<p><strong>ಹೈದರಾಬಾದ್:</strong> ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವಂತೆ ಒತ್ತಾಯಿಸಿ ಇಲ್ಲಿನ ಮಹಿಳೆಯರು ಅಂತರ್ಜಾಲ ರಾಖಿ ಪ್ರತಿಭಟನೆ ಪ್ರಾರಂಭಿಸಲಿದ್ದಾರೆ.<br /> <br /> ಪ್ರಧಾನಿ ನರೇಂದ್ರ ಮೋದಿ ಅವರ ಟ್ವಿಟರ್ ಖಾತೆ @narendramodi, ಪ್ರಧಾನಿ ಕಚೇರಿ ಖಾತೆ @PMOIndia ಮತ್ತು ಫೇಸ್ಬುಕ್ನ ಪ್ರಧಾನಿ ಅವರ ಪುಟಗಳಲ್ಲಿ ‘ರಾಖಿ ಪ್ರೊಟೆಸ್ಟ್’ ಎಂಬ ಹ್ಯಾಷ್ಟ್ಯಾಗ್ ಬಳಸಿ ರಾಖಿಯ ಚಿತ್ರಗಳನ್ನು ರವಾನಿಸಲಿದ್ದಾರೆ.<br /> <br /> ಮಾಜಿ ಸಂಸದ ಕೊನಥಲ ರಾಮಕೃಷ್ಣ ಅವರು ಈ ಮಾದರಿಯ ಪ್ರತಿಭಟನೆ ಆಯೋಜಿಸಿದ್ದು, ಇದಕ್ಕಾಗಿಯೇ ವಿಶೇಷ ಮಾದರಿಯ ರಾಖಿಗಳನ್ನು ವಿನ್ಯಾಸಗೊಳಿಸಲಾಗಿದೆ. ತಮ್ಮ ಟ್ವಿಟರ್ ಖಾತೆ ಅಥವಾ ಅವರ ಫೇಸ್ಬುಕ್ ಪುಟದಿಂದ ರಾಖಿಯ ಚಿತ್ರವನ್ನು ಡೌನ್ಲೋಡ್ ಮಾಡಿಕೊಂಡು, ಅದನ್ನು ಪ್ರಧಾನಿಗೆ ಕಳುಹಿಸುವಂತೆ ಅವರು ಕೋರಿದ್ದಾರೆ.<br /> <br /> 2014ರ ಆಂಧ್ರಪ್ರದೇಶ ಪುನರ್ರಚನಾ ಕಾಯ್ದೆಯನ್ನು ಅನುಷ್ಠಾನಗೊಳಿಸದ ಮತ್ತು ಆಗಿನ ಪ್ರಧಾನಿ ಮನಮೋಹನ್ ಸಿಂಗ್ ಅವರು ನೀಡಿದ್ದ ಭರವಸೆಗಳನ್ನು ಜಾರಿಗೊಳಿಸದ ಕಾರಣ ಕೇಂದ್ರ ಸರ್ಕಾರದ ವಿರುದ್ಧ ‘ರಕ್ಷಾ ಬಂಧನ ಪ್ರತಿಭಟನೆ’ ಹಮ್ಮಿಕೊಳ್ಳಲಾಗಿದೆ ಎಂದು ರಾಮಕೃಷ್ಣ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೈದರಾಬಾದ್:</strong> ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವಂತೆ ಒತ್ತಾಯಿಸಿ ಇಲ್ಲಿನ ಮಹಿಳೆಯರು ಅಂತರ್ಜಾಲ ರಾಖಿ ಪ್ರತಿಭಟನೆ ಪ್ರಾರಂಭಿಸಲಿದ್ದಾರೆ.<br /> <br /> ಪ್ರಧಾನಿ ನರೇಂದ್ರ ಮೋದಿ ಅವರ ಟ್ವಿಟರ್ ಖಾತೆ @narendramodi, ಪ್ರಧಾನಿ ಕಚೇರಿ ಖಾತೆ @PMOIndia ಮತ್ತು ಫೇಸ್ಬುಕ್ನ ಪ್ರಧಾನಿ ಅವರ ಪುಟಗಳಲ್ಲಿ ‘ರಾಖಿ ಪ್ರೊಟೆಸ್ಟ್’ ಎಂಬ ಹ್ಯಾಷ್ಟ್ಯಾಗ್ ಬಳಸಿ ರಾಖಿಯ ಚಿತ್ರಗಳನ್ನು ರವಾನಿಸಲಿದ್ದಾರೆ.<br /> <br /> ಮಾಜಿ ಸಂಸದ ಕೊನಥಲ ರಾಮಕೃಷ್ಣ ಅವರು ಈ ಮಾದರಿಯ ಪ್ರತಿಭಟನೆ ಆಯೋಜಿಸಿದ್ದು, ಇದಕ್ಕಾಗಿಯೇ ವಿಶೇಷ ಮಾದರಿಯ ರಾಖಿಗಳನ್ನು ವಿನ್ಯಾಸಗೊಳಿಸಲಾಗಿದೆ. ತಮ್ಮ ಟ್ವಿಟರ್ ಖಾತೆ ಅಥವಾ ಅವರ ಫೇಸ್ಬುಕ್ ಪುಟದಿಂದ ರಾಖಿಯ ಚಿತ್ರವನ್ನು ಡೌನ್ಲೋಡ್ ಮಾಡಿಕೊಂಡು, ಅದನ್ನು ಪ್ರಧಾನಿಗೆ ಕಳುಹಿಸುವಂತೆ ಅವರು ಕೋರಿದ್ದಾರೆ.<br /> <br /> 2014ರ ಆಂಧ್ರಪ್ರದೇಶ ಪುನರ್ರಚನಾ ಕಾಯ್ದೆಯನ್ನು ಅನುಷ್ಠಾನಗೊಳಿಸದ ಮತ್ತು ಆಗಿನ ಪ್ರಧಾನಿ ಮನಮೋಹನ್ ಸಿಂಗ್ ಅವರು ನೀಡಿದ್ದ ಭರವಸೆಗಳನ್ನು ಜಾರಿಗೊಳಿಸದ ಕಾರಣ ಕೇಂದ್ರ ಸರ್ಕಾರದ ವಿರುದ್ಧ ‘ರಕ್ಷಾ ಬಂಧನ ಪ್ರತಿಭಟನೆ’ ಹಮ್ಮಿಕೊಳ್ಳಲಾಗಿದೆ ಎಂದು ರಾಮಕೃಷ್ಣ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>