<p>ಚಿಕ್ಕಬಳ್ಳಾಪುರ: `ಇವತ್ತಿನ ದೇಶದ ಸ್ಥಿತಿ ನೋಡಿದರೆ, ತುಂಬಾ ನೋವಾಗುತ್ತದೆ. ನಾವು ಯಾಕಾದರೂ ಬದುಕಿದ್ದೆವೋ ಎಂದು ಅನ್ನಿಸುತ್ತದೆ. ನಮಗೆ ಯಾರೂ ಹೇಳೋರಿಲ್ಲ-ಕೇಳೋರಿಲ್ಲ. ದೇಶವು ರಾಮರಾಜ್ಯವಾಗುತ್ತದೆ ಎಂಬ ಭಾವನೆಯಲ್ಲಿ ಹೋರಾಟ ಮಾಡಿದೆವು. ಆದರೆ ಈಗಿನ ಪರಿಸ್ಥಿತಿ ನೋಡಿದರೆ, ದೇಶ ರಾಮರಾಜ್ಯ ಆಗುವುದರ ಬದಲು ರಾವಣರಾಜ್ಯ ಆಗಿದೆ~.<br /> <br /> ಹೀಗೆ ಮನದಾಳದ ಸಂಕಟ ತೋಡಿಕೊಂಡವರು ಸ್ವಾತಂತ್ರ್ಯ ಹೋರಾಟಗಾರ ಡಿ.ಎ.ವೆಂಕಟರಾಯರೆಡ್ಡಿ. ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಅವರು `ಪ್ರಜಾವಾಣಿ~ಯೊಂದಿಗೆ ಮಾತನಾಡಿ ದೇಶದ ಇಂದಿನ ಸ್ಥಿತಿಗತಿ ಬಗ್ಗೆ ವಿವರಿಸಿದರು.<br /> <br /> `ಹೋರಾಟದಲ್ಲಿ ತೊಡಗಿಕೊಂಡಿದ್ದ ನಾವು ದೇಶವನ್ನು ಹೀಗೆ ಕಟ್ಟಬೇಕು, ಹಾಗೆ ಮಾಡಬೇಕು ಎಂದೆಲ್ಲ ಕನಸು ಕಂಡಿದ್ದೆವು. ಆದರೆ ದೇಶದ ಇಂದಿನ ಪರಿಸ್ಥಿತಿ ನೋಡಿದರೆ, ಕನಸು ನನಸಾಗುವುದು ಕಷ್ಟವೆಂದು ಬೇಸರವಾಗುತ್ತದೆ. ಈಗಿನ ಭ್ರಷ್ಟಾಚಾರ, ಅನ್ಯಾಯ, ಅಕ್ರಮ ನೋಡಿದದರೆ ತುಂಬ ನೋವಾಗುತ್ತದೆ~ ಎಂದು ಅವರು ಹೇಳಿದರು.<br /> <br /> `ಸ್ವಾತಂತ್ರ್ಯ ಹೋರಾಟ ಮಾಡಿದ ನಮ್ಮನ್ನು ಯಾರೂ ಗೌರವಿಸುವುದಿಲ್ಲ. ನಮ್ಮ ಮಾತುಗಳನ್ನು ಕೇಳುವ ಸೌಜನ್ಯವನ್ನೂ ಸಹ ಯಾರು ತೋರುವುದಿಲ್ಲ. ಈ ಎಲ್ಲ ಸಂಗತಿಗಳಿಂದ ನಮ್ಮಂತಹರವರಿಗೆ ತುಂಬ ಬೇಸರವಾಗುತ್ತದೆ~ ಎಂದು ಅವರು ತಿಳಿಸಿದರು.<br /> <br /> ಮತ್ತೊಬ್ಬ ಸ್ವಾತಂತ್ರ್ಯ ಹೋರಾಟಗಾರ ಕೆ.ರಾಮಸ್ವಾಮಿಯವರು ಕೂಡ ಇದೇ ರೀತಿಯ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. `ಇಂದಿನ ಭ್ರಷ್ಟ ವ್ಯವಸ್ಥೆ ನೋಡಿದರೆ, ತುಂಬ ಅಸಹನೀಯ ಅನ್ನಿಸುತ್ತದೆ. ಇಂಥ ದುರ್ಗತಿ ನೋಡಲೆಂದೇ ನಾವು ಇನ್ನೂ ಬದುಕಿದ್ದೇವೆಯೇ ಎಂದು ಬೇಸರವಾಗುತ್ತದೆ~ ಎಂದು ಅವರು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಚಿಕ್ಕಬಳ್ಳಾಪುರ: `ಇವತ್ತಿನ ದೇಶದ ಸ್ಥಿತಿ ನೋಡಿದರೆ, ತುಂಬಾ ನೋವಾಗುತ್ತದೆ. ನಾವು ಯಾಕಾದರೂ ಬದುಕಿದ್ದೆವೋ ಎಂದು ಅನ್ನಿಸುತ್ತದೆ. ನಮಗೆ ಯಾರೂ ಹೇಳೋರಿಲ್ಲ-ಕೇಳೋರಿಲ್ಲ. ದೇಶವು ರಾಮರಾಜ್ಯವಾಗುತ್ತದೆ ಎಂಬ ಭಾವನೆಯಲ್ಲಿ ಹೋರಾಟ ಮಾಡಿದೆವು. ಆದರೆ ಈಗಿನ ಪರಿಸ್ಥಿತಿ ನೋಡಿದರೆ, ದೇಶ ರಾಮರಾಜ್ಯ ಆಗುವುದರ ಬದಲು ರಾವಣರಾಜ್ಯ ಆಗಿದೆ~.<br /> <br /> ಹೀಗೆ ಮನದಾಳದ ಸಂಕಟ ತೋಡಿಕೊಂಡವರು ಸ್ವಾತಂತ್ರ್ಯ ಹೋರಾಟಗಾರ ಡಿ.ಎ.ವೆಂಕಟರಾಯರೆಡ್ಡಿ. ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಅವರು `ಪ್ರಜಾವಾಣಿ~ಯೊಂದಿಗೆ ಮಾತನಾಡಿ ದೇಶದ ಇಂದಿನ ಸ್ಥಿತಿಗತಿ ಬಗ್ಗೆ ವಿವರಿಸಿದರು.<br /> <br /> `ಹೋರಾಟದಲ್ಲಿ ತೊಡಗಿಕೊಂಡಿದ್ದ ನಾವು ದೇಶವನ್ನು ಹೀಗೆ ಕಟ್ಟಬೇಕು, ಹಾಗೆ ಮಾಡಬೇಕು ಎಂದೆಲ್ಲ ಕನಸು ಕಂಡಿದ್ದೆವು. ಆದರೆ ದೇಶದ ಇಂದಿನ ಪರಿಸ್ಥಿತಿ ನೋಡಿದರೆ, ಕನಸು ನನಸಾಗುವುದು ಕಷ್ಟವೆಂದು ಬೇಸರವಾಗುತ್ತದೆ. ಈಗಿನ ಭ್ರಷ್ಟಾಚಾರ, ಅನ್ಯಾಯ, ಅಕ್ರಮ ನೋಡಿದದರೆ ತುಂಬ ನೋವಾಗುತ್ತದೆ~ ಎಂದು ಅವರು ಹೇಳಿದರು.<br /> <br /> `ಸ್ವಾತಂತ್ರ್ಯ ಹೋರಾಟ ಮಾಡಿದ ನಮ್ಮನ್ನು ಯಾರೂ ಗೌರವಿಸುವುದಿಲ್ಲ. ನಮ್ಮ ಮಾತುಗಳನ್ನು ಕೇಳುವ ಸೌಜನ್ಯವನ್ನೂ ಸಹ ಯಾರು ತೋರುವುದಿಲ್ಲ. ಈ ಎಲ್ಲ ಸಂಗತಿಗಳಿಂದ ನಮ್ಮಂತಹರವರಿಗೆ ತುಂಬ ಬೇಸರವಾಗುತ್ತದೆ~ ಎಂದು ಅವರು ತಿಳಿಸಿದರು.<br /> <br /> ಮತ್ತೊಬ್ಬ ಸ್ವಾತಂತ್ರ್ಯ ಹೋರಾಟಗಾರ ಕೆ.ರಾಮಸ್ವಾಮಿಯವರು ಕೂಡ ಇದೇ ರೀತಿಯ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. `ಇಂದಿನ ಭ್ರಷ್ಟ ವ್ಯವಸ್ಥೆ ನೋಡಿದರೆ, ತುಂಬ ಅಸಹನೀಯ ಅನ್ನಿಸುತ್ತದೆ. ಇಂಥ ದುರ್ಗತಿ ನೋಡಲೆಂದೇ ನಾವು ಇನ್ನೂ ಬದುಕಿದ್ದೇವೆಯೇ ಎಂದು ಬೇಸರವಾಗುತ್ತದೆ~ ಎಂದು ಅವರು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>