<p>`ಅಲೆಮಾರಿ ಅಮೋಘವರ್ಷ~ ಅವರ ಕುರಿತ ಲೇಖನ ಚೆನ್ನಾಗಿತ್ತು. ಕಲಿಕೆ, ವೃತ್ತಿ ಮತ್ತು ಪ್ರವೃತ್ತಿಗಳ ನಡುವಣ ಸಂಬಂಧ ಹೇಗೆಲ್ಲಾ ಭಿನ್ನವಾಗಿರಬಹುದು ಎಂಬುದಕ್ಕೆ ಉದಾಹರಣೆಯಾಗಬಹುದಾದ ಲೇಖನವಿದು. `ಕಾಮನಬಿಲ್ಲು~ ಪುರವಣಿ ಇಂಥ ಅನೇಕ ಲೇಖನಗಳನ್ನು ನೀಡಿದೆ. ಹೊಸ ಬಗೆಯ ಪ್ರತಿಭೆಗಳನ್ನು ಪರಿಚಯಿಸುವ ಈ ಪ್ರಯತ್ನ ಶ್ಲಾಘನಾರ್ಹ.<br /> <strong> -ಎಲ್.ಬಿ. ರಾಜೇಶ್ಕೃಷ್ಣ, ಬೆಂಗಳೂರು</strong></p>.<p>ವಿವಿಧ ಎಲೆಕ್ಟ್ರಾನಿಕ್ ಗ್ಯಾಜೆಟ್ಗಳನ್ನು ಬಳಸಿ ನೋಡಿ ತಮ್ಮ ಅಭಿಪ್ರಾಯಗಳನ್ನು ಬರೆಯುತ್ತಿರುವ ಪವನಜ ಅವರಿಗೆ ಧನ್ಯವಾದಗಳು. ಕನ್ನಡದಲ್ಲಿ ಇದೊಂದು ವಿನೂತನ ಪ್ರಯತ್ನ ಎನಿಸುತ್ತಿದೆ. ತಾಂತ್ರಿಕ ವಿವರಗಳನ್ನು ಸರಳ ಭಾಷೆಯಲ್ಲಿ ನೀಡಲು ಸಾಧ್ಯ ಎಂಬುದಕ್ಕೆ ಪವನಜ ಅವರ ಲೇಖನಗಳು ಸಾಕ್ಷಿಯಾಗಿವೆ.<br /> <strong> -ಎಸ್.ಆರ್. ಜ್ಞಾನೇಂದ್ರಕುಮಾರ್, ಮೈಸೂರು</strong></p>.<p>ಗ್ಯಾಜೆಟ್ಲೋಕ ವಿಸ್ತರಿಸಿಕೊಳ್ಳುತ್ತಿರುವ ಪರಿ ಇಷ್ಟವಾಗುತ್ತಿದೆ. ಬಹಳ ಮೂಲಭೂತ ವಿಷಯಗಳೊಂದಿಗೆ ಆರಂಭಗೊಂಡ ಈ ಅಂಕಣ ಈಗ ವಿವಿಧ ಮೊಬೈಲ್ ಫೋನ್ಗಳನ್ನು ಅಂತರಜಾಲ ತಾಣಗಳಲ್ಲಿರುವ ತಜ್ಞರು ಬರೆಯುವ ಮಟ್ಟದಲ್ಲಿ ಪರಿಚಯಿಸುತ್ತಿದೆ. ಕನ್ನಡಕ್ಕೆ ಈ ಬಗೆಯ ಸಾಹಿತ್ಯ ಅತ್ಯಂತ ಅಗತ್ಯ. ಈ ನಿಟ್ಟಿನಲ್ಲಿ `ಪ್ರಜಾವಾಣಿ~ ಇಟ್ಟಿರುವ ಹೆಜ್ಜೆ ಬಹಳ ಮುಖ್ಯವಾದುದು. ವಾಹನ ಲೋಕಕ್ಕೆ ಸಂಬಂಧಿಸಿದ ಬರವಣಿಗೆಯಲ್ಲೂ ಒಂದು ನುಡಿಗಟ್ಟನ್ನು ಕಂಡುಕೊಳ್ಳುತ್ತಿರುವುದು ನಿಜಕ್ಕೂ ಸ್ವಾಗತಾರ್ಹ ಬೆಳವಣಿಗೆ.<br /> <strong> -ಎಸ್.ಚಂದ್ರಶೇಖರ್, ಹುಬ್ಬಳ್ಳಿ</strong></p>.<p>ಸ್ವಾಮಿ ವಿವೇಕಾನಂದರ ಕುರಿತು ಬಾಲಸುಬ್ರಹ್ಮಣ್ಯ ಅವರು ಬರೆಯುತ್ತಿರುವ ಲೇಖನಗಳನ್ನು ತಪ್ಪದೇ ಓದುತ್ತೇನೆ. ಅಧ್ಯಾತ್ಮವೆಂದರೆ ಜೀವ ವಿರೋಧಿಯಾಗಿರಬೇಕು ಎಂಬುದನ್ನು ಸಾಬೀತು ಪಡಿಸುವಂತೆ ದೃಶ್ಯ ಮಾಧ್ಯಮಗಳಲ್ಲಿ ವಿರಾಜಿಸುತ್ತಿರುವ ಅನೇಕ ತಥಾಕಥಿತ ಅಧ್ಯಾತ್ಮ ವಾದಿಗಳ ಮಧ್ಯೆ ಬಾಲಸುಬ್ರಹ್ಮಣ್ಯ ನಿಜಕ್ಕೂ ವಿಶಿಷ್ಟ.</p>.<p> ತಾವು ಕಂಡುಕೊಂಡ ವಿವೇಕಾನಂದರನ್ನು ಅವರು ಮಂಡಿಸುತ್ತಿದ್ದಾರೆ. ಈ ಮೂಲಕ ನಾವೂ ಕೂಡಾ ವಿವೇಕಾನಂದರನ್ನು ಕಂಡುಕೊಳ್ಳಲು ಸಾಧ್ಯವಾಗುತ್ತಿದೆ.<br /> <strong> -ಜಿ. ಸುಬ್ಬರಾವ್, ಬೆಂಗಳೂರು</strong></p>.<p>`ಕಾಮನಬಿಲ್ಲು~ ಪುರವಣಿ ಪ್ರತೀ ವಾರ ಒಳಪುಟಗಳಲ್ಲಿ ನೀಡುವ ಕುತೂಹಲಕಾರಿ ಮಾಹಿತಿಗಳು ಮತ್ತು ನಗೆ ಹನಿಗಳು ನನಗೆ ತುಂಬಾ ಇಷ್ಟ. ಕೊನೆಯ ಪುಟದಲ್ಲಿ ಬರುವ ಕಿರು ವ್ಯಕ್ತಿ ಚಿತ್ರಗಳು ಬಹಳ ಮಾಹಿತಿ ಪೂರ್ಣವಾಗಿರುತ್ತವೆ.<br /> <strong> -ಆರ್. ಸಂತೋಷ್ ಕುಮಾರ್, ಶಿವಮೊಗ್ಗ</strong></p>.<p>ಕೊನೆಯ ಪುಟದಲ್ಲಿ ಬರುವ ಕಿರು ವ್ಯಕ್ತಿ ಚಿತ್ರಗಳು ಬಹಳ ಆಸಕ್ತಿಕರವಾಗಿರುತ್ತವೆ. ಇಂಥ ಮಾಹಿತಿಗಳು ಇನ್ನೂ ಹೆಚ್ಚಾಗಿ ಬರಲಿ.<br /> <strong> -ಎಲ್.ಟಿ.ಎಸ್, ಮಂಡ್ಯ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>`ಅಲೆಮಾರಿ ಅಮೋಘವರ್ಷ~ ಅವರ ಕುರಿತ ಲೇಖನ ಚೆನ್ನಾಗಿತ್ತು. ಕಲಿಕೆ, ವೃತ್ತಿ ಮತ್ತು ಪ್ರವೃತ್ತಿಗಳ ನಡುವಣ ಸಂಬಂಧ ಹೇಗೆಲ್ಲಾ ಭಿನ್ನವಾಗಿರಬಹುದು ಎಂಬುದಕ್ಕೆ ಉದಾಹರಣೆಯಾಗಬಹುದಾದ ಲೇಖನವಿದು. `ಕಾಮನಬಿಲ್ಲು~ ಪುರವಣಿ ಇಂಥ ಅನೇಕ ಲೇಖನಗಳನ್ನು ನೀಡಿದೆ. ಹೊಸ ಬಗೆಯ ಪ್ರತಿಭೆಗಳನ್ನು ಪರಿಚಯಿಸುವ ಈ ಪ್ರಯತ್ನ ಶ್ಲಾಘನಾರ್ಹ.<br /> <strong> -ಎಲ್.ಬಿ. ರಾಜೇಶ್ಕೃಷ್ಣ, ಬೆಂಗಳೂರು</strong></p>.<p>ವಿವಿಧ ಎಲೆಕ್ಟ್ರಾನಿಕ್ ಗ್ಯಾಜೆಟ್ಗಳನ್ನು ಬಳಸಿ ನೋಡಿ ತಮ್ಮ ಅಭಿಪ್ರಾಯಗಳನ್ನು ಬರೆಯುತ್ತಿರುವ ಪವನಜ ಅವರಿಗೆ ಧನ್ಯವಾದಗಳು. ಕನ್ನಡದಲ್ಲಿ ಇದೊಂದು ವಿನೂತನ ಪ್ರಯತ್ನ ಎನಿಸುತ್ತಿದೆ. ತಾಂತ್ರಿಕ ವಿವರಗಳನ್ನು ಸರಳ ಭಾಷೆಯಲ್ಲಿ ನೀಡಲು ಸಾಧ್ಯ ಎಂಬುದಕ್ಕೆ ಪವನಜ ಅವರ ಲೇಖನಗಳು ಸಾಕ್ಷಿಯಾಗಿವೆ.<br /> <strong> -ಎಸ್.ಆರ್. ಜ್ಞಾನೇಂದ್ರಕುಮಾರ್, ಮೈಸೂರು</strong></p>.<p>ಗ್ಯಾಜೆಟ್ಲೋಕ ವಿಸ್ತರಿಸಿಕೊಳ್ಳುತ್ತಿರುವ ಪರಿ ಇಷ್ಟವಾಗುತ್ತಿದೆ. ಬಹಳ ಮೂಲಭೂತ ವಿಷಯಗಳೊಂದಿಗೆ ಆರಂಭಗೊಂಡ ಈ ಅಂಕಣ ಈಗ ವಿವಿಧ ಮೊಬೈಲ್ ಫೋನ್ಗಳನ್ನು ಅಂತರಜಾಲ ತಾಣಗಳಲ್ಲಿರುವ ತಜ್ಞರು ಬರೆಯುವ ಮಟ್ಟದಲ್ಲಿ ಪರಿಚಯಿಸುತ್ತಿದೆ. ಕನ್ನಡಕ್ಕೆ ಈ ಬಗೆಯ ಸಾಹಿತ್ಯ ಅತ್ಯಂತ ಅಗತ್ಯ. ಈ ನಿಟ್ಟಿನಲ್ಲಿ `ಪ್ರಜಾವಾಣಿ~ ಇಟ್ಟಿರುವ ಹೆಜ್ಜೆ ಬಹಳ ಮುಖ್ಯವಾದುದು. ವಾಹನ ಲೋಕಕ್ಕೆ ಸಂಬಂಧಿಸಿದ ಬರವಣಿಗೆಯಲ್ಲೂ ಒಂದು ನುಡಿಗಟ್ಟನ್ನು ಕಂಡುಕೊಳ್ಳುತ್ತಿರುವುದು ನಿಜಕ್ಕೂ ಸ್ವಾಗತಾರ್ಹ ಬೆಳವಣಿಗೆ.<br /> <strong> -ಎಸ್.ಚಂದ್ರಶೇಖರ್, ಹುಬ್ಬಳ್ಳಿ</strong></p>.<p>ಸ್ವಾಮಿ ವಿವೇಕಾನಂದರ ಕುರಿತು ಬಾಲಸುಬ್ರಹ್ಮಣ್ಯ ಅವರು ಬರೆಯುತ್ತಿರುವ ಲೇಖನಗಳನ್ನು ತಪ್ಪದೇ ಓದುತ್ತೇನೆ. ಅಧ್ಯಾತ್ಮವೆಂದರೆ ಜೀವ ವಿರೋಧಿಯಾಗಿರಬೇಕು ಎಂಬುದನ್ನು ಸಾಬೀತು ಪಡಿಸುವಂತೆ ದೃಶ್ಯ ಮಾಧ್ಯಮಗಳಲ್ಲಿ ವಿರಾಜಿಸುತ್ತಿರುವ ಅನೇಕ ತಥಾಕಥಿತ ಅಧ್ಯಾತ್ಮ ವಾದಿಗಳ ಮಧ್ಯೆ ಬಾಲಸುಬ್ರಹ್ಮಣ್ಯ ನಿಜಕ್ಕೂ ವಿಶಿಷ್ಟ.</p>.<p> ತಾವು ಕಂಡುಕೊಂಡ ವಿವೇಕಾನಂದರನ್ನು ಅವರು ಮಂಡಿಸುತ್ತಿದ್ದಾರೆ. ಈ ಮೂಲಕ ನಾವೂ ಕೂಡಾ ವಿವೇಕಾನಂದರನ್ನು ಕಂಡುಕೊಳ್ಳಲು ಸಾಧ್ಯವಾಗುತ್ತಿದೆ.<br /> <strong> -ಜಿ. ಸುಬ್ಬರಾವ್, ಬೆಂಗಳೂರು</strong></p>.<p>`ಕಾಮನಬಿಲ್ಲು~ ಪುರವಣಿ ಪ್ರತೀ ವಾರ ಒಳಪುಟಗಳಲ್ಲಿ ನೀಡುವ ಕುತೂಹಲಕಾರಿ ಮಾಹಿತಿಗಳು ಮತ್ತು ನಗೆ ಹನಿಗಳು ನನಗೆ ತುಂಬಾ ಇಷ್ಟ. ಕೊನೆಯ ಪುಟದಲ್ಲಿ ಬರುವ ಕಿರು ವ್ಯಕ್ತಿ ಚಿತ್ರಗಳು ಬಹಳ ಮಾಹಿತಿ ಪೂರ್ಣವಾಗಿರುತ್ತವೆ.<br /> <strong> -ಆರ್. ಸಂತೋಷ್ ಕುಮಾರ್, ಶಿವಮೊಗ್ಗ</strong></p>.<p>ಕೊನೆಯ ಪುಟದಲ್ಲಿ ಬರುವ ಕಿರು ವ್ಯಕ್ತಿ ಚಿತ್ರಗಳು ಬಹಳ ಆಸಕ್ತಿಕರವಾಗಿರುತ್ತವೆ. ಇಂಥ ಮಾಹಿತಿಗಳು ಇನ್ನೂ ಹೆಚ್ಚಾಗಿ ಬರಲಿ.<br /> <strong> -ಎಲ್.ಟಿ.ಎಸ್, ಮಂಡ್ಯ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>