<p>ತೆರೆಯ ಮೇಲೆ ನಗೆ ಮರೆತ ಮುಖ ಹೊತ್ತು ಅಬ್ಬರಿಸುತ್ತಿದ್ದ ಸತ್ಯಜಿತ್ ತಮ್ಮ ಬದುಕಿನ ಒಂದು ತಿರುವಿನಲ್ಲಿ ನಗೆ ನಟನಾಗಿ ಹೊರಹೊಮ್ಮಿದವರು.<br /> <br /> ತಮ್ಮಳಗಿನ ಆ ನಗೆ ನಟನನ್ನು ಗುರುತಿಸಿದ್ದು ಡಾ.ರಾಜ್ಕುಮಾರ್ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಅವರಿಗೆ ಎಲ್ಲಾ ರೀತಿಯ ಪಾತ್ರಗಳನ್ನೂ ನಿರ್ವಹಿಸಿದ ತೃಪ್ತಿ ಇದೆ.<br /> <br /> ಸಿನಿಮಾಗಳಲ್ಲಿ ಉತ್ತರ ಕನ್ನಡ, ಮೈಸೂರು, ಮಂಗಳೂರು ಸೀಮೆ ಶೈಲಿಯ ಕನ್ನಡವನ್ನು ಸಲೀಸಾಗಿ ಮಾತನಾಡುವ ಅವರ ಊರು ಹುಬ್ಬಳ್ಳಿ. ಕೆಎಸ್ಆರ್ಟಿಸಿಯಲ್ಲಿ ಡ್ರೈವರ್ ಆಗಿದ್ದುಕೊಂಡು ಬಿಡುವಿನ ವೇಳೆಯಲ್ಲಿ ವೃತ್ತಿರಂಗಭೂಮಿಯಲ್ಲಿ ನಟಿಸುತ್ತಿದ್ದರು ಸತ್ಯಜಿತ್.<br /> <br /> ಆಗಲೇ ತಮ್ಮ ಸಯ್ಯದ್ ನಿಜಾಮುದ್ದೀನ್ ಎಂಬ ಹೆಸರನ್ನು ಗೆಳೆಯರು ಸತ್ಯಜಿತ್ ಎಂದು ಬದಲಿಸಿದರು ಎನ್ನುತ್ತಾರೆ. ಮುಂಬೈನಲ್ಲಿ ನಾಟಕ ಪ್ರದರ್ಶನಕ್ಕೆ ಹೋಗಿದ್ದ ಅವರಿಗೆ ಹಿಂದಿಯ `ಅಂಕುಶ್~ ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿತು. ಅದಕ್ಕಿಂತ ಮೊದಲು ಎರಡು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದರಾದರೂ ಅದರಲ್ಲಿ ಅವರಿಗೆ ಗುರುತಿಸುವಂಥ ಪಾತ್ರಗಳು ಸಿಕ್ಕಿರಲಿಲ್ಲ. <br /> <br /> ಆದರೆ ಮುಂಬೈನಲ್ಲಿ ಅವಕಾಶ ಪಡೆದುಕೊಂಡ ಸತ್ಯಜಿತ್ ಕರ್ನಾಟಕದವರು ಎಂದು ಗೊತ್ತಾದಾಗ ಕನ್ನಡ ಚಿತ್ರರಂಗದಿಂದ ಅವಕಾಶಗಳ ಮಹಾಪೂರವೇ ಹರಿದು ಬಂತು. 80ರ ದಶಕದ ಮಧ್ಯಭಾಗದಿಂದ ಇಂದಿನವರೆಗೂ ಸತ್ಯಜಿತ್ಗೆ ಅವಕಾಶಗಳ ಕೊರತೆ ಎದುರಾಗಿಲ್ಲ. <br /> <br /> `ಅದಕ್ಕೆಲ್ಲಾ ಅಲ್ಲಾನ ದಯೆ~ಯೇ ಕಾರಣ ಎಂದು ನಂಬುವ ಅವರು ಇಂದಿಗೂ ಕೈತುಂಬಾ ಚಿತ್ರಗಳನ್ನು ಹಿಡಿದುಕೊಂಡಿದ್ದಾರೆ. ಅವುಗಳಲ್ಲಿ `ಸಂಗೊಳ್ಳಿ ರಾಯಣ್ಣ~, `ಕಿಲಾಡಿ ಕಿಟ್ಟಿ~, `ಪಟಾಯ್ಸು~, `ವರದನಾಯಕ~ ಚಿತ್ರಗಳು ಸೇರಿವೆ.<br /> <br /> `ಅಂತಿಮ ತೀರ್ಪು~, `ಭೂಮಿ ತಾಯಾಣೆ~, `ತಾಯಿಗೊಬ್ಬ ಕರ್ಣ~, `ಅಂತಿಮತೀರ್ಪು~, `ಪದ್ಮವ್ಯೆಹ~, `ಅಜಯ್ ವಿಜಯ್~ ಮುಂತಾದ ಚಿತ್ರಗಳಲ್ಲಿ ಖಳನಾಗಿ ಮೆರೆದ ಅವರು `ಅಪ್ಪು~ ಚಿತ್ರದಿಂದ ಹಾಸ್ಯನಟನಾಗಿ ಅಡಿ ಇಟ್ಟರು. <br /> <br /> `ಸಹನಾ~ ಧಾರಾವಾಹಿಯಲ್ಲಿ ಅವರ ಭಾವನಾತ್ಮಕ ಪಾತ್ರವನ್ನು ನೋಡಿದ ಡಾ.ರಾಜ್ ಅವರನ್ನು ಮನೆಗೆ ಕರೆಸಿಕೊಂಡು ಮೆಚ್ಚುಗೆ ಸೂಸಿದರಂತೆ. ನಂತರ ಪುನೀತ್ ರಾಜ್ಕುಮಾರ್ ಅವರ ಮೊದಲ ಸಿನಿಮಾ `ಅಪ್ಪು~ ಚಿತ್ರದಲ್ಲಿ ನಟಿಸಲು ಅವಕಾಶ ನೀಡಿದರಂತೆ. <br /> <br /> ಬಳಿಕ `ಶ್ರೀರಾಮ್~, `ಆಪ್ತಮಿತ್ರ~, `ವೀರ ಕನ್ನಡಿಗ~, `ಸರದಾರ~ ಹೀಗೆ ಕಾಮಿಡಿ ಪಾತ್ರಗಳಲ್ಲಿ ಸತ್ಯಜಿತ್ ಮಿಂಚಿದರು. ಆದರೂ ಗಂಭೀರ, ನೆಗೆಟಿವ್ ಪಾತ್ರಗಳನ್ನು ಒಲ್ಲೆ ಎನ್ನದೇ ಸ್ವೀಕರಿಸಿದರು.<br /> <br /> `ಅಂತಿಮ ತೀರ್ಪು~ ಚಿತ್ರದ ಖಡಕ್ ವಿಲನ್ ಪಾತ್ರ, `ಅಭಿ~ ಚಿತ್ರದ ನಾಯಕಿಯ ತಂದೆಯ ಗಂಭೀರ ಪಾತ್ರ, `ತಾಕತ್~ ಚಿತ್ರದ ತಮ್ಮ ಡ್ರೈವರ್ ವೃತ್ತಿಯನ್ನು ನೆನಪಿಸುವ ಪಾತ್ರ ಸತ್ಯಜಿತ್ಗೆ ಅಚ್ಚುಮೆಚ್ಚು.<br /> <br /> ಆರಂಭದಲ್ಲಿ ವಿಲನ್ ಆಗಿ ಬಿಜಿಯಾಗಿದ್ದಾಗೊಮ್ಮೆ ನಾಯಕನಾಗುವ ಅವಕಾಶವೂ ಅವರ ಪಾಲಿಗೆ ಬಂದಿತ್ತಂತೆ. ತಮ್ಮ ಕೆಂಪು ಕಣ್ಣು, ಕಪ್ಪು ಬಣ್ಣ, ನಗೆ, ನಡೆ, ಅಜಾನುಬಾಹು ದೇಹಕ್ಕೆ ವಿಲನ್ ಪಾತ್ರವೇ ಸೂಕ್ತ. ಹೀರೋ ಪಾತ್ರ ತಮಗೆ ಹೊಂದಿಕೆಯಾಗುವುದಿಲ್ಲ ಎಂದು ನೇರವಾಗಿ ಹೇಳಿ ಕಳುಹಿಸಿದ್ದನ್ನು ನೆನಪಿಸಿಕೊಳ್ಳುತ್ತಾರೆ. <br /> <br /> `ನನಗೀಗ 58 ವರ್ಷ. ಈಗ ಆಕ್ಷನ್ ಮಾಡಲು ಶಕ್ತಿ ಇಲ್ಲ. ಅದಕ್ಕೆ ಕಾಮಿಡಿ ಹಳಿಗೆ ದೇವರು ನನ್ನನ್ನು ತಂದ ಎನಿಸುತ್ತದೆ. ಕಾಮಿಡಿ ಇರಲಿ, ವಿಲನ್ ಇರಲಿ ಯಾವುದೇ ಪಾತ್ರವಾದರೂ ಎಚ್ಚರಿಕೆಯಿಂದ ಮಾಡಬೇಕು~ ಎನ್ನುತ್ತಾರೆ. ಅಂದಹಾಗೆ, 2001ರಲ್ಲಿ ಕತೆ, ಚಿತ್ರಕತೆ, ಸಂಭಾಷಣೆ ಬರೆದು `ನೀ ನನ್ನ ಜೀವ~ ಎಂಬ ಸಿನಿಮಾವನ್ನೂ ಅವರು ನಿರ್ದೇಶಿಸಿದ್ದರು. <br /> <br /> `ನಿರ್ದೇಶಕನಾಗುವ ಆಸೆ ಆರಂಭದಲ್ಲಿ ಇತ್ತು. ಆದರೆ ಒಂದೊಂದು ಸಿನಿಮಾಗೆ ಆರಾರು ತಿಂಗಳು ವ್ಯಯವಾಗುತ್ತದೆ. ಅದರಿಂದ ಹೊಟ್ಟೆಪಾಡಿನ ಸಮಸ್ಯೆ ನಿವಾರಣೆ ಯಾಗುವುದಿಲ್ಲ. ಅದಕ್ಕೆ ನಟನಾಗಿಯೇ ಉಳಿಯುವ ಮನಸ್ಸು ಮಾಡಿದೆ~ ಎನ್ನುವ ಸತ್ಯಜಿತ್ ಮಗ ಆಕಾಶ್ `ತಬ್ಬಲಿ~ ಚಿತ್ರದ ನಾಯಕ. <br /> <br /> ತಾವು ಮುಸ್ಲಿಂ ಆದ ಕಾರಣ ತಮಗಾಗಿಯೇ ಕೆಲವು ಪಾತ್ರಗಳು ಹುಡುಕಿ ಬರುತ್ತವೆ ಎನ್ನುವ ಸತ್ಯಜಿತ್ ಇತ್ತೀಚಿನ ಒಂದು ಉದಾಹರಣೆ ಹೇಳುತ್ತಾರೆ. `ಕಲ್ಪನಾ ಚಿತ್ರಕ್ಕಾಗಿ ದೆವ್ವ ಬಿಡಿಸುವ ಮುಸ್ಲಿಂ ವ್ಯಕ್ತಿಯ ಪಾತ್ರವನ್ನು ನೀವೇ ಮಾಡಬೇಕು ಎಂದು ಹೇಳಿ ಕಳುಹಿಸಿದ್ದರು. <br /> <br /> ನಾನು ಕನ್ನಡ ಮೀಡಿಯಮ್ಮಿನಲ್ಲಿ ಓದಿರುವವನು. ಉರ್ದು ಓದಲು ಬರೆಯಲು ಬರುವುದಿಲ್ಲ. ಆದರೆ ಪ್ರಾರ್ಥನೆ ಮಾಡುವಾಗ ಉರ್ದು ಶ್ಲೋಕ ಹೇಳುವುದರಿಂದ ನನಗೆ ಆ ಪಾತ್ರ ಸಲೀಸಾಯಿತು. ವಿಶ್ವಾಸವಿಟ್ಟು ಪಾತ್ರ ಕೊಟ್ಟವರು ಖುಷಿ ಪಟ್ಟರು~ ಎಂದು ತಮ್ಮ ಅನುಭವವನ್ನು ಹಂಚಿಕೊಳ್ಳುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ತೆರೆಯ ಮೇಲೆ ನಗೆ ಮರೆತ ಮುಖ ಹೊತ್ತು ಅಬ್ಬರಿಸುತ್ತಿದ್ದ ಸತ್ಯಜಿತ್ ತಮ್ಮ ಬದುಕಿನ ಒಂದು ತಿರುವಿನಲ್ಲಿ ನಗೆ ನಟನಾಗಿ ಹೊರಹೊಮ್ಮಿದವರು.<br /> <br /> ತಮ್ಮಳಗಿನ ಆ ನಗೆ ನಟನನ್ನು ಗುರುತಿಸಿದ್ದು ಡಾ.ರಾಜ್ಕುಮಾರ್ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಅವರಿಗೆ ಎಲ್ಲಾ ರೀತಿಯ ಪಾತ್ರಗಳನ್ನೂ ನಿರ್ವಹಿಸಿದ ತೃಪ್ತಿ ಇದೆ.<br /> <br /> ಸಿನಿಮಾಗಳಲ್ಲಿ ಉತ್ತರ ಕನ್ನಡ, ಮೈಸೂರು, ಮಂಗಳೂರು ಸೀಮೆ ಶೈಲಿಯ ಕನ್ನಡವನ್ನು ಸಲೀಸಾಗಿ ಮಾತನಾಡುವ ಅವರ ಊರು ಹುಬ್ಬಳ್ಳಿ. ಕೆಎಸ್ಆರ್ಟಿಸಿಯಲ್ಲಿ ಡ್ರೈವರ್ ಆಗಿದ್ದುಕೊಂಡು ಬಿಡುವಿನ ವೇಳೆಯಲ್ಲಿ ವೃತ್ತಿರಂಗಭೂಮಿಯಲ್ಲಿ ನಟಿಸುತ್ತಿದ್ದರು ಸತ್ಯಜಿತ್.<br /> <br /> ಆಗಲೇ ತಮ್ಮ ಸಯ್ಯದ್ ನಿಜಾಮುದ್ದೀನ್ ಎಂಬ ಹೆಸರನ್ನು ಗೆಳೆಯರು ಸತ್ಯಜಿತ್ ಎಂದು ಬದಲಿಸಿದರು ಎನ್ನುತ್ತಾರೆ. ಮುಂಬೈನಲ್ಲಿ ನಾಟಕ ಪ್ರದರ್ಶನಕ್ಕೆ ಹೋಗಿದ್ದ ಅವರಿಗೆ ಹಿಂದಿಯ `ಅಂಕುಶ್~ ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿತು. ಅದಕ್ಕಿಂತ ಮೊದಲು ಎರಡು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದರಾದರೂ ಅದರಲ್ಲಿ ಅವರಿಗೆ ಗುರುತಿಸುವಂಥ ಪಾತ್ರಗಳು ಸಿಕ್ಕಿರಲಿಲ್ಲ. <br /> <br /> ಆದರೆ ಮುಂಬೈನಲ್ಲಿ ಅವಕಾಶ ಪಡೆದುಕೊಂಡ ಸತ್ಯಜಿತ್ ಕರ್ನಾಟಕದವರು ಎಂದು ಗೊತ್ತಾದಾಗ ಕನ್ನಡ ಚಿತ್ರರಂಗದಿಂದ ಅವಕಾಶಗಳ ಮಹಾಪೂರವೇ ಹರಿದು ಬಂತು. 80ರ ದಶಕದ ಮಧ್ಯಭಾಗದಿಂದ ಇಂದಿನವರೆಗೂ ಸತ್ಯಜಿತ್ಗೆ ಅವಕಾಶಗಳ ಕೊರತೆ ಎದುರಾಗಿಲ್ಲ. <br /> <br /> `ಅದಕ್ಕೆಲ್ಲಾ ಅಲ್ಲಾನ ದಯೆ~ಯೇ ಕಾರಣ ಎಂದು ನಂಬುವ ಅವರು ಇಂದಿಗೂ ಕೈತುಂಬಾ ಚಿತ್ರಗಳನ್ನು ಹಿಡಿದುಕೊಂಡಿದ್ದಾರೆ. ಅವುಗಳಲ್ಲಿ `ಸಂಗೊಳ್ಳಿ ರಾಯಣ್ಣ~, `ಕಿಲಾಡಿ ಕಿಟ್ಟಿ~, `ಪಟಾಯ್ಸು~, `ವರದನಾಯಕ~ ಚಿತ್ರಗಳು ಸೇರಿವೆ.<br /> <br /> `ಅಂತಿಮ ತೀರ್ಪು~, `ಭೂಮಿ ತಾಯಾಣೆ~, `ತಾಯಿಗೊಬ್ಬ ಕರ್ಣ~, `ಅಂತಿಮತೀರ್ಪು~, `ಪದ್ಮವ್ಯೆಹ~, `ಅಜಯ್ ವಿಜಯ್~ ಮುಂತಾದ ಚಿತ್ರಗಳಲ್ಲಿ ಖಳನಾಗಿ ಮೆರೆದ ಅವರು `ಅಪ್ಪು~ ಚಿತ್ರದಿಂದ ಹಾಸ್ಯನಟನಾಗಿ ಅಡಿ ಇಟ್ಟರು. <br /> <br /> `ಸಹನಾ~ ಧಾರಾವಾಹಿಯಲ್ಲಿ ಅವರ ಭಾವನಾತ್ಮಕ ಪಾತ್ರವನ್ನು ನೋಡಿದ ಡಾ.ರಾಜ್ ಅವರನ್ನು ಮನೆಗೆ ಕರೆಸಿಕೊಂಡು ಮೆಚ್ಚುಗೆ ಸೂಸಿದರಂತೆ. ನಂತರ ಪುನೀತ್ ರಾಜ್ಕುಮಾರ್ ಅವರ ಮೊದಲ ಸಿನಿಮಾ `ಅಪ್ಪು~ ಚಿತ್ರದಲ್ಲಿ ನಟಿಸಲು ಅವಕಾಶ ನೀಡಿದರಂತೆ. <br /> <br /> ಬಳಿಕ `ಶ್ರೀರಾಮ್~, `ಆಪ್ತಮಿತ್ರ~, `ವೀರ ಕನ್ನಡಿಗ~, `ಸರದಾರ~ ಹೀಗೆ ಕಾಮಿಡಿ ಪಾತ್ರಗಳಲ್ಲಿ ಸತ್ಯಜಿತ್ ಮಿಂಚಿದರು. ಆದರೂ ಗಂಭೀರ, ನೆಗೆಟಿವ್ ಪಾತ್ರಗಳನ್ನು ಒಲ್ಲೆ ಎನ್ನದೇ ಸ್ವೀಕರಿಸಿದರು.<br /> <br /> `ಅಂತಿಮ ತೀರ್ಪು~ ಚಿತ್ರದ ಖಡಕ್ ವಿಲನ್ ಪಾತ್ರ, `ಅಭಿ~ ಚಿತ್ರದ ನಾಯಕಿಯ ತಂದೆಯ ಗಂಭೀರ ಪಾತ್ರ, `ತಾಕತ್~ ಚಿತ್ರದ ತಮ್ಮ ಡ್ರೈವರ್ ವೃತ್ತಿಯನ್ನು ನೆನಪಿಸುವ ಪಾತ್ರ ಸತ್ಯಜಿತ್ಗೆ ಅಚ್ಚುಮೆಚ್ಚು.<br /> <br /> ಆರಂಭದಲ್ಲಿ ವಿಲನ್ ಆಗಿ ಬಿಜಿಯಾಗಿದ್ದಾಗೊಮ್ಮೆ ನಾಯಕನಾಗುವ ಅವಕಾಶವೂ ಅವರ ಪಾಲಿಗೆ ಬಂದಿತ್ತಂತೆ. ತಮ್ಮ ಕೆಂಪು ಕಣ್ಣು, ಕಪ್ಪು ಬಣ್ಣ, ನಗೆ, ನಡೆ, ಅಜಾನುಬಾಹು ದೇಹಕ್ಕೆ ವಿಲನ್ ಪಾತ್ರವೇ ಸೂಕ್ತ. ಹೀರೋ ಪಾತ್ರ ತಮಗೆ ಹೊಂದಿಕೆಯಾಗುವುದಿಲ್ಲ ಎಂದು ನೇರವಾಗಿ ಹೇಳಿ ಕಳುಹಿಸಿದ್ದನ್ನು ನೆನಪಿಸಿಕೊಳ್ಳುತ್ತಾರೆ. <br /> <br /> `ನನಗೀಗ 58 ವರ್ಷ. ಈಗ ಆಕ್ಷನ್ ಮಾಡಲು ಶಕ್ತಿ ಇಲ್ಲ. ಅದಕ್ಕೆ ಕಾಮಿಡಿ ಹಳಿಗೆ ದೇವರು ನನ್ನನ್ನು ತಂದ ಎನಿಸುತ್ತದೆ. ಕಾಮಿಡಿ ಇರಲಿ, ವಿಲನ್ ಇರಲಿ ಯಾವುದೇ ಪಾತ್ರವಾದರೂ ಎಚ್ಚರಿಕೆಯಿಂದ ಮಾಡಬೇಕು~ ಎನ್ನುತ್ತಾರೆ. ಅಂದಹಾಗೆ, 2001ರಲ್ಲಿ ಕತೆ, ಚಿತ್ರಕತೆ, ಸಂಭಾಷಣೆ ಬರೆದು `ನೀ ನನ್ನ ಜೀವ~ ಎಂಬ ಸಿನಿಮಾವನ್ನೂ ಅವರು ನಿರ್ದೇಶಿಸಿದ್ದರು. <br /> <br /> `ನಿರ್ದೇಶಕನಾಗುವ ಆಸೆ ಆರಂಭದಲ್ಲಿ ಇತ್ತು. ಆದರೆ ಒಂದೊಂದು ಸಿನಿಮಾಗೆ ಆರಾರು ತಿಂಗಳು ವ್ಯಯವಾಗುತ್ತದೆ. ಅದರಿಂದ ಹೊಟ್ಟೆಪಾಡಿನ ಸಮಸ್ಯೆ ನಿವಾರಣೆ ಯಾಗುವುದಿಲ್ಲ. ಅದಕ್ಕೆ ನಟನಾಗಿಯೇ ಉಳಿಯುವ ಮನಸ್ಸು ಮಾಡಿದೆ~ ಎನ್ನುವ ಸತ್ಯಜಿತ್ ಮಗ ಆಕಾಶ್ `ತಬ್ಬಲಿ~ ಚಿತ್ರದ ನಾಯಕ. <br /> <br /> ತಾವು ಮುಸ್ಲಿಂ ಆದ ಕಾರಣ ತಮಗಾಗಿಯೇ ಕೆಲವು ಪಾತ್ರಗಳು ಹುಡುಕಿ ಬರುತ್ತವೆ ಎನ್ನುವ ಸತ್ಯಜಿತ್ ಇತ್ತೀಚಿನ ಒಂದು ಉದಾಹರಣೆ ಹೇಳುತ್ತಾರೆ. `ಕಲ್ಪನಾ ಚಿತ್ರಕ್ಕಾಗಿ ದೆವ್ವ ಬಿಡಿಸುವ ಮುಸ್ಲಿಂ ವ್ಯಕ್ತಿಯ ಪಾತ್ರವನ್ನು ನೀವೇ ಮಾಡಬೇಕು ಎಂದು ಹೇಳಿ ಕಳುಹಿಸಿದ್ದರು. <br /> <br /> ನಾನು ಕನ್ನಡ ಮೀಡಿಯಮ್ಮಿನಲ್ಲಿ ಓದಿರುವವನು. ಉರ್ದು ಓದಲು ಬರೆಯಲು ಬರುವುದಿಲ್ಲ. ಆದರೆ ಪ್ರಾರ್ಥನೆ ಮಾಡುವಾಗ ಉರ್ದು ಶ್ಲೋಕ ಹೇಳುವುದರಿಂದ ನನಗೆ ಆ ಪಾತ್ರ ಸಲೀಸಾಯಿತು. ವಿಶ್ವಾಸವಿಟ್ಟು ಪಾತ್ರ ಕೊಟ್ಟವರು ಖುಷಿ ಪಟ್ಟರು~ ಎಂದು ತಮ್ಮ ಅನುಭವವನ್ನು ಹಂಚಿಕೊಳ್ಳುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>