<p><strong>ಕೊಟ್ಟೂರು</strong>: ಪಟ್ಟಣದಲ್ಲಿನ ಉದ್ಯಾನವನಗಳಿಗೆ ಪಟ್ಟಣ ಪಂಚಾಯಿತಿಯು ಆವರಣಗೋಡೆ ನಿರ್ಮಿಸಿದೆ. ಆದರೆ, ಉದ್ಯಾನವನಗಳ ಸಮರ್ಪಕ ಅಭಿವೃದ್ಧಿಗೆ ಕ್ರಮ ಕೈಗೊಂಡಿಲ್ಲ ಎಂಬ ದೂರುಗಳು ಕೇಳಿ ಬರುತ್ತಿವೆ.<br /> <br /> ಪಟ್ಟಣದ ಬಸವೇಶ್ವರ ಬಡಾವಣೆ, ಎಲ್.ಬಿ. ಶಾಸ್ತ್ರಿ ಬಡಾವಣೆ, ಮರಿಕೊಟ್ಟೂರೇಶ್ವರ ಬಡಾವಣೆ, ವಿದ್ಯಾನಗರ, ನೇಕಾರ ಕಾಲೋನಿ ಸೇರಿದಂತೆ ವಿವಿಧ ಬಡಾವಣೆಗಳಲ್ಲಿರುವ ಉದ್ಯಾನವನಗಳಿಗೆ ಆವರಣಗೋಡೆ ನಿರ್ಮಿಸಲಾಗಿದೆ.<br /> <br /> ಆದರೆ, ಈ ಉದ್ಯಾನವನಗಳು ಜಾಲಿ ಗಿಡಗಳಿಂದಲೇ ತುಂಬಿವೆ. ಅಲ್ಲದೇ, ಹಂದಿ, ನಾಯಿಗಳ ತಾಣವಾಗಿ ಪರಿವರ್ತನೆಗೊಂಡಿರುವುದರಿಂದ ಸಾಕಷ್ಟು ತೊಂದರೆಯಾಗುತ್ತಿದೆ ಎಂದು ಈ ಉದ್ಯಾನವನಗಳ ಸುತ್ತಮುತ್ತ ವಾಸಿಸುವ ಜನರು ದೂರುತ್ತಿದ್ದಾರೆ.<br /> <br /> ಉದ್ಯಾನವನದಲ್ಲಿ ವಿದ್ಯುತ್ ದೀಪಗಳು, ನೀರಿನ ಸೌಲಭ್ಯ ಕಲ್ಪಿಸಬೇಕು. ಹೂ ಮತ್ತು ಅಲಂಕಾರಿಕ ಗಿಡಗಳನ್ನು ಬೆಳೆಸುವ ಮೂಲಕ ವಾಯು ವಿಹಾರ ಮತ್ತು ವಿಶ್ರಾಂತಿ ಪಡೆಯಲು ಅನುಕೂಲವಾಗುವಂತೆ ಅಭಿವೃದ್ಧಿಪಡಿಸಬೇಕು. ಜೊತೆಗೆ ಮಕ್ಕಳು ಆಟವಾಡುವಂತಹ ಸಾಧನಗಳನ್ನು ಅಳವಡಿಸಬೇಕು ಎಂಬುದೂ ಜನರ ಒತ್ತಾಯವಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೊಟ್ಟೂರು</strong>: ಪಟ್ಟಣದಲ್ಲಿನ ಉದ್ಯಾನವನಗಳಿಗೆ ಪಟ್ಟಣ ಪಂಚಾಯಿತಿಯು ಆವರಣಗೋಡೆ ನಿರ್ಮಿಸಿದೆ. ಆದರೆ, ಉದ್ಯಾನವನಗಳ ಸಮರ್ಪಕ ಅಭಿವೃದ್ಧಿಗೆ ಕ್ರಮ ಕೈಗೊಂಡಿಲ್ಲ ಎಂಬ ದೂರುಗಳು ಕೇಳಿ ಬರುತ್ತಿವೆ.<br /> <br /> ಪಟ್ಟಣದ ಬಸವೇಶ್ವರ ಬಡಾವಣೆ, ಎಲ್.ಬಿ. ಶಾಸ್ತ್ರಿ ಬಡಾವಣೆ, ಮರಿಕೊಟ್ಟೂರೇಶ್ವರ ಬಡಾವಣೆ, ವಿದ್ಯಾನಗರ, ನೇಕಾರ ಕಾಲೋನಿ ಸೇರಿದಂತೆ ವಿವಿಧ ಬಡಾವಣೆಗಳಲ್ಲಿರುವ ಉದ್ಯಾನವನಗಳಿಗೆ ಆವರಣಗೋಡೆ ನಿರ್ಮಿಸಲಾಗಿದೆ.<br /> <br /> ಆದರೆ, ಈ ಉದ್ಯಾನವನಗಳು ಜಾಲಿ ಗಿಡಗಳಿಂದಲೇ ತುಂಬಿವೆ. ಅಲ್ಲದೇ, ಹಂದಿ, ನಾಯಿಗಳ ತಾಣವಾಗಿ ಪರಿವರ್ತನೆಗೊಂಡಿರುವುದರಿಂದ ಸಾಕಷ್ಟು ತೊಂದರೆಯಾಗುತ್ತಿದೆ ಎಂದು ಈ ಉದ್ಯಾನವನಗಳ ಸುತ್ತಮುತ್ತ ವಾಸಿಸುವ ಜನರು ದೂರುತ್ತಿದ್ದಾರೆ.<br /> <br /> ಉದ್ಯಾನವನದಲ್ಲಿ ವಿದ್ಯುತ್ ದೀಪಗಳು, ನೀರಿನ ಸೌಲಭ್ಯ ಕಲ್ಪಿಸಬೇಕು. ಹೂ ಮತ್ತು ಅಲಂಕಾರಿಕ ಗಿಡಗಳನ್ನು ಬೆಳೆಸುವ ಮೂಲಕ ವಾಯು ವಿಹಾರ ಮತ್ತು ವಿಶ್ರಾಂತಿ ಪಡೆಯಲು ಅನುಕೂಲವಾಗುವಂತೆ ಅಭಿವೃದ್ಧಿಪಡಿಸಬೇಕು. ಜೊತೆಗೆ ಮಕ್ಕಳು ಆಟವಾಡುವಂತಹ ಸಾಧನಗಳನ್ನು ಅಳವಡಿಸಬೇಕು ಎಂಬುದೂ ಜನರ ಒತ್ತಾಯವಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>