<p><strong>ಬೆಂಗಳೂರು: </strong>`ಶ್ರೀಮಂತರು ಇಂಗ್ಲಿಷ್ ಮಾಧ್ಯಮ ಶಾಲೆಗಳಿಗೆ ಹೋಗಿ ಆಧುನಿಕತೆಯ ಸೊಕ್ಕು ಬೆಳೆಸಿಕೊಳ್ಳುತ್ತಿದ್ದಾರೆ. ಬಡವರ ಮಕ್ಕಳು ಕನ್ನಡ ಮಾಧ್ಯಮ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತ ಕೀಳರಿಮೆ ಬೆಳೆಸಿಕೊಳ್ಳುತ್ತಿದ್ದಾರೆ. ಒಂದೇ ನಾಡಿನಲ್ಲಿ ಎರಡು ರೀತಿಯ ನಾಗರಿಕರನ್ನು ಬೆಳೆಸುತ್ತಿದ್ದೇವೆ. ಇದು ಸರಿಯಾ? ನಮಗೆ ನಾಚಿಕೆಯೂ ಆಗುತ್ತಿಲ್ಲವಾ?~<br /> <br /> - ಈ ಖಡಕ್ ಪ್ರಶ್ನೆಗಳನ್ನು ಕೇಳಿದವರು ಜ್ಞಾನಪೀಠ ಪ್ರಶಸ್ತಿಗೆ ಆಯ್ಕೆ ಆಗಿರುವ ಸಾಹಿತಿ ಡಾ. ಚಂದ್ರಶೇಖರ ಕಂಬಾರರು. ಬೆಂಗಳೂರು ಪ್ರೆಸ್ ಕ್ಲಬ್ ಶುಕ್ರವಾರ ಆಯೋಜಿಸಿದ್ದ ಸಂವಾದದಲ್ಲಿ ಮಾತನಾಡಿದ ಕಂಬಾರರು, `ಇಂಗ್ಲಿಷ್ ಮಾಧ್ಯಮದಲ್ಲೇ ಓದಿಸಿ ನಮ್ಮ ಮಕ್ಕಳನ್ನು ಪರಕೀಯರನ್ನಾಗಿಸುವುದು ಬೇಡ. ಅವರಿಗೆ ಕನ್ನಡ ಮಾಧ್ಯಮದಲ್ಲೇ ಶಿಕ್ಷಣ ನೀಡಿ ಸ್ವಕೀಯರನ್ನಾಗಿಸೋಣ~ ಎಂದರು.<br /> <br /> `ರಾಜ್ಯದಲ್ಲಿ ಒಂದರಿಂದ ಹತ್ತನೆಯ ತರಗತಿವರೆಗಿನ ಶಿಕ್ಷಣದ ಜವಾಬ್ದಾರಿಯನ್ನು ಸರ್ಕಾರವೇ ವಹಿಸಿಕೊಳ್ಳಲಿ. ಹತ್ತನೇ ತರಗತಿವರೆಗೆ ಕನ್ನಡವೇ ಶಿಕ್ಷಣ ಮಾಧ್ಯಮವಾಗಲಿ. ಕನ್ನಡದ ಮೂಲಕ ಇಂಗ್ಲಿಷ್ ಬೋಧನೆ ನಡೆಯಲಿ. ಪಿಯುಸಿ ಮತ್ತು ನಂತರದ ಶಿಕ್ಷಣವನ್ನು ಬೇಕಿದ್ದರೆ ಖಾಸಗಿಯವರಿಗೆ ನೀಡಲಿ~ ಎಂದರು.</p>.<table align="right" border="2" cellpadding="2" cellspacing="2" width="300"> <tbody> <tr> <td bgcolor="#000000" style="text-align: center"><span style="color: #ffffff"><strong>ಕಂಬಾರರು ಹೇಳಿದ್ದು...</strong></span></td> </tr> <tr> <td bgcolor="#f2f0f0"><span style="font-size: small">ಸಂವಾದದಲ್ಲಿ ಕಂಬಾರರು ಒಂದು ತಾಸಿಗೂ ಹೆಚ್ಚು ಕಾಲ ಮಾತನಾಡಿದರು. `ನಿಮಗೆ ಅತ್ಯಂತ ಸಂತಸ ತಂದಿದ್ದು ಯಾವುದು?~ ಎಂದು ಕೇಳಿದಾಗ, `ಈಗ ದೊರೆತಿರುವ ಪ್ರಶಸ್ತಿ~ ಎಂದು ಮುಗುಳ್ನಕ್ಕರು. <br /> <br /> `ಇದಲ್ಲದೆ ಬೇರೆ ಯಾವುದಾದರೂ ಪ್ರಶಸ್ತಿ?~ ಎಂದು ಕೇಳಿದಾಗ, `ಗೋಪಾಲಕೃಷ್ಣ ಅಡಿಗರಿಗೆ ಲಭಿಸಿದ್ದ ಕಬೀರ್ ಸಮ್ಮಾನ್ ನನಗೂ ದೊರೆತಾಗ ತುಂಬ ಸಂತಸವಾಗಿತ್ತು~ ಎಂದರು.<br /> <br /> ಅವರು ಸಂವಾದದಲ್ಲಿ ಹೇಳಿದ ಕೆಲವು ಮಾತುಗಳ ಝಲಕ್ ಇಲ್ಲಿದೆ.<br /> <br /> ಬ್ರಾಹ್ಮಣ - ದಲಿತ ಎನ್ನದೆ ಉತ್ತರ ಕರ್ನಾಟಕದ ಅಸಂಖ್ಯ ಜನರಿಗೆ ಅಲ್ಲಿನ ಮಠಗಳು ಶಿಕ್ಷಣ ನೀಡಿವೆ.<br /> <br /> ಇಂದಿನ ಯುವಕರಲ್ಲಿ ಜಾತಿಯನ್ನು ಮೀರುವ ಪ್ರಜ್ಞೆ ಮೂಡುತ್ತಿದೆ.<br /> <br /> ವೇದಗಳಿಗೆ ಅವುಗಳಲ್ಲಿರುವ ಲಯ ಸೌಂದರ್ಯ ತಂದುಕೊಟ್ಟಿದೆ.<br /> <br /> ಯಕ್ಷಗಾನವೆಂಬ ಕಲೆಯೇ ಒಂದು ದೊಡ್ಡ ಪವಾಡ!<br /> <br /> ಕನ್ನಡದ ಕೃತಿಗಳು ಇಂಗ್ಲಿಷಿಗೆ ಅನುವಾದ ಆಗದಿದ್ದರೆ ನಾವೇಕೆ ಅಳಬೇಕು? ನಮಗೂ ಸ್ವಲ್ಪ ಸೊಕ್ಕು ಇರಬೇಕು!<br /> <br /> ಕೆಟ್ಟ ಅಭಿರುಚಿಯ ಚಲನಚಿತ್ರಗಳ ವಿರುದ್ಧ ಜನರೇ ಪ್ರತಿಭಟಿಸಬೇಕು.<br /> <br /> ಕವಿ-ಕಲಾವಿದನ ಪಟ್ಟವನ್ನು ಹಕ್ಕಿನ ನೆಲೆಯಲ್ಲಿ ಪಡೆಯಲಾಗದು.<br /> <br /> ನಮ್ಮ ಗ್ರಾಮ ಸಂಸ್ಕೃತಿಯ ಸ್ಥಿತಿ ಕುರಿತು ಯೋಚಿಸಿದರೆ ದುಃಖವಾಗುತ್ತದೆ.</span></td> </tr> </tbody> </table>.<p><br /> <strong>`ವಿದ್ಯೆಗಾಗಿ ಕನ್ನಡ~: </strong>ವಿಜ್ಞಾನ, ತಂತ್ರಜ್ಞಾನ ಸೇರಿದಂತೆ ಕನ್ನಡದ ಮೂಲಕವೇ ಶಿಕ್ಷಣ ನೀಡಬೇಕು. ಬಡವರು ಇಂಗ್ಲಿಷ್ ಕಲಿತು ಅವಕಾಶಗಳನ್ನು ಉಪಯೋಗಿಸಿಕೊಳ್ಳಬಾರದು ಎಂದು ಹೇಳುತ್ತಿಲ್ಲ. ಆದರೆ ಕಲಿಕೆ ಕನ್ನಡದ ಮೂಲಕ ಆಗಬೇಕು. ನೌಕರಿ ಸಿಗುತ್ತದೆ ಎಂದಾದರೆ ಚೀನಿ ಭಾಷೆಯನ್ನೂ ಕಲಿಸಲಿ, ವಿರೋಧವಿಲ್ಲ ಎಂದರು.<br /> ದೇಶದಲ್ಲಿ ಭಾಷೆಯ ಆಧಾರದ ಮೇಲೆ ರಾಜ್ಯಗಳ ರಚನೆಯಾದ ನಂತರವೂ ಆಯಾ ರಾಜ್ಯಗಳಲ್ಲಿ ಅಲ್ಲಿನ ಮಾತೃಭಾಷೆಯಲ್ಲಿ ಶಿಕ್ಷಣ ನೀಡಬಾರದು ಎನ್ನುವುದು ಸರಿಯಲ್ಲ ಎಂದರು.<br /> <br /> `ಎಂಟು ಸಾವಿರ ಶ್ಲೋಕಗಳಿದ್ದ ಮೂಲ ಮಹಾಭಾರತವನ್ನು ಲಕ್ಷ ಶ್ಲೋಕಗಳ ಮಹಾಕಾವ್ಯವಾಗಿಸುವ ಸೃಜನಶೀಲತೆ ಇದ್ದ ನಮ್ಮ ನಾಡು ಬ್ರಿಟಿಷರು ಬಂದ ನಂತರ ವಿಸ್ಮೃತಿಗೆ ಒಳಗಾಯಿತು. ಈ ವಿಸ್ಮೃತಿಯ ಕಾರಣದಿಂದ ಇಂಗ್ಲಿಷ್ ಭಾಷೆಗೆ ಜೋತುಬಿದ್ದೆವು. ಆಗ ನಾವು ತ್ಯಾಗಮಾಡಿದ ಸೃಜನಶೀಲತೆಯನ್ನು ಮರಳಿ ಪಡೆಯಬೇಕಾದ ಅಗತ್ಯವಿದೆ~ ಎಂದರು.</p>.<p><strong>`ನಾನು ಸೋತಿದ್ದೇನೆ!~: </strong>`ಕಂಪ್ಯೂಟರ್ನಲ್ಲಿ ಕನ್ನಡವನ್ನು ಪರಿಣಾಮಕಾರಿಯಾಗಿ ಅಳವಡಿಸುವಲ್ಲಿ ನಾನು ಸೋತಿದ್ದೇನೆ~ ಎಂದ ಕಂಬಾರರು, `ಈ ವಿಚಾರವಾಗಿ ನಾನು ಮತ್ತು ಕೆ.ಪಿ. ಪೂರ್ಣಚಂದ್ರ ತೇಜಸ್ವಿ 16 ಸಚಿವರನ್ನು ಭೇಟಿ ಮಾಡಿದ್ದೆವು. ಆದರೆ ಅವರು ನಮ್ಮನ್ನು ಕಂಬಳದ ಕೋಣಗಳಂತೆ ನೋಡಿದರು~ ಎಂದು ವಿಷಾದದ ನಗೆಚೆಲ್ಲಿದರು.<br /> <br /> ಆದರೆ ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಒಳ್ಳೆಯ ಸ್ಪಂದನೆ ತೋರಿದ್ದರು, ಈ ವಿಷಯದ ಕುರಿತು ಒಂದು ಸಮಿತಿಯನ್ನೂ ನೇಮಕ ಮಾಡಿದ್ದರು. ಈಗ ಆ ಸಮಿತಿಯ ವರದಿ ಎಲ್ಲೋ ಬಿದ್ದಿದೆ. ತಮಿಳು ತಂತ್ರಾಂಶಗಳ ಅಭಿವೃದ್ಧಿ ಬಗ್ಗೆ ವಿಶ್ವ ತಮಿಳು ಸಮ್ಮೇಳನದಲ್ಲಿ 138 ಸಂಶೋಧನಾ ಪ್ರಬಂಧಗಳನ್ನು ಮಂಡಿಸಲಾಯಿತು. ಅವನ್ನೆಲ್ಲ ಕಾರ್ಯರೂಪಕ್ಕೆ ತರುವ ಘೋಷಣೆಯೂ ಅಲ್ಲಿನ ಮುಖ್ಯಮಂತ್ರಿಗಳಿಂದ ಆಯಿತು. ಅವರು ತಂತ್ರಾಂಶ ಅಭಿವೃದ್ಧಿಯಲ್ಲಿ ಕನ್ನಡಿಗರಿಗಿಂತ 15 ವರ್ಷ ಮುಂದಿದ್ದಾರೆ ಎಂದರು.<br /> <br /> `ನಾನು ಸಮುದಾಯದ ಕವಿ. ಅವರ ಭಾಷೆ, ಅವರ ಅಗತ್ಯಗಳು ನನ್ನವೂ ಹೌದು. ಹಾಗಾಗಿ ನನಗೆ ಯಾವುದೇ ಇಸಂಗಳ ಅಗತ್ಯ ಕಾಣಲಿಲ್ಲ~ ಎಂದು ಉತ್ತರಿಸಿದರು.<br /> <br /> ಪ್ರೆಸ್ ಕ್ಲಬ್ ಅಧ್ಯಕ್ಷ ಎಂ.ಎ. ಪೊನ್ನಪ್ಪ, ಪ್ರಧಾನ ಕಾರ್ಯದರ್ಶಿ ಸದಾಶಿವ ಶೆಣೈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>`ಶ್ರೀಮಂತರು ಇಂಗ್ಲಿಷ್ ಮಾಧ್ಯಮ ಶಾಲೆಗಳಿಗೆ ಹೋಗಿ ಆಧುನಿಕತೆಯ ಸೊಕ್ಕು ಬೆಳೆಸಿಕೊಳ್ಳುತ್ತಿದ್ದಾರೆ. ಬಡವರ ಮಕ್ಕಳು ಕನ್ನಡ ಮಾಧ್ಯಮ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತ ಕೀಳರಿಮೆ ಬೆಳೆಸಿಕೊಳ್ಳುತ್ತಿದ್ದಾರೆ. ಒಂದೇ ನಾಡಿನಲ್ಲಿ ಎರಡು ರೀತಿಯ ನಾಗರಿಕರನ್ನು ಬೆಳೆಸುತ್ತಿದ್ದೇವೆ. ಇದು ಸರಿಯಾ? ನಮಗೆ ನಾಚಿಕೆಯೂ ಆಗುತ್ತಿಲ್ಲವಾ?~<br /> <br /> - ಈ ಖಡಕ್ ಪ್ರಶ್ನೆಗಳನ್ನು ಕೇಳಿದವರು ಜ್ಞಾನಪೀಠ ಪ್ರಶಸ್ತಿಗೆ ಆಯ್ಕೆ ಆಗಿರುವ ಸಾಹಿತಿ ಡಾ. ಚಂದ್ರಶೇಖರ ಕಂಬಾರರು. ಬೆಂಗಳೂರು ಪ್ರೆಸ್ ಕ್ಲಬ್ ಶುಕ್ರವಾರ ಆಯೋಜಿಸಿದ್ದ ಸಂವಾದದಲ್ಲಿ ಮಾತನಾಡಿದ ಕಂಬಾರರು, `ಇಂಗ್ಲಿಷ್ ಮಾಧ್ಯಮದಲ್ಲೇ ಓದಿಸಿ ನಮ್ಮ ಮಕ್ಕಳನ್ನು ಪರಕೀಯರನ್ನಾಗಿಸುವುದು ಬೇಡ. ಅವರಿಗೆ ಕನ್ನಡ ಮಾಧ್ಯಮದಲ್ಲೇ ಶಿಕ್ಷಣ ನೀಡಿ ಸ್ವಕೀಯರನ್ನಾಗಿಸೋಣ~ ಎಂದರು.<br /> <br /> `ರಾಜ್ಯದಲ್ಲಿ ಒಂದರಿಂದ ಹತ್ತನೆಯ ತರಗತಿವರೆಗಿನ ಶಿಕ್ಷಣದ ಜವಾಬ್ದಾರಿಯನ್ನು ಸರ್ಕಾರವೇ ವಹಿಸಿಕೊಳ್ಳಲಿ. ಹತ್ತನೇ ತರಗತಿವರೆಗೆ ಕನ್ನಡವೇ ಶಿಕ್ಷಣ ಮಾಧ್ಯಮವಾಗಲಿ. ಕನ್ನಡದ ಮೂಲಕ ಇಂಗ್ಲಿಷ್ ಬೋಧನೆ ನಡೆಯಲಿ. ಪಿಯುಸಿ ಮತ್ತು ನಂತರದ ಶಿಕ್ಷಣವನ್ನು ಬೇಕಿದ್ದರೆ ಖಾಸಗಿಯವರಿಗೆ ನೀಡಲಿ~ ಎಂದರು.</p>.<table align="right" border="2" cellpadding="2" cellspacing="2" width="300"> <tbody> <tr> <td bgcolor="#000000" style="text-align: center"><span style="color: #ffffff"><strong>ಕಂಬಾರರು ಹೇಳಿದ್ದು...</strong></span></td> </tr> <tr> <td bgcolor="#f2f0f0"><span style="font-size: small">ಸಂವಾದದಲ್ಲಿ ಕಂಬಾರರು ಒಂದು ತಾಸಿಗೂ ಹೆಚ್ಚು ಕಾಲ ಮಾತನಾಡಿದರು. `ನಿಮಗೆ ಅತ್ಯಂತ ಸಂತಸ ತಂದಿದ್ದು ಯಾವುದು?~ ಎಂದು ಕೇಳಿದಾಗ, `ಈಗ ದೊರೆತಿರುವ ಪ್ರಶಸ್ತಿ~ ಎಂದು ಮುಗುಳ್ನಕ್ಕರು. <br /> <br /> `ಇದಲ್ಲದೆ ಬೇರೆ ಯಾವುದಾದರೂ ಪ್ರಶಸ್ತಿ?~ ಎಂದು ಕೇಳಿದಾಗ, `ಗೋಪಾಲಕೃಷ್ಣ ಅಡಿಗರಿಗೆ ಲಭಿಸಿದ್ದ ಕಬೀರ್ ಸಮ್ಮಾನ್ ನನಗೂ ದೊರೆತಾಗ ತುಂಬ ಸಂತಸವಾಗಿತ್ತು~ ಎಂದರು.<br /> <br /> ಅವರು ಸಂವಾದದಲ್ಲಿ ಹೇಳಿದ ಕೆಲವು ಮಾತುಗಳ ಝಲಕ್ ಇಲ್ಲಿದೆ.<br /> <br /> ಬ್ರಾಹ್ಮಣ - ದಲಿತ ಎನ್ನದೆ ಉತ್ತರ ಕರ್ನಾಟಕದ ಅಸಂಖ್ಯ ಜನರಿಗೆ ಅಲ್ಲಿನ ಮಠಗಳು ಶಿಕ್ಷಣ ನೀಡಿವೆ.<br /> <br /> ಇಂದಿನ ಯುವಕರಲ್ಲಿ ಜಾತಿಯನ್ನು ಮೀರುವ ಪ್ರಜ್ಞೆ ಮೂಡುತ್ತಿದೆ.<br /> <br /> ವೇದಗಳಿಗೆ ಅವುಗಳಲ್ಲಿರುವ ಲಯ ಸೌಂದರ್ಯ ತಂದುಕೊಟ್ಟಿದೆ.<br /> <br /> ಯಕ್ಷಗಾನವೆಂಬ ಕಲೆಯೇ ಒಂದು ದೊಡ್ಡ ಪವಾಡ!<br /> <br /> ಕನ್ನಡದ ಕೃತಿಗಳು ಇಂಗ್ಲಿಷಿಗೆ ಅನುವಾದ ಆಗದಿದ್ದರೆ ನಾವೇಕೆ ಅಳಬೇಕು? ನಮಗೂ ಸ್ವಲ್ಪ ಸೊಕ್ಕು ಇರಬೇಕು!<br /> <br /> ಕೆಟ್ಟ ಅಭಿರುಚಿಯ ಚಲನಚಿತ್ರಗಳ ವಿರುದ್ಧ ಜನರೇ ಪ್ರತಿಭಟಿಸಬೇಕು.<br /> <br /> ಕವಿ-ಕಲಾವಿದನ ಪಟ್ಟವನ್ನು ಹಕ್ಕಿನ ನೆಲೆಯಲ್ಲಿ ಪಡೆಯಲಾಗದು.<br /> <br /> ನಮ್ಮ ಗ್ರಾಮ ಸಂಸ್ಕೃತಿಯ ಸ್ಥಿತಿ ಕುರಿತು ಯೋಚಿಸಿದರೆ ದುಃಖವಾಗುತ್ತದೆ.</span></td> </tr> </tbody> </table>.<p><br /> <strong>`ವಿದ್ಯೆಗಾಗಿ ಕನ್ನಡ~: </strong>ವಿಜ್ಞಾನ, ತಂತ್ರಜ್ಞಾನ ಸೇರಿದಂತೆ ಕನ್ನಡದ ಮೂಲಕವೇ ಶಿಕ್ಷಣ ನೀಡಬೇಕು. ಬಡವರು ಇಂಗ್ಲಿಷ್ ಕಲಿತು ಅವಕಾಶಗಳನ್ನು ಉಪಯೋಗಿಸಿಕೊಳ್ಳಬಾರದು ಎಂದು ಹೇಳುತ್ತಿಲ್ಲ. ಆದರೆ ಕಲಿಕೆ ಕನ್ನಡದ ಮೂಲಕ ಆಗಬೇಕು. ನೌಕರಿ ಸಿಗುತ್ತದೆ ಎಂದಾದರೆ ಚೀನಿ ಭಾಷೆಯನ್ನೂ ಕಲಿಸಲಿ, ವಿರೋಧವಿಲ್ಲ ಎಂದರು.<br /> ದೇಶದಲ್ಲಿ ಭಾಷೆಯ ಆಧಾರದ ಮೇಲೆ ರಾಜ್ಯಗಳ ರಚನೆಯಾದ ನಂತರವೂ ಆಯಾ ರಾಜ್ಯಗಳಲ್ಲಿ ಅಲ್ಲಿನ ಮಾತೃಭಾಷೆಯಲ್ಲಿ ಶಿಕ್ಷಣ ನೀಡಬಾರದು ಎನ್ನುವುದು ಸರಿಯಲ್ಲ ಎಂದರು.<br /> <br /> `ಎಂಟು ಸಾವಿರ ಶ್ಲೋಕಗಳಿದ್ದ ಮೂಲ ಮಹಾಭಾರತವನ್ನು ಲಕ್ಷ ಶ್ಲೋಕಗಳ ಮಹಾಕಾವ್ಯವಾಗಿಸುವ ಸೃಜನಶೀಲತೆ ಇದ್ದ ನಮ್ಮ ನಾಡು ಬ್ರಿಟಿಷರು ಬಂದ ನಂತರ ವಿಸ್ಮೃತಿಗೆ ಒಳಗಾಯಿತು. ಈ ವಿಸ್ಮೃತಿಯ ಕಾರಣದಿಂದ ಇಂಗ್ಲಿಷ್ ಭಾಷೆಗೆ ಜೋತುಬಿದ್ದೆವು. ಆಗ ನಾವು ತ್ಯಾಗಮಾಡಿದ ಸೃಜನಶೀಲತೆಯನ್ನು ಮರಳಿ ಪಡೆಯಬೇಕಾದ ಅಗತ್ಯವಿದೆ~ ಎಂದರು.</p>.<p><strong>`ನಾನು ಸೋತಿದ್ದೇನೆ!~: </strong>`ಕಂಪ್ಯೂಟರ್ನಲ್ಲಿ ಕನ್ನಡವನ್ನು ಪರಿಣಾಮಕಾರಿಯಾಗಿ ಅಳವಡಿಸುವಲ್ಲಿ ನಾನು ಸೋತಿದ್ದೇನೆ~ ಎಂದ ಕಂಬಾರರು, `ಈ ವಿಚಾರವಾಗಿ ನಾನು ಮತ್ತು ಕೆ.ಪಿ. ಪೂರ್ಣಚಂದ್ರ ತೇಜಸ್ವಿ 16 ಸಚಿವರನ್ನು ಭೇಟಿ ಮಾಡಿದ್ದೆವು. ಆದರೆ ಅವರು ನಮ್ಮನ್ನು ಕಂಬಳದ ಕೋಣಗಳಂತೆ ನೋಡಿದರು~ ಎಂದು ವಿಷಾದದ ನಗೆಚೆಲ್ಲಿದರು.<br /> <br /> ಆದರೆ ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಒಳ್ಳೆಯ ಸ್ಪಂದನೆ ತೋರಿದ್ದರು, ಈ ವಿಷಯದ ಕುರಿತು ಒಂದು ಸಮಿತಿಯನ್ನೂ ನೇಮಕ ಮಾಡಿದ್ದರು. ಈಗ ಆ ಸಮಿತಿಯ ವರದಿ ಎಲ್ಲೋ ಬಿದ್ದಿದೆ. ತಮಿಳು ತಂತ್ರಾಂಶಗಳ ಅಭಿವೃದ್ಧಿ ಬಗ್ಗೆ ವಿಶ್ವ ತಮಿಳು ಸಮ್ಮೇಳನದಲ್ಲಿ 138 ಸಂಶೋಧನಾ ಪ್ರಬಂಧಗಳನ್ನು ಮಂಡಿಸಲಾಯಿತು. ಅವನ್ನೆಲ್ಲ ಕಾರ್ಯರೂಪಕ್ಕೆ ತರುವ ಘೋಷಣೆಯೂ ಅಲ್ಲಿನ ಮುಖ್ಯಮಂತ್ರಿಗಳಿಂದ ಆಯಿತು. ಅವರು ತಂತ್ರಾಂಶ ಅಭಿವೃದ್ಧಿಯಲ್ಲಿ ಕನ್ನಡಿಗರಿಗಿಂತ 15 ವರ್ಷ ಮುಂದಿದ್ದಾರೆ ಎಂದರು.<br /> <br /> `ನಾನು ಸಮುದಾಯದ ಕವಿ. ಅವರ ಭಾಷೆ, ಅವರ ಅಗತ್ಯಗಳು ನನ್ನವೂ ಹೌದು. ಹಾಗಾಗಿ ನನಗೆ ಯಾವುದೇ ಇಸಂಗಳ ಅಗತ್ಯ ಕಾಣಲಿಲ್ಲ~ ಎಂದು ಉತ್ತರಿಸಿದರು.<br /> <br /> ಪ್ರೆಸ್ ಕ್ಲಬ್ ಅಧ್ಯಕ್ಷ ಎಂ.ಎ. ಪೊನ್ನಪ್ಪ, ಪ್ರಧಾನ ಕಾರ್ಯದರ್ಶಿ ಸದಾಶಿವ ಶೆಣೈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>