<p><strong>ಗಜೇಂದ್ರಗಡ:</strong> 1986ರಲ್ಲಿ ಎದುರಾದ ಭೀಕರ ಬರ ಪರಸ್ಥಿತಿಯಲ್ಲಿ ರಾಜ್ಯಕ್ಕೆ ಮಾದರಿಯಾಗಿದ್ದ `ನಾಗೇಂದ್ರಗಡ ಗೋಶಾಲೆ~ ಪ್ರಸ್ತುತ ಬರದಲ್ಲಿ ಅಧಿಕಾರಿ ಗಳ ನಿರ್ಲಕ್ಷ್ಯದಿಂದಾಗಿ ಅವ್ಯವಸ್ಥೆಯ ಆಗರವಾಗಿ ಮಾರ್ಪಟ್ಟಿದೆ. ಪರಿಣಾಮ ಬರದ ಬವಣೆಯಿಂದ ಕಂಗೆಟ್ಟ ಕೃಷಿಕ ಜಾನುವಾರುಗಳನ್ನು ಗೋಶಾಲೆಗಳಿಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ.</p>.<p>ಬಹುತೇಕ ಕೃಷಿ ಪ್ರಧಾನ ಕುಟುಂಬಗಳೇ ನೆಲೆಸಿರುವ ರೋಣ ತಾಲ್ಲೂಕಿನಲ್ಲಿ ಕೇವಲ ಕೃಷಿಕ ಕುಟುಂಬಗಳು ಮಾತ್ರವಲ್ಲದೆ ಜಮೀನು ರಹಿತ ಕೃಷಿ ಕೂಲಿಕಾರ ಕುಟುಂಬಗಳು ಸಹ ಕನಿಷ್ಠ ಮೂರ ನ್ನಾಲ್ಕು ಜಾನುವಾರುಗಳ ಮೂಲಕ ಹೈನುಗಾರಿಕೆಯನ್ನೇ ನೆಚ್ಚಿಕೊಂಡು ತುತ್ತಿನ ಚೀಲ ತುಂಬಿಸಿಕೊಳ್ಳುತ್ತಿವೆ. ಆದರೆ, 2011-12ನೇ ಸಾಲಿನಲ್ಲಿ ಎದುರಾದ ಭೀಕರದಿಂದ ತತ್ತರಿಸಿರುವ ತಾಲ್ಲೂಕಿನ ಜಾನುವಾರುಗಳ ಸಂರಕ್ಷಣೆಯ ದೃಷ್ಟಿಯಿಂದ 1986ರಲ್ಲಿ ಉಂಟಾದ ಬರ ಪರಿಸ್ಥಿತಿಯಲ್ಲಿ ತೆರೆಯಲಾಗಿದ್ದ ನಾಗೇಂದ್ರಗಡ ಗೋಶಾಲೆಯ ಸ್ಥಳದಲ್ಲಿಯೇ 2011ರ ಡಿಸೆಂಬರ್ 30ಕ್ಕೆ ಪ್ರಸ್ತುತ ಗೋಶಾಲೆಯನ್ನು ಆರಂಭಿಸಲಾಯಿತು.</p>.<p>2011ರ ಡಿಸೆಂಬರ್ ತಿಂಗಳಲ್ಲಿ 133 ಜಾನುವಾರುಗಳನ್ನು ಹೊಂದಿದ್ದ ಗೋ ಶಾಲೆಗೆ ಪ್ರಸ್ತುತ ಕೃಷಿ ವರ್ಷದ ಮುಂಗಾರು ಹಂಗಾಮಿನ ಪ್ರಮುಖ ಮಳೆ `ರೋಹಿನಿ~ ಸಂಪೂರ್ಣ ಕೈಕೊ ಟ್ಟಿದೆ. ಈ ಹಿನ್ನೆಲೆಯಲ್ಲಿ 2012-13ನೇ ಸಾಲಿನಲ್ಲಿಯೂ ಭೀಕರ ಬರದ ಲಕ್ಷಣಗಳು ದಟ್ಟವಾಗಿವೆ. ಈ ಹಿನ್ನೆಲೆಯಲ್ಲಿ ಕಳೆದ ಒಂದು ವಾರದಲ್ಲಿ ಗೋಶಾಲೆಗೆ 16 ಜಾನುವಾರುಗಳು ಹೆಚ್ಚುವರಿ ಯಾಗಿ ಸೇರ್ಪಡೆಗೊಂಡಿವೆ.</p>.<p><strong>ಇಕ್ಕಟಾದ ಶೆಡ್ಡು:</strong> ಸದ್ಯ ಗೋಶಾಲೆಯಲ್ಲಿ 4 ಶೆಡ್ಡುಗಳಿವೆ. ಈ ಶೆಡ್ಡುಗಳು ಜಾನುವಾರುಗಳ ಸಂಖ್ಯೆಗೆ ಹೋಲಿಸಲಾಗಿ ಶೆಡ್ಡುಗಳು ತೀರಾ ಇಕ್ಕಟ್ಟಾಗಿವೆ. ಹೀಗಾಗಿ ಜಾನುವಾರುಗಳಿಗೆ ಮಲಗಲು ಸಾಧ್ಯವಾಗುತ್ತಿಲ್ಲ. <br /> ಬಯಲು ಜಾಗೆಯಲ್ಲಿ ಜಾನುವಾರುಗಳನ್ನು ಕಟ್ಟ ಲಾಗುತ್ತಿದೆ. ಜಾನುವಾರುಗಳ ನಿರ್ವಹಣೆಗಾಗಿ 7 ಜನ ಗೋಪಾಲರಿದ್ದಾರೆ. ರೋಗಗ್ರಸ್ಥ ಜಾನುವಾರುಗಳಿಗೆ ಪ್ರತ್ಯೇಕ ಶೆಡ್ಡು ನಿರ್ಮಿಸಿಲ್ಲ. ಪಶುಗಳಿಗೆ ಚಿಕಿತ್ಸೆ ನೀಡಲು ಪಶು ವೈದ್ಯಾಧಿಕಾರಿಗಳು ಗೋಶಾಲೆಯಲ್ಲಿ ಇರೋದಿಲ್ಲ. ಅಗತ್ಯ ಹೊಟ್ಟು ಮೇವಿನ ವ್ಯವಸ್ಥೆಯಿಲ್ಲ.</p>.<p>ಕೇವಲ ಜೋಳದ ಮೇವು ಇದೆ. ಇದನ್ನು ಹೊರತು ಪಡಿಸಿದರೆ, ಜಾನುವಾರುಗಳ ಸಂರಕ್ಷಣೆಗೆ ಅಗತ್ಯವಿರುವ ಹೊಟ್ಟು, ಬೆಲ್ಲ, ಹತ್ತಿಕಾಳು, ಹಿಂಡಿ, ಲವನಾಂಶ ಕಲ್ಲುಗಳು ನೋಡಲು ಸಹ ಇಲ್ಲದಿರುವುದು ಅಧಿಕಾರಿಗಳ ಕಾರ್ಯವೈಖರಿಗೆ ಸಾಕ್ಷಿ ಎಂದು ರವೀಂದ್ರ ಹೊನ್ನವಾಡ ದೂರಿದ್ದಾರೆ.</p>.<p>ಜಾನುವಾರುಗಳಿಗೆ ಹೊಟ್ಟು ಮೇವು ಹಾಕುವ ನಿಟ್ಟಿನಲ್ಲಿ ನಿರ್ಮಿಸಲಾದ ತೊಟ್ಟಿನ ತೊಟ್ಟಿಗಳಲ್ಲಿ ಬೀರುಕು ಕಾಣಿಸಿಕೊಂಡಿವೆ. ಪರಿಣಾಮ ಜಾನುವಾರುಗಳು ತಿನ್ನುವ ಮೇವಿನಲ್ಲಿ ಮಣ್ಣು, ಉಸುಕು ಸೇರಿಕೊಳ್ಳುತ್ತಿದೆ. ಇದರಿಂದಾಗಿ ಜಾನುವಾರುಗಳು ಮೇವನ್ನು ತಿನ್ನಲು ಹಿಂದೆಟ್ಟು ಹಾಕುತ್ತಿವೆ. ಹಸಿವಿನಿಂದ ಬಳಲುತ್ತಿವೆ ಎಂಬ ಆರೋಪಗಳು ಕೇಳಿ ಬರುತ್ತಿದೆ.</p>.<p><strong>ಆದರ್ಶದ ಕನಸು ನನಸಾಗಲಿಲ್ಲ:</strong> 1986 ರಲ್ಲಿ ಅಂದಿನ ಶಾಸಕ ಜ್ಞಾನದೇವ ದೊಡ್ಡಮೇಟಿ ಅವರ ವಿಶೇಷ ಕಾಳಜಿಯಿಂದಾಗಿ ರಾಜ್ಯಕ್ಕೆ ಮಾದರಿಯಾಗಿತ್ತು.</p>.<p>ಅಂದಿನ ಮುಖ್ಯಮಂತ್ರಿ ದಿ. ರಾಮಕೃಷ್ಣ ಹೆಗಡೆ ಅವರು ಗೋ ಶಾಲೆಯ ವ್ಯವಸ್ಥೆ ಹಾಗೂ ದೊಡ್ಡ ಮೇಟಿ ಅವರ ಕಾರ್ಯವೈರಿಯನ್ನು ಕೊಂಡಾಡಿದ್ದರು. ಬಳಿಕ 2003ರಲ್ಲಿ ಮತ್ತೆ ಬರ ಪರಿಸ್ಥಿತಿ ಎದುರಾಯಿತು.</p>.<p>ಆಗಲೂ ಜಾನುವಾರುಗಳ ಸಂಕಷ್ಟಕ್ಕೆ ಗೋಶಾಲೆ ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಕಾಣಲಿಲ್ಲ. ಸದ್ಯ ಬರದಲ್ಲಿ 86ರ ಆದರ್ಶ ಗೋಶಾಲೆಯ ಕನಸು ಸಾಕಾರಗೊಳ್ಳುತ್ತದೆ ಎಂಬ ನಿರೀಕ್ಷೆ ಹುಸಿಯಾಗಿದೆ. ನಿರ್ಲಕ್ಷ್ಯದಿಂದಾಗಿ ಗೋಶಾಲೆ ಅವ್ಯವಸ್ಥೆಯ ಆಗರವಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗಜೇಂದ್ರಗಡ:</strong> 1986ರಲ್ಲಿ ಎದುರಾದ ಭೀಕರ ಬರ ಪರಸ್ಥಿತಿಯಲ್ಲಿ ರಾಜ್ಯಕ್ಕೆ ಮಾದರಿಯಾಗಿದ್ದ `ನಾಗೇಂದ್ರಗಡ ಗೋಶಾಲೆ~ ಪ್ರಸ್ತುತ ಬರದಲ್ಲಿ ಅಧಿಕಾರಿ ಗಳ ನಿರ್ಲಕ್ಷ್ಯದಿಂದಾಗಿ ಅವ್ಯವಸ್ಥೆಯ ಆಗರವಾಗಿ ಮಾರ್ಪಟ್ಟಿದೆ. ಪರಿಣಾಮ ಬರದ ಬವಣೆಯಿಂದ ಕಂಗೆಟ್ಟ ಕೃಷಿಕ ಜಾನುವಾರುಗಳನ್ನು ಗೋಶಾಲೆಗಳಿಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ.</p>.<p>ಬಹುತೇಕ ಕೃಷಿ ಪ್ರಧಾನ ಕುಟುಂಬಗಳೇ ನೆಲೆಸಿರುವ ರೋಣ ತಾಲ್ಲೂಕಿನಲ್ಲಿ ಕೇವಲ ಕೃಷಿಕ ಕುಟುಂಬಗಳು ಮಾತ್ರವಲ್ಲದೆ ಜಮೀನು ರಹಿತ ಕೃಷಿ ಕೂಲಿಕಾರ ಕುಟುಂಬಗಳು ಸಹ ಕನಿಷ್ಠ ಮೂರ ನ್ನಾಲ್ಕು ಜಾನುವಾರುಗಳ ಮೂಲಕ ಹೈನುಗಾರಿಕೆಯನ್ನೇ ನೆಚ್ಚಿಕೊಂಡು ತುತ್ತಿನ ಚೀಲ ತುಂಬಿಸಿಕೊಳ್ಳುತ್ತಿವೆ. ಆದರೆ, 2011-12ನೇ ಸಾಲಿನಲ್ಲಿ ಎದುರಾದ ಭೀಕರದಿಂದ ತತ್ತರಿಸಿರುವ ತಾಲ್ಲೂಕಿನ ಜಾನುವಾರುಗಳ ಸಂರಕ್ಷಣೆಯ ದೃಷ್ಟಿಯಿಂದ 1986ರಲ್ಲಿ ಉಂಟಾದ ಬರ ಪರಿಸ್ಥಿತಿಯಲ್ಲಿ ತೆರೆಯಲಾಗಿದ್ದ ನಾಗೇಂದ್ರಗಡ ಗೋಶಾಲೆಯ ಸ್ಥಳದಲ್ಲಿಯೇ 2011ರ ಡಿಸೆಂಬರ್ 30ಕ್ಕೆ ಪ್ರಸ್ತುತ ಗೋಶಾಲೆಯನ್ನು ಆರಂಭಿಸಲಾಯಿತು.</p>.<p>2011ರ ಡಿಸೆಂಬರ್ ತಿಂಗಳಲ್ಲಿ 133 ಜಾನುವಾರುಗಳನ್ನು ಹೊಂದಿದ್ದ ಗೋ ಶಾಲೆಗೆ ಪ್ರಸ್ತುತ ಕೃಷಿ ವರ್ಷದ ಮುಂಗಾರು ಹಂಗಾಮಿನ ಪ್ರಮುಖ ಮಳೆ `ರೋಹಿನಿ~ ಸಂಪೂರ್ಣ ಕೈಕೊ ಟ್ಟಿದೆ. ಈ ಹಿನ್ನೆಲೆಯಲ್ಲಿ 2012-13ನೇ ಸಾಲಿನಲ್ಲಿಯೂ ಭೀಕರ ಬರದ ಲಕ್ಷಣಗಳು ದಟ್ಟವಾಗಿವೆ. ಈ ಹಿನ್ನೆಲೆಯಲ್ಲಿ ಕಳೆದ ಒಂದು ವಾರದಲ್ಲಿ ಗೋಶಾಲೆಗೆ 16 ಜಾನುವಾರುಗಳು ಹೆಚ್ಚುವರಿ ಯಾಗಿ ಸೇರ್ಪಡೆಗೊಂಡಿವೆ.</p>.<p><strong>ಇಕ್ಕಟಾದ ಶೆಡ್ಡು:</strong> ಸದ್ಯ ಗೋಶಾಲೆಯಲ್ಲಿ 4 ಶೆಡ್ಡುಗಳಿವೆ. ಈ ಶೆಡ್ಡುಗಳು ಜಾನುವಾರುಗಳ ಸಂಖ್ಯೆಗೆ ಹೋಲಿಸಲಾಗಿ ಶೆಡ್ಡುಗಳು ತೀರಾ ಇಕ್ಕಟ್ಟಾಗಿವೆ. ಹೀಗಾಗಿ ಜಾನುವಾರುಗಳಿಗೆ ಮಲಗಲು ಸಾಧ್ಯವಾಗುತ್ತಿಲ್ಲ. <br /> ಬಯಲು ಜಾಗೆಯಲ್ಲಿ ಜಾನುವಾರುಗಳನ್ನು ಕಟ್ಟ ಲಾಗುತ್ತಿದೆ. ಜಾನುವಾರುಗಳ ನಿರ್ವಹಣೆಗಾಗಿ 7 ಜನ ಗೋಪಾಲರಿದ್ದಾರೆ. ರೋಗಗ್ರಸ್ಥ ಜಾನುವಾರುಗಳಿಗೆ ಪ್ರತ್ಯೇಕ ಶೆಡ್ಡು ನಿರ್ಮಿಸಿಲ್ಲ. ಪಶುಗಳಿಗೆ ಚಿಕಿತ್ಸೆ ನೀಡಲು ಪಶು ವೈದ್ಯಾಧಿಕಾರಿಗಳು ಗೋಶಾಲೆಯಲ್ಲಿ ಇರೋದಿಲ್ಲ. ಅಗತ್ಯ ಹೊಟ್ಟು ಮೇವಿನ ವ್ಯವಸ್ಥೆಯಿಲ್ಲ.</p>.<p>ಕೇವಲ ಜೋಳದ ಮೇವು ಇದೆ. ಇದನ್ನು ಹೊರತು ಪಡಿಸಿದರೆ, ಜಾನುವಾರುಗಳ ಸಂರಕ್ಷಣೆಗೆ ಅಗತ್ಯವಿರುವ ಹೊಟ್ಟು, ಬೆಲ್ಲ, ಹತ್ತಿಕಾಳು, ಹಿಂಡಿ, ಲವನಾಂಶ ಕಲ್ಲುಗಳು ನೋಡಲು ಸಹ ಇಲ್ಲದಿರುವುದು ಅಧಿಕಾರಿಗಳ ಕಾರ್ಯವೈಖರಿಗೆ ಸಾಕ್ಷಿ ಎಂದು ರವೀಂದ್ರ ಹೊನ್ನವಾಡ ದೂರಿದ್ದಾರೆ.</p>.<p>ಜಾನುವಾರುಗಳಿಗೆ ಹೊಟ್ಟು ಮೇವು ಹಾಕುವ ನಿಟ್ಟಿನಲ್ಲಿ ನಿರ್ಮಿಸಲಾದ ತೊಟ್ಟಿನ ತೊಟ್ಟಿಗಳಲ್ಲಿ ಬೀರುಕು ಕಾಣಿಸಿಕೊಂಡಿವೆ. ಪರಿಣಾಮ ಜಾನುವಾರುಗಳು ತಿನ್ನುವ ಮೇವಿನಲ್ಲಿ ಮಣ್ಣು, ಉಸುಕು ಸೇರಿಕೊಳ್ಳುತ್ತಿದೆ. ಇದರಿಂದಾಗಿ ಜಾನುವಾರುಗಳು ಮೇವನ್ನು ತಿನ್ನಲು ಹಿಂದೆಟ್ಟು ಹಾಕುತ್ತಿವೆ. ಹಸಿವಿನಿಂದ ಬಳಲುತ್ತಿವೆ ಎಂಬ ಆರೋಪಗಳು ಕೇಳಿ ಬರುತ್ತಿದೆ.</p>.<p><strong>ಆದರ್ಶದ ಕನಸು ನನಸಾಗಲಿಲ್ಲ:</strong> 1986 ರಲ್ಲಿ ಅಂದಿನ ಶಾಸಕ ಜ್ಞಾನದೇವ ದೊಡ್ಡಮೇಟಿ ಅವರ ವಿಶೇಷ ಕಾಳಜಿಯಿಂದಾಗಿ ರಾಜ್ಯಕ್ಕೆ ಮಾದರಿಯಾಗಿತ್ತು.</p>.<p>ಅಂದಿನ ಮುಖ್ಯಮಂತ್ರಿ ದಿ. ರಾಮಕೃಷ್ಣ ಹೆಗಡೆ ಅವರು ಗೋ ಶಾಲೆಯ ವ್ಯವಸ್ಥೆ ಹಾಗೂ ದೊಡ್ಡ ಮೇಟಿ ಅವರ ಕಾರ್ಯವೈರಿಯನ್ನು ಕೊಂಡಾಡಿದ್ದರು. ಬಳಿಕ 2003ರಲ್ಲಿ ಮತ್ತೆ ಬರ ಪರಿಸ್ಥಿತಿ ಎದುರಾಯಿತು.</p>.<p>ಆಗಲೂ ಜಾನುವಾರುಗಳ ಸಂಕಷ್ಟಕ್ಕೆ ಗೋಶಾಲೆ ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಕಾಣಲಿಲ್ಲ. ಸದ್ಯ ಬರದಲ್ಲಿ 86ರ ಆದರ್ಶ ಗೋಶಾಲೆಯ ಕನಸು ಸಾಕಾರಗೊಳ್ಳುತ್ತದೆ ಎಂಬ ನಿರೀಕ್ಷೆ ಹುಸಿಯಾಗಿದೆ. ನಿರ್ಲಕ್ಷ್ಯದಿಂದಾಗಿ ಗೋಶಾಲೆ ಅವ್ಯವಸ್ಥೆಯ ಆಗರವಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>