<p><strong>ಬೆಳಗಾವಿ:</strong> `ರಾಜ್ಯ ಸರ್ಕಾರವು ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಶೇ. 10ರಷ್ಟು ಹೆಚ್ಚಿಸಿರುವ ಎಂಜಿನಿಯರಿಂಗ್, ವೈದ್ಯ ಹಾಗೂ ದಂತ ವೈದ್ಯಕೀಯ ಕಾಲೇಜುಗಳ ಪ್ರವೇಶ ಶುಲ್ಕವನ್ನು ಕೂಡಲೇ ವಾಪಸ್ ಪಡೆದು ಕೊಳ್ಳಬೇಕು~ ಎಂದು ಅಖಿಲ ಭಾರ ತೀಯ ವಿದ್ಯಾರ್ಥಿ ಪರಿಷತ್ ಮುಖ್ಯ ಮಂತ್ರಿ ಡಿ.ವಿ.ಸದಾನಂದ ಗೌಡ ಅವರನ್ನು ಒತ್ತಾಯಿಸಿದೆ. <br /> <br /> ಎಬಿವಿಪಿ ರಾಜ್ಯ ಸಹ ಕಾರ್ಯದರ್ಶಿ ಮಾರುತಿ ಸುಣಗಾರ ನೇತೃತ್ವದಲ್ಲಿ ಮಂಗಳವಾರ ಜಿಲ್ಲಾಧಿಕಾರಿ ವಿ. ಅನ್ಬುಕುಮಾರ ಅವರಿಗೆ ಮನವಿ ಸಲ್ಲಿಸಿದ ಕಾರ್ಯಕರ್ತರು ಪ್ರವೇಶ ಶುಲ್ಕ ವಾಪಸಾತಿಗಾಗಿ ಆಗ್ರಹಿಸಿದರು. <br /> `ರಾಜ್ಯ ಸರ್ಕಾರ ಪ್ರತಿ ವರ್ಷವೂ ಖಾಸಗಿ ಆಡಳಿತ ಮಂಡಳಿಯ ಲಾಬಿಗೆ ಮಣಿಯುತ್ತಿದೆ~ ಎಂದು ಅವರು ದೂರಿದರು.<br /> <br /> ಶುಲ್ಕ ಮತ್ತು ಸೀಟು ಹಂಚಿಕೆಯ ಸಂದರ್ಭದಲ್ಲಿ ಕೇವಲ ಖಾಸಗಿ ಆಡಳಿತ ಮಂಡಳಿಯೊಂದಿಗೆ ಮಾತ್ರ ಮಾತುಕತೆ ನಡೆಸುತ್ತಿದೆ. ರಾಜ್ಯದ ಶಿಕ್ಷಣ ತಜ್ಞರು, ವಿದ್ಯಾರ್ಥಿ ಸಂಘಟನೆಗಳು, ಪೋಷಕರು ಹಾಗೂ ವಿದ್ಯಾರ್ಥಿಗಳನ್ನು ದೂರ ಇಟ್ಟು ಶುಲ್ಕ ಹೆಚ್ಚಳ ನಿರ್ಧಾರವನ್ನು ಕೈಗೊಳ್ಳುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಣಕಿಸುತ್ತಿದೆ~ ಎಂದು ಅವರು ಆರೋಪಿಸಿದರು. <br /> <br /> `ವರ್ಷದಿಂದ ವರ್ಷಕ್ಕೆ ಸರ್ಕಾರಿ ಸೀಟುಗಳನ್ನು ಕಡಿಮೆ ಮಾಡಿ, ಪದೇ ಪದೇ ಶುಲ್ಕವನ್ನು ಹೆಚ್ಚಿಸುತ್ತಿರುವ ಸರ್ಕಾರ ಖಾಸಗಿ ಆಡಳಿತ ಮಂಡಳಿ ಗಳಿಗೆ ಲಾಭ ಮಾಡಿ ಕೊಡುತ್ತಿದೆ. ಸರ್ಕಾರ ಕೈಗೊಳ್ಳುವ ಇಂತಹ ಅಸಮರ್ಪಕ ನಿರ್ಧಾರದಿಂದಾಗಿ ಸಾವಿರಾರು ಪ್ರತಿಭಾವಂತ ಬಡ ವಿದ್ಯಾರ್ಥಿಗಳು ವೃತ್ತಿ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ.<br /> <br /> ಹೀಗಾಗಿ ಸರ್ಕಾರ ಇಂಥ ಅವೈಜ್ಞಾನಿಕ ನಿರ್ಧಾರ ಗಳನ್ನು ಕೈಗೊಳ್ಳಬಾರದು~ ಎಂದು ಅವರು ಆಗ್ರಹಿಸಿದ್ದಾರೆ. <br /> `ಪ್ರಸಕ್ತ ವರ್ಷದಿಂದ ಸರ್ಕಾರಿ ಕೋಟಾದ ವೈದ್ಯಕೀಯ ಶುಲ್ಕ ರೂ. 38,500 (3,500 ಹೆಚ್ಚಳ); ಎಂಜಿನಿ ಯರಿಂಗ್ ಶುಲ್ಕ ರೂ. 36,300 (3,300ಹೆಚ್ಚಳ) ನಿಗದಿ ಪಡಿಸಲಾಗಿದೆ. <br /> <br /> ಸರ್ಕಾರವು ಹೆಚ್ಚಿಸಿರುವ ಈ ಶುಲ್ಕವನ್ನು ಕೂಡಲೇ ವಾಪಸ್ ಪಡೆಯಬೇಕು. `ಕಾಮೆಡ್ ಕೆ~ ರದ್ದುಪಡಿಸಿ ಸರ್ಕಾರದ ಮೂಲಕವೇ ಕೌನ್ಸೆಲಿಂಗ್ ನಡೆಸಬೇಕು~ ಎಂದು ಒತ್ತಾಯಿಸಿದರು.ಗಂಗಾಧರ ಗಡಿಬಿಡಿ, ಕೇದಾರ ಕಾಮಕರ, ಪ್ರಶಾಂತ ಅಮಿನಬಾವಿ, ಪ್ರಮೋದ ಮತ್ತಿತರರು ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಳಗಾವಿ:</strong> `ರಾಜ್ಯ ಸರ್ಕಾರವು ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಶೇ. 10ರಷ್ಟು ಹೆಚ್ಚಿಸಿರುವ ಎಂಜಿನಿಯರಿಂಗ್, ವೈದ್ಯ ಹಾಗೂ ದಂತ ವೈದ್ಯಕೀಯ ಕಾಲೇಜುಗಳ ಪ್ರವೇಶ ಶುಲ್ಕವನ್ನು ಕೂಡಲೇ ವಾಪಸ್ ಪಡೆದು ಕೊಳ್ಳಬೇಕು~ ಎಂದು ಅಖಿಲ ಭಾರ ತೀಯ ವಿದ್ಯಾರ್ಥಿ ಪರಿಷತ್ ಮುಖ್ಯ ಮಂತ್ರಿ ಡಿ.ವಿ.ಸದಾನಂದ ಗೌಡ ಅವರನ್ನು ಒತ್ತಾಯಿಸಿದೆ. <br /> <br /> ಎಬಿವಿಪಿ ರಾಜ್ಯ ಸಹ ಕಾರ್ಯದರ್ಶಿ ಮಾರುತಿ ಸುಣಗಾರ ನೇತೃತ್ವದಲ್ಲಿ ಮಂಗಳವಾರ ಜಿಲ್ಲಾಧಿಕಾರಿ ವಿ. ಅನ್ಬುಕುಮಾರ ಅವರಿಗೆ ಮನವಿ ಸಲ್ಲಿಸಿದ ಕಾರ್ಯಕರ್ತರು ಪ್ರವೇಶ ಶುಲ್ಕ ವಾಪಸಾತಿಗಾಗಿ ಆಗ್ರಹಿಸಿದರು. <br /> `ರಾಜ್ಯ ಸರ್ಕಾರ ಪ್ರತಿ ವರ್ಷವೂ ಖಾಸಗಿ ಆಡಳಿತ ಮಂಡಳಿಯ ಲಾಬಿಗೆ ಮಣಿಯುತ್ತಿದೆ~ ಎಂದು ಅವರು ದೂರಿದರು.<br /> <br /> ಶುಲ್ಕ ಮತ್ತು ಸೀಟು ಹಂಚಿಕೆಯ ಸಂದರ್ಭದಲ್ಲಿ ಕೇವಲ ಖಾಸಗಿ ಆಡಳಿತ ಮಂಡಳಿಯೊಂದಿಗೆ ಮಾತ್ರ ಮಾತುಕತೆ ನಡೆಸುತ್ತಿದೆ. ರಾಜ್ಯದ ಶಿಕ್ಷಣ ತಜ್ಞರು, ವಿದ್ಯಾರ್ಥಿ ಸಂಘಟನೆಗಳು, ಪೋಷಕರು ಹಾಗೂ ವಿದ್ಯಾರ್ಥಿಗಳನ್ನು ದೂರ ಇಟ್ಟು ಶುಲ್ಕ ಹೆಚ್ಚಳ ನಿರ್ಧಾರವನ್ನು ಕೈಗೊಳ್ಳುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಣಕಿಸುತ್ತಿದೆ~ ಎಂದು ಅವರು ಆರೋಪಿಸಿದರು. <br /> <br /> `ವರ್ಷದಿಂದ ವರ್ಷಕ್ಕೆ ಸರ್ಕಾರಿ ಸೀಟುಗಳನ್ನು ಕಡಿಮೆ ಮಾಡಿ, ಪದೇ ಪದೇ ಶುಲ್ಕವನ್ನು ಹೆಚ್ಚಿಸುತ್ತಿರುವ ಸರ್ಕಾರ ಖಾಸಗಿ ಆಡಳಿತ ಮಂಡಳಿ ಗಳಿಗೆ ಲಾಭ ಮಾಡಿ ಕೊಡುತ್ತಿದೆ. ಸರ್ಕಾರ ಕೈಗೊಳ್ಳುವ ಇಂತಹ ಅಸಮರ್ಪಕ ನಿರ್ಧಾರದಿಂದಾಗಿ ಸಾವಿರಾರು ಪ್ರತಿಭಾವಂತ ಬಡ ವಿದ್ಯಾರ್ಥಿಗಳು ವೃತ್ತಿ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ.<br /> <br /> ಹೀಗಾಗಿ ಸರ್ಕಾರ ಇಂಥ ಅವೈಜ್ಞಾನಿಕ ನಿರ್ಧಾರ ಗಳನ್ನು ಕೈಗೊಳ್ಳಬಾರದು~ ಎಂದು ಅವರು ಆಗ್ರಹಿಸಿದ್ದಾರೆ. <br /> `ಪ್ರಸಕ್ತ ವರ್ಷದಿಂದ ಸರ್ಕಾರಿ ಕೋಟಾದ ವೈದ್ಯಕೀಯ ಶುಲ್ಕ ರೂ. 38,500 (3,500 ಹೆಚ್ಚಳ); ಎಂಜಿನಿ ಯರಿಂಗ್ ಶುಲ್ಕ ರೂ. 36,300 (3,300ಹೆಚ್ಚಳ) ನಿಗದಿ ಪಡಿಸಲಾಗಿದೆ. <br /> <br /> ಸರ್ಕಾರವು ಹೆಚ್ಚಿಸಿರುವ ಈ ಶುಲ್ಕವನ್ನು ಕೂಡಲೇ ವಾಪಸ್ ಪಡೆಯಬೇಕು. `ಕಾಮೆಡ್ ಕೆ~ ರದ್ದುಪಡಿಸಿ ಸರ್ಕಾರದ ಮೂಲಕವೇ ಕೌನ್ಸೆಲಿಂಗ್ ನಡೆಸಬೇಕು~ ಎಂದು ಒತ್ತಾಯಿಸಿದರು.ಗಂಗಾಧರ ಗಡಿಬಿಡಿ, ಕೇದಾರ ಕಾಮಕರ, ಪ್ರಶಾಂತ ಅಮಿನಬಾವಿ, ಪ್ರಮೋದ ಮತ್ತಿತರರು ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>