<p>ಯಲಹಂಕ: ಭಾರತದಲ್ಲಿ ಹೇರಳವಾಗಿರುವ ಆಯುರ್ವೇದ ಔಷಧಿ ಪದ್ಧತಿಯಲ್ಲಿನ ಪಾರಂಪರಿಕ ಜ್ಞಾನವನ್ನು ಪ್ರಪಂಚದಾದ್ಯಂತ ಹರಡುವ ಮೂಲಕ ಎಲ್ಲರಿಗೂ ತಲುಪುವಂತೆ ಮಾಡಬೇಕು ಎಂದು `ಆಯುರ್ವೇದ ಮತ್ತು ಇಂಟಿ ಗ್ರೇಟಿವ್ ಮೆಡಿಸಿನ್ ಸಂಸ್ಥೆ~ಯ ಉಪಾಧ್ಯಕ್ಷ ಅನಂತ್ ದರ್ಶನ್ ಶಂಕರ್ ಹೇಳಿದರು.<br /> <br /> ಮಾವಳ್ಳಿಪುರದಲ್ಲಿರುವ ಸ್ಥಳೀಯ ಪಾರಂಪರಿಕ ಪುನರುತ್ಥಾನ ಕೇಂದ್ರದ ಆವರಣದಲ್ಲಿ ಆಯೋಜಿಸಿದ್ದ ತಮ್ಮ ಸಂಸ್ಥೆಯ ದಿನಾಚರಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. <br /> <br /> ಸಮುದಾಯ ಮತ್ತು ಆಯುರ್ವೇದದಲ್ಲಿರುವ ಜ್ಞಾನ ಈ ಎರಡೂ ಔಷಧಿ ಕ್ರಮಗಳು ಗಿಡಮೂಲಿಕೆಗಳದ್ದೆ ಆಗಿದ್ದು, ಸಮುದಾಯದ ಜನರು ತಲೆ ತಲೆಮಾರುಗಳಿಂದ ಒಬ್ಬರ ಬಾಯಿಂದ ಒಬ್ಬರಿಗೆ ಹರಡಿ ಈ ಔಷಧಿ ಪದ್ಧತಿ ಜಾರಿ ಯಲ್ಲಿದ್ದರೆ, ಆಯುರ್ವೇದ ವೈದ್ಯರು ಪಠ್ಯಪುಸ್ತಕಗಳ ನೆರವಿನಿಂದ ಜ್ಞಾನ ಸಂಪಾದಿಸಿದ್ದಾರೆ. ಆದರೆ ಎರಡೂ ಜ್ಞಾನವೂ ಆಯುರ್ವೇದದ್ದೆ ಆಗಿದೆ ಎಂದು ಸ್ಪಷ್ಟಪಡಿಸಿದರು. <br /> <br /> ಭಾರತೀಯ ವಿಜ್ಞಾನ ಸಂಸ್ಥೆಯ ನರವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ಪ್ರೊ.ಡಾ.ವಿಜಯಲಕ್ಷ್ಮಿ ಅವರು, ಮರೆಗುಳಿತನದ ಕಾಯಿಲೆ ನಿವಾರಣೆಯಲ್ಲಿ ಆಯುರ್ವೇದದ ಅಶ್ವಗಂಧ ಔಷಧಿ ಗಿಡದ ಪಾತ್ರದ ಬಗ್ಗೆ ಮಾಹಿತಿ ನೀಡಿದರು.<br /> <br /> ತಾಂತ್ರಿಕ ಕ್ಷೇತ್ರಗಳಲ್ಲಿದ್ದುಕೊಂಡು ಆಯುರ್ವೇದದ ಬೆಳವಣಿಗೆಗೆ ವಿಶೇಷ ಕೊಡುಗೆ ನೀಡಿರುವ 8 ಮಂದಿಯನ್ನು ಸನ್ಮಾನಿಸಲಾಯಿತು. ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಆಶ್ರಯದಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ 76 ಯೂನಿಟ್ ರಕ್ತ ಸಂಗ್ರಹಿಸಲಾಯಿತು.<br /> </p>.<p>`<strong>ರಕ್ತದಾನ ಮಾಡುವುದರಿಂದ ಸಮಾಧಾನ~<br /> </strong><strong>ಕೆಂಗೇರಿ:</strong> `ಆರೋಗ್ಯವಂತ ಮನುಷ್ಯರು ರಕ್ತದಾನ ಮಾಡಿದರೆ ಮತ್ತೆ ಹೊಸ ರಕ್ತ ಉತ್ಪತ್ತಿಯಾಗಿ ವ್ಯಕ್ತಿ ಇನ್ನಷ್ಟು ಆರೋಗ್ಯವಂತನಾಗಿರಲು ಸಹಕಾರಿಯಾಗುತ್ತದೆ. ನೀವು ದಾನ ಮಾಡಿದ ಒಂದು ಹನಿ ರಕ್ತವು ಇನ್ನೊಬ್ಬರ ಜೀವ ಉಳಿಸಲು ಸಹಕಾರಿಯಾಗುತ್ತದೆ~ ಎಂದು ಶಾಸಕ ಎಂ.ಕೃಷ್ಣಪ್ಪ ಸಲಹೆ ಮಾಡಿದರು.<br /> <br /> ಹೊರ ವರ್ತುಲ ರಸ್ತೆಯ ಜ್ಞಾನ ಭಾರತಿ ಸರ್ಕಲ್ನ ಎಸ್.ವಿ.ಕೆ.ಕಲ್ಯಾಣ ಮಂಟಪದಲ್ಲಿ ಬೆಂಗಳೂರು ಗ್ರಾಮಂತರ ಲೋಕಸಭಾ ಕ್ಷೇತ್ರದ ಯುವ ಕಾಂಗ್ರೆಸ್ ವತಿಯಿಂದ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದರು.<br /> <br /> ಕಷ್ಟದಲ್ಲಿರುವವರನ್ನು ನೋಡಿ ಮರುಕ ಪಡುವುದಕ್ಕಿಂತ ಸಹಾಯ ಮಾಡುವ ಗುಣ ಬೆಳೆಸಿಕೊಂಡರೆ ಮಾತ್ರ ಇನ್ನೊಬ್ಬರು ನಿಮ್ಮ ಕಷ್ಟಕ್ಕೆ ನಿಮಗರಿವಿಲ್ಲದಂತೆ ನೆರವಾಗುತ್ತಾರೆ ಎಂದು ಅವರು ಹೇಳಿದರು. <br /> <br /> ರಾಜರಾಜೇಶ್ವರಿ ನಗರ ಸಭೆ ಮಾಜಿ ಅಧ್ಯಕ್ಷ ಹನುಮಂತರಾಯಪ್ಪ, ಬೆಂಗಳೂರು ಗ್ರಾಮಂತರ ಲೋಕಸಭಾ ಯುವ ಕಾಂಗ್ರೆಸ್ ಕಾರ್ಯದರ್ಶಿ ಎ.ಎನ್.ನಟರಾಜ್ಗೌಡ, ಮುಖಂಡರಾದ ಆರ್.ಕಶ್ಯಪ್, ಸಿದ್ದಾರ್ಥ್, ಸುನಿಲ್ ಇತರರು ಹಾಜರಿದ್ದರು.<br /> <br /> ಸಂಸ್ಥೆಯ ನಿರ್ದೇಶಕಿ ಡಾ.ಪದ್ಮಾ ವೆಂಕಟ್, ಜಂಟಿ ನಿರ್ದೇಶಕ ಡಾ.ಕೆ.ಹರಿದಾ ಸನ್, ಪಾರಂಪರಿಕ ಆಯುರ್ವೇದ ವೈದ್ಯರಾದ ಎಂ. ಗೋಪಾಲಕೃಷ್ಣ ಇತರರು ಇದ್ದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಯಲಹಂಕ: ಭಾರತದಲ್ಲಿ ಹೇರಳವಾಗಿರುವ ಆಯುರ್ವೇದ ಔಷಧಿ ಪದ್ಧತಿಯಲ್ಲಿನ ಪಾರಂಪರಿಕ ಜ್ಞಾನವನ್ನು ಪ್ರಪಂಚದಾದ್ಯಂತ ಹರಡುವ ಮೂಲಕ ಎಲ್ಲರಿಗೂ ತಲುಪುವಂತೆ ಮಾಡಬೇಕು ಎಂದು `ಆಯುರ್ವೇದ ಮತ್ತು ಇಂಟಿ ಗ್ರೇಟಿವ್ ಮೆಡಿಸಿನ್ ಸಂಸ್ಥೆ~ಯ ಉಪಾಧ್ಯಕ್ಷ ಅನಂತ್ ದರ್ಶನ್ ಶಂಕರ್ ಹೇಳಿದರು.<br /> <br /> ಮಾವಳ್ಳಿಪುರದಲ್ಲಿರುವ ಸ್ಥಳೀಯ ಪಾರಂಪರಿಕ ಪುನರುತ್ಥಾನ ಕೇಂದ್ರದ ಆವರಣದಲ್ಲಿ ಆಯೋಜಿಸಿದ್ದ ತಮ್ಮ ಸಂಸ್ಥೆಯ ದಿನಾಚರಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. <br /> <br /> ಸಮುದಾಯ ಮತ್ತು ಆಯುರ್ವೇದದಲ್ಲಿರುವ ಜ್ಞಾನ ಈ ಎರಡೂ ಔಷಧಿ ಕ್ರಮಗಳು ಗಿಡಮೂಲಿಕೆಗಳದ್ದೆ ಆಗಿದ್ದು, ಸಮುದಾಯದ ಜನರು ತಲೆ ತಲೆಮಾರುಗಳಿಂದ ಒಬ್ಬರ ಬಾಯಿಂದ ಒಬ್ಬರಿಗೆ ಹರಡಿ ಈ ಔಷಧಿ ಪದ್ಧತಿ ಜಾರಿ ಯಲ್ಲಿದ್ದರೆ, ಆಯುರ್ವೇದ ವೈದ್ಯರು ಪಠ್ಯಪುಸ್ತಕಗಳ ನೆರವಿನಿಂದ ಜ್ಞಾನ ಸಂಪಾದಿಸಿದ್ದಾರೆ. ಆದರೆ ಎರಡೂ ಜ್ಞಾನವೂ ಆಯುರ್ವೇದದ್ದೆ ಆಗಿದೆ ಎಂದು ಸ್ಪಷ್ಟಪಡಿಸಿದರು. <br /> <br /> ಭಾರತೀಯ ವಿಜ್ಞಾನ ಸಂಸ್ಥೆಯ ನರವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ಪ್ರೊ.ಡಾ.ವಿಜಯಲಕ್ಷ್ಮಿ ಅವರು, ಮರೆಗುಳಿತನದ ಕಾಯಿಲೆ ನಿವಾರಣೆಯಲ್ಲಿ ಆಯುರ್ವೇದದ ಅಶ್ವಗಂಧ ಔಷಧಿ ಗಿಡದ ಪಾತ್ರದ ಬಗ್ಗೆ ಮಾಹಿತಿ ನೀಡಿದರು.<br /> <br /> ತಾಂತ್ರಿಕ ಕ್ಷೇತ್ರಗಳಲ್ಲಿದ್ದುಕೊಂಡು ಆಯುರ್ವೇದದ ಬೆಳವಣಿಗೆಗೆ ವಿಶೇಷ ಕೊಡುಗೆ ನೀಡಿರುವ 8 ಮಂದಿಯನ್ನು ಸನ್ಮಾನಿಸಲಾಯಿತು. ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಆಶ್ರಯದಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ 76 ಯೂನಿಟ್ ರಕ್ತ ಸಂಗ್ರಹಿಸಲಾಯಿತು.<br /> </p>.<p>`<strong>ರಕ್ತದಾನ ಮಾಡುವುದರಿಂದ ಸಮಾಧಾನ~<br /> </strong><strong>ಕೆಂಗೇರಿ:</strong> `ಆರೋಗ್ಯವಂತ ಮನುಷ್ಯರು ರಕ್ತದಾನ ಮಾಡಿದರೆ ಮತ್ತೆ ಹೊಸ ರಕ್ತ ಉತ್ಪತ್ತಿಯಾಗಿ ವ್ಯಕ್ತಿ ಇನ್ನಷ್ಟು ಆರೋಗ್ಯವಂತನಾಗಿರಲು ಸಹಕಾರಿಯಾಗುತ್ತದೆ. ನೀವು ದಾನ ಮಾಡಿದ ಒಂದು ಹನಿ ರಕ್ತವು ಇನ್ನೊಬ್ಬರ ಜೀವ ಉಳಿಸಲು ಸಹಕಾರಿಯಾಗುತ್ತದೆ~ ಎಂದು ಶಾಸಕ ಎಂ.ಕೃಷ್ಣಪ್ಪ ಸಲಹೆ ಮಾಡಿದರು.<br /> <br /> ಹೊರ ವರ್ತುಲ ರಸ್ತೆಯ ಜ್ಞಾನ ಭಾರತಿ ಸರ್ಕಲ್ನ ಎಸ್.ವಿ.ಕೆ.ಕಲ್ಯಾಣ ಮಂಟಪದಲ್ಲಿ ಬೆಂಗಳೂರು ಗ್ರಾಮಂತರ ಲೋಕಸಭಾ ಕ್ಷೇತ್ರದ ಯುವ ಕಾಂಗ್ರೆಸ್ ವತಿಯಿಂದ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದರು.<br /> <br /> ಕಷ್ಟದಲ್ಲಿರುವವರನ್ನು ನೋಡಿ ಮರುಕ ಪಡುವುದಕ್ಕಿಂತ ಸಹಾಯ ಮಾಡುವ ಗುಣ ಬೆಳೆಸಿಕೊಂಡರೆ ಮಾತ್ರ ಇನ್ನೊಬ್ಬರು ನಿಮ್ಮ ಕಷ್ಟಕ್ಕೆ ನಿಮಗರಿವಿಲ್ಲದಂತೆ ನೆರವಾಗುತ್ತಾರೆ ಎಂದು ಅವರು ಹೇಳಿದರು. <br /> <br /> ರಾಜರಾಜೇಶ್ವರಿ ನಗರ ಸಭೆ ಮಾಜಿ ಅಧ್ಯಕ್ಷ ಹನುಮಂತರಾಯಪ್ಪ, ಬೆಂಗಳೂರು ಗ್ರಾಮಂತರ ಲೋಕಸಭಾ ಯುವ ಕಾಂಗ್ರೆಸ್ ಕಾರ್ಯದರ್ಶಿ ಎ.ಎನ್.ನಟರಾಜ್ಗೌಡ, ಮುಖಂಡರಾದ ಆರ್.ಕಶ್ಯಪ್, ಸಿದ್ದಾರ್ಥ್, ಸುನಿಲ್ ಇತರರು ಹಾಜರಿದ್ದರು.<br /> <br /> ಸಂಸ್ಥೆಯ ನಿರ್ದೇಶಕಿ ಡಾ.ಪದ್ಮಾ ವೆಂಕಟ್, ಜಂಟಿ ನಿರ್ದೇಶಕ ಡಾ.ಕೆ.ಹರಿದಾ ಸನ್, ಪಾರಂಪರಿಕ ಆಯುರ್ವೇದ ವೈದ್ಯರಾದ ಎಂ. ಗೋಪಾಲಕೃಷ್ಣ ಇತರರು ಇದ್ದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>