<p>ಕುಷ್ಟಗಿ: ಆರ್ಥಿಕ ದುರ್ಬಲರು, ನಿರ್ಗತಿಕರು ಸೇರಿದಂತೆ ದಾವೆ ನಡೆಸಲು ಸಾಧ್ಯವಿಲ್ಲದವರಿಗೆ ಉಚಿತ ಕಾನೂನು ನೆರವು ಒದಗಿಸಿಕೊಡುವ ವ್ಯವಸ್ಥೆ ಕೆಳ ಹಂತದ ನ್ಯಾಯಾಲಯಗಳಿಂದ ಹಿಡಿದು ಸುಪ್ರೀಂ ಕೋರ್ಟ್ವರೆಗೂ ಇದ್ದು ಅದರ ಪ್ರಯೋಜನ ಪಡೆಯುವಂತೆ ಇಲ್ಲಿಯ ನ್ಯಾಯಾಧೀಶ ವಿ.ವೆಂಕಟೇಶಪ್ಪ ಕರೆ ನೀಡಿದರು.<br /> <br /> ಬುಧವಾರ ತಾಲ್ಲೂಕಿನ ಗುಮಗೇರಿ ಗ್ರಾಮದಲ್ಲಿ ನಡೆದ ಜನತಾ ನ್ಯಾಯಾಲಯ ಹಾಗೂ ಕಾನೂನು ಅರಿವು ನೆರವು ಸಾಕ್ಷರತಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. <br /> <br /> ಲೋಕ್ ಅದಾಲತ್ ಮಹತ್ವವನ್ನು ವಿವರಿಸಿ, ಕೆಲ ಕ್ರಿಮಿನಲ್ ಪ್ರಕರಣಗಳು ಮತ್ತು ಎಲ್ಲ ರೀತಿಯ ಸಿವಿಲ್ ಪ್ರಕರಣಗಳನ್ನು ರಾಜಿಸಂಧಾನದಿಂದ ಬಗೆಹರಿಸಿಕೊಳ್ಳಲು ಸಾಧ್ಯವಿದೆ. ಇದರಿಂದ ಕೋರ್ಟ್, ಪೊಲೀಸ್ ಠಾಣೆಗಳಿಗೆ ಅಲೆಯುವುದು, ಆರ್ಥಿಕ ವೆಚ್ಚ, ಶ್ರಮ ತಪ್ಪುತ್ತದೆ. ರಾಜಿಸಂಧಾನದಲ್ಲಿ ಸೋಲೇ ಇರುವುದಿಲ್ಲ; ಬದಲಾಗಿ ವಾದಿ ಪ್ರತಿವಾದಿಗಳಿಬ್ಬರಿಗೂ ಗೆಲುವು ಲಭಿಸುತ್ತದೆ ಎಂದರು.<br /> <br /> ಸರ್ಕಾರಿ ವಕೀಲ ಎನ್.ಎಸ್.ನಾಯ್ಕ ಇತರರು ಮಾತನಾಡಿದರು. ಆರ್.ಕೆ.ದೇಸಾಯಿ, ನಾಗಪ್ಪ ಸೂಡಿ ವಿವಿಧ ವಿಷಯಗಳನ್ನು ಕುರಿತು ಉಪನ್ಯಾಸ ನೀಡಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಹನುಮೇಶ ಗಾಧಾರಿ ಅಧ್ಯಕ್ಷತೆ ವಹಿಸಿದ್ದರು. <br /> <br /> ಜಿಲ್ಲಾ ಪಂಚಾಯಿತಿ ಸದಸ್ಯೆ ಅನ್ನಪೂರ್ಣಮ್ಮ ವಾಲ್ಮೀಕಿ, ಅಂಬಮ್ಮ ತಳವಾರ, ವಕೀಲರಾದ ಎಂ.ಎಂ. ಹಿರೇಮಠ, ಬಿ.ಎಂ. ದಂಡಿನ, ಬಿ.ಶರಣಪ್ಪ, ಪರಸಪ್ಪ, ಎ.ಎಚ್.ಪಲ್ಲೇದ, ಪ್ರಗತಿಪರ ರೈತ ಶರಣಗೌಡ, ವೈ.ಜೆ. ಪೂಜಾರ, ಶೇಖದಾದೂ, ಗ್ರಾಮ ಪಂಚಾಯಿತಿ ಸದಸ್ಯರು ವೇದಿಕೆಯಲ್ಲಿದ್ದರು.<br /> <br /> ಬಸವರಾಜ ನಿರೂಪಿಸಿದರು. ಯಲ್ಲಮ್ಮ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕುಷ್ಟಗಿ: ಆರ್ಥಿಕ ದುರ್ಬಲರು, ನಿರ್ಗತಿಕರು ಸೇರಿದಂತೆ ದಾವೆ ನಡೆಸಲು ಸಾಧ್ಯವಿಲ್ಲದವರಿಗೆ ಉಚಿತ ಕಾನೂನು ನೆರವು ಒದಗಿಸಿಕೊಡುವ ವ್ಯವಸ್ಥೆ ಕೆಳ ಹಂತದ ನ್ಯಾಯಾಲಯಗಳಿಂದ ಹಿಡಿದು ಸುಪ್ರೀಂ ಕೋರ್ಟ್ವರೆಗೂ ಇದ್ದು ಅದರ ಪ್ರಯೋಜನ ಪಡೆಯುವಂತೆ ಇಲ್ಲಿಯ ನ್ಯಾಯಾಧೀಶ ವಿ.ವೆಂಕಟೇಶಪ್ಪ ಕರೆ ನೀಡಿದರು.<br /> <br /> ಬುಧವಾರ ತಾಲ್ಲೂಕಿನ ಗುಮಗೇರಿ ಗ್ರಾಮದಲ್ಲಿ ನಡೆದ ಜನತಾ ನ್ಯಾಯಾಲಯ ಹಾಗೂ ಕಾನೂನು ಅರಿವು ನೆರವು ಸಾಕ್ಷರತಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. <br /> <br /> ಲೋಕ್ ಅದಾಲತ್ ಮಹತ್ವವನ್ನು ವಿವರಿಸಿ, ಕೆಲ ಕ್ರಿಮಿನಲ್ ಪ್ರಕರಣಗಳು ಮತ್ತು ಎಲ್ಲ ರೀತಿಯ ಸಿವಿಲ್ ಪ್ರಕರಣಗಳನ್ನು ರಾಜಿಸಂಧಾನದಿಂದ ಬಗೆಹರಿಸಿಕೊಳ್ಳಲು ಸಾಧ್ಯವಿದೆ. ಇದರಿಂದ ಕೋರ್ಟ್, ಪೊಲೀಸ್ ಠಾಣೆಗಳಿಗೆ ಅಲೆಯುವುದು, ಆರ್ಥಿಕ ವೆಚ್ಚ, ಶ್ರಮ ತಪ್ಪುತ್ತದೆ. ರಾಜಿಸಂಧಾನದಲ್ಲಿ ಸೋಲೇ ಇರುವುದಿಲ್ಲ; ಬದಲಾಗಿ ವಾದಿ ಪ್ರತಿವಾದಿಗಳಿಬ್ಬರಿಗೂ ಗೆಲುವು ಲಭಿಸುತ್ತದೆ ಎಂದರು.<br /> <br /> ಸರ್ಕಾರಿ ವಕೀಲ ಎನ್.ಎಸ್.ನಾಯ್ಕ ಇತರರು ಮಾತನಾಡಿದರು. ಆರ್.ಕೆ.ದೇಸಾಯಿ, ನಾಗಪ್ಪ ಸೂಡಿ ವಿವಿಧ ವಿಷಯಗಳನ್ನು ಕುರಿತು ಉಪನ್ಯಾಸ ನೀಡಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಹನುಮೇಶ ಗಾಧಾರಿ ಅಧ್ಯಕ್ಷತೆ ವಹಿಸಿದ್ದರು. <br /> <br /> ಜಿಲ್ಲಾ ಪಂಚಾಯಿತಿ ಸದಸ್ಯೆ ಅನ್ನಪೂರ್ಣಮ್ಮ ವಾಲ್ಮೀಕಿ, ಅಂಬಮ್ಮ ತಳವಾರ, ವಕೀಲರಾದ ಎಂ.ಎಂ. ಹಿರೇಮಠ, ಬಿ.ಎಂ. ದಂಡಿನ, ಬಿ.ಶರಣಪ್ಪ, ಪರಸಪ್ಪ, ಎ.ಎಚ್.ಪಲ್ಲೇದ, ಪ್ರಗತಿಪರ ರೈತ ಶರಣಗೌಡ, ವೈ.ಜೆ. ಪೂಜಾರ, ಶೇಖದಾದೂ, ಗ್ರಾಮ ಪಂಚಾಯಿತಿ ಸದಸ್ಯರು ವೇದಿಕೆಯಲ್ಲಿದ್ದರು.<br /> <br /> ಬಸವರಾಜ ನಿರೂಪಿಸಿದರು. ಯಲ್ಲಮ್ಮ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>