<p>ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಹೈದರಾಬಾದ್ ಕರ್ನಾಟಕ ಪ್ರದೇಶದ ಸರ್ಕಾರಿ ಕಚೇರಿಗಳು ಮಧ್ಯಾಹ್ನ 1.30ರ ನಂತರ ಕಾರ್ಯ ನಿರ್ವಹಿಸುವುದಿಲ್ಲ. ಈ ಅವಧಿಯಲ್ಲಿ ಬಿಸಿಲು ಮತ್ತು ಸೆಖೆ ಜಾಸ್ತಿ ಎಂಬ ಕಾರಣದಿಂದ ರಾಜ್ಯ ಸರ್ಕಾರ ತನ್ನ ನೌಕರರಿಗೆ ವಿಶೇಷ ವಿನಾಯಿತಿ ನೀಡಿದೆ. ಆದರೆ ಈ ಸೌಲಭ್ಯ ಕೇಂದ್ರ ಸರ್ಕಾರಿ ಕಚೇರಿಗಳು, ಉದ್ದಿಮೆಗಳು, ರಾಷ್ಟ್ರೀಕೃತ, ಗ್ರಾಮೀಣ ಬ್ಯಾಂಕ್ಗಳ ಉದ್ಯೋಗಿಗಳಿಗೆ ಇಲ್ಲ! ಅವರು ಮನುಷ್ಯರಲ್ಲವೇ?<br /> <br /> ಬೆಳಗಿನ ಅವಧಿಯಲ್ಲಿ ಬಹಳಷ್ಟು ನೌಕರರು ಸರಿಯಾಗಿ ಸೇವೆ ಸಲ್ಲಿಸುವುದಿಲ್ಲ. ಅನೇಕರು ರೂಢಿಯಂತೆ 10-30ಕ್ಕೆ ಕಚೇರಿಗೆ ಬಂದು 1.30 ಕ್ಕೆ ಮನೆಗೆ ಹೋಗುತ್ತಾರೆ. ಕಚೇರಿ ಕೆಲಸಗಳಿಗಾಗಿ ದೂರದ ಹಳ್ಳಿಗಳಿಂದ ಜನ ಬರುಷ್ಟರಲ್ಲಿ ಅವು ಬಾಗಿಲು ಮುಚ್ಚಿರುತ್ತವೆ. <br /> <br /> ದುರದೃಷ್ಟದ ಸಂಗತಿ ಎಂದರೆ ಬಿಸಿಲು,ಮಳೆ ಲೆಕ್ಕಿಸದೆ ಹೊಲಗದ್ದೆಗಳಲ್ಲಿ ರೈತರು , ಕಾರ್ಮಿಕರು ದುಡಿಯುತ್ತಾರೆ. ಕಚೇರಿಗಳಲ್ಲಿ ಫ್ಯಾನ್ ಕೆಳಗೆ ಕೆಲಸ ಮಾಡುವ ನೌಕರಿಗೆ ಮಾತ್ರ ಬಿಸಿಲಿನ ತಾಪವೇ? ಇದೆಂಥ ತಾರತಮ್ಯ? ಸರ್ಕಾರಿ ನೌಕರರನ್ನು ಜೋಲಿಯಲ್ಲಿ ಹಾಕಿ ಲಾಲಿ ಹಾಡುವ ಇಂತಹ ವಿನಾಯಿತಿಗಳು ಇನ್ನೆಷ್ಟು ದಿನ ಮುಂದುವರೆಯಬೇಕು?</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಹೈದರಾಬಾದ್ ಕರ್ನಾಟಕ ಪ್ರದೇಶದ ಸರ್ಕಾರಿ ಕಚೇರಿಗಳು ಮಧ್ಯಾಹ್ನ 1.30ರ ನಂತರ ಕಾರ್ಯ ನಿರ್ವಹಿಸುವುದಿಲ್ಲ. ಈ ಅವಧಿಯಲ್ಲಿ ಬಿಸಿಲು ಮತ್ತು ಸೆಖೆ ಜಾಸ್ತಿ ಎಂಬ ಕಾರಣದಿಂದ ರಾಜ್ಯ ಸರ್ಕಾರ ತನ್ನ ನೌಕರರಿಗೆ ವಿಶೇಷ ವಿನಾಯಿತಿ ನೀಡಿದೆ. ಆದರೆ ಈ ಸೌಲಭ್ಯ ಕೇಂದ್ರ ಸರ್ಕಾರಿ ಕಚೇರಿಗಳು, ಉದ್ದಿಮೆಗಳು, ರಾಷ್ಟ್ರೀಕೃತ, ಗ್ರಾಮೀಣ ಬ್ಯಾಂಕ್ಗಳ ಉದ್ಯೋಗಿಗಳಿಗೆ ಇಲ್ಲ! ಅವರು ಮನುಷ್ಯರಲ್ಲವೇ?<br /> <br /> ಬೆಳಗಿನ ಅವಧಿಯಲ್ಲಿ ಬಹಳಷ್ಟು ನೌಕರರು ಸರಿಯಾಗಿ ಸೇವೆ ಸಲ್ಲಿಸುವುದಿಲ್ಲ. ಅನೇಕರು ರೂಢಿಯಂತೆ 10-30ಕ್ಕೆ ಕಚೇರಿಗೆ ಬಂದು 1.30 ಕ್ಕೆ ಮನೆಗೆ ಹೋಗುತ್ತಾರೆ. ಕಚೇರಿ ಕೆಲಸಗಳಿಗಾಗಿ ದೂರದ ಹಳ್ಳಿಗಳಿಂದ ಜನ ಬರುಷ್ಟರಲ್ಲಿ ಅವು ಬಾಗಿಲು ಮುಚ್ಚಿರುತ್ತವೆ. <br /> <br /> ದುರದೃಷ್ಟದ ಸಂಗತಿ ಎಂದರೆ ಬಿಸಿಲು,ಮಳೆ ಲೆಕ್ಕಿಸದೆ ಹೊಲಗದ್ದೆಗಳಲ್ಲಿ ರೈತರು , ಕಾರ್ಮಿಕರು ದುಡಿಯುತ್ತಾರೆ. ಕಚೇರಿಗಳಲ್ಲಿ ಫ್ಯಾನ್ ಕೆಳಗೆ ಕೆಲಸ ಮಾಡುವ ನೌಕರಿಗೆ ಮಾತ್ರ ಬಿಸಿಲಿನ ತಾಪವೇ? ಇದೆಂಥ ತಾರತಮ್ಯ? ಸರ್ಕಾರಿ ನೌಕರರನ್ನು ಜೋಲಿಯಲ್ಲಿ ಹಾಕಿ ಲಾಲಿ ಹಾಡುವ ಇಂತಹ ವಿನಾಯಿತಿಗಳು ಇನ್ನೆಷ್ಟು ದಿನ ಮುಂದುವರೆಯಬೇಕು?</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>