<p><strong>ಮುಂಬೈ (ಪಿಟಿಐ</strong>): ದೇಶದ ಪ್ರತಿಷ್ಠಿತ ಮಾಹಿತಿ ತಂತ್ರಜ್ಞಾನ ಸಂಸ್ಥೆ ಇನ್ಫೋಸಿಸ್ನ ಕಾರ್ಯನಿರ್ವಾಹಕ ಮುಖ್ಯಸ್ಥರಾಗಿ ಮತ್ತೆ ಎನ್.ಆರ್.ನಾರಾಯಣಮೂರ್ತಿ ಅವರು ಶನಿವಾರ ಆಯ್ಕೆಯಾಗಿದ್ದಾರೆ.<br /> <br /> ಇಲ್ಲಿ ಸಭೆ ಸೇರಿದ್ದ ನಿರ್ದೇಶಕ ಮಂಡಳಿಯು ಇನ್ಫೋಸಿಸ್ನ ಹೊಣೆಗಾರಿಕೆಯನ್ನು ಮತ್ತೆ ನಾರಾಯಣ ಮೂರ್ತಿ ಅವರ ಹೆಗಲಿಗೆ ಹಾಕುವ ತೀರ್ಮಾನ ಕೈಗೊಂಡಿತು.<br /> <br /> ಪ್ರಸ್ತುತ ಅಧ್ಯಕ್ಷರಾಗಿರುವ ಬ್ಯಾಂಕಿಂಗ್ ಪರಿಣತ ಕೆ.ವಿ. ಕಾಮತ್ ಅವರನ್ನು ಕೆಳಗಿಳಿಸಿ ಅವರ ಸ್ಥಾನಕ್ಕೆ ಮರಳಿ ನಾರಾಯಣಮೂರ್ತಿ ಅವರನ್ನು ನೇಮಿಸಲು ಮಂಡಳಿ ತೀರ್ಮಾನಿಸಿದೆ.<br /> <br /> ನಾರಾಯಣಮೂರ್ತಿ ಅವರನ್ನು ಕಾರ್ಯನಿರ್ವಾಹಕ ನಿರ್ದೇಶಕರು ಹಾಗೂ ಹೆಚ್ಚುವರಿ ನಿರ್ದೇಶಕರಾಗಿ ತತ್ಕ್ಷಣದಿಂಲೇ ಜಾರಿಗೆ ಬರುವಂತೆ ನೇಮಿಸಲಾಗಿದೆ. ನಿರ್ಗಮಿತ ಅಧ್ಯಕ್ಷ ಕೆ.ವಿ. ಕಾಮತ್ ಅವರನ್ನು ಸ್ವತಂತ್ರ ನಿರ್ದೇಶಕರನ್ನಾಗಿ ನೇಮಿಸಲಾಗಿದೆ.<br /> <br /> <a href="http://www.prajavani.net/article/%E0%B2%95%E0%B2%BE%E0%B2%AE%E0%B2%A4%E0%B3%8D%E2%80%8C%E0%B2%97%E0%B3%86-%E0%B2%87%E0%B2%A8%E0%B3%8D%E0%B2%AB%E0%B3%8B%E0%B2%B8%E0%B2%BF%E0%B2%B8%E0%B3%8D-%E0%B2%B9%E0%B3%8A%E0%B2%A3%E0%B3%86">ದೇಶದ ಅತಿದೊಡ್ಡ ಖಾಸಗಿ ಬ್ಯಾಂಕ್ ಐಸಿಐಸಿಐ ಬ್ಯಾಂಕ್ನ ಬೆಳವಣಿಗೆಯಲ್ಲಿ ಮಹತ್ತರ ಪಾತ್ರ ವಹಿಸಿದ್ದ ಬ್ಯಾಂಕಿಂಗ್ ಪರಿಣತ ಕೆ.ವಿ. ಕಾಮತ್ ಅವರನ್ನು 2011ರಲ್ಲಿ ಇನ್ಫೋಸಿಸ್ನ ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು.</a> ಆ ಸಮಯದಲ್ಲೆ ಕಂಪೆನಿಯ ಸಹ-ಸಂಸ್ಥಾಪಕ ನಾರಾಯಣ ಮೂರ್ತಿ ಅವರು ನಿವೃತ್ತಿ ಹೊಂದಿದ್ದರು. ಆದರೆ ಇದೀಗ ಮತ್ತೆ ನಾರಾಯಣಮೂರ್ತಿ ಅವರ ಹೆಗಲಿಗೆ ಪ್ರತಿಷ್ಥಿತ ಸಂಸ್ಥೆಯ ಹೊಣೆಗಾರಿಕೆಯನ್ನು ನಿರ್ದೇಶಕರ ಮಂಡಳಿ ನೀಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ (ಪಿಟಿಐ</strong>): ದೇಶದ ಪ್ರತಿಷ್ಠಿತ ಮಾಹಿತಿ ತಂತ್ರಜ್ಞಾನ ಸಂಸ್ಥೆ ಇನ್ಫೋಸಿಸ್ನ ಕಾರ್ಯನಿರ್ವಾಹಕ ಮುಖ್ಯಸ್ಥರಾಗಿ ಮತ್ತೆ ಎನ್.ಆರ್.ನಾರಾಯಣಮೂರ್ತಿ ಅವರು ಶನಿವಾರ ಆಯ್ಕೆಯಾಗಿದ್ದಾರೆ.<br /> <br /> ಇಲ್ಲಿ ಸಭೆ ಸೇರಿದ್ದ ನಿರ್ದೇಶಕ ಮಂಡಳಿಯು ಇನ್ಫೋಸಿಸ್ನ ಹೊಣೆಗಾರಿಕೆಯನ್ನು ಮತ್ತೆ ನಾರಾಯಣ ಮೂರ್ತಿ ಅವರ ಹೆಗಲಿಗೆ ಹಾಕುವ ತೀರ್ಮಾನ ಕೈಗೊಂಡಿತು.<br /> <br /> ಪ್ರಸ್ತುತ ಅಧ್ಯಕ್ಷರಾಗಿರುವ ಬ್ಯಾಂಕಿಂಗ್ ಪರಿಣತ ಕೆ.ವಿ. ಕಾಮತ್ ಅವರನ್ನು ಕೆಳಗಿಳಿಸಿ ಅವರ ಸ್ಥಾನಕ್ಕೆ ಮರಳಿ ನಾರಾಯಣಮೂರ್ತಿ ಅವರನ್ನು ನೇಮಿಸಲು ಮಂಡಳಿ ತೀರ್ಮಾನಿಸಿದೆ.<br /> <br /> ನಾರಾಯಣಮೂರ್ತಿ ಅವರನ್ನು ಕಾರ್ಯನಿರ್ವಾಹಕ ನಿರ್ದೇಶಕರು ಹಾಗೂ ಹೆಚ್ಚುವರಿ ನಿರ್ದೇಶಕರಾಗಿ ತತ್ಕ್ಷಣದಿಂಲೇ ಜಾರಿಗೆ ಬರುವಂತೆ ನೇಮಿಸಲಾಗಿದೆ. ನಿರ್ಗಮಿತ ಅಧ್ಯಕ್ಷ ಕೆ.ವಿ. ಕಾಮತ್ ಅವರನ್ನು ಸ್ವತಂತ್ರ ನಿರ್ದೇಶಕರನ್ನಾಗಿ ನೇಮಿಸಲಾಗಿದೆ.<br /> <br /> <a href="http://www.prajavani.net/article/%E0%B2%95%E0%B2%BE%E0%B2%AE%E0%B2%A4%E0%B3%8D%E2%80%8C%E0%B2%97%E0%B3%86-%E0%B2%87%E0%B2%A8%E0%B3%8D%E0%B2%AB%E0%B3%8B%E0%B2%B8%E0%B2%BF%E0%B2%B8%E0%B3%8D-%E0%B2%B9%E0%B3%8A%E0%B2%A3%E0%B3%86">ದೇಶದ ಅತಿದೊಡ್ಡ ಖಾಸಗಿ ಬ್ಯಾಂಕ್ ಐಸಿಐಸಿಐ ಬ್ಯಾಂಕ್ನ ಬೆಳವಣಿಗೆಯಲ್ಲಿ ಮಹತ್ತರ ಪಾತ್ರ ವಹಿಸಿದ್ದ ಬ್ಯಾಂಕಿಂಗ್ ಪರಿಣತ ಕೆ.ವಿ. ಕಾಮತ್ ಅವರನ್ನು 2011ರಲ್ಲಿ ಇನ್ಫೋಸಿಸ್ನ ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು.</a> ಆ ಸಮಯದಲ್ಲೆ ಕಂಪೆನಿಯ ಸಹ-ಸಂಸ್ಥಾಪಕ ನಾರಾಯಣ ಮೂರ್ತಿ ಅವರು ನಿವೃತ್ತಿ ಹೊಂದಿದ್ದರು. ಆದರೆ ಇದೀಗ ಮತ್ತೆ ನಾರಾಯಣಮೂರ್ತಿ ಅವರ ಹೆಗಲಿಗೆ ಪ್ರತಿಷ್ಥಿತ ಸಂಸ್ಥೆಯ ಹೊಣೆಗಾರಿಕೆಯನ್ನು ನಿರ್ದೇಶಕರ ಮಂಡಳಿ ನೀಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>