<p><span style="font-size: 26px;"><strong>ಕೋಲಾರ: </strong>ನಗರದ ಪ್ರಮುಖ ನೀರಿನ ಆಸರೆಯಾದ ಅಮ್ಮೇರಹಳ್ಳಿ ಕೆರೆಯಲ್ಲಿ ಬುಧವಾರ ಬೆಳಿಗ್ಗೆ ಅಕ್ರಮವಾಗಿ ಮಣ್ಣು, ಮರಳು ಸಾಗಿಸಲು ಬಳಸುತ್ತಿದ್ದ 5 ಟ್ರಾಕ್ಟರ್, ಒಂದು ಜೆಸಿಬಿ ಯಂತ್ರವನ್ನು ನಗರಸಭೆ ಆಯುಕ್ತ ಮಹೇಂದ್ರಕುಮಾರ್ ಮತ್ತು ಸಿಬ್ಬಂದಿ ವಶಪಡಿಸಿಕೊಂಡಿದ್ದಾರೆ. ವಾಹನ ಚಾಲಕರು ಪರಾರಿಯಾಗಿದ್ದು, ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.</span><br /> <br /> ಕೆರೆಯಲ್ಲಿ ಮಣ್ಣು, ಮರಳು ಸಾಗಣೆ ನಡೆಯುತ್ತಿರುವ ಮಾಹಿತಿ ಹಿನ್ನೆಲೆಯಲ್ಲಿ ಆಯುಕ್ತ ಮಹೇಂದ್ರಕುಮಾರ್, ನಗರಸಭೆ ಸದಸ್ಯ ಎಸ್.ಆರ್.ಮುರಳಿಗೌಡ ದಾಳಿ ಕಾರ್ಯಾಚರಣೆ ನಡೆಸಿದರು.<br /> <br /> ನಂತರ ಮಾತನಾಡಿದ ಮಹೇಂದ್ರಕುಮಾರ್ ನಗರದ ಕುಡಿಯುವ ನೀರಿನ ಆಸರೆಯಾದ ಕೋಲಾರಮ್ಮ, ಅಮ್ಮೇರಹಳ್ಳಿ, ಮಡೇರಹಳ್ಳಿ, ಕೋಡಿಕಣ್ಣೂರು ಕೆರೆಗಳು ನಗರಸಭೆ ವ್ಯಾಪ್ತಿಯಲ್ಲಿವೆ. ಕುಡಿಯುವ ನೀರಿನ ಕೊಳವೆ ಬಾವಿಗಳು ಇಲ್ಲಿವೆ. ಈ ಕೆರೆಗಳಲ್ಲಿ ಅಕ್ರಮವಾಗಿ ಮರಳು, ಮಣ್ಣು ಸಾಗಣೆಗೆ ಮುಂದಾದರೆ ಕಾನೂನು ರೀತಿಯ ಕ್ರಮ ಜರುಗಿಸಲಾಗುವುದು ಎಂದರು.<br /> <br /> ಕೆರೆಯೊಳಕ್ಕೆ ಟ್ರ್ಯಾಕ್ಟರ್ ಮತ್ತಿತರ ವಾಹನ ಪ್ರವೇಶಿಸದಂತೆ ಮಾರ್ಗಗಳನ್ನು ಬಂದ್ ಮಾಡಲಾಗುವುದು. ಮಾರ್ಗಗಳಲ್ಲಿ ಜೆಸಿಬಿಯಿಂದ ಕಾಲುವೆ ಅಗೆಸಿ ತಡೆ ನಿರ್ಮಿಸಲಾಗುವುದು ಎಂದು ತಿಳಿಸಿದರು.<br /> <br /> ಕೆರೆಗಳಲ್ಲಿ ಮಣ್ಣು, ಮರಳು ತೆಗೆಯುವುದರಿಂದ ಕುಡಿಯುವ ನೀರಿನ ಕೊಳವೆ ಬಾವಿಗಳಿಗೆ ತೊಂದರೆಯಾಗುತ್ತಿದೆ. ಅಂತರ್ಜಲ ಮಟ್ಟ ಕುಸಿಯುತ್ತದೆ. ಅಕ್ರಮವಾಗಿ ಮರಳು, ಮಣ್ಣು ತೆಗೆಯುವುದು ಕಂಡು ಬಂದರೆ ಕೂಡಲೇ ನಗರಸಭೆ ಆಯುಕ್ತರಿಗೆ ದೂರು ನೀಡಬೇಕು ಎಂದು ಸದಸ್ಯ ಎಸ್.ಆರ್.ಮುರಳಿಗೌಡ ಮನವಿ ಮಾಡಿದರು.<br /> <br /> ಕಾರ್ಯಾಚರಣೆಯಲ್ಲಿ ನಗರಸಭೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಗರುಡಾಚಲಮೂರ್ತಿ, ಸಹಾಯಕ ಎಂಜನಿಯರ್ ಕೊಟ್ರೇಶಪ್ಪ, ಕಿರಿಯ ಎಂಜಿನಿಯರ್ ಮೋಹನ್, ಕಂದಾಯ ನಿರೀಕ್ಷಕರಾದ ಚಲಪತಿ, ಕೃಷ್ಣಪ್ಪ, ಆರೋಗ್ಯ ನಿರೀಕ್ಷಕ ರಮೇಶ್, ಲಕ್ಷ್ಮೀನಾರಾಯಣ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><span style="font-size: 26px;"><strong>ಕೋಲಾರ: </strong>ನಗರದ ಪ್ರಮುಖ ನೀರಿನ ಆಸರೆಯಾದ ಅಮ್ಮೇರಹಳ್ಳಿ ಕೆರೆಯಲ್ಲಿ ಬುಧವಾರ ಬೆಳಿಗ್ಗೆ ಅಕ್ರಮವಾಗಿ ಮಣ್ಣು, ಮರಳು ಸಾಗಿಸಲು ಬಳಸುತ್ತಿದ್ದ 5 ಟ್ರಾಕ್ಟರ್, ಒಂದು ಜೆಸಿಬಿ ಯಂತ್ರವನ್ನು ನಗರಸಭೆ ಆಯುಕ್ತ ಮಹೇಂದ್ರಕುಮಾರ್ ಮತ್ತು ಸಿಬ್ಬಂದಿ ವಶಪಡಿಸಿಕೊಂಡಿದ್ದಾರೆ. ವಾಹನ ಚಾಲಕರು ಪರಾರಿಯಾಗಿದ್ದು, ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.</span><br /> <br /> ಕೆರೆಯಲ್ಲಿ ಮಣ್ಣು, ಮರಳು ಸಾಗಣೆ ನಡೆಯುತ್ತಿರುವ ಮಾಹಿತಿ ಹಿನ್ನೆಲೆಯಲ್ಲಿ ಆಯುಕ್ತ ಮಹೇಂದ್ರಕುಮಾರ್, ನಗರಸಭೆ ಸದಸ್ಯ ಎಸ್.ಆರ್.ಮುರಳಿಗೌಡ ದಾಳಿ ಕಾರ್ಯಾಚರಣೆ ನಡೆಸಿದರು.<br /> <br /> ನಂತರ ಮಾತನಾಡಿದ ಮಹೇಂದ್ರಕುಮಾರ್ ನಗರದ ಕುಡಿಯುವ ನೀರಿನ ಆಸರೆಯಾದ ಕೋಲಾರಮ್ಮ, ಅಮ್ಮೇರಹಳ್ಳಿ, ಮಡೇರಹಳ್ಳಿ, ಕೋಡಿಕಣ್ಣೂರು ಕೆರೆಗಳು ನಗರಸಭೆ ವ್ಯಾಪ್ತಿಯಲ್ಲಿವೆ. ಕುಡಿಯುವ ನೀರಿನ ಕೊಳವೆ ಬಾವಿಗಳು ಇಲ್ಲಿವೆ. ಈ ಕೆರೆಗಳಲ್ಲಿ ಅಕ್ರಮವಾಗಿ ಮರಳು, ಮಣ್ಣು ಸಾಗಣೆಗೆ ಮುಂದಾದರೆ ಕಾನೂನು ರೀತಿಯ ಕ್ರಮ ಜರುಗಿಸಲಾಗುವುದು ಎಂದರು.<br /> <br /> ಕೆರೆಯೊಳಕ್ಕೆ ಟ್ರ್ಯಾಕ್ಟರ್ ಮತ್ತಿತರ ವಾಹನ ಪ್ರವೇಶಿಸದಂತೆ ಮಾರ್ಗಗಳನ್ನು ಬಂದ್ ಮಾಡಲಾಗುವುದು. ಮಾರ್ಗಗಳಲ್ಲಿ ಜೆಸಿಬಿಯಿಂದ ಕಾಲುವೆ ಅಗೆಸಿ ತಡೆ ನಿರ್ಮಿಸಲಾಗುವುದು ಎಂದು ತಿಳಿಸಿದರು.<br /> <br /> ಕೆರೆಗಳಲ್ಲಿ ಮಣ್ಣು, ಮರಳು ತೆಗೆಯುವುದರಿಂದ ಕುಡಿಯುವ ನೀರಿನ ಕೊಳವೆ ಬಾವಿಗಳಿಗೆ ತೊಂದರೆಯಾಗುತ್ತಿದೆ. ಅಂತರ್ಜಲ ಮಟ್ಟ ಕುಸಿಯುತ್ತದೆ. ಅಕ್ರಮವಾಗಿ ಮರಳು, ಮಣ್ಣು ತೆಗೆಯುವುದು ಕಂಡು ಬಂದರೆ ಕೂಡಲೇ ನಗರಸಭೆ ಆಯುಕ್ತರಿಗೆ ದೂರು ನೀಡಬೇಕು ಎಂದು ಸದಸ್ಯ ಎಸ್.ಆರ್.ಮುರಳಿಗೌಡ ಮನವಿ ಮಾಡಿದರು.<br /> <br /> ಕಾರ್ಯಾಚರಣೆಯಲ್ಲಿ ನಗರಸಭೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಗರುಡಾಚಲಮೂರ್ತಿ, ಸಹಾಯಕ ಎಂಜನಿಯರ್ ಕೊಟ್ರೇಶಪ್ಪ, ಕಿರಿಯ ಎಂಜಿನಿಯರ್ ಮೋಹನ್, ಕಂದಾಯ ನಿರೀಕ್ಷಕರಾದ ಚಲಪತಿ, ಕೃಷ್ಣಪ್ಪ, ಆರೋಗ್ಯ ನಿರೀಕ್ಷಕ ರಮೇಶ್, ಲಕ್ಷ್ಮೀನಾರಾಯಣ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>