<p><strong>ಬೆಂಗಳೂರು:</strong> `ಸ್ವಾತಂತ್ರ್ಯಾನಂತರ ರಾಜ್ಯದಲ್ಲಿ ಅರಣ್ಯ ಪ್ರದೇಶದ ವಿಸ್ತೀರ್ಣ ಕಡಿಮೆಯಾಗಿದೆ. ಆದರೆ ಅರಣ್ಯ ಇಲಾಖೆಯ ಸಿಬ್ಬಂದಿ ಸಂಖ್ಯೆ ಮಾತ್ರ ಹೆಚ್ಚುತ್ತಿದೆ. ಇದು ಹೇಗೆ?~<br /> <br /> `ರಾಜ್ಯದಲ್ಲಿ ಗಿಡ ನೆಡುವ ಕುರಿತೇ ಹತ್ತಾರು ಯೋಜನೆಗಳಿವೆ. ಈ ಯೋಜನೆಗಳ ಭಾಗವಾಗಿ ನೆಟ್ಟ ಗಿಡಗಳೆಲ್ಲ ಮರವಾಗಿ ಬೆಳೆದಿದ್ದರೆ, ಈ ವೇಳೆಗೆ ರಾಜ್ಯದ ಒಟ್ಟು ಭೂಪ್ರದೇಶದ ಶೇಕಡ 70ರಷ್ಟು ಹಸಿರು ಹೊದಿಕೆ ಇರಬೇಕಿತ್ತಲ್ಲವೇ?~<br /> <br /> `ಇಲಾಖೆಯ ಕಾನೂನುಗಳು ನಿಷ್ಕೃಿಯವಾಗಿರುವ ಕಾರಣ, ಜನರಿಗೆ ಈ ಕುರಿತು ಭಯವೇ ಇಲ್ಲದಂತಾಗಿದೆ. ಇದನ್ನೆಲ್ಲ ಭಾಷಣ ಸಲುವಾಗಿ ಹೇಳುತ್ತಿಲ್ಲ. ಇಲಾಖೆಯಲ್ಲಿನ ಅವ್ಯವಸ್ಥೆ ನೋಡಿ ಹೇಳುತ್ತಿದ್ದೇನೆ~.<br /> <br /> ಇದು, ಅರಣ್ಯ ಸಚಿವ ಸಿ.ಪಿ. ಯೋಗೇಶ್ವರ್ ಮಂಗಳವಾರ ಇಲ್ಲಿ ಆರಂಭವಾದ ಅಧಿಕಾರಿಗಳ ಎರಡು ದಿನಗಳ ಸಭೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಆಡಿದ ಮಾತು. ಇಷ್ಟೇ ಅಲ್ಲ, `ಮಾಧ್ಯಮ ಪ್ರತಿನಿಧಿಗಳು ಇರದಿದ್ದರೆ, ಇನ್ನೂ ಹೆಚ್ಚಿನ ಸೂಕ್ಷ್ಮ ಸಂಗತಿಗಳನ್ನು ಹೇಳುತ್ತಿದ್ದೆ~ ಎಂದರು!<br /> <br /> ಪಶ್ಚಿಮಘಟ್ಟ ಪ್ರದೇಶದಲ್ಲಿ ಯಾವುದೇ ಕಿರು ವಿದ್ಯುತ್ ಯೋಜನೆಗೆ ಅನುಮತಿ ನೀಡಿಲ್ಲ. ಮುಂದೆಯೂ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಕಲ್ಲು ಗಣಿಗಾರಿಕೆಗೆ ನಿರಾಕ್ಷೇಪಣಾ ಪತ್ರವನ್ನು ವಿಭಾಗ ಅರಣ್ಯ ಅಧಿಕಾರಿ (ಡಿಎಫ್ಒ) ನೀಡುವ ವ್ಯವಸ್ಥೆ ಬದಲು, ಹಿರಿಯ ಅಧಿಕಾರಿಗಳ ತಂಡ ಈ ಕೆಲಸ ಮಾಡಬೇಕು ಎಂದರು.<br /> <br /> ಸಚಿವರ ಮಾತಿಗೆ ತಿರುಗೇಟು ನೀಡಿದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಎ.ಕೆ. ವರ್ಮ, `ಇಲಾಖೆ ಸಿಬ್ಬಂದಿ ಕೆಲಸಕ್ಕೆ ಅಗತ್ಯ ಬೆಂಬಲ ಇಲ್ಲ. ಪ್ರಮುಖ ವಿಷಯಗಳ ಕುರಿತು ನಿರ್ಧಾರ ಕೈಗೊಳ್ಳುವಾಗ ಅಧಿಕಾರಿಗಳ ಮಾತಿಗೆ ಬೆಲೆ ಇಲ್ಲ~ ಎಂದರು.<br /> <br /> ಎಲ್ಲದಕ್ಕೂ ಅಧಿಕಾರಿಗಳನ್ನು ಹೊಣೆ ಮಾಡುವ ಬದಲು, ಅವರ ಬೆಂಬಲಕ್ಕೆ ಸರ್ಕಾರ ನಿಲ್ಲಬೇಕು. ಅರಣ್ಯ ಅಧಿಕಾರಿಗಳ ಮಾತಿಗಿಂತ ಸರ್ಕಾರೇತರ ಸಂಘಟನೆಗಳು, ವಿಜ್ಞಾನಿಗಳ ಮಾತಿಗೇ ಹೆಚ್ಚಿನ ಬೆಲೆ ಇದೆ. ಸರ್ಕಾರ ಇಂಥವರ ಮಾತುಗಳಿಗೆ ಮಣಿಯಬಾರದು ಎಂದು ಮನವಿ ಮಾಡಿದರು.<br /> <br /> ಆನೆ ಮತ್ತು ಮನುಷ್ಯರ ನಡುವಿನ ಸಂಘರ್ಷ ತಡೆಯುವಲ್ಲಿ ಇಲಾಖೆಗೂ ಮಿತಿ ಇದೆ. ಇದು ಆನೆ ಕಾರಿಡಾರ್ಗಳನ್ನು ನಾಶಮಾಡುವ ಮೂಲಕ ಸಮಾಜವೇ ತಂದುಕೊಂಡ ಸಮಸ್ಯೆ ಎಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಬಿ.ಕೆ. ಸಿಂಗ್ ಅಭಿಪ್ರಾಯಪಟ್ಟರು. <br /> <br /> ಪಶ್ಚಿಮಘಟ್ಟ ಕಾರ್ಯಪಡೆಯ ಅಧ್ಯಕ್ಷ ಅನಂತ ಹೆಗಡೆ ಆಶೀಸರ, ರಾಜ್ಯದ ವಿವಿಧ ವಿಭಾಗಗಳ ಅರಣ್ಯಾಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.<br /> <strong> <br /> `ಬಾಯಿದ್ದರೂ ಮಾತನಾಡಲು ಆಗದ ಸ್ಥಿತಿ~</strong><br /> `ಅರಣ್ಯ ಪ್ರದೇಶದಲ್ಲಿ ನಡೆಯುತ್ತಿರುವ ಗಣಿಗಾರಿಕೆ ಕುರಿತು ಬಾಯಿದ್ದರೂ ಮಾತನಾಡಲಾಗದ ಸ್ಥಿತಿ ಇದೆ. ರಾಜ್ಯದಲ್ಲಿ ನಾಶವಾಗಿರುವ ಪರಿಸರದ ಮರುಸ್ಥಾಪನೆಯ ನಂತರವೇ ಗಣಿಗಾರಿಕೆಗೆ ಅವಕಾಶ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಆದರೆ ಈ ಕುರಿತು ನಾವು ಏನೂ ಮಾತನಾಡುತ್ತಿಲ್ಲ. ಇಲಾಖೆ ಎಲ್ಲಿ ಎಡವುತ್ತಿದೆ ಎಂಬ ಕುರಿತು ಪ್ರತಿ ಅರಣ್ಯ ವಲಯ ಮಟ್ಟದಲ್ಲಿ ಚರ್ಚೆ ನಡೆಯಬೇಕು~ ಎಂದು ಯೋಗೇಶ್ವರ್ ಹೇಳಿದರು. ಚಿತ್ರದುರ್ಗ, ಬಳ್ಳಾರಿ, ತುಮಕೂರು ಜಿಲ್ಲೆಗಳಲ್ಲಿ ನಾಶವಾಗಿರುವ ಪರಿಸರ ಮೊದಲಿನ ಸ್ಥಿತಿಗೆ ಬಂದ ನಂತರವಷ್ಟೇ ಗಣಿಗಾರಿಕೆಗೆ ಹೊಸ ಅನುಮತಿ ಕುರಿತು ಪರಿಶೀಲಿಸಬಹುದು ಎಂದು ಸುಪ್ರೀಂ ಕೋರ್ಟ್ ಕಳೆದ ವಾರ ಹೇಳಿರುವುದನ್ನು ಸ್ಮರಿಸಬಹುದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> `ಸ್ವಾತಂತ್ರ್ಯಾನಂತರ ರಾಜ್ಯದಲ್ಲಿ ಅರಣ್ಯ ಪ್ರದೇಶದ ವಿಸ್ತೀರ್ಣ ಕಡಿಮೆಯಾಗಿದೆ. ಆದರೆ ಅರಣ್ಯ ಇಲಾಖೆಯ ಸಿಬ್ಬಂದಿ ಸಂಖ್ಯೆ ಮಾತ್ರ ಹೆಚ್ಚುತ್ತಿದೆ. ಇದು ಹೇಗೆ?~<br /> <br /> `ರಾಜ್ಯದಲ್ಲಿ ಗಿಡ ನೆಡುವ ಕುರಿತೇ ಹತ್ತಾರು ಯೋಜನೆಗಳಿವೆ. ಈ ಯೋಜನೆಗಳ ಭಾಗವಾಗಿ ನೆಟ್ಟ ಗಿಡಗಳೆಲ್ಲ ಮರವಾಗಿ ಬೆಳೆದಿದ್ದರೆ, ಈ ವೇಳೆಗೆ ರಾಜ್ಯದ ಒಟ್ಟು ಭೂಪ್ರದೇಶದ ಶೇಕಡ 70ರಷ್ಟು ಹಸಿರು ಹೊದಿಕೆ ಇರಬೇಕಿತ್ತಲ್ಲವೇ?~<br /> <br /> `ಇಲಾಖೆಯ ಕಾನೂನುಗಳು ನಿಷ್ಕೃಿಯವಾಗಿರುವ ಕಾರಣ, ಜನರಿಗೆ ಈ ಕುರಿತು ಭಯವೇ ಇಲ್ಲದಂತಾಗಿದೆ. ಇದನ್ನೆಲ್ಲ ಭಾಷಣ ಸಲುವಾಗಿ ಹೇಳುತ್ತಿಲ್ಲ. ಇಲಾಖೆಯಲ್ಲಿನ ಅವ್ಯವಸ್ಥೆ ನೋಡಿ ಹೇಳುತ್ತಿದ್ದೇನೆ~.<br /> <br /> ಇದು, ಅರಣ್ಯ ಸಚಿವ ಸಿ.ಪಿ. ಯೋಗೇಶ್ವರ್ ಮಂಗಳವಾರ ಇಲ್ಲಿ ಆರಂಭವಾದ ಅಧಿಕಾರಿಗಳ ಎರಡು ದಿನಗಳ ಸಭೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಆಡಿದ ಮಾತು. ಇಷ್ಟೇ ಅಲ್ಲ, `ಮಾಧ್ಯಮ ಪ್ರತಿನಿಧಿಗಳು ಇರದಿದ್ದರೆ, ಇನ್ನೂ ಹೆಚ್ಚಿನ ಸೂಕ್ಷ್ಮ ಸಂಗತಿಗಳನ್ನು ಹೇಳುತ್ತಿದ್ದೆ~ ಎಂದರು!<br /> <br /> ಪಶ್ಚಿಮಘಟ್ಟ ಪ್ರದೇಶದಲ್ಲಿ ಯಾವುದೇ ಕಿರು ವಿದ್ಯುತ್ ಯೋಜನೆಗೆ ಅನುಮತಿ ನೀಡಿಲ್ಲ. ಮುಂದೆಯೂ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಕಲ್ಲು ಗಣಿಗಾರಿಕೆಗೆ ನಿರಾಕ್ಷೇಪಣಾ ಪತ್ರವನ್ನು ವಿಭಾಗ ಅರಣ್ಯ ಅಧಿಕಾರಿ (ಡಿಎಫ್ಒ) ನೀಡುವ ವ್ಯವಸ್ಥೆ ಬದಲು, ಹಿರಿಯ ಅಧಿಕಾರಿಗಳ ತಂಡ ಈ ಕೆಲಸ ಮಾಡಬೇಕು ಎಂದರು.<br /> <br /> ಸಚಿವರ ಮಾತಿಗೆ ತಿರುಗೇಟು ನೀಡಿದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಎ.ಕೆ. ವರ್ಮ, `ಇಲಾಖೆ ಸಿಬ್ಬಂದಿ ಕೆಲಸಕ್ಕೆ ಅಗತ್ಯ ಬೆಂಬಲ ಇಲ್ಲ. ಪ್ರಮುಖ ವಿಷಯಗಳ ಕುರಿತು ನಿರ್ಧಾರ ಕೈಗೊಳ್ಳುವಾಗ ಅಧಿಕಾರಿಗಳ ಮಾತಿಗೆ ಬೆಲೆ ಇಲ್ಲ~ ಎಂದರು.<br /> <br /> ಎಲ್ಲದಕ್ಕೂ ಅಧಿಕಾರಿಗಳನ್ನು ಹೊಣೆ ಮಾಡುವ ಬದಲು, ಅವರ ಬೆಂಬಲಕ್ಕೆ ಸರ್ಕಾರ ನಿಲ್ಲಬೇಕು. ಅರಣ್ಯ ಅಧಿಕಾರಿಗಳ ಮಾತಿಗಿಂತ ಸರ್ಕಾರೇತರ ಸಂಘಟನೆಗಳು, ವಿಜ್ಞಾನಿಗಳ ಮಾತಿಗೇ ಹೆಚ್ಚಿನ ಬೆಲೆ ಇದೆ. ಸರ್ಕಾರ ಇಂಥವರ ಮಾತುಗಳಿಗೆ ಮಣಿಯಬಾರದು ಎಂದು ಮನವಿ ಮಾಡಿದರು.<br /> <br /> ಆನೆ ಮತ್ತು ಮನುಷ್ಯರ ನಡುವಿನ ಸಂಘರ್ಷ ತಡೆಯುವಲ್ಲಿ ಇಲಾಖೆಗೂ ಮಿತಿ ಇದೆ. ಇದು ಆನೆ ಕಾರಿಡಾರ್ಗಳನ್ನು ನಾಶಮಾಡುವ ಮೂಲಕ ಸಮಾಜವೇ ತಂದುಕೊಂಡ ಸಮಸ್ಯೆ ಎಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಬಿ.ಕೆ. ಸಿಂಗ್ ಅಭಿಪ್ರಾಯಪಟ್ಟರು. <br /> <br /> ಪಶ್ಚಿಮಘಟ್ಟ ಕಾರ್ಯಪಡೆಯ ಅಧ್ಯಕ್ಷ ಅನಂತ ಹೆಗಡೆ ಆಶೀಸರ, ರಾಜ್ಯದ ವಿವಿಧ ವಿಭಾಗಗಳ ಅರಣ್ಯಾಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.<br /> <strong> <br /> `ಬಾಯಿದ್ದರೂ ಮಾತನಾಡಲು ಆಗದ ಸ್ಥಿತಿ~</strong><br /> `ಅರಣ್ಯ ಪ್ರದೇಶದಲ್ಲಿ ನಡೆಯುತ್ತಿರುವ ಗಣಿಗಾರಿಕೆ ಕುರಿತು ಬಾಯಿದ್ದರೂ ಮಾತನಾಡಲಾಗದ ಸ್ಥಿತಿ ಇದೆ. ರಾಜ್ಯದಲ್ಲಿ ನಾಶವಾಗಿರುವ ಪರಿಸರದ ಮರುಸ್ಥಾಪನೆಯ ನಂತರವೇ ಗಣಿಗಾರಿಕೆಗೆ ಅವಕಾಶ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಆದರೆ ಈ ಕುರಿತು ನಾವು ಏನೂ ಮಾತನಾಡುತ್ತಿಲ್ಲ. ಇಲಾಖೆ ಎಲ್ಲಿ ಎಡವುತ್ತಿದೆ ಎಂಬ ಕುರಿತು ಪ್ರತಿ ಅರಣ್ಯ ವಲಯ ಮಟ್ಟದಲ್ಲಿ ಚರ್ಚೆ ನಡೆಯಬೇಕು~ ಎಂದು ಯೋಗೇಶ್ವರ್ ಹೇಳಿದರು. ಚಿತ್ರದುರ್ಗ, ಬಳ್ಳಾರಿ, ತುಮಕೂರು ಜಿಲ್ಲೆಗಳಲ್ಲಿ ನಾಶವಾಗಿರುವ ಪರಿಸರ ಮೊದಲಿನ ಸ್ಥಿತಿಗೆ ಬಂದ ನಂತರವಷ್ಟೇ ಗಣಿಗಾರಿಕೆಗೆ ಹೊಸ ಅನುಮತಿ ಕುರಿತು ಪರಿಶೀಲಿಸಬಹುದು ಎಂದು ಸುಪ್ರೀಂ ಕೋರ್ಟ್ ಕಳೆದ ವಾರ ಹೇಳಿರುವುದನ್ನು ಸ್ಮರಿಸಬಹುದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>