<p><strong>ನವದೆಹಲಿ (ಪಿಟಿಐ):</strong> ಕ್ರಿಕೆಟಿಗ ಯುವರಾಜ್ ಸಿಂಗ್ ಅವರಿಗೆ ನೀಡಲಾಗುತ್ತಿದ್ದ ಕಿಮೋಥೆರಪಿ ಚಿಕಿತ್ಸೆ ಪೂರ್ಣಗೊಂಡಿದ್ದು, ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. <br /> <br /> ಹಾಗಾಗಿ ಯುವಿ ಈಗ ತುಂಬಾ ಉತ್ಸಾಹಿತರಾಗಿದ್ದಾರೆ. ಅವರ ಮೂರನೇ ಹಾಗೂ ಕೊನೆಯ ಕಿಮೋಥೆರಪಿ ಚಿಕಿತ್ಸೆ ಭಾನುವಾರ ಕೊನೆಗೊಂಡಿತು. ಶ್ವಾಸಕೋಶದ ನಡುವೆ ಆಗಿದ್ದ ಗೆಡ್ಡೆ ಕರಗಿಸಲು ಅಮೆರಿಕದ ಬಾಸ್ಟನ್ನ ಕ್ಯಾನ್ಸರ್ ರಿಸರ್ಚ್ ಇನ್ಸ್ಟಿಟ್ಯೂಟ್ನಲ್ಲಿ ಅವರು ಕಿಮೋಥೆರಪಿ ಚಿಕಿತ್ಸೆ ಪಡೆಯುತ್ತ್ದ್ದಿದರು. <br /> <br /> ಬಿಡುಗಡೆಯಾದ ಈ ಸಂತಸವನ್ನು ಅವರು ಟ್ವಿಟರ್ ಮೂಲಕ ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. `ಮೂರನೇ ಕಿಮೋಥೆರಪಿ ಚಿಕಿತ್ಸೆ ಮುಗಿದಿದೆ. ಈಗ ನಾನು ಆಸ್ಪತ್ರೆಯಿಂದ ಹೊರಬಂದಿದ್ದೇನೆ. ಇನ್ನು ಚೇತರಿಕೆ ಹಾದಿ ಶುರುವಾಗಲಿದೆ. ಸ್ವದೇಶಕ್ಕೆ ತೆರಳಲು ಮನಸ್ಸು ತುಡಿಯುತ್ತಿದೆ~ ಎಂದಿದ್ದಾರೆ.<br /> <br /> `ನೀವು ತೋರಿಸಿದ ಪ್ರೀತಿಗೆ ನನ್ನ ಧನ್ಯವಾದಗಳು. ಅದು ನನ್ನಲ್ಲಿ ವಿಶ್ವಾಸ ತುಂಬಿತು. ಚಿಕಿತ್ಸೆಗೆ ಸ್ಪಂದಿಸಲು ಸಹಕಾರಿಯಾಯಿತು~ ಎಂದು ಯುವರಾಜ್ ತಿಳಿಸಿದ್ದಾರೆ. ಈ ಕ್ರಿಕೆಟ್ ಆಟಗಾರನ ಶ್ವಾಸಕೋಶದ ಗೆಡ್ಡೆಯು ಮೊದಲ ಸುತ್ತಿನ ಚಿಕಿತ್ಸೆಯಲ್ಲಿಯೇ ಸಂಪೂರ್ಣವಾಗಿ ಹೋಗಿದೆ. ಅದನ್ನು ಈ ಮೊದಲೇ ವೈದ್ಯರು ಖಚಿತಪಡಿಸಿದ್ದರು. ವೈದ್ಯರ ಪ್ರಕಾರ ಮೇ ಮೊದಲ ವಾರದಲ್ಲಿ ಯುವರಾಜ್ ಕ್ರೀಡಾಂಗಣಕ್ಕೆ ಇಳಿಯಬಹುದು. <br /> <br /> ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಶತಕಗಳ ಶತಕ ಪೂರೈಸಿದ ಸಚಿನ್ ತೆಂಡೂಲ್ಕರ್ ಅವರನ್ನು ಯುವಿ ಅಭಿನಂದಿಸಿದ್ದಾರೆ. `ತುಂಬಾ ಖುಷಿಯಾಗಿದೆ. ಆ ಸಂದರ್ಭದಲ್ಲಿ ನಾನೂ ಭಾವುಕನಾದೆ. ಅವರ ಸಾಧನೆಗಳು ಅದ್ಭುತ. ಅದನ್ನು ಮತ್ತೊಬ್ಬರಿಗೆ ಸಾಧಿಸಲು ಅಸಾಧ್ಯ~ ಎಂದು ಟ್ವಿಟರ್ ಮೂಲಕ ತಿಳಿಸಿದ್ದಾರೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ (ಪಿಟಿಐ):</strong> ಕ್ರಿಕೆಟಿಗ ಯುವರಾಜ್ ಸಿಂಗ್ ಅವರಿಗೆ ನೀಡಲಾಗುತ್ತಿದ್ದ ಕಿಮೋಥೆರಪಿ ಚಿಕಿತ್ಸೆ ಪೂರ್ಣಗೊಂಡಿದ್ದು, ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. <br /> <br /> ಹಾಗಾಗಿ ಯುವಿ ಈಗ ತುಂಬಾ ಉತ್ಸಾಹಿತರಾಗಿದ್ದಾರೆ. ಅವರ ಮೂರನೇ ಹಾಗೂ ಕೊನೆಯ ಕಿಮೋಥೆರಪಿ ಚಿಕಿತ್ಸೆ ಭಾನುವಾರ ಕೊನೆಗೊಂಡಿತು. ಶ್ವಾಸಕೋಶದ ನಡುವೆ ಆಗಿದ್ದ ಗೆಡ್ಡೆ ಕರಗಿಸಲು ಅಮೆರಿಕದ ಬಾಸ್ಟನ್ನ ಕ್ಯಾನ್ಸರ್ ರಿಸರ್ಚ್ ಇನ್ಸ್ಟಿಟ್ಯೂಟ್ನಲ್ಲಿ ಅವರು ಕಿಮೋಥೆರಪಿ ಚಿಕಿತ್ಸೆ ಪಡೆಯುತ್ತ್ದ್ದಿದರು. <br /> <br /> ಬಿಡುಗಡೆಯಾದ ಈ ಸಂತಸವನ್ನು ಅವರು ಟ್ವಿಟರ್ ಮೂಲಕ ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. `ಮೂರನೇ ಕಿಮೋಥೆರಪಿ ಚಿಕಿತ್ಸೆ ಮುಗಿದಿದೆ. ಈಗ ನಾನು ಆಸ್ಪತ್ರೆಯಿಂದ ಹೊರಬಂದಿದ್ದೇನೆ. ಇನ್ನು ಚೇತರಿಕೆ ಹಾದಿ ಶುರುವಾಗಲಿದೆ. ಸ್ವದೇಶಕ್ಕೆ ತೆರಳಲು ಮನಸ್ಸು ತುಡಿಯುತ್ತಿದೆ~ ಎಂದಿದ್ದಾರೆ.<br /> <br /> `ನೀವು ತೋರಿಸಿದ ಪ್ರೀತಿಗೆ ನನ್ನ ಧನ್ಯವಾದಗಳು. ಅದು ನನ್ನಲ್ಲಿ ವಿಶ್ವಾಸ ತುಂಬಿತು. ಚಿಕಿತ್ಸೆಗೆ ಸ್ಪಂದಿಸಲು ಸಹಕಾರಿಯಾಯಿತು~ ಎಂದು ಯುವರಾಜ್ ತಿಳಿಸಿದ್ದಾರೆ. ಈ ಕ್ರಿಕೆಟ್ ಆಟಗಾರನ ಶ್ವಾಸಕೋಶದ ಗೆಡ್ಡೆಯು ಮೊದಲ ಸುತ್ತಿನ ಚಿಕಿತ್ಸೆಯಲ್ಲಿಯೇ ಸಂಪೂರ್ಣವಾಗಿ ಹೋಗಿದೆ. ಅದನ್ನು ಈ ಮೊದಲೇ ವೈದ್ಯರು ಖಚಿತಪಡಿಸಿದ್ದರು. ವೈದ್ಯರ ಪ್ರಕಾರ ಮೇ ಮೊದಲ ವಾರದಲ್ಲಿ ಯುವರಾಜ್ ಕ್ರೀಡಾಂಗಣಕ್ಕೆ ಇಳಿಯಬಹುದು. <br /> <br /> ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಶತಕಗಳ ಶತಕ ಪೂರೈಸಿದ ಸಚಿನ್ ತೆಂಡೂಲ್ಕರ್ ಅವರನ್ನು ಯುವಿ ಅಭಿನಂದಿಸಿದ್ದಾರೆ. `ತುಂಬಾ ಖುಷಿಯಾಗಿದೆ. ಆ ಸಂದರ್ಭದಲ್ಲಿ ನಾನೂ ಭಾವುಕನಾದೆ. ಅವರ ಸಾಧನೆಗಳು ಅದ್ಭುತ. ಅದನ್ನು ಮತ್ತೊಬ್ಬರಿಗೆ ಸಾಧಿಸಲು ಅಸಾಧ್ಯ~ ಎಂದು ಟ್ವಿಟರ್ ಮೂಲಕ ತಿಳಿಸಿದ್ದಾರೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>