<p><strong>ಸವದತ್ತಿ: </strong>`ನಾವು ದಿನನಿತ್ಯ ಉಪಯೋಗಿಸುವ ಆಹಾರ ಪದಾರ್ಥದಲ್ಲಿಯೂ ಕಲಬೆರಕೆ ಇದೆ. ತರಕಾರಿ ಹಾಗೂ ಹಣ್ಣುಗಳೂ ವಿಷಯುಕ್ತವಾಗಿದ್ದು, ಅವುಗಳನ್ನು ಉಪಯೋಗಿಸುವಾಗ ಅತ್ಯಂತ ಜಾಗ್ರತೆ ವಹಿಸುವುದು ಅವಶ್ಯವಿದೆ~ ಎಂದು ಸರ್ವಮಂಗಲಾ ಕಟ್ಟಿ ಹೇಳಿದರು.<br /> <br /> ಇಲ್ಲಿನ ಎಸ್.ವಿ.ಎಸ್. ಬೆಳ್ಳುಬ್ಬಿ ಮಹಾವಿದ್ಯಾಲಯದಲ್ಲಿ ಮಹಿಳಾ ಸಂಘ ಹಾಗೂ ಜೈಂಟ್ಸ್ ಸಹೇಲಿ ಗ್ರೂಪ್ನವರು ವಿಶ್ವವಿಜ್ಞಾನ ದಿನ ಪ್ರಯುಕ್ತ ಆಯೋಜಿಸಿದ್ದ `ಅಡುಗೆ ಮನೆಯಲ್ಲಿ ವಿಜ್ಞಾನ~ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, `ರೈತರು ಬೆಳೆಯುವ ಪ್ರತಿಯೊಂದು ಬೆಳೆಗೆ ಅತ್ಯಂತ ವಿಷಯುಕ್ತ ರಸಗೊಬ್ಬರ, ಔಷಧಿಗಳನ್ನು ಬಳಸುತ್ತಿದ್ದು, ಅದರಿಂದ ಸೇವಿಸುವ ಆಹಾರ ವಿಷಯುಕ್ತವಾಗಿದೆ~ ಎಂದರು.<br /> <br /> ಪ್ರಭಾರಿ ಪ್ರಾಚಾರ್ಯರಾದ ಎಸ್.ಬಿ. ಕಿಲ್ಲೇದಾರ ಮಾತನಾಡಿ, `ಮಹಿಳೆಯರು ವೈಜ್ಞಾನಿಕ ಮನೋಭಾವ ಹೊಂದುವುದರೊಂದಿಗೆ ಹೆಚ್ಚು ಸಾತ್ವಿಕ ಆಹಾರ ತಯಾರಿಸುವಲ್ಲಿ ಆದ್ಯತೆ ನೀಡುವ ಅಗತ್ಯವಿದೆ~ ಎಂದರು.<br /> ರೇಣುಕಾ ಸಹೇಲಿ ಅಧ್ಯಕ್ಷೆ ಶಶಿಕಲಾ ಹಿರೇಮಠ, ಡಾ. ಅರುಂಧತಿ ಬದಾಮಿ, ಡಾ. ಗೀತಾ ಖರಾಡೆ, ಸುಮಾ ಯಡಾಲ, ಪ್ರೊ. ಸಂಜನಾ ಹೊಳಿಮಠ, ಪ್ರೊ. ಸಾವಿತ್ರಿ ಕುರಬೇಟ ಉಪಸ್ಥಿತರಿದ್ದರು.<br /> <br /> ಸೌಮ್ಯಾ ದೈವಜ್ಞ, ಸೈರಾಜ ಬೂದ್ಲೇಖಾನ ಪ್ರಾರ್ಥನೆ ಹಾಡಿದರು. ಜಯಶ್ರೀ ಕುರುವಿಕೊಪ್ಪ ಸ್ವಾಗತಿಸಿದರು. ಸಾವಿತ್ರಿ ಹಿರೇಮಠ ಪರಿಚಯಿಸಿದರು. ನೀಲಾಂಬಿಕಾ ಪ್ರಭುನವರ ನಿರೂಪಿಸಿದರು. ಶಶಿಕಲಾ ಬಂಡಿ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸವದತ್ತಿ: </strong>`ನಾವು ದಿನನಿತ್ಯ ಉಪಯೋಗಿಸುವ ಆಹಾರ ಪದಾರ್ಥದಲ್ಲಿಯೂ ಕಲಬೆರಕೆ ಇದೆ. ತರಕಾರಿ ಹಾಗೂ ಹಣ್ಣುಗಳೂ ವಿಷಯುಕ್ತವಾಗಿದ್ದು, ಅವುಗಳನ್ನು ಉಪಯೋಗಿಸುವಾಗ ಅತ್ಯಂತ ಜಾಗ್ರತೆ ವಹಿಸುವುದು ಅವಶ್ಯವಿದೆ~ ಎಂದು ಸರ್ವಮಂಗಲಾ ಕಟ್ಟಿ ಹೇಳಿದರು.<br /> <br /> ಇಲ್ಲಿನ ಎಸ್.ವಿ.ಎಸ್. ಬೆಳ್ಳುಬ್ಬಿ ಮಹಾವಿದ್ಯಾಲಯದಲ್ಲಿ ಮಹಿಳಾ ಸಂಘ ಹಾಗೂ ಜೈಂಟ್ಸ್ ಸಹೇಲಿ ಗ್ರೂಪ್ನವರು ವಿಶ್ವವಿಜ್ಞಾನ ದಿನ ಪ್ರಯುಕ್ತ ಆಯೋಜಿಸಿದ್ದ `ಅಡುಗೆ ಮನೆಯಲ್ಲಿ ವಿಜ್ಞಾನ~ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, `ರೈತರು ಬೆಳೆಯುವ ಪ್ರತಿಯೊಂದು ಬೆಳೆಗೆ ಅತ್ಯಂತ ವಿಷಯುಕ್ತ ರಸಗೊಬ್ಬರ, ಔಷಧಿಗಳನ್ನು ಬಳಸುತ್ತಿದ್ದು, ಅದರಿಂದ ಸೇವಿಸುವ ಆಹಾರ ವಿಷಯುಕ್ತವಾಗಿದೆ~ ಎಂದರು.<br /> <br /> ಪ್ರಭಾರಿ ಪ್ರಾಚಾರ್ಯರಾದ ಎಸ್.ಬಿ. ಕಿಲ್ಲೇದಾರ ಮಾತನಾಡಿ, `ಮಹಿಳೆಯರು ವೈಜ್ಞಾನಿಕ ಮನೋಭಾವ ಹೊಂದುವುದರೊಂದಿಗೆ ಹೆಚ್ಚು ಸಾತ್ವಿಕ ಆಹಾರ ತಯಾರಿಸುವಲ್ಲಿ ಆದ್ಯತೆ ನೀಡುವ ಅಗತ್ಯವಿದೆ~ ಎಂದರು.<br /> ರೇಣುಕಾ ಸಹೇಲಿ ಅಧ್ಯಕ್ಷೆ ಶಶಿಕಲಾ ಹಿರೇಮಠ, ಡಾ. ಅರುಂಧತಿ ಬದಾಮಿ, ಡಾ. ಗೀತಾ ಖರಾಡೆ, ಸುಮಾ ಯಡಾಲ, ಪ್ರೊ. ಸಂಜನಾ ಹೊಳಿಮಠ, ಪ್ರೊ. ಸಾವಿತ್ರಿ ಕುರಬೇಟ ಉಪಸ್ಥಿತರಿದ್ದರು.<br /> <br /> ಸೌಮ್ಯಾ ದೈವಜ್ಞ, ಸೈರಾಜ ಬೂದ್ಲೇಖಾನ ಪ್ರಾರ್ಥನೆ ಹಾಡಿದರು. ಜಯಶ್ರೀ ಕುರುವಿಕೊಪ್ಪ ಸ್ವಾಗತಿಸಿದರು. ಸಾವಿತ್ರಿ ಹಿರೇಮಠ ಪರಿಚಯಿಸಿದರು. ನೀಲಾಂಬಿಕಾ ಪ್ರಭುನವರ ನಿರೂಪಿಸಿದರು. ಶಶಿಕಲಾ ಬಂಡಿ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>