<p>ಕಣ್ಣು, ಕೈಕಾಲುಗಳು ಸರಿಯಿದ್ದವರನ್ನೇ ಯಾಮಾರಿಸುವ ಇಂದಿನ ಜನರ ಮಧ್ಯೆ ಇಲ್ಲೊಬ್ಬ ‘ಕ್ಯಾಮೆರಾ ಯುವಕ’ ಅಂಗವಿಕಲರಿಗೆ, ವಯೋವೃದ್ಧರಿಗೆ ಉಚಿತವಾಗಿ ಭಾವಚಿತ್ರ ತೆಗೆದುಕೊಟ್ಟು ‘ಕ್ಯಾಮೆರಾ ಸೇವೆ’ ಮಾಡುತ್ತಿದ್ದಾರೆ.<br /> <br /> ವೃತ್ತಿಯಿಂದ ಛಾಯಾಗ್ರಾಹಕ ಆಗಿರುವ ಎನ್.ಎಂ.ವಿದ್ಯಾಧರ ಅವರದ್ದು ಈ ಸೇವೆ. ಓದಿದ್ದು ಡಿಪ್ಲೊಮಾ ಇನ್ ಕಮರ್ಷಿಯಲ್ ಪ್ರಾಕ್ಟೀಸ್. ಸೂಕ್ತ ನೌಕರಿ ಸಿಗದಾಗ ತಂದೆ, ಅಜ್ಜರಿಂದ ಬಳುವಳಿಯಾಗಿ ಬಂದ ಕ್ಯಾಮೆರಾ ಇವರ ಸಂಗಾತಿಯಾಯಿತು.<br /> <br /> ಸಂಡೂರಿನಲ್ಲಿ ೨೦೦೮ರಲ್ಲಿ ಸ್ವಂತ ಸ್ಟುಡಿಯೊ ಆರಂಭಿಸಿದರು. ಶಾಲಾ ದಾಖಲಾತಿ, ಬಸ್ಪಾಸ್ಗೆ, ಸರ್ಕಾರದ ವಿವಿಧ ಯೋಜನೆಗಳ ಸಲುವಾಗಿ ಭಾವಚಿತ್ರದ ಅವಶ್ಯವಿರುವ ಅಂಧರು, ಅಂಗವಿಕಲರು, ವೃದ್ಧರು ಹಾಗೂ ಅಸಹಾಯಕರಿಗೆ ಇವರದ್ದು ಅಂದಿನಿಂದಲೂ ಉಚಿತ ಸೇವೆ. ಇದುವರೆಗೆ ೩ಸಾವಿರಕ್ಕೂ ಮಿಕ್ಕ ಜನರಿಗೆ ಉಚಿತವಾಗಿ ಫೋಟೊ ತೆಗೆದುಕೊಟ್ಟಿದ್ದಾರೆ.<br /> <br /> ಹಳ್ಳಿ ಬದುಕಿನ ಅರಿವಿರುವ ಇವರು ಬಿಡುವಿದ್ದಾಗ ನಿಸರ್ಗ, ಪ್ರಾಣಿ ಪಕ್ಷಿಗಳ ಚಿತ್ರ ತೆಗೆಯುತ್ತಾರೆ. ಹೀಗೆ ಹಲವಾರು ಅಪೂರ್ವ ಚಿತ್ರಗಳು ಇವರ ಬಳಿ ಇವೆ.<br /> <br /> ಇವರ ಉಚಿತ ಸೇವೆಯನ್ನು ಗುರುತಿಸಿ ೨೦೧೦ರಲ್ಲಿ ತಾಲ್ಲೂಕು ಆಡಳಿತ ಸನ್ಮಾನ ನೀಡಿ ಗೌರವಿಸಿದೆ.<br /> ‘ನನಗೆ ಫೋಟೊ ಅವಶ್ಯಕತೆ ಇತ್ತು. ಆದರೆ ದುಡ್ಡು ಇರಲಿಲ್ಲ. ವಿದ್ಯಣ್ಣ ಅವರೇ ಉಚಿತವಾಗಿ ಫೋಟೊ ತೆಗೆದು ನನಗೆ ನೆರವಾದರು. ಹೀಗೆ ಅನೇಕ ಮಂದಿಗೆ ಇವರು ನೆರವಾಗುತ್ತಿದ್ದಾರೆ’ ಎನ್ನುತ್ತಾರೆ ಅಂಗವಿಕಲ ಡೊಂಬಿ ಬಸವರಾಜ್.<br /> <br /> ‘ಅಸಹಾಯಕರ ನೆರವಿಗಾಗಿ ಅಳಿಲು ಸೇವೆ ಮಾಡುತ್ತಿರುವ ಇವರ ಕಾಯಕ ಇತರರಿಗೆ ಮಾದರಿಯಾಗಿದೆ. ಇಂಥವರ ಸಂಖ್ಯೆ ಸಾವಿರವಾಗಲಿ ಎನ್ನುತ್ತಾರೆ’ ವಿರಕ್ತಮಠದ ಫ್ರಭುಸ್ವಾಮೀಜಿ .</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕಣ್ಣು, ಕೈಕಾಲುಗಳು ಸರಿಯಿದ್ದವರನ್ನೇ ಯಾಮಾರಿಸುವ ಇಂದಿನ ಜನರ ಮಧ್ಯೆ ಇಲ್ಲೊಬ್ಬ ‘ಕ್ಯಾಮೆರಾ ಯುವಕ’ ಅಂಗವಿಕಲರಿಗೆ, ವಯೋವೃದ್ಧರಿಗೆ ಉಚಿತವಾಗಿ ಭಾವಚಿತ್ರ ತೆಗೆದುಕೊಟ್ಟು ‘ಕ್ಯಾಮೆರಾ ಸೇವೆ’ ಮಾಡುತ್ತಿದ್ದಾರೆ.<br /> <br /> ವೃತ್ತಿಯಿಂದ ಛಾಯಾಗ್ರಾಹಕ ಆಗಿರುವ ಎನ್.ಎಂ.ವಿದ್ಯಾಧರ ಅವರದ್ದು ಈ ಸೇವೆ. ಓದಿದ್ದು ಡಿಪ್ಲೊಮಾ ಇನ್ ಕಮರ್ಷಿಯಲ್ ಪ್ರಾಕ್ಟೀಸ್. ಸೂಕ್ತ ನೌಕರಿ ಸಿಗದಾಗ ತಂದೆ, ಅಜ್ಜರಿಂದ ಬಳುವಳಿಯಾಗಿ ಬಂದ ಕ್ಯಾಮೆರಾ ಇವರ ಸಂಗಾತಿಯಾಯಿತು.<br /> <br /> ಸಂಡೂರಿನಲ್ಲಿ ೨೦೦೮ರಲ್ಲಿ ಸ್ವಂತ ಸ್ಟುಡಿಯೊ ಆರಂಭಿಸಿದರು. ಶಾಲಾ ದಾಖಲಾತಿ, ಬಸ್ಪಾಸ್ಗೆ, ಸರ್ಕಾರದ ವಿವಿಧ ಯೋಜನೆಗಳ ಸಲುವಾಗಿ ಭಾವಚಿತ್ರದ ಅವಶ್ಯವಿರುವ ಅಂಧರು, ಅಂಗವಿಕಲರು, ವೃದ್ಧರು ಹಾಗೂ ಅಸಹಾಯಕರಿಗೆ ಇವರದ್ದು ಅಂದಿನಿಂದಲೂ ಉಚಿತ ಸೇವೆ. ಇದುವರೆಗೆ ೩ಸಾವಿರಕ್ಕೂ ಮಿಕ್ಕ ಜನರಿಗೆ ಉಚಿತವಾಗಿ ಫೋಟೊ ತೆಗೆದುಕೊಟ್ಟಿದ್ದಾರೆ.<br /> <br /> ಹಳ್ಳಿ ಬದುಕಿನ ಅರಿವಿರುವ ಇವರು ಬಿಡುವಿದ್ದಾಗ ನಿಸರ್ಗ, ಪ್ರಾಣಿ ಪಕ್ಷಿಗಳ ಚಿತ್ರ ತೆಗೆಯುತ್ತಾರೆ. ಹೀಗೆ ಹಲವಾರು ಅಪೂರ್ವ ಚಿತ್ರಗಳು ಇವರ ಬಳಿ ಇವೆ.<br /> <br /> ಇವರ ಉಚಿತ ಸೇವೆಯನ್ನು ಗುರುತಿಸಿ ೨೦೧೦ರಲ್ಲಿ ತಾಲ್ಲೂಕು ಆಡಳಿತ ಸನ್ಮಾನ ನೀಡಿ ಗೌರವಿಸಿದೆ.<br /> ‘ನನಗೆ ಫೋಟೊ ಅವಶ್ಯಕತೆ ಇತ್ತು. ಆದರೆ ದುಡ್ಡು ಇರಲಿಲ್ಲ. ವಿದ್ಯಣ್ಣ ಅವರೇ ಉಚಿತವಾಗಿ ಫೋಟೊ ತೆಗೆದು ನನಗೆ ನೆರವಾದರು. ಹೀಗೆ ಅನೇಕ ಮಂದಿಗೆ ಇವರು ನೆರವಾಗುತ್ತಿದ್ದಾರೆ’ ಎನ್ನುತ್ತಾರೆ ಅಂಗವಿಕಲ ಡೊಂಬಿ ಬಸವರಾಜ್.<br /> <br /> ‘ಅಸಹಾಯಕರ ನೆರವಿಗಾಗಿ ಅಳಿಲು ಸೇವೆ ಮಾಡುತ್ತಿರುವ ಇವರ ಕಾಯಕ ಇತರರಿಗೆ ಮಾದರಿಯಾಗಿದೆ. ಇಂಥವರ ಸಂಖ್ಯೆ ಸಾವಿರವಾಗಲಿ ಎನ್ನುತ್ತಾರೆ’ ವಿರಕ್ತಮಠದ ಫ್ರಭುಸ್ವಾಮೀಜಿ .</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>