<p>ಅಕ್ರಮ ಗಣಿಗಾರಿಕೆ, ಗಣಿ ಗಡಿ ಒತ್ತುವರಿ, ಅಕ್ರಮ ಅದಿರು ಸಾಗಣೆ, ತೆರಿಗೆ ವಂಚನೆ, ಹಫ್ತಾ ವಸೂಲಿ, ಅರಣ್ಯ ಕಾಯ್ದೆ ಉಲ್ಲಂಘನೆ, ದಬ್ಬಾಳಿಕೆ, ವಂಚನೆ, ಅಧಿಕಾರ ದುರುಪಯೋಗ ಸೇರಿದಂತೆ ಹಲವು ಆರೋಪಗಳ ಮೇಲೆ ಕೇಂದ್ರ ತನಿಖಾ ದಳದ (ಸಿಬಿಐ) ಬಂಧನಕ್ಕೆ ಒಳಗಾಗಿರುವ ಬಳ್ಳಾರಿ `ಗಣಿ ಧಣಿ~ ಗಾಲಿ ಜನಾರ್ದನ ರೆಡ್ಡಿ ಪ್ರಕರಣವನ್ನು ರಾಜ್ಯದ ಆಡಳಿತಾರೂಢ ಬಿಜೆಪಿ ರಾಜಕೀಯ ದೃಷ್ಟಿಯಿಂದ ನೋಡುತ್ತಿರುವುದು ಆ ಪಕ್ಷದ ಸಮಯಸಾಧಕ ಪ್ರವೃತ್ತಿಯನ್ನು ತೋರುತ್ತಿದೆ.<br /> <br /> ಇದಕ್ಕೆ, ಭ್ರಷ್ಟಾಚಾರ ಪ್ರಕರಣಗಳ ತನಿಖೆಗೆ ಸಂಬಂಧಿಸಿ ಕೇಂದ್ರ ಸರ್ಕಾರದ ವಿಷಯದಲ್ಲಿ ಒಂದು ಮತ್ತು ತನ್ನದೇ ಪಕ್ಷದ ಅಧಿಕಾರ ಇರುವ ರಾಜ್ಯಗಳಲ್ಲಿ ಇನ್ನೊಂದು ರೀತಿಯ ಧೋರಣೆ ಅನುಸರಿಸುತ್ತಿರುವ ಆ ಪಕ್ಷದ ವರಿಷ್ಠರ ಇಬ್ಬಗೆ ನೀತಿಯೇ ಕಾರಣ. <br /> <br /> ಸಿಬಿಐ ತನಿಖೆಯಿಂದಾಗಿಯೇ 2ಜಿ ತರಂಗಾಂತರ ಹಂಚಿಕೆ ಮತ್ತು ಕಾಮನ್ವೆಲ್ತ್ ಕ್ರೀಡಾಕೂಟದ ಹಗರಣಕ್ಕೆ ಸಂಬಂಧಿಸಿ ಕೇಂದ್ರದ ಮಾಜಿ ಸಚಿವ ಎ.ರಾಜಾ, ರಾಜ್ಯಸಭೆ ಸದಸ್ಯೆ ಕನಿಮೊಳಿ, ಕಾಂಗ್ರೆಸ್ ಮುಖಂಡ ಸುರೇಶ್ ಕಲ್ಮಾಡಿ ಮತ್ತು ಕಾರ್ಪೊರೇಟ್ ಜಗತ್ತಿನ ಕೆಲವು ವರಿಷ್ಠ ಅಧಿಕಾರಿಗಳು ಜೈಲು ಸೇರಿದ್ದಾರೆ. <br /> <br /> ಇದನ್ನು ಒಪ್ಪಿಕೊಳ್ಳುವ ಬಿಜೆಪಿ, ಅದೇ ಬಗೆಯ ಕಾರ್ಯಾಚರಣೆ `ಗಣಿಧಣಿ~ಯ ವಿರುದ್ಧ ನಡೆದಾಗ ರಾಜಕೀಯ ಪ್ರೇರಿತವೆಂದು ಹುಯ್ಯಲಿಡುತ್ತದೆ. ಜವಾಬ್ದಾರಿಯುತ ರಾಜಕೀಯ ಪಕ್ಷವಾಗಿ ಇರಬೇಕಾದ ಬಿಜೆಪಿಯ ಇಂಥ ಪಕ್ಷಪಾತದ ನಡವಳಿಕೆ ಖಂಡನೀಯ.<br /> <br /> ಅಕ್ರಮ ಗಣಿಗಾರಿಕೆ ಮತ್ತು ಭ್ರಷ್ಟಾಚಾರದ ಆರೋಪಗಳ ಕಾರಣವಾಗಿಯೇ ರಾಜ್ಯದಲ್ಲಿ ಬಿಜೆಪಿ ಸರ್ಕಾರದ ನೇತೃತ್ವ ಬದಲಾಗಿದೆ. ಆದರೆ ಈ ಕುರಿತಂತೆ ಬಿಜೆಪಿಯ ಯಾವ ಮುಖಂಡರಲ್ಲಿಯೂ ಜವಾಬ್ದಾರಿಯುತ ವರ್ತನೆ ಪ್ರಕಟವಾಗುತ್ತಿಲ್ಲ. <br /> <br /> `ಜನಾರ್ದನ ರೆಡ್ಡಿ ಅವರನ್ನು ಸಿಬಿಐ ಬಂಧಿಸಿದ ಮಾತ್ರಕ್ಕೆ ಅವರು ತಪ್ಪು ಮಾಡಿದ್ದಾರೆ ಎಂದು ತೀರ್ಮಾನಿಸಲಾಗದು; ಅವರು ಪ್ರಾಮಾಣಿಕವಾಗಿ ಗಣಿಗಾರಿಕೆ ಮಾಡಿಕೊಂಡು ಬಂದಿದ್ದಾರೆ~ ಎಂಬ ಹೇಳಿಕೆ ನೀಡುವ ಮೂಲಕ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡರು ತಮ್ಮ ಸ್ಥಾನದ ಔಚಿತ್ಯವನ್ನು ಮೀರಿದ್ದಾರೆ. <br /> <br /> ಇದು ನ್ಯಾಯಾಂಗದ ನಿಷ್ಪಕ್ಷಪಾತ ಸ್ವರೂಪವನ್ನು ಪ್ರಶ್ನಿಸುವಂಥ ಹೇಳಿಕೆ. ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆಯ ಹಂತದಲ್ಲಿ ಇರುವಾಗ ಆರೋಪಿಯ ಕುರಿತಾಗಿ ಪ್ರಾಮಾಣಿಕತೆಯ ಪ್ರಮಾಣ ಪತ್ರ ನೀಡುವ ಅಧಿಕಾರವಾಗಲೀ ಅರ್ಹತೆಯಾಗಲೀ ಮುಖ್ಯಮಂತ್ರಿಗೆ ಇರುವುದಿಲ್ಲ. <br /> <br /> ಅಕ್ರಮಗಳ ಕುರಿತಾಗಿ ಲೋಕಾಯುಕ್ತ ವರದಿಯೇ ಸರ್ಕಾರದ ಮುಂದೆ ಇರುವಾಗ ಅಮಾಯಕರಂತೆ ಪ್ರತಿಕ್ರಿಯೆ ನೀಡುವ ಚಪಲಕ್ಕೆ ಮುಖ್ಯಮಂತ್ರಿ ಒಳಗಾಗಿದ್ದು ಉದ್ದೇಶಪೂರ್ವಕವೋ ಆಕಸ್ಮಿಕವೋ ಎಂಬುದು ಸ್ಪಷ್ಟವಾಗುತ್ತಿಲ್ಲ.<br /> <br /> `ಆರೋಪಿಯ ಬೆಂಬಲಕ್ಕೆ ಪಕ್ಷ ನಿಲ್ಲುತ್ತದೆ~ ಎಂದು ಹೇಳುವ ಮೂಲಕ ಬಿಜೆಪಿಯ ಮುಖಂಡರು ತಮ್ಮ ಪಕ್ಷದ ನಿಜವಾದ ಬಣ್ಣವನ್ನು ಬಯಲು ಮಾಡಿದ್ದಾರೆ. `ಗಣಿಧಣಿ~ಗಳ ದಬ್ಬಾಳಿಕೆಯಿಂದ ಬಳ್ಳಾರಿಯೇ ಪ್ರತ್ಯೇಕ ಸಂಸ್ಥಾನದಂತೆ ಪರಿವರ್ತನೆಯಾಗಿದೆ ಎಂದು ಅಕ್ರಮ ಗಣಿಗಾರಿಕೆ ಕುರಿತ ಲೋಕಾಯುಕ್ತರ ವರದಿಗೆ ನಿಮಿತ್ತವಾದ ಪರಿಸ್ಥಿತಿ `ಗಣಿಧಣಿ~ಗಳು ಸರ್ಕಾರದಿಂದ ಅಧಿಕಾರವಂಚಿತರಾದ ಮೇಲೆಯೂ ಉಳಿದುಕೊಂಡಿದೆ ಎಂಬುದಕ್ಕೆ ಜನಾರ್ದನ ರೆಡ್ಡಿ ಬಂಧನ ಪ್ರತಿಭಟಿಸಿ ಬಳ್ಳಾರಿ ಜಿಲ್ಲಾಧಿಕಾರಿ ಕಚೇರಿಯ ಮೇಲೆ ಬೆಂಬಲಿಗರು ನಡೆಸಿದ ದಾಳಿ ಸಾಕ್ಷಿಯಾಗಿದೆ.<br /> <br /> ಇದು ರಾಜ್ಯದಲ್ಲಿ ಸಂವಿಧಾನ ವ್ಯವಸ್ಥೆಯನ್ನು ಪಾಲಿಸುವಂಥ ಸರ್ಕಾರ ಇದೆಯೇ ಎಂಬ ಸಂಶಯ ಮೂಡಲು ಕಾರಣವಾಗಿದೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಅಕ್ರಮ ಗಣಿಗಾರಿಕೆ, ಗಣಿ ಗಡಿ ಒತ್ತುವರಿ, ಅಕ್ರಮ ಅದಿರು ಸಾಗಣೆ, ತೆರಿಗೆ ವಂಚನೆ, ಹಫ್ತಾ ವಸೂಲಿ, ಅರಣ್ಯ ಕಾಯ್ದೆ ಉಲ್ಲಂಘನೆ, ದಬ್ಬಾಳಿಕೆ, ವಂಚನೆ, ಅಧಿಕಾರ ದುರುಪಯೋಗ ಸೇರಿದಂತೆ ಹಲವು ಆರೋಪಗಳ ಮೇಲೆ ಕೇಂದ್ರ ತನಿಖಾ ದಳದ (ಸಿಬಿಐ) ಬಂಧನಕ್ಕೆ ಒಳಗಾಗಿರುವ ಬಳ್ಳಾರಿ `ಗಣಿ ಧಣಿ~ ಗಾಲಿ ಜನಾರ್ದನ ರೆಡ್ಡಿ ಪ್ರಕರಣವನ್ನು ರಾಜ್ಯದ ಆಡಳಿತಾರೂಢ ಬಿಜೆಪಿ ರಾಜಕೀಯ ದೃಷ್ಟಿಯಿಂದ ನೋಡುತ್ತಿರುವುದು ಆ ಪಕ್ಷದ ಸಮಯಸಾಧಕ ಪ್ರವೃತ್ತಿಯನ್ನು ತೋರುತ್ತಿದೆ.<br /> <br /> ಇದಕ್ಕೆ, ಭ್ರಷ್ಟಾಚಾರ ಪ್ರಕರಣಗಳ ತನಿಖೆಗೆ ಸಂಬಂಧಿಸಿ ಕೇಂದ್ರ ಸರ್ಕಾರದ ವಿಷಯದಲ್ಲಿ ಒಂದು ಮತ್ತು ತನ್ನದೇ ಪಕ್ಷದ ಅಧಿಕಾರ ಇರುವ ರಾಜ್ಯಗಳಲ್ಲಿ ಇನ್ನೊಂದು ರೀತಿಯ ಧೋರಣೆ ಅನುಸರಿಸುತ್ತಿರುವ ಆ ಪಕ್ಷದ ವರಿಷ್ಠರ ಇಬ್ಬಗೆ ನೀತಿಯೇ ಕಾರಣ. <br /> <br /> ಸಿಬಿಐ ತನಿಖೆಯಿಂದಾಗಿಯೇ 2ಜಿ ತರಂಗಾಂತರ ಹಂಚಿಕೆ ಮತ್ತು ಕಾಮನ್ವೆಲ್ತ್ ಕ್ರೀಡಾಕೂಟದ ಹಗರಣಕ್ಕೆ ಸಂಬಂಧಿಸಿ ಕೇಂದ್ರದ ಮಾಜಿ ಸಚಿವ ಎ.ರಾಜಾ, ರಾಜ್ಯಸಭೆ ಸದಸ್ಯೆ ಕನಿಮೊಳಿ, ಕಾಂಗ್ರೆಸ್ ಮುಖಂಡ ಸುರೇಶ್ ಕಲ್ಮಾಡಿ ಮತ್ತು ಕಾರ್ಪೊರೇಟ್ ಜಗತ್ತಿನ ಕೆಲವು ವರಿಷ್ಠ ಅಧಿಕಾರಿಗಳು ಜೈಲು ಸೇರಿದ್ದಾರೆ. <br /> <br /> ಇದನ್ನು ಒಪ್ಪಿಕೊಳ್ಳುವ ಬಿಜೆಪಿ, ಅದೇ ಬಗೆಯ ಕಾರ್ಯಾಚರಣೆ `ಗಣಿಧಣಿ~ಯ ವಿರುದ್ಧ ನಡೆದಾಗ ರಾಜಕೀಯ ಪ್ರೇರಿತವೆಂದು ಹುಯ್ಯಲಿಡುತ್ತದೆ. ಜವಾಬ್ದಾರಿಯುತ ರಾಜಕೀಯ ಪಕ್ಷವಾಗಿ ಇರಬೇಕಾದ ಬಿಜೆಪಿಯ ಇಂಥ ಪಕ್ಷಪಾತದ ನಡವಳಿಕೆ ಖಂಡನೀಯ.<br /> <br /> ಅಕ್ರಮ ಗಣಿಗಾರಿಕೆ ಮತ್ತು ಭ್ರಷ್ಟಾಚಾರದ ಆರೋಪಗಳ ಕಾರಣವಾಗಿಯೇ ರಾಜ್ಯದಲ್ಲಿ ಬಿಜೆಪಿ ಸರ್ಕಾರದ ನೇತೃತ್ವ ಬದಲಾಗಿದೆ. ಆದರೆ ಈ ಕುರಿತಂತೆ ಬಿಜೆಪಿಯ ಯಾವ ಮುಖಂಡರಲ್ಲಿಯೂ ಜವಾಬ್ದಾರಿಯುತ ವರ್ತನೆ ಪ್ರಕಟವಾಗುತ್ತಿಲ್ಲ. <br /> <br /> `ಜನಾರ್ದನ ರೆಡ್ಡಿ ಅವರನ್ನು ಸಿಬಿಐ ಬಂಧಿಸಿದ ಮಾತ್ರಕ್ಕೆ ಅವರು ತಪ್ಪು ಮಾಡಿದ್ದಾರೆ ಎಂದು ತೀರ್ಮಾನಿಸಲಾಗದು; ಅವರು ಪ್ರಾಮಾಣಿಕವಾಗಿ ಗಣಿಗಾರಿಕೆ ಮಾಡಿಕೊಂಡು ಬಂದಿದ್ದಾರೆ~ ಎಂಬ ಹೇಳಿಕೆ ನೀಡುವ ಮೂಲಕ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡರು ತಮ್ಮ ಸ್ಥಾನದ ಔಚಿತ್ಯವನ್ನು ಮೀರಿದ್ದಾರೆ. <br /> <br /> ಇದು ನ್ಯಾಯಾಂಗದ ನಿಷ್ಪಕ್ಷಪಾತ ಸ್ವರೂಪವನ್ನು ಪ್ರಶ್ನಿಸುವಂಥ ಹೇಳಿಕೆ. ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆಯ ಹಂತದಲ್ಲಿ ಇರುವಾಗ ಆರೋಪಿಯ ಕುರಿತಾಗಿ ಪ್ರಾಮಾಣಿಕತೆಯ ಪ್ರಮಾಣ ಪತ್ರ ನೀಡುವ ಅಧಿಕಾರವಾಗಲೀ ಅರ್ಹತೆಯಾಗಲೀ ಮುಖ್ಯಮಂತ್ರಿಗೆ ಇರುವುದಿಲ್ಲ. <br /> <br /> ಅಕ್ರಮಗಳ ಕುರಿತಾಗಿ ಲೋಕಾಯುಕ್ತ ವರದಿಯೇ ಸರ್ಕಾರದ ಮುಂದೆ ಇರುವಾಗ ಅಮಾಯಕರಂತೆ ಪ್ರತಿಕ್ರಿಯೆ ನೀಡುವ ಚಪಲಕ್ಕೆ ಮುಖ್ಯಮಂತ್ರಿ ಒಳಗಾಗಿದ್ದು ಉದ್ದೇಶಪೂರ್ವಕವೋ ಆಕಸ್ಮಿಕವೋ ಎಂಬುದು ಸ್ಪಷ್ಟವಾಗುತ್ತಿಲ್ಲ.<br /> <br /> `ಆರೋಪಿಯ ಬೆಂಬಲಕ್ಕೆ ಪಕ್ಷ ನಿಲ್ಲುತ್ತದೆ~ ಎಂದು ಹೇಳುವ ಮೂಲಕ ಬಿಜೆಪಿಯ ಮುಖಂಡರು ತಮ್ಮ ಪಕ್ಷದ ನಿಜವಾದ ಬಣ್ಣವನ್ನು ಬಯಲು ಮಾಡಿದ್ದಾರೆ. `ಗಣಿಧಣಿ~ಗಳ ದಬ್ಬಾಳಿಕೆಯಿಂದ ಬಳ್ಳಾರಿಯೇ ಪ್ರತ್ಯೇಕ ಸಂಸ್ಥಾನದಂತೆ ಪರಿವರ್ತನೆಯಾಗಿದೆ ಎಂದು ಅಕ್ರಮ ಗಣಿಗಾರಿಕೆ ಕುರಿತ ಲೋಕಾಯುಕ್ತರ ವರದಿಗೆ ನಿಮಿತ್ತವಾದ ಪರಿಸ್ಥಿತಿ `ಗಣಿಧಣಿ~ಗಳು ಸರ್ಕಾರದಿಂದ ಅಧಿಕಾರವಂಚಿತರಾದ ಮೇಲೆಯೂ ಉಳಿದುಕೊಂಡಿದೆ ಎಂಬುದಕ್ಕೆ ಜನಾರ್ದನ ರೆಡ್ಡಿ ಬಂಧನ ಪ್ರತಿಭಟಿಸಿ ಬಳ್ಳಾರಿ ಜಿಲ್ಲಾಧಿಕಾರಿ ಕಚೇರಿಯ ಮೇಲೆ ಬೆಂಬಲಿಗರು ನಡೆಸಿದ ದಾಳಿ ಸಾಕ್ಷಿಯಾಗಿದೆ.<br /> <br /> ಇದು ರಾಜ್ಯದಲ್ಲಿ ಸಂವಿಧಾನ ವ್ಯವಸ್ಥೆಯನ್ನು ಪಾಲಿಸುವಂಥ ಸರ್ಕಾರ ಇದೆಯೇ ಎಂಬ ಸಂಶಯ ಮೂಡಲು ಕಾರಣವಾಗಿದೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>