<p>ಗುವಾಹತಿ (ಐಎಎನ್ಎಸ್): ಪುರಾತನ ಕಾಮಾಕ್ಯ ದೇವಸ್ಥಾನಕ್ಕೆ ಹೋಗುವ ಮಾರ್ಗದಲ್ಲಿ ಮನುಷ್ಯ ರುಂಡವೊಂದು ಶುಕ್ರವಾರ ಪತ್ತೆಯಾಗಿದ್ದು ಈ ಪ್ರದೇಶದಲ್ಲಿ ಪ್ರಕ್ಷುಬ್ಧತೆ ಸೃಷ್ಟಿಸಿದೆ. ಇದು ನರಬಲಿ ಪ್ರಕರಣ ಆಗಿರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.<br /> <br /> ಪ್ಲಾಸ್ಟಿಕ್ ಚೀಲವೊಂದರಲ್ಲಿ ಮನುಷ್ಯರುಂಡ ಪತ್ತೆಯಾಗಿದ್ದು ಜೊತೆಗೇ ಮಂತ್ರಗಳನ್ನು ಬರೆಯಲಾಗಿದ್ದ ಕಾಗದದ ಚೂರು ಕೂಡಾ ಲಭಿಸಿದೆ ಎಂದು ಪೊಲೀಸರು ಹೇಳಿದ್ದಾರೆ.<br /> <br /> ~ರುಂಡದ ಗುರುತು ಪತ್ತೆ ಹಚ್ಚ ಬೇಕಾಗಿದೆ. ಪ್ರದೇಶದಲ್ಲಿ ಈ ಬಗ್ಗೆ ವಿಚಾರಿಸಲಾಗಿದ್ದು ಮೃತ ವ್ಯಕ್ತಿ ಸ್ಥಳೀಯನಲ್ಲ ಎಂಬುದು ದೃಢಪಟ್ಟಿದೆ~ ಎಂದು ಜಲುಕ್ ಬಾರಿ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದರು. ಮುಂಡದ ಪತ್ತೆಗಾಗಿ ಶೋಧ ನಡೆಸಲಾಗುತ್ತಿದೆ ಎಂದೂ ಅವರು ಹೇಳಿದರು.<br /> <br /> ~ಇದು ನರಬಲಿ ಆಗಿರುವ ಸಾಧ್ಯತೆ ಇದೆ. ಆದರೆ ಈ ಬಗ್ಗೆ ಸ್ಪಷ್ಟವಾಗಿ ಈಗಲೇ ಹೇಳಲು ಸಾಧ್ಯವಿಲ್ಲ. ನಮ್ಮ ಮೊದಲ ಕೆಲಸ ಸತ್ತ ವ್ಯಕ್ತಿಯ ಗುರುತು ಪತ್ತೆ ಹಚ್ಚುವುದು~ ಎಂದು ಹೇಳಿದ ಅವರು ~ಅಪರಾಧವನ್ನು ಬೇರೆ ಯಾವುದೋ ಜಾಗದಲ್ಲಿ ಎಸಗಿ ರುಂಡವನ್ನು ನಂತರ ಇಲ್ಲಿಗೆ ತರಲಾಗಿದೆ~ ಎಂದು ವಿವರಿಸಿದರು.<br /> <br /> ಪ್ರದೇಶದಲ್ಲಿ ಎಲ್ಲಿಯೂ ರಕ್ತದ ಕಲೆ ಕಂಡು ಬಂದಿಲ್ಲ. ಇದು ತಲೆ ಕಡಿದ ಈ ಕೃತ್ಯವನ್ನು ಬೇರೆಲ್ಲೋ ನಡೆಸಿರಬೇಕು ಎಂಬುದನ್ನು ಸೂಚಿಸುತ್ತದೆ ಎಂದು ಅವರು ಹೇಳಿದರು.<br /> <br /> 200ರಲ್ಲಿ ವ್ಯಕ್ತಿಯೊಬ್ಬ ತನ್ನ ಒಂದೂವರೆ ವರ್ಷದ ಪುತ್ರಿಯನ್ನು ಬಲಿಕೊಡಲು ಯತ್ನಿಸಿದ್ದನ್ನು ದೇವಾಲಯದ ಭದ್ರತಾ ಸಿಬ್ಬಂದಿಯೊಬ್ಬರು ಪತ್ತೆ ಹಚ್ಚಿದ್ದರು. ಈ ಹಿನ್ನೆಲೆಯಲ್ಲಿ ನರಬಲಿ ಸಾಧ್ಯತೆಯನ್ನು ತಳ್ಳಿಹಾಕಲು ಸಾಧ್ಯವಿಲ್ಲ ಎಂದು ಪೊಲೀಸರು ನುಡಿದರು.<br /> <br /> ಅಸ್ಸಾಮಿನ ಇತರ ಹಲವಾರು ದೇವಾಲಯಗಳಂತೆ ಕಾಮಾಕ್ಯ ದೇವಾಲಯದಲ್ಲೂ ನರಬಲಿ ನಡೆಯುತ್ತಿದ್ದ ಇತಿಹಾಸ ಇದೆ. ಅಸ್ಸಾಮಿನಲ್ಲಿ 18ನೇ ಶತಮಾನದವರೆಗೂ ನರಬಲಿ ನಡೆಯುತ್ತಿತ್ತು ಎಂದು ಅಸ್ಸಾಂ ಸಂಶೋಧನಾ ಸಂಘದ ನಿಯತಕಾಲಿಕವೊಂದು 1933ರಲ್ಲಿ ಪ್ರಕಟಿಸಿತ್ತು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಗುವಾಹತಿ (ಐಎಎನ್ಎಸ್): ಪುರಾತನ ಕಾಮಾಕ್ಯ ದೇವಸ್ಥಾನಕ್ಕೆ ಹೋಗುವ ಮಾರ್ಗದಲ್ಲಿ ಮನುಷ್ಯ ರುಂಡವೊಂದು ಶುಕ್ರವಾರ ಪತ್ತೆಯಾಗಿದ್ದು ಈ ಪ್ರದೇಶದಲ್ಲಿ ಪ್ರಕ್ಷುಬ್ಧತೆ ಸೃಷ್ಟಿಸಿದೆ. ಇದು ನರಬಲಿ ಪ್ರಕರಣ ಆಗಿರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.<br /> <br /> ಪ್ಲಾಸ್ಟಿಕ್ ಚೀಲವೊಂದರಲ್ಲಿ ಮನುಷ್ಯರುಂಡ ಪತ್ತೆಯಾಗಿದ್ದು ಜೊತೆಗೇ ಮಂತ್ರಗಳನ್ನು ಬರೆಯಲಾಗಿದ್ದ ಕಾಗದದ ಚೂರು ಕೂಡಾ ಲಭಿಸಿದೆ ಎಂದು ಪೊಲೀಸರು ಹೇಳಿದ್ದಾರೆ.<br /> <br /> ~ರುಂಡದ ಗುರುತು ಪತ್ತೆ ಹಚ್ಚ ಬೇಕಾಗಿದೆ. ಪ್ರದೇಶದಲ್ಲಿ ಈ ಬಗ್ಗೆ ವಿಚಾರಿಸಲಾಗಿದ್ದು ಮೃತ ವ್ಯಕ್ತಿ ಸ್ಥಳೀಯನಲ್ಲ ಎಂಬುದು ದೃಢಪಟ್ಟಿದೆ~ ಎಂದು ಜಲುಕ್ ಬಾರಿ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದರು. ಮುಂಡದ ಪತ್ತೆಗಾಗಿ ಶೋಧ ನಡೆಸಲಾಗುತ್ತಿದೆ ಎಂದೂ ಅವರು ಹೇಳಿದರು.<br /> <br /> ~ಇದು ನರಬಲಿ ಆಗಿರುವ ಸಾಧ್ಯತೆ ಇದೆ. ಆದರೆ ಈ ಬಗ್ಗೆ ಸ್ಪಷ್ಟವಾಗಿ ಈಗಲೇ ಹೇಳಲು ಸಾಧ್ಯವಿಲ್ಲ. ನಮ್ಮ ಮೊದಲ ಕೆಲಸ ಸತ್ತ ವ್ಯಕ್ತಿಯ ಗುರುತು ಪತ್ತೆ ಹಚ್ಚುವುದು~ ಎಂದು ಹೇಳಿದ ಅವರು ~ಅಪರಾಧವನ್ನು ಬೇರೆ ಯಾವುದೋ ಜಾಗದಲ್ಲಿ ಎಸಗಿ ರುಂಡವನ್ನು ನಂತರ ಇಲ್ಲಿಗೆ ತರಲಾಗಿದೆ~ ಎಂದು ವಿವರಿಸಿದರು.<br /> <br /> ಪ್ರದೇಶದಲ್ಲಿ ಎಲ್ಲಿಯೂ ರಕ್ತದ ಕಲೆ ಕಂಡು ಬಂದಿಲ್ಲ. ಇದು ತಲೆ ಕಡಿದ ಈ ಕೃತ್ಯವನ್ನು ಬೇರೆಲ್ಲೋ ನಡೆಸಿರಬೇಕು ಎಂಬುದನ್ನು ಸೂಚಿಸುತ್ತದೆ ಎಂದು ಅವರು ಹೇಳಿದರು.<br /> <br /> 200ರಲ್ಲಿ ವ್ಯಕ್ತಿಯೊಬ್ಬ ತನ್ನ ಒಂದೂವರೆ ವರ್ಷದ ಪುತ್ರಿಯನ್ನು ಬಲಿಕೊಡಲು ಯತ್ನಿಸಿದ್ದನ್ನು ದೇವಾಲಯದ ಭದ್ರತಾ ಸಿಬ್ಬಂದಿಯೊಬ್ಬರು ಪತ್ತೆ ಹಚ್ಚಿದ್ದರು. ಈ ಹಿನ್ನೆಲೆಯಲ್ಲಿ ನರಬಲಿ ಸಾಧ್ಯತೆಯನ್ನು ತಳ್ಳಿಹಾಕಲು ಸಾಧ್ಯವಿಲ್ಲ ಎಂದು ಪೊಲೀಸರು ನುಡಿದರು.<br /> <br /> ಅಸ್ಸಾಮಿನ ಇತರ ಹಲವಾರು ದೇವಾಲಯಗಳಂತೆ ಕಾಮಾಕ್ಯ ದೇವಾಲಯದಲ್ಲೂ ನರಬಲಿ ನಡೆಯುತ್ತಿದ್ದ ಇತಿಹಾಸ ಇದೆ. ಅಸ್ಸಾಮಿನಲ್ಲಿ 18ನೇ ಶತಮಾನದವರೆಗೂ ನರಬಲಿ ನಡೆಯುತ್ತಿತ್ತು ಎಂದು ಅಸ್ಸಾಂ ಸಂಶೋಧನಾ ಸಂಘದ ನಿಯತಕಾಲಿಕವೊಂದು 1933ರಲ್ಲಿ ಪ್ರಕಟಿಸಿತ್ತು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>