<p>ಖ್ಯಾತ ಕಲಾವಿದರಾದ ದೆಹಲಿಯ ಅನಿತಾ ತಿವಾರಿ, ಬೆಂಗಳೂರಿನ ಫಾತಿಮಾ, ಹೈದರಾಬಾದ್ನ ನರಸಿಂಹಲು ಖಂಡೆ ಮತ್ತು ಕಪ್ಪಾರಿ ಕಿಶನ್ ಹಾಗೂ ಮುಂಬೈನ ಶಿರ್ವಾಡ್ಕರ್ ಅವರ ಅಪರೂಪದ ಕಲಾಕೃತಿಗಳು ಜ.20ರವರೆಗೆ ಪ್ರದರ್ಶನಗೊಳ್ಳಲಿವೆ. <br /> <br /> ವಿಷಯ ಸುಖಗಳ ಅಪೇಕ್ಷೆ, ಇಂದ್ರಿಯಗಳ ಹಸಿವನ್ನು ಕಣ್ಣು ಹಾಗೂ ಮನಸ್ಸಿನ ಮೂಲಕ ಅಭಿವ್ಯಕ್ತಿಗೊಳಿಸಬಹುದು. ಆದರೆ ಆತ್ಮದ ಕಣ್ಣನ್ನು ಕಾಣುವುದು ಹೇಗೆ? ಆತ್ಮದ ಅರಿವನ್ನು ಬಿಂಬಿಸುವಂತಿವೆ ಅನಿತಾ ಅವರ ಸೋಲ್ ಆರ್ಟ್ ಚಿತ್ರಕಲಾಕೃತಿಗಳು. <br /> <br /> ಭಾರತೀಯ ಪರಂಪರೆಯಲ್ಲಿ ಅಧ್ಯಾತ್ಮಕ್ಕೆ ವಿಶಿಷ್ಟ ಸ್ಥಾನವಿದೆ. ಅಮರತ್ವದ ಸಂಕೇತದಂತಿರುವ ಆತ್ಮದ ಪರಿಕಲ್ಪನೆಯನ್ನು ಸಂತರು, ಋಷಿಮುನಿಗಳು ಪ್ರತಿಪಾದಿಸುವ ಪ್ರಯತ್ನವನ್ನು ಹಿಂದಿನಿಂದಲೂ ಮಾಡಿದ್ದಾರೆ. ಆತ್ಮ ಸೃಷ್ಟಿಕರ್ತನಿದ್ದಂತೆ. ಆತ್ಮದ ಪರಿಕಲ್ಪನೆ ಮನುಷ್ಯನ ಅನುಭವ, ವಿಚಾರಶಕ್ತಿ, ನಂಬಿಕೆ ಮೊದಲಾದವುಗಳನ್ನು ಮೀರಿದ್ದು, ಕಾಲಾತೀತವಾದುದು. <br /> <br /> ಅಗಣಿತ ಕವಲುಗಳ ಮೊತ್ತ ಮನುಷ್ಯನ ಜೀವನ. ದೇಹದಲ್ಲಿ ಆತ್ಮವೆನ್ನುವುದು ಅಗೋಚರವಾಗಿ ಮಿಳಿತಗೊಂಡಿದೆ. ಮನುಷ್ಯನ ಮನಸ್ಸಿನಲ್ಲಿರುವ ಆಸೆ ಆಕಾಂಕ್ಷೆಗಳು, ಬಾಹ್ಯ ಸೌಂದರ್ಯ ಇವೆಲ್ಲವೂ ಇಲ್ಲಿ ಬಿಂಬಿತವಾಗಿವೆ. ಆತ್ಮದ ಬೆಳಕನ್ನು ಬಿಂಬಿಸುವ ಪ್ರಯತ್ನ ಹಾಗೂ ಅದನ್ನು ಅರಿಯುವ ಹೆಚ್ಚಿನ ಯತ್ನ ಇವರ ಕಲಾಕೃತಿಗಳಲ್ಲಿ ಕಾಣಬಹುದು.<br /> <br /> ಇವರ ಕಲಾಕೃತಿಗಳೆಲ್ಲವೂ ಅಧ್ಯಾತ್ಮ ಅನುಭವ ಕಟ್ಟಿಕೊಡುತ್ತದೆ. ಇವರು ಕಲೆಯ ಮೂಲಕ ನಿಸರ್ಗ ಮತ್ತು ದೇವರನ್ನು ಒಂದುಗೂಡಿಸುವ ಪ್ರಯತ್ನ ಕೂಡಾ ಮಾಡಿದ್ದಾರೆ. ಅಧ್ಯಾತ್ಮದ ಅನ್ವೇಷಣೆಯಲ್ಲಿ ತೊಡಗಿರುವಂತೆ ಕಾಣುವ ಈ ಕಲಾಕೃತಿಗಳು ಶಾಂತಿ ಹಾಗೂ ಆತ್ಮದ ಪರಿಶುದ್ಧತೆಯನ್ನು ನೋಡುಗರಿಗೆ ಕಟ್ಟಿಕೊಡುತ್ತವೆ. <br /> <br /> ಪ್ರಕೃತಿ ಜೀವಂತಿಕೆಯ ಸಂಕೇತ. ಪ್ರಕೃತಿ ಜೀವಶಕ್ತಿಯ ಕೇಂದ್ರಬಿಂದು. ಈ ಚಿತ್ರಕಲಾಕೃತಿಗಳೂ ಸಹ ನಿಸರ್ಗದಿಂದ ಸ್ಫೂರ್ತಿಗೊಂಡಿದೆ. ನಿಸರ್ಗದ ರಮ್ಯ ಚೆಲುವನ್ನು ಆಸ್ವಾದಿಸುವಾಗ ಮನಸ್ಸು ಪರವಶಗೊಳ್ಳುತ್ತದೆ. ಅಧ್ಯಾತ್ಮದ ಸೆಳೆತಕ್ಕೆ ಸಿಲುಕುತ್ತದೆ. ಈ ಕಲಾಕೃತಿಗಳು ಆಧ್ಯಾತ್ಮಿಕ ಅನುಭವ, ಸಂತೋಷ, ಶಾಂತಿಯ ಭಾವ ತಂದುಕೊಡುತ್ತವೆ. ಚಿತ್ರಕಲಾಕೃತಿಗಳಲ್ಲಿರುವ ಅಲಂಕಾರ ದಿವ್ಯಾನಂದ ನೀಡುತ್ತದೆ. ಕಲಾಕೃತಿಗಳಲ್ಲಿರುವ ನೆರಳು ಬೆಳಕಿನ ಸಂಯೋಜನೆಗೆ ಎಲ್ಲ ಬಣ್ಣಗಳು ಹದವಾಗಿ ಬೆರೆತಿವೆ. <br /> <br /> `ನಾನು ಸದಾ ಕಾಲ ನನ್ನ ಕೆಲಸ ಮತ್ತು ಬದುಕಿನ ಬಗ್ಗೆ ವಿವಿಧ ದೃಷ್ಟಿಕೋನದಲ್ಲಿ ಸ್ವವಿಮರ್ಶೆ ಮಾಡಿಕೊಳ್ಳುತ್ತಿರುತ್ತೇನೆ. ಈ ಯೋಚನೆಗಳಲ್ಲಿ ಲೌಕಿಕ ಮತ್ತು ಅಧ್ಯಾತ್ಮದ ಭಾವಗಳು ತುಂಬಿಕೊಂಡಿರುತ್ತವೆ~ ಎನ್ನುತ್ತಾರೆ ಕಲಾವಿದೆ ಅನಿತಾ ತಿವಾರಿ. <br /> <br /> ಹೆಣ್ಣಿನ ಮನೋತುಮುಲಗಳು ಹೆಣ್ಣಿಗೇ ಹೆಚ್ಚು ಅರ್ಥವಾಗುತ್ತವೆ ಎಂಬುದಕ್ಕೆ ಅನಿತಾ ಅವರ `ಟಾಕಿಂಗ್ ಟು ಹೆವೆನ್~ ಕಲಾಕೃತಿ ಉದಾಹರಣೆ. ದಿಗಂತವನ್ನು ದಿಟ್ಟಿಸುತ್ತಿರುವ ಆ ಯುವತಿಯ ಕಂಗಳು ಸುಖದ ಸ್ವಪ್ನದಲ್ಲಿ ತೇಲುತ್ತಿವೆ. ಹಗಲುಗನಸು ಕಾಣುವಂತೆ ಕೂತಿರುವ ಭಂಗಿಯಲ್ಲಿ ಆಕೆಯ ಮನಸ್ಸಿನಲ್ಲಿ ನಡೆಯುತ್ತಿರುವ ಸಂಘರ್ಷಗಳೆಲ್ಲವೂ ಆಕೆಯ ಮುಖದಲ್ಲಿ ಬಿಂಬಿತಗೊಂಡಿವೆ. <br /> <br /> ಕಲಾವಿದ ಖಂಡೆ ಅವರ ಕಲಾಕೃತಿಗಳಲ್ಲಿ ಜನಪದದ ಸೊಗಡಿದೆ. ಕಿಶನ್ ಅವರು ತಮ್ಮ ಕುಂಚದಲ್ಲಿ ಹೆಣ್ಣಿನ ವ್ಯಕ್ತಿತ್ವವನ್ನು ಕಟ್ಟಿಕೊಟ್ಟಿದ್ದಾರೆ. <br /> <br /> ಸ್ಥಳ: ರಿನೈಸೆನ್ಸ್ ಗ್ಯಾಲರಿ, 104, ವೆಸ್ಟ್ಮಿನಿಸ್ಟರ್ 13, ಕನ್ನಿಂಗ್ಹ್ಯಾಂ ರಸ್ತೆ. ಬೆಳಿಗ್ಗೆ 11ರಿಂದ ಸಂಜೆ 7. <br /> <br /> <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಖ್ಯಾತ ಕಲಾವಿದರಾದ ದೆಹಲಿಯ ಅನಿತಾ ತಿವಾರಿ, ಬೆಂಗಳೂರಿನ ಫಾತಿಮಾ, ಹೈದರಾಬಾದ್ನ ನರಸಿಂಹಲು ಖಂಡೆ ಮತ್ತು ಕಪ್ಪಾರಿ ಕಿಶನ್ ಹಾಗೂ ಮುಂಬೈನ ಶಿರ್ವಾಡ್ಕರ್ ಅವರ ಅಪರೂಪದ ಕಲಾಕೃತಿಗಳು ಜ.20ರವರೆಗೆ ಪ್ರದರ್ಶನಗೊಳ್ಳಲಿವೆ. <br /> <br /> ವಿಷಯ ಸುಖಗಳ ಅಪೇಕ್ಷೆ, ಇಂದ್ರಿಯಗಳ ಹಸಿವನ್ನು ಕಣ್ಣು ಹಾಗೂ ಮನಸ್ಸಿನ ಮೂಲಕ ಅಭಿವ್ಯಕ್ತಿಗೊಳಿಸಬಹುದು. ಆದರೆ ಆತ್ಮದ ಕಣ್ಣನ್ನು ಕಾಣುವುದು ಹೇಗೆ? ಆತ್ಮದ ಅರಿವನ್ನು ಬಿಂಬಿಸುವಂತಿವೆ ಅನಿತಾ ಅವರ ಸೋಲ್ ಆರ್ಟ್ ಚಿತ್ರಕಲಾಕೃತಿಗಳು. <br /> <br /> ಭಾರತೀಯ ಪರಂಪರೆಯಲ್ಲಿ ಅಧ್ಯಾತ್ಮಕ್ಕೆ ವಿಶಿಷ್ಟ ಸ್ಥಾನವಿದೆ. ಅಮರತ್ವದ ಸಂಕೇತದಂತಿರುವ ಆತ್ಮದ ಪರಿಕಲ್ಪನೆಯನ್ನು ಸಂತರು, ಋಷಿಮುನಿಗಳು ಪ್ರತಿಪಾದಿಸುವ ಪ್ರಯತ್ನವನ್ನು ಹಿಂದಿನಿಂದಲೂ ಮಾಡಿದ್ದಾರೆ. ಆತ್ಮ ಸೃಷ್ಟಿಕರ್ತನಿದ್ದಂತೆ. ಆತ್ಮದ ಪರಿಕಲ್ಪನೆ ಮನುಷ್ಯನ ಅನುಭವ, ವಿಚಾರಶಕ್ತಿ, ನಂಬಿಕೆ ಮೊದಲಾದವುಗಳನ್ನು ಮೀರಿದ್ದು, ಕಾಲಾತೀತವಾದುದು. <br /> <br /> ಅಗಣಿತ ಕವಲುಗಳ ಮೊತ್ತ ಮನುಷ್ಯನ ಜೀವನ. ದೇಹದಲ್ಲಿ ಆತ್ಮವೆನ್ನುವುದು ಅಗೋಚರವಾಗಿ ಮಿಳಿತಗೊಂಡಿದೆ. ಮನುಷ್ಯನ ಮನಸ್ಸಿನಲ್ಲಿರುವ ಆಸೆ ಆಕಾಂಕ್ಷೆಗಳು, ಬಾಹ್ಯ ಸೌಂದರ್ಯ ಇವೆಲ್ಲವೂ ಇಲ್ಲಿ ಬಿಂಬಿತವಾಗಿವೆ. ಆತ್ಮದ ಬೆಳಕನ್ನು ಬಿಂಬಿಸುವ ಪ್ರಯತ್ನ ಹಾಗೂ ಅದನ್ನು ಅರಿಯುವ ಹೆಚ್ಚಿನ ಯತ್ನ ಇವರ ಕಲಾಕೃತಿಗಳಲ್ಲಿ ಕಾಣಬಹುದು.<br /> <br /> ಇವರ ಕಲಾಕೃತಿಗಳೆಲ್ಲವೂ ಅಧ್ಯಾತ್ಮ ಅನುಭವ ಕಟ್ಟಿಕೊಡುತ್ತದೆ. ಇವರು ಕಲೆಯ ಮೂಲಕ ನಿಸರ್ಗ ಮತ್ತು ದೇವರನ್ನು ಒಂದುಗೂಡಿಸುವ ಪ್ರಯತ್ನ ಕೂಡಾ ಮಾಡಿದ್ದಾರೆ. ಅಧ್ಯಾತ್ಮದ ಅನ್ವೇಷಣೆಯಲ್ಲಿ ತೊಡಗಿರುವಂತೆ ಕಾಣುವ ಈ ಕಲಾಕೃತಿಗಳು ಶಾಂತಿ ಹಾಗೂ ಆತ್ಮದ ಪರಿಶುದ್ಧತೆಯನ್ನು ನೋಡುಗರಿಗೆ ಕಟ್ಟಿಕೊಡುತ್ತವೆ. <br /> <br /> ಪ್ರಕೃತಿ ಜೀವಂತಿಕೆಯ ಸಂಕೇತ. ಪ್ರಕೃತಿ ಜೀವಶಕ್ತಿಯ ಕೇಂದ್ರಬಿಂದು. ಈ ಚಿತ್ರಕಲಾಕೃತಿಗಳೂ ಸಹ ನಿಸರ್ಗದಿಂದ ಸ್ಫೂರ್ತಿಗೊಂಡಿದೆ. ನಿಸರ್ಗದ ರಮ್ಯ ಚೆಲುವನ್ನು ಆಸ್ವಾದಿಸುವಾಗ ಮನಸ್ಸು ಪರವಶಗೊಳ್ಳುತ್ತದೆ. ಅಧ್ಯಾತ್ಮದ ಸೆಳೆತಕ್ಕೆ ಸಿಲುಕುತ್ತದೆ. ಈ ಕಲಾಕೃತಿಗಳು ಆಧ್ಯಾತ್ಮಿಕ ಅನುಭವ, ಸಂತೋಷ, ಶಾಂತಿಯ ಭಾವ ತಂದುಕೊಡುತ್ತವೆ. ಚಿತ್ರಕಲಾಕೃತಿಗಳಲ್ಲಿರುವ ಅಲಂಕಾರ ದಿವ್ಯಾನಂದ ನೀಡುತ್ತದೆ. ಕಲಾಕೃತಿಗಳಲ್ಲಿರುವ ನೆರಳು ಬೆಳಕಿನ ಸಂಯೋಜನೆಗೆ ಎಲ್ಲ ಬಣ್ಣಗಳು ಹದವಾಗಿ ಬೆರೆತಿವೆ. <br /> <br /> `ನಾನು ಸದಾ ಕಾಲ ನನ್ನ ಕೆಲಸ ಮತ್ತು ಬದುಕಿನ ಬಗ್ಗೆ ವಿವಿಧ ದೃಷ್ಟಿಕೋನದಲ್ಲಿ ಸ್ವವಿಮರ್ಶೆ ಮಾಡಿಕೊಳ್ಳುತ್ತಿರುತ್ತೇನೆ. ಈ ಯೋಚನೆಗಳಲ್ಲಿ ಲೌಕಿಕ ಮತ್ತು ಅಧ್ಯಾತ್ಮದ ಭಾವಗಳು ತುಂಬಿಕೊಂಡಿರುತ್ತವೆ~ ಎನ್ನುತ್ತಾರೆ ಕಲಾವಿದೆ ಅನಿತಾ ತಿವಾರಿ. <br /> <br /> ಹೆಣ್ಣಿನ ಮನೋತುಮುಲಗಳು ಹೆಣ್ಣಿಗೇ ಹೆಚ್ಚು ಅರ್ಥವಾಗುತ್ತವೆ ಎಂಬುದಕ್ಕೆ ಅನಿತಾ ಅವರ `ಟಾಕಿಂಗ್ ಟು ಹೆವೆನ್~ ಕಲಾಕೃತಿ ಉದಾಹರಣೆ. ದಿಗಂತವನ್ನು ದಿಟ್ಟಿಸುತ್ತಿರುವ ಆ ಯುವತಿಯ ಕಂಗಳು ಸುಖದ ಸ್ವಪ್ನದಲ್ಲಿ ತೇಲುತ್ತಿವೆ. ಹಗಲುಗನಸು ಕಾಣುವಂತೆ ಕೂತಿರುವ ಭಂಗಿಯಲ್ಲಿ ಆಕೆಯ ಮನಸ್ಸಿನಲ್ಲಿ ನಡೆಯುತ್ತಿರುವ ಸಂಘರ್ಷಗಳೆಲ್ಲವೂ ಆಕೆಯ ಮುಖದಲ್ಲಿ ಬಿಂಬಿತಗೊಂಡಿವೆ. <br /> <br /> ಕಲಾವಿದ ಖಂಡೆ ಅವರ ಕಲಾಕೃತಿಗಳಲ್ಲಿ ಜನಪದದ ಸೊಗಡಿದೆ. ಕಿಶನ್ ಅವರು ತಮ್ಮ ಕುಂಚದಲ್ಲಿ ಹೆಣ್ಣಿನ ವ್ಯಕ್ತಿತ್ವವನ್ನು ಕಟ್ಟಿಕೊಟ್ಟಿದ್ದಾರೆ. <br /> <br /> ಸ್ಥಳ: ರಿನೈಸೆನ್ಸ್ ಗ್ಯಾಲರಿ, 104, ವೆಸ್ಟ್ಮಿನಿಸ್ಟರ್ 13, ಕನ್ನಿಂಗ್ಹ್ಯಾಂ ರಸ್ತೆ. ಬೆಳಿಗ್ಗೆ 11ರಿಂದ ಸಂಜೆ 7. <br /> <br /> <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>