್ವರಿ' ಶತಮಾನಗಳ ಹಿಂದೆ ಚಿತ್ರದುರ್ಗದಿಂದ ತರಕಾರಿ ಮಾರುವವರ ಬುಟ್ಟಿಯಲ್ಲಿ ಗುಂಡುಕಲ್ಲಿನ ರೂಪದಲ್ಲಿ ಬಂದಳು.<br /> ಗ್ರಾಮದ ಹೊರವಲಯದ ಗಡಿಯಲ್ಲಿ ತರಕಾರಿ ಮಾರುವವರ ಬುಟ್ಟಿ ಭಾರವಾದಾಗ ಬುಟ್ಟಿ ಇಳಿಸಿದ ತಕ್ಷಣ ಗುಂಡು ಉರುಳಿತು ಎಂಬುದು ಐತಿಹ್ಯ.<br /> <br /> ಇದಕ್ಕೆ ಇಂಬು ಕೊಟ್ಟಂತೆ ಹೆಳವನಕಟ್ಟೆ ಗಿರಿಯಮ್ಮ ತಮ್ಮ ಕೃತಿಯಲ್ಲಿ ತಮ್ಮ ಮನೆ ದೇವರಾದ ಏಕನಾಥೇಶ್ವರಿಯನ್ನು `ರಕ್ಷಿಸುಯೆನ ತಾಯೆ ದಯೆದಿಂದೆನ್ನನು... ಮಲ್ಲಾರ ಮಹಿಷಾಸುರನ ಕೊಂದೆ ಮಲೇಬೆನ್ನೂರಿನಲ್ಲಿ ನಿಂತೆ `ಎಂದು ಹಾಡಿ ಹೊಗಳಿರುವುದು ದೇವತೆ ದೇವಾಲಯದ ಅಸ್ತಿತ್ವ ಸೂಚಿಸುತ್ತಿದೆ.<br /> <br /> ಈಚೆಗೆ ಪುರಾತನ ದೇವಾಲಯ ಶಿಥಿಲವಾದಾಗ, ನಕ್ಷತ್ರಾಕಾರದಲ್ಲಿ ಭಕ್ತರ ಸಹಕಾರದೊಂದಿಗೆ 2000ನೇ ಇಸವಿಯಲ್ಲಿ ಹೊರಗಿನಮ್ಮನ ದೇವಾಲಯ ಹೊಸದಾಗಿ ನಿರ್ಮಿಸಿದ್ದಾರೆ.<br /> <br /> ಪುರಾತನ ವಿಗ್ರಹ ನಾಗರಹೆಡೆ ಕೆಳಗೆ ಗುಂಡುಕಲ್ಲುಗಳಿದ್ದವು. ಏಕನಾಥೇಶ್ವರಿ ಸುಬ್ರಹ್ಮಣ್ಯ ಪರಶುರಾಮ ಇದ್ದರು ಎಂದು ಹಿರಿಯರು ಮಾಹಿತಿ ನೀಡಿದರು. ಪ್ರಸ್ತುತ ದೇವಿ ವಿಗ್ರಹ ಕತ್ತಿ ಹಿಡಿದು ನಿಂತಿದ್ದಾಳೆ.<br /> <br /> ಅದರಂತೆ ಊರಿನ ಒಳಭಾಗದಲ್ಲಿ ಏಕನಾಥೇಶ್ವರಿ, ಕೋಡಿಮಾರೇಶ್ವರಿ ಉತ್ಸವ ಮೂರ್ತಿ ಹಾಗೂ ದೇವಾಲಯಗಳಿವೆ. ಹಟ್ಟಿ ದುರ್ಗಮ್ಮ, ಕಾಳಿಕಾಂಬಾ, ಚೌಡೇಶ್ವರಿ, ಕನ್ನಿಕಾಪರಮೇಶ್ವರಿ, ಗಂಗಮಾಳಮ್ಮ ಶಕ್ತಿ ದೇವತೆ ದೇವಾಲಯಗಳಿವೆ.<br /> <br /> ಉತ್ಸವಕ್ಕೆ ಸಿದ್ಧತೆ: ಪ್ರಸಕ್ತ ಸಾಲಿನ ಗ್ರಾಮದೇವತೆ ಉತ್ಸವ `ಅಮ್ಮನ ಹಬ್ಬ'ಕ್ಕೆ ಸಂಪೂರ್ಣಗ್ರಾಮ ಶೃಂಗರಿತವಾಗಿದೆ.<br /> ಉತ್ಸವ ಸಾಗಿ ಬರುವ ರಾಜಬೀದಿ ಸಂಪೂರ್ಣ ಕಾಂಕ್ರೀಟ್ ಹಾಕಿದ್ದು ಉತ್ಸವ ಸಾಗಿ ಬರಲು ಅನುಕೂಲವಾಗಿದೆ.<br /> <br /> 2 ಬದಿಗೆ ವಿದ್ಯುತ್ ದೀಪದಿಂದ ಅಲಂಕರಿಸಲಾಗಿದೆ. ಗ್ರಾಮದ ಎಲ್ಲ ದೇವಾಲಯ ಸುಣ್ಣಬಣ್ಣಗಳಿಂದ ಅಲಂಕೃತಗೊಂಡಿದ್ದು, ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ.<br /> <br /> ಗ್ರಾಮದ ಮನೆಮನೆಗಳಲ್ಲಿ ಹೆಣ್ಣು ಮಕ್ಕಳು, ಬೀಗರು, ಬಂಧುಗಳು ಆಗಮಿಸಿದ್ದಾರೆ. ಬಟ್ಟೆ ಅಂಗಡಿ ಗಿಜಿಗುಡುತ್ತಿವೆ. ಬಾಡೂಟಕ್ಕೆ ಭರ್ಜರಿ ಸಿದ್ಧತೆ, ಅಲ್ಲಲ್ಲಿ ಸಿಹಿತಿಂಡಿ ತಯಾರಿ ಭರ್ಜರಿಯಾಗಿ ಸಾಗಿದ್ದು ಸುವಾಸನೆ ಹರಡಿದೆ.<br /> <br /> ಒಂದು ವಾರಕಾಲ ವಿಶೇಷ ಪೂಜೆ, ಹಾಸ್ಯಗಾರರಿಂದ ಮನೋರಂಜನೆ, ಗುರುವಾರದ ಸಂತೆ ಗ್ರಾಮದ ಒಳಗೆ ಏರ್ಪಡಿಸಿದೆ.<br /> ಶುಕ್ರವಾರ ಹುಲುಸು ಒಡೆದ ನಂತರ ಉತ್ಸವಕ್ಕೆ ತೆರೆ ಬೀಳಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><span style="font-size: 26px;"><strong>ಮಲೇಬೆನ್ನೂರು:</strong> ಪ್ರಸಕ್ತ ಸಾಲಿನ ಗ್ರಾಮದೇವತೆ ಒಂದು ವಾರದ ಉತ್ಸವಕ್ಕೆ ಗ್ರಾಮ ಸನ್ನದ್ಧವಾಗಿದ್ದು ನವ ವಧುವಿನಂತೆ ಬೀದಿಗಳು ತಳಿರು ತೋರಣ, ಬ್ಯಾನರ್ಗಳಿಂದ ಶೃಂಗರಿತವಾಗಿವೆ.</span><br /> <br /> <strong>ಐತಿಹ್ಯ</strong>: ಗ್ರಾಮದೇವತೆ ಏಕನಾಥೇಶ್ವರಿ ಪುರಾಣ ಪ್ರಸಿದ್ಧಳು, ಹೊರವಲಯದಲ್ಲಿ ನೆಲೆ ನಿಂತು ಭಕ್ತರಿಗೆ ದರ್ಶನ ನೀಡುತ್ತಿದ್ದಾಳೆ.<br /> ವಿಚಿತ್ರ ಎಂದರೆ ಮೂಲ ಗ್ರಾಮದೇವತೆ `ಕೋಡಿಮಾರೇಶ್ವರಿ'. ಹಳೆ ಊರಿನ ಪ್ರದೇಶವಾದ `ರಾಜನಗಿರಿ` ಜಮೀನಿನಲ್ಲಿರುವ ದೇವಾಲಯದಲ್ಲಿ ನೆಲೆಯಾಗಿದ್ದಾಳೆ.<br /> <br /> ಇತಿಹಾಸದಲ್ಲಿ `ಏಕನಾಥೇಶ್ವರಿ' ಶತಮಾನಗಳ ಹಿಂದೆ ಚಿತ್ರದುರ್ಗದಿಂದ ತರಕಾರಿ ಮಾರುವವರ ಬುಟ್ಟಿಯಲ್ಲಿ ಗುಂಡುಕಲ್ಲಿನ ರೂಪದಲ್ಲಿ ಬಂದಳು.<br /> ಗ್ರಾಮದ ಹೊರವಲಯದ ಗಡಿಯಲ್ಲಿ ತರಕಾರಿ ಮಾರುವವರ ಬುಟ್ಟಿ ಭಾರವಾದಾಗ ಬುಟ್ಟಿ ಇಳಿಸಿದ ತಕ್ಷಣ ಗುಂಡು ಉರುಳಿತು ಎಂಬುದು ಐತಿಹ್ಯ.<br /> <br /> ಇದಕ್ಕೆ ಇಂಬು ಕೊಟ್ಟಂತೆ ಹೆಳವನಕಟ್ಟೆ ಗಿರಿಯಮ್ಮ ತಮ್ಮ ಕೃತಿಯಲ್ಲಿ ತಮ್ಮ ಮನೆ ದೇವರಾದ ಏಕನಾಥೇಶ್ವರಿಯನ್ನು `ರಕ್ಷಿಸುಯೆನ ತಾಯೆ ದಯೆದಿಂದೆನ್ನನು... ಮಲ್ಲಾರ ಮಹಿಷಾಸುರನ ಕೊಂದೆ ಮಲೇಬೆನ್ನೂರಿನಲ್ಲಿ ನಿಂತೆ `ಎಂದು ಹಾಡಿ ಹೊಗಳಿರುವುದು ದೇವತೆ ದೇವಾಲಯದ ಅಸ್ತಿತ್ವ ಸೂಚಿಸುತ್ತಿದೆ.<br /> <br /> ಈಚೆಗೆ ಪುರಾತನ ದೇವಾಲಯ ಶಿಥಿಲವಾದಾಗ, ನಕ್ಷತ್ರಾಕಾರದಲ್ಲಿ ಭಕ್ತರ ಸಹಕಾರದೊಂದಿಗೆ 2000ನೇ ಇಸವಿಯಲ್ಲಿ ಹೊರಗಿನಮ್ಮನ ದೇವಾಲಯ ಹೊಸದಾಗಿ ನಿರ್ಮಿಸಿದ್ದಾರೆ.<br /> <br /> ಪುರಾತನ ವಿಗ್ರಹ ನಾಗರಹೆಡೆ ಕೆಳಗೆ ಗುಂಡುಕಲ್ಲುಗಳಿದ್ದವು. ಏಕನಾಥೇಶ್ವರಿ ಸುಬ್ರಹ್ಮಣ್ಯ ಪರಶುರಾಮ ಇದ್ದರು ಎಂದು ಹಿರಿಯರು ಮಾಹಿತಿ ನೀಡಿದರು. ಪ್ರಸ್ತುತ ದೇವಿ ವಿಗ್ರಹ ಕತ್ತಿ ಹಿಡಿದು ನಿಂತಿದ್ದಾಳೆ.<br /> <br /> ಅದರಂತೆ ಊರಿನ ಒಳಭಾಗದಲ್ಲಿ ಏಕನಾಥೇಶ್ವರಿ, ಕೋಡಿಮಾರೇಶ್ವರಿ ಉತ್ಸವ ಮೂರ್ತಿ ಹಾಗೂ ದೇವಾಲಯಗಳಿವೆ. ಹಟ್ಟಿ ದುರ್ಗಮ್ಮ, ಕಾಳಿಕಾಂಬಾ, ಚೌಡೇಶ್ವರಿ, ಕನ್ನಿಕಾಪರಮೇಶ್ವರಿ, ಗಂಗಮಾಳಮ್ಮ ಶಕ್ತಿ ದೇವತೆ ದೇವಾಲಯಗಳಿವೆ.<br /> <br /> ಉತ್ಸವಕ್ಕೆ ಸಿದ್ಧತೆ: ಪ್ರಸಕ್ತ ಸಾಲಿನ ಗ್ರಾಮದೇವತೆ ಉತ್ಸವ `ಅಮ್ಮನ ಹಬ್ಬ'ಕ್ಕೆ ಸಂಪೂರ್ಣಗ್ರಾಮ ಶೃಂಗರಿತವಾಗಿದೆ.<br /> ಉತ್ಸವ ಸಾಗಿ ಬರುವ ರಾಜಬೀದಿ ಸಂಪೂರ್ಣ ಕಾಂಕ್ರೀಟ್ ಹಾಕಿದ್ದು ಉತ್ಸವ ಸಾಗಿ ಬರಲು ಅನುಕೂಲವಾಗಿದೆ.<br /> <br /> 2 ಬದಿಗೆ ವಿದ್ಯುತ್ ದೀಪದಿಂದ ಅಲಂಕರಿಸಲಾಗಿದೆ. ಗ್ರಾಮದ ಎಲ್ಲ ದೇವಾಲಯ ಸುಣ್ಣಬಣ್ಣಗಳಿಂದ ಅಲಂಕೃತಗೊಂಡಿದ್ದು, ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ.<br /> <br /> ಗ್ರಾಮದ ಮನೆಮನೆಗಳಲ್ಲಿ ಹೆಣ್ಣು ಮಕ್ಕಳು, ಬೀಗರು, ಬಂಧುಗಳು ಆಗಮಿಸಿದ್ದಾರೆ. ಬಟ್ಟೆ ಅಂಗಡಿ ಗಿಜಿಗುಡುತ್ತಿವೆ. ಬಾಡೂಟಕ್ಕೆ ಭರ್ಜರಿ ಸಿದ್ಧತೆ, ಅಲ್ಲಲ್ಲಿ ಸಿಹಿತಿಂಡಿ ತಯಾರಿ ಭರ್ಜರಿಯಾಗಿ ಸಾಗಿದ್ದು ಸುವಾಸನೆ ಹರಡಿದೆ.<br /> <br /> ಒಂದು ವಾರಕಾಲ ವಿಶೇಷ ಪೂಜೆ, ಹಾಸ್ಯಗಾರರಿಂದ ಮನೋರಂಜನೆ, ಗುರುವಾರದ ಸಂತೆ ಗ್ರಾಮದ ಒಳಗೆ ಏರ್ಪಡಿಸಿದೆ.<br /> ಶುಕ್ರವಾರ ಹುಲುಸು ಒಡೆದ ನಂತರ ಉತ್ಸವಕ್ಕೆ ತೆರೆ ಬೀಳಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>