<p><strong>ಸಂಡೂರು:</strong> ತಾಲ್ಲೂಕಿನ ಕೃಷ್ಣಾನಗರ ಗ್ರಾಮದಲ್ಲಿ ಆಧಾರ್ ಕಾರ್ಡ್ ಮಾಹಿತಿ ದಾಖಲಿಸುವ ಹಾಗೂ ಫೊಟೊ ತೆಗೆಯುವ ಕೇಂದ್ರವನ್ನು ತೆರೆಯುವಂತೆ ಕೋರಿರುವ ಕರ್ನಾಟಕ ರಕ್ಷಣಾ ಸೇನೆ ತಾಲ್ಲೂಕು ಹಾಗೂ ಗ್ರಾಮ ಘಟಕದ ಕಾರ್ಯಕರ್ತರು ಶುಕ್ರವಾರ ತಹಶೀಲ್ದಾರ್ ಆರ್. ತಿಮ್ಮಯ್ಯ ಅವರಿಗೆ ಮನವಿ ಸಲ್ಲಿಸಿದರು.<br /> <br /> ಸೇನೆಯ ತಾಲ್ಲೂಕು ಅಧ್ಯಕ್ಷ ಎಂ.ಸತೀಶ್, ಗ್ರಾಮದಲ್ಲಿ ಆಧಾರ್ ಕಾರ್ಡ್ ಕೇಂದ್ರವನ್ನು ತೆರೆಯಲು ವಿನಂತಿಸಿ, ಈ ಮುಂಚೆಯೇ ಸಂಘಟನೆಯ ವತಿಯಿಂದ ತಾಲ್ಲೂಕು ಕಚೇರಿಗೆ ಮನವಿ ಪತ್ರವನ್ನು ಸಲ್ಲಿಸಲಾಗಿತ್ತು. ವಿಧಾನಸಭಾ ಚುನಾವಣೆ ಮುಗಿದ ನಂತರದಲ್ಲಿ ಗ್ರಾಮದಲ್ಲಿ ಆಧಾರ್ ಕಾರ್ಡ್ ಕೇಂದ್ರವನ್ನು ತೆರೆಯುವುದಾಗಿ ಆಗ ಆಧಿಕಾರಿಗಳು ನೀಡಿದ್ದ ಭರವಸೆ ಕಾರ್ಯರೂಪಕ್ಕೆ ಬಂದಿರುವುದಿಲ್ಲ.<br /> <br /> ಕೃಷ್ಣಾನಗರ ಗ್ರಾಮದಿಂದ ಸಂಡೂರಿನಲ್ಲಿರುವ ಆಧಾರ್ ಕಾರ್ಡ್ ಕೇಂದ್ರಕ್ಕೆ ವೃದ್ಧರೂ, ಮಹಿಳೆಯರು, ಮಕ್ಕಳು ಹೋಗಿ ಬರಲು ತೊಂದರೆಯಾಗುತ್ತಿದೆ. ಆದ್ದರಿಂದ ಆಧಾರ್ ಕಾರ್ಡ್ಗಾಗಿ ಮಾಹಿತಿ ಸಂಗ್ರಹ, ಪೋಟೊ ತೆಗೆಯುವ ಮತ್ತು ದಾಖಲಿಸುವ ಕೇಂದ್ರವನ್ನು ಇತರ ಗ್ರಾಮಗಳಂತೆ ಕೃಷ್ಣಾನಗರ ಗ್ರಾಮದಲ್ಲಿಯೂ ತೆರೆಯುವಂತೆ ಕೋರಿದರು.<br /> <br /> ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ಸೇನೆಯ ತಾಲ್ಲೂಕು ಅಧ್ಯಕ್ಷ ಎಂ.ಸತೀಶ್, ಉಪಾಧ್ಯಕ್ಷ ಬಿ.ಇಮಾಂಬಾಷ, ಸಂಚಾಲಕರಾದ ಹಬೂಬಾಕರ್, ಮಾರುತಿ, ಖಜಾಂಚಿ ತಾಯಣ್ಣ, ಸಹ ಕಾರ್ಯದರ್ಶಿ ಶಂಕರ್, ಕೃಷ್ಣಾನಗರ ಗ್ರಾಮ ಘಟಕ ಅಧ್ಯಕ್ಷ ಮಹೇಂದ್ರ ಹಾಗೂ ಉಪಾಧ್ಯಕ್ಷ ಎಚ್. ಸುಭಾನ್ ಚಿತ್ರದಲ್ಲಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಂಡೂರು:</strong> ತಾಲ್ಲೂಕಿನ ಕೃಷ್ಣಾನಗರ ಗ್ರಾಮದಲ್ಲಿ ಆಧಾರ್ ಕಾರ್ಡ್ ಮಾಹಿತಿ ದಾಖಲಿಸುವ ಹಾಗೂ ಫೊಟೊ ತೆಗೆಯುವ ಕೇಂದ್ರವನ್ನು ತೆರೆಯುವಂತೆ ಕೋರಿರುವ ಕರ್ನಾಟಕ ರಕ್ಷಣಾ ಸೇನೆ ತಾಲ್ಲೂಕು ಹಾಗೂ ಗ್ರಾಮ ಘಟಕದ ಕಾರ್ಯಕರ್ತರು ಶುಕ್ರವಾರ ತಹಶೀಲ್ದಾರ್ ಆರ್. ತಿಮ್ಮಯ್ಯ ಅವರಿಗೆ ಮನವಿ ಸಲ್ಲಿಸಿದರು.<br /> <br /> ಸೇನೆಯ ತಾಲ್ಲೂಕು ಅಧ್ಯಕ್ಷ ಎಂ.ಸತೀಶ್, ಗ್ರಾಮದಲ್ಲಿ ಆಧಾರ್ ಕಾರ್ಡ್ ಕೇಂದ್ರವನ್ನು ತೆರೆಯಲು ವಿನಂತಿಸಿ, ಈ ಮುಂಚೆಯೇ ಸಂಘಟನೆಯ ವತಿಯಿಂದ ತಾಲ್ಲೂಕು ಕಚೇರಿಗೆ ಮನವಿ ಪತ್ರವನ್ನು ಸಲ್ಲಿಸಲಾಗಿತ್ತು. ವಿಧಾನಸಭಾ ಚುನಾವಣೆ ಮುಗಿದ ನಂತರದಲ್ಲಿ ಗ್ರಾಮದಲ್ಲಿ ಆಧಾರ್ ಕಾರ್ಡ್ ಕೇಂದ್ರವನ್ನು ತೆರೆಯುವುದಾಗಿ ಆಗ ಆಧಿಕಾರಿಗಳು ನೀಡಿದ್ದ ಭರವಸೆ ಕಾರ್ಯರೂಪಕ್ಕೆ ಬಂದಿರುವುದಿಲ್ಲ.<br /> <br /> ಕೃಷ್ಣಾನಗರ ಗ್ರಾಮದಿಂದ ಸಂಡೂರಿನಲ್ಲಿರುವ ಆಧಾರ್ ಕಾರ್ಡ್ ಕೇಂದ್ರಕ್ಕೆ ವೃದ್ಧರೂ, ಮಹಿಳೆಯರು, ಮಕ್ಕಳು ಹೋಗಿ ಬರಲು ತೊಂದರೆಯಾಗುತ್ತಿದೆ. ಆದ್ದರಿಂದ ಆಧಾರ್ ಕಾರ್ಡ್ಗಾಗಿ ಮಾಹಿತಿ ಸಂಗ್ರಹ, ಪೋಟೊ ತೆಗೆಯುವ ಮತ್ತು ದಾಖಲಿಸುವ ಕೇಂದ್ರವನ್ನು ಇತರ ಗ್ರಾಮಗಳಂತೆ ಕೃಷ್ಣಾನಗರ ಗ್ರಾಮದಲ್ಲಿಯೂ ತೆರೆಯುವಂತೆ ಕೋರಿದರು.<br /> <br /> ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ಸೇನೆಯ ತಾಲ್ಲೂಕು ಅಧ್ಯಕ್ಷ ಎಂ.ಸತೀಶ್, ಉಪಾಧ್ಯಕ್ಷ ಬಿ.ಇಮಾಂಬಾಷ, ಸಂಚಾಲಕರಾದ ಹಬೂಬಾಕರ್, ಮಾರುತಿ, ಖಜಾಂಚಿ ತಾಯಣ್ಣ, ಸಹ ಕಾರ್ಯದರ್ಶಿ ಶಂಕರ್, ಕೃಷ್ಣಾನಗರ ಗ್ರಾಮ ಘಟಕ ಅಧ್ಯಕ್ಷ ಮಹೇಂದ್ರ ಹಾಗೂ ಉಪಾಧ್ಯಕ್ಷ ಎಚ್. ಸುಭಾನ್ ಚಿತ್ರದಲ್ಲಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>