<p><strong>ಕೊಪ್ಪಳ: </strong> ಉತ್ತರ ಭಾರತದ ಕಡೆಗೆ ಪ್ರವಾಸ ಹೊರಟಿದ್ದ ಇ್ಲ್ಲಲಿಗೆ ಸಮೀಪದ ಭಾಗ್ಯನಗರ ಆಂಜನೇಯ ಬಡಾವಣೆಯ ನಿವಾಸಿ ಜೆಸ್ಕಾಂನ ನಿವೃತ್ತ ಎಂಜಿನಿಯರ್ ಗೋವಿಂದರಾವ್ ಮತ್ತು ಕುಟುಂಬ ಬದರಿನಾಥದ ಆಶ್ರಮದಲ್ಲೇ ಉಳಿದುಕೊಂಡಿದೆ.<br /> <br /> ಮೇ 30ರಂದು ಉತ್ತರ ಭಾರತದ ಕಡೆಗೆ ಪ್ರವಾಸ ಹೊರಟಿದ್ದ ಕುಟುಂಬದ ಐವರು ಸದಸ್ಯರು ಅಲ್ಲಿ ಸಂಭವಿಸಿದ ಪ್ರವಾಹದ ಹಿನ್ನೆಲೆಯಲ್ಲಿ ಬದರಿನಾಥದ ಆಶ್ರಮದಲ್ಲೇ ಉಳಿಯಬೇಕಾಯಿತು.<br /> <br /> ಅವರನ್ನು ವಾಪಸ್ ಕರೆತರುವ ಬಗ್ಗೆ ಇನ್ನೂ ಯಾವುದೇ ಪ್ರಯತ್ನಗಳು ಸಫಲವಾಗುತ್ತಿಲ್ಲ. ಅಲ್ಲಿ ಸೂಕ್ತ ಆಹಾರ, ವಿದ್ಯುತ್, ಔಷಧ ಪೂರೈಕೆ ಆಗದೆ ಯಾತ್ರಿಗಳು ಪರದಾಟ ಅನುಭವಿಸುತ್ತಿದ್ದಾರೆ. ರಸ್ತೆ ಸಂಚಾರ ಸಂಪೂರ್ಣ ಹದಗೆಟ್ಟಿದೆ. ವಾಪಸ್ ಬರಲು ಹೆಲಿಕಾಪ್ಟರ್ ಮೂಲಕ ಮಾತ್ರ ಸಾಧ್ಯ. ಆ ವ್ಯವಸ್ಥೆ ಇನ್ನೂ ಆಗಿಲ್ಲ ಎಂದು ಅವರ ಪುತ್ರ ಪ್ರಕಾಶ್ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೊಪ್ಪಳ: </strong> ಉತ್ತರ ಭಾರತದ ಕಡೆಗೆ ಪ್ರವಾಸ ಹೊರಟಿದ್ದ ಇ್ಲ್ಲಲಿಗೆ ಸಮೀಪದ ಭಾಗ್ಯನಗರ ಆಂಜನೇಯ ಬಡಾವಣೆಯ ನಿವಾಸಿ ಜೆಸ್ಕಾಂನ ನಿವೃತ್ತ ಎಂಜಿನಿಯರ್ ಗೋವಿಂದರಾವ್ ಮತ್ತು ಕುಟುಂಬ ಬದರಿನಾಥದ ಆಶ್ರಮದಲ್ಲೇ ಉಳಿದುಕೊಂಡಿದೆ.<br /> <br /> ಮೇ 30ರಂದು ಉತ್ತರ ಭಾರತದ ಕಡೆಗೆ ಪ್ರವಾಸ ಹೊರಟಿದ್ದ ಕುಟುಂಬದ ಐವರು ಸದಸ್ಯರು ಅಲ್ಲಿ ಸಂಭವಿಸಿದ ಪ್ರವಾಹದ ಹಿನ್ನೆಲೆಯಲ್ಲಿ ಬದರಿನಾಥದ ಆಶ್ರಮದಲ್ಲೇ ಉಳಿಯಬೇಕಾಯಿತು.<br /> <br /> ಅವರನ್ನು ವಾಪಸ್ ಕರೆತರುವ ಬಗ್ಗೆ ಇನ್ನೂ ಯಾವುದೇ ಪ್ರಯತ್ನಗಳು ಸಫಲವಾಗುತ್ತಿಲ್ಲ. ಅಲ್ಲಿ ಸೂಕ್ತ ಆಹಾರ, ವಿದ್ಯುತ್, ಔಷಧ ಪೂರೈಕೆ ಆಗದೆ ಯಾತ್ರಿಗಳು ಪರದಾಟ ಅನುಭವಿಸುತ್ತಿದ್ದಾರೆ. ರಸ್ತೆ ಸಂಚಾರ ಸಂಪೂರ್ಣ ಹದಗೆಟ್ಟಿದೆ. ವಾಪಸ್ ಬರಲು ಹೆಲಿಕಾಪ್ಟರ್ ಮೂಲಕ ಮಾತ್ರ ಸಾಧ್ಯ. ಆ ವ್ಯವಸ್ಥೆ ಇನ್ನೂ ಆಗಿಲ್ಲ ಎಂದು ಅವರ ಪುತ್ರ ಪ್ರಕಾಶ್ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>