<p>ವಿಜಯಪುರ: ಸಾಮಾಜಿಕ ಕಳಕಳಿ ಇದ್ದಲ್ಲಿ ಸೇವಾ ಮನೋಭಾವ ಇರುತ್ತದೆ ಎಂದು ಸಾಹಿತಿ ಜರಗನಹಳ್ಳಿ ಶಿವಶಂಕರ್ ಅಭಿಪ್ರಾಯಪಟ್ಟರು.<br /> <br /> ಪಟ್ಟಣದ ನಗರೇಶ್ವರಸ್ವಾಮಿ ಪ್ರಾರ್ಥನಾ ಮಂದಿರದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಶ್ರಿಮತಿ ಸಾವಿತ್ರಮ್ಮ ಅವರ 4 ನೇ ವರ್ಷದ ಸ್ಮರಣೋತ್ಸವದ ಪ್ರಯುಕ್ತ ಸುಮಿತ್ರಮ್ಮ ಕೆ. ರುದ್ರಪ್ಪ ಧರ್ಮದತ್ತಿ ವತಿಯಿಂದ ಅಬಲ ಮಹಿಳೆಯರಿಗೆ ಹೊಲಿಗೆ ಯಂತ್ರಗಳ ವಿತರಣೆ ಹಾಗೂ ವೃದ್ಧರಿಗೆ ಆರ್ಥಿಕ ನೆರವು ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.<br /> <br /> ಎಲ್ಲವೂ ತನಗೇ ಬೇಕೆಂದು ಹಂಬಲಿಸುವ ಮನುಷ್ಯ ತನ್ನ ಆಸೆಗಳನ್ನು ಮಿತಿಯಲ್ಲಿಟ್ಟುಕೊಂಡು ಸಮಾಜದ ಒಳಿತಿಗಾಗಿ ಅಳಿಲು ಸೇವೆ ಮಾಡಬೇಕು. ದಾನ ಪಡೆದವನು ತಾನು ಪಡೆದ ದಾನವನ್ನು ಮುಂದೆ ಮತ್ತೊಬ್ಬರಿಗೆ ಕೊಡುವ ಪ್ರಜ್ಞೆಯನ್ನು ಬೆಳೆಸಿಕೊಳ್ಳುತ್ತಾನೆ ಎಂದರು.<br /> <br /> ಕಾರ್ಯಕ್ರಮ ಉದ್ಘಾಟಿಸಿದ ಊರಿನ ಹಿರಿಯರಾದ ಎ.ಎನ್.ರಾಮಬಸಪ್ಪ ಮಾತನಾಡಿ, ಸತ್ತ ನಂತರವೂ ನಾವು ಮಾಡಬಹುದಾದ ಪುಣ್ಯ ಕಾರ್ಯವೆಂದರೆ ದಾನ. ಧರ್ಮದತ್ತಿಗಳು ಅಬಲರಿಗಾಗಿ ಮಾಡುವ ಸಹಾಯ ನಿರಂತರವಾಗಿ ವ್ಯಕ್ತಿಯ ನಂತರವೂ ಅವರನ್ನು ಸ್ಮರಿಸುವಂತೆ ಮಾಡುತ್ತವೆ ಎಂದರು.<br /> <br /> ಹಿರಿಯ ಪತ್ರಕರ್ತ ಕೆ. ರುದ್ರಪ್ಪ ಮಾತನಾಡಿ, ಸಮಾಜದ ಒಳಿತಿಗಾಗಿ ಯಾವುದೇ ರೂಪದಲ್ಲಿ ಸಹಾಯ ಮಾಡಲು ಇಚ್ಛಿಸಿದರೂ ಅದು ಮನಸ್ಸಿಗೆ ಸಮಾಧಾನ ನೀಡುವಂತಿರಬೇಕು ಎಂದರು.<br /> <br /> ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪಟ್ಟಣದ ಹಿರಿಯ ಸಾಹಿತಿ ಎಂ.ವೀರಣ್ಣ ಮಾತನಾಡಿ, ಸರ್ಕಾರವು ಅಬಲರಿಗಾಗಿ ಮಾಡುವ ಸೇವೆಯನ್ನು ತಮ್ಮ ಆತ್ಮೀಯರ ಸ್ಮರಣೆಯ ಅಂಗವಾಗಿ ಧರ್ಮದತ್ತಿಯಿಂದ ಮಾಡುತ್ತಿರುವುದು ಶ್ಲಾಘನೀಯವೆಂದರು.<br /> <br /> ನಗರ್ತ ಮಹಿಳಾ ಸಂಘದ ಅಧ್ಯಕ್ಷೆ ಭಾರತಿ ಪ್ರಭುದೇವ್ ಮಾತನಾಡಿ, ಹೊಲಿಗೆ ಯಂತ್ರಗಳ ವಿತರಣೆಯು ಕಷ್ಟದಲ್ಲಿರುವ ಮಹಿಳೆಯರಿಗೆ ಸ್ವಾವಲಂಬಿಯಾಗಲು ಪ್ರೋತ್ಸಾಹದಾಯಕವಾಗಿದೆ ಎಂದು ತಿಳಿಸಿದರು.<br /> ವ್ಯವಸ್ಥಾಪಕ ಧರ್ಮದರ್ಶಿ ಕೆ.ರುದ್ರಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು.<br /> <br /> ಇದೇ ವೇಳೆ 20 ಮಂದಿ ವೃದ್ಧರಿಗೆ ಆರ್ಥಿಕ ನೆರವನ್ನು ಹಾಗೂ 12 ಮಹಿಳೆಯರಿಗೆ ಹೊಲಿಗೆ ಯಂತ್ರಗಳನ್ನು ವಿತರಿಸಿದರು.<br /> <br /> ಕಾರ್ಯಕ್ರಮದಲ್ಲಿ ರು.ಬಸಪ್ಪ, ಮಾತೃ ಸಂಸ್ಥೆ ಅಧ್ಯಕ್ಷ ಎಚ್.ಎಸ್. ಬಸವರಾಜ್, ದಯಾಶಂಕರ್, ಧರ್ಮದತ್ತಿ ಆಡಳಿತ ಮಂಡಳಿ ಸದಸ್ಯರಾದ ವೀಣಾ ಡಾ.ರವಿ, ಅನ್ನಪೂರ್ಣ ಶಂಕರ್, ಕೆ.ಸಿ. ಜಯಕುಮಾರ್, ಉಮಾ ಮಹೇಶ್ವರಿ ಮಲ್ಲಿಕಾರ್ಜುನ್ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ವಿಜಯಪುರ: ಸಾಮಾಜಿಕ ಕಳಕಳಿ ಇದ್ದಲ್ಲಿ ಸೇವಾ ಮನೋಭಾವ ಇರುತ್ತದೆ ಎಂದು ಸಾಹಿತಿ ಜರಗನಹಳ್ಳಿ ಶಿವಶಂಕರ್ ಅಭಿಪ್ರಾಯಪಟ್ಟರು.<br /> <br /> ಪಟ್ಟಣದ ನಗರೇಶ್ವರಸ್ವಾಮಿ ಪ್ರಾರ್ಥನಾ ಮಂದಿರದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಶ್ರಿಮತಿ ಸಾವಿತ್ರಮ್ಮ ಅವರ 4 ನೇ ವರ್ಷದ ಸ್ಮರಣೋತ್ಸವದ ಪ್ರಯುಕ್ತ ಸುಮಿತ್ರಮ್ಮ ಕೆ. ರುದ್ರಪ್ಪ ಧರ್ಮದತ್ತಿ ವತಿಯಿಂದ ಅಬಲ ಮಹಿಳೆಯರಿಗೆ ಹೊಲಿಗೆ ಯಂತ್ರಗಳ ವಿತರಣೆ ಹಾಗೂ ವೃದ್ಧರಿಗೆ ಆರ್ಥಿಕ ನೆರವು ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.<br /> <br /> ಎಲ್ಲವೂ ತನಗೇ ಬೇಕೆಂದು ಹಂಬಲಿಸುವ ಮನುಷ್ಯ ತನ್ನ ಆಸೆಗಳನ್ನು ಮಿತಿಯಲ್ಲಿಟ್ಟುಕೊಂಡು ಸಮಾಜದ ಒಳಿತಿಗಾಗಿ ಅಳಿಲು ಸೇವೆ ಮಾಡಬೇಕು. ದಾನ ಪಡೆದವನು ತಾನು ಪಡೆದ ದಾನವನ್ನು ಮುಂದೆ ಮತ್ತೊಬ್ಬರಿಗೆ ಕೊಡುವ ಪ್ರಜ್ಞೆಯನ್ನು ಬೆಳೆಸಿಕೊಳ್ಳುತ್ತಾನೆ ಎಂದರು.<br /> <br /> ಕಾರ್ಯಕ್ರಮ ಉದ್ಘಾಟಿಸಿದ ಊರಿನ ಹಿರಿಯರಾದ ಎ.ಎನ್.ರಾಮಬಸಪ್ಪ ಮಾತನಾಡಿ, ಸತ್ತ ನಂತರವೂ ನಾವು ಮಾಡಬಹುದಾದ ಪುಣ್ಯ ಕಾರ್ಯವೆಂದರೆ ದಾನ. ಧರ್ಮದತ್ತಿಗಳು ಅಬಲರಿಗಾಗಿ ಮಾಡುವ ಸಹಾಯ ನಿರಂತರವಾಗಿ ವ್ಯಕ್ತಿಯ ನಂತರವೂ ಅವರನ್ನು ಸ್ಮರಿಸುವಂತೆ ಮಾಡುತ್ತವೆ ಎಂದರು.<br /> <br /> ಹಿರಿಯ ಪತ್ರಕರ್ತ ಕೆ. ರುದ್ರಪ್ಪ ಮಾತನಾಡಿ, ಸಮಾಜದ ಒಳಿತಿಗಾಗಿ ಯಾವುದೇ ರೂಪದಲ್ಲಿ ಸಹಾಯ ಮಾಡಲು ಇಚ್ಛಿಸಿದರೂ ಅದು ಮನಸ್ಸಿಗೆ ಸಮಾಧಾನ ನೀಡುವಂತಿರಬೇಕು ಎಂದರು.<br /> <br /> ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪಟ್ಟಣದ ಹಿರಿಯ ಸಾಹಿತಿ ಎಂ.ವೀರಣ್ಣ ಮಾತನಾಡಿ, ಸರ್ಕಾರವು ಅಬಲರಿಗಾಗಿ ಮಾಡುವ ಸೇವೆಯನ್ನು ತಮ್ಮ ಆತ್ಮೀಯರ ಸ್ಮರಣೆಯ ಅಂಗವಾಗಿ ಧರ್ಮದತ್ತಿಯಿಂದ ಮಾಡುತ್ತಿರುವುದು ಶ್ಲಾಘನೀಯವೆಂದರು.<br /> <br /> ನಗರ್ತ ಮಹಿಳಾ ಸಂಘದ ಅಧ್ಯಕ್ಷೆ ಭಾರತಿ ಪ್ರಭುದೇವ್ ಮಾತನಾಡಿ, ಹೊಲಿಗೆ ಯಂತ್ರಗಳ ವಿತರಣೆಯು ಕಷ್ಟದಲ್ಲಿರುವ ಮಹಿಳೆಯರಿಗೆ ಸ್ವಾವಲಂಬಿಯಾಗಲು ಪ್ರೋತ್ಸಾಹದಾಯಕವಾಗಿದೆ ಎಂದು ತಿಳಿಸಿದರು.<br /> ವ್ಯವಸ್ಥಾಪಕ ಧರ್ಮದರ್ಶಿ ಕೆ.ರುದ್ರಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು.<br /> <br /> ಇದೇ ವೇಳೆ 20 ಮಂದಿ ವೃದ್ಧರಿಗೆ ಆರ್ಥಿಕ ನೆರವನ್ನು ಹಾಗೂ 12 ಮಹಿಳೆಯರಿಗೆ ಹೊಲಿಗೆ ಯಂತ್ರಗಳನ್ನು ವಿತರಿಸಿದರು.<br /> <br /> ಕಾರ್ಯಕ್ರಮದಲ್ಲಿ ರು.ಬಸಪ್ಪ, ಮಾತೃ ಸಂಸ್ಥೆ ಅಧ್ಯಕ್ಷ ಎಚ್.ಎಸ್. ಬಸವರಾಜ್, ದಯಾಶಂಕರ್, ಧರ್ಮದತ್ತಿ ಆಡಳಿತ ಮಂಡಳಿ ಸದಸ್ಯರಾದ ವೀಣಾ ಡಾ.ರವಿ, ಅನ್ನಪೂರ್ಣ ಶಂಕರ್, ಕೆ.ಸಿ. ಜಯಕುಮಾರ್, ಉಮಾ ಮಹೇಶ್ವರಿ ಮಲ್ಲಿಕಾರ್ಜುನ್ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>