<p>ನವದೆಹಲಿ (ಪಿಟಿಐ): ಅಸ್ಸಾಂನಲ್ಲಿ ನಡೆದ ಹಿಂಸಾಚಾರದ ಕುರಿತು ಸಿಬಿಐ ತನಿಖೆ ಆರಂಭಿಸಿದ್ದು, ಸೇನೆಗೆ ಕಟ್ಟೆಚ್ಚರ ವಹಿಸಲು ಸೂಚಿಸಲಾಗಿದೆ ಎಂದು ತಿಳಿಸಿದ ಸರ್ಕಾರ, ಇದಕ್ಕಿಂತ ಹೆಚ್ಚಾಗಿ ಇನ್ನೇನು ಮಾಡಲು ಸಾಧ್ಯ ಎಂದು ಪ್ರತಿಪಕ್ಷಗಳಿಗೆ ಗುರುವಾರ ಸವಾಲು ಎಸೆಯಿತು.<br /> <br /> ಕಾಂಗ್ರೆಸ್ಸಿನ ಮತ ಬ್ಯಾಂಕ್ ರಾಜಕಾರಣದಿಂದಾಗಿ ಅಸ್ಸಾಂ ಅಸುರಕ್ಷಿತವಾಗಿದೆ ಎಂದು ಪ್ರತಿ ಪಕ್ಷವಾದ ಬಿಜೆಪಿಯು ರಾಜ್ಯಸಭೆಯಲ್ಲಿ ಮಾಡಿದ ಆರೋಪಕ್ಕೆ ಪ್ರತಿಯಾಗಿ ಕಾಂಗ್ರೆಸ್ ಹೀಗೆ ಹೇಳಿತು. ಪ್ರತಿಪಕ್ಷ ಸದಸ್ಯರು ಇದರಿಂದ ಸಮಾಧಾನಗೊಳ್ಳದೆ ಗದ್ದಲ ಮುಂದುವರಿಸಿದಾಗ ಶಿಂಧೆ ಅವರು ಮಾತನಾಡಿ, `ಸೇನೆಗೆ ಕಟ್ಟೆಚ್ಚರ ವಹಿಸಲು ಈಗಾಗಲೇ ಸೂಚಿಸಿದ್ದೇನೆ. ನಿಮಗೆ ಇನ್ನೇನು ಬೇಕು~ ಎಂದರು.<br /> <br /> ಇದಕ್ಕೆ ಮುನ್ನ ರಾಜ್ಯಸಭೆ ಪ್ರತಿಪಕ್ಷ ನಾಯಕ ಅರುಣ್ ಜೇಟ್ಲಿ ಈ ಕುರಿತು ಮಾತನಾಡಿದರು. ಅಸ್ಸಾಂನಲ್ಲಿ ಸರ್ಕಾರವು ಮತ ಬ್ಯಾಂಕ್ ರಾಜಕಾರಣ ನೀತಿ ಅನುಸರಿಸುತ್ತಿದೆ. ಅಲ್ಲಿನ ಹಿಂಸಾಚಾರ ಘಟನೆಗಳಿಗೆ ಈ ನೀತಿಯೇ ಕಾರಣ. ಇದೇ ನೀತಿ ಮುಂದುವರಿದರೆ, ಅಸ್ಸಾಂ ಆಡಳಿತವು ಸುರಕ್ಷಿತರ ಕೈಯಲ್ಲಿಲ್ಲ ಎಂದೇ ಹೇಳಬೇಕಾಗುತ್ತದೆ ಎಂದರು.<br /> <br /> ಸರ್ಕಾರವು ತನ್ನ ಮತ ಬ್ಯಾಂಕ್ ನೀತಿಯ ಬಗ್ಗೆ ಪುನರಾವಲೋಕನ ಮಾಡಿಕೊಳ್ಳುವ ಜತೆಗೆ ಅಸ್ಸಾಂನಲ್ಲಿ ಅಕ್ರಮ ನುಸುಳುವಿಕೆಯು ನಿಜವಾದ ಸಮಸ್ಯೆ ಎಂಬುದನ್ನು ಮನವರಿಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ನವದೆಹಲಿ (ಪಿಟಿಐ): ಅಸ್ಸಾಂನಲ್ಲಿ ನಡೆದ ಹಿಂಸಾಚಾರದ ಕುರಿತು ಸಿಬಿಐ ತನಿಖೆ ಆರಂಭಿಸಿದ್ದು, ಸೇನೆಗೆ ಕಟ್ಟೆಚ್ಚರ ವಹಿಸಲು ಸೂಚಿಸಲಾಗಿದೆ ಎಂದು ತಿಳಿಸಿದ ಸರ್ಕಾರ, ಇದಕ್ಕಿಂತ ಹೆಚ್ಚಾಗಿ ಇನ್ನೇನು ಮಾಡಲು ಸಾಧ್ಯ ಎಂದು ಪ್ರತಿಪಕ್ಷಗಳಿಗೆ ಗುರುವಾರ ಸವಾಲು ಎಸೆಯಿತು.<br /> <br /> ಕಾಂಗ್ರೆಸ್ಸಿನ ಮತ ಬ್ಯಾಂಕ್ ರಾಜಕಾರಣದಿಂದಾಗಿ ಅಸ್ಸಾಂ ಅಸುರಕ್ಷಿತವಾಗಿದೆ ಎಂದು ಪ್ರತಿ ಪಕ್ಷವಾದ ಬಿಜೆಪಿಯು ರಾಜ್ಯಸಭೆಯಲ್ಲಿ ಮಾಡಿದ ಆರೋಪಕ್ಕೆ ಪ್ರತಿಯಾಗಿ ಕಾಂಗ್ರೆಸ್ ಹೀಗೆ ಹೇಳಿತು. ಪ್ರತಿಪಕ್ಷ ಸದಸ್ಯರು ಇದರಿಂದ ಸಮಾಧಾನಗೊಳ್ಳದೆ ಗದ್ದಲ ಮುಂದುವರಿಸಿದಾಗ ಶಿಂಧೆ ಅವರು ಮಾತನಾಡಿ, `ಸೇನೆಗೆ ಕಟ್ಟೆಚ್ಚರ ವಹಿಸಲು ಈಗಾಗಲೇ ಸೂಚಿಸಿದ್ದೇನೆ. ನಿಮಗೆ ಇನ್ನೇನು ಬೇಕು~ ಎಂದರು.<br /> <br /> ಇದಕ್ಕೆ ಮುನ್ನ ರಾಜ್ಯಸಭೆ ಪ್ರತಿಪಕ್ಷ ನಾಯಕ ಅರುಣ್ ಜೇಟ್ಲಿ ಈ ಕುರಿತು ಮಾತನಾಡಿದರು. ಅಸ್ಸಾಂನಲ್ಲಿ ಸರ್ಕಾರವು ಮತ ಬ್ಯಾಂಕ್ ರಾಜಕಾರಣ ನೀತಿ ಅನುಸರಿಸುತ್ತಿದೆ. ಅಲ್ಲಿನ ಹಿಂಸಾಚಾರ ಘಟನೆಗಳಿಗೆ ಈ ನೀತಿಯೇ ಕಾರಣ. ಇದೇ ನೀತಿ ಮುಂದುವರಿದರೆ, ಅಸ್ಸಾಂ ಆಡಳಿತವು ಸುರಕ್ಷಿತರ ಕೈಯಲ್ಲಿಲ್ಲ ಎಂದೇ ಹೇಳಬೇಕಾಗುತ್ತದೆ ಎಂದರು.<br /> <br /> ಸರ್ಕಾರವು ತನ್ನ ಮತ ಬ್ಯಾಂಕ್ ನೀತಿಯ ಬಗ್ಗೆ ಪುನರಾವಲೋಕನ ಮಾಡಿಕೊಳ್ಳುವ ಜತೆಗೆ ಅಸ್ಸಾಂನಲ್ಲಿ ಅಕ್ರಮ ನುಸುಳುವಿಕೆಯು ನಿಜವಾದ ಸಮಸ್ಯೆ ಎಂಬುದನ್ನು ಮನವರಿಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>