<p><strong>ಬೆಂಗಳೂರು:</strong> ನಿರೀಕ್ಷೆ ಮಾಡಿದಂತೆ `ಇನ್ ದಿ ಸ್ಪಾಟ್ಲೈಟ್~ ಭಾನುವಾರ ನಡೆದ ಸುವರ್ಣ ಮಹೋತ್ಸವದ `ಏಕೆಕೆ ಎಂಟರ್ಟೈನ್ಮೆಂಟ್ ಗೋಲ್ಡನ್ ಜುಬಿಲಿ ಇಂಡಿಯನ್ ಟರ್ಫ್ ಇನ್ವಿಟೇಶನ್ ಕಪ್~ನಲ್ಲಿ ನಿರಾಯಾಸ ಗೆಲುವು ಪಡೆಯಿತು. <br /> <br /> ಈ ಗೆಲುವಿನೊಂದಿಗೆ 2011-12 ಸಾಲಿನ `ಶ್ರೇಷ್ಠ ಕುದುರೆ~ಯ ಪಟ್ಟ ತನ್ನದಾಗಿಸಿಕೊಂಡಿತು. ಅಷ್ಟೇ ಅಲ್ಲ ತನ್ನ ಮಾಲೀಕನಿಗೆ 3 ಲಕ್ಷ ರೂ. ಮೌಲ್ಯದ ಟ್ರೋಫಿ ಮತ್ತು ಮೊದಲನೇ ಬಹುಮಾನ 60 ಲಕ್ಷ ರೂ.ಗಳನ್ನು ದೊರಕಿಸಿಕೊಟ್ಟಿತು. <br /> <br /> ಕಣದಲ್ಲಿ ಒಟ್ಟು 9 ಸ್ಪರ್ಧಿಗಳು ಭಾಗವಹಿಸಿದ್ದವು. 2400 ಮೀಟರ್ ದೂರದ ಈ ರೇಸ್ಗೆ ಚಾಲನೆ ದೊರೆತ ಕೂಡಲೆ `ಸದರ್ನ್ ಬೇ~ ಮೂಂಚೂಣಿಯಲ್ಲಿತ್ತು. `ಇನ್ ದಿ ಸ್ಪಾಟ್ಲೈಟ್~ ಎರಡನೇ ಮತ್ತು `ಸ್ಮಾಶಿಂಗ್~ ಮೂರನೇ ಸ್ಥಾನದಲ್ಲಿ ತಮ್ಮ ಅವಕಾಶಕ್ಕಾಗಿ ಕಾಯತೊಡಗಿದವು. ಆದರೇ 1400 ಮೀಟರ್ ದಾಟುತ್ತಿದ್ದಂತೆ, ``ಇನ್ ದಿ ಸ್ಪಾಟ್ಲೈಟ್~ ಮುನ್ನಡೆ ಸಾಧಿಸಿತು. ನಂತರ 55 ಪೈಸೆಯ ಫೇವರಿಟ್ ಆಗಿದ್ದ ಈ ನಾಲ್ಕು ವರ್ಷದ ಹೆಣ್ಣು ಕುದುರೆ ಹಿಂತಿರುಗಿ ನೋಡದೇ ಗೆಲುವಿನ ಹಾದಿಯಲ್ಲಿ ತನ್ನ ಓಟ ಮುಂದುವರಿಸಿತು.<br /> <br /> ಕುದುರೆ ಗೆಲುವಿನ ಗೆರೆ ದಾಟುತ್ತಿದ್ದಂತೆಯೆ, ಬೆಂಗಳೂರು ಟರ್ಫ್ ಕ್ಲಬ್ ಆವರಣದಲ್ಲಿ ಕಿಕ್ಕಿರಿದು ತುಂಬಿದ್ದ ರೇಸ್ ಪ್ರಿಯರು ಒಕ್ಕೊರಲಿನಿಂದ `ಇನ್ ದಿ ಸ್ಪಾಟ್ಲೈಟ್~ಗೆ ಪ್ರಶಂಸಿದರು. <br /> <br /> ಕೊನೆಯ ಫರ್ಲಾಂಗ್ನಲ್ಲಿ `ಸ್ಮಾಶಿಂಗ್~ ಮುನ್ನುಗಿ ಎರಡನೇ ಸ್ಥಾನ ಪಡೆಯಿತು. `ಸದರ್ನ್ ಬೇ~ ಮೂರನೇ ಹಾಗೂ `ಟೊರೊಲೊಕೊ~ ನಾಲ್ಕನೇ ಸ್ಥಾನ ಪಡೆದವು. ಈ ರೇಸ್ ಕ್ರಮಿಸಲು `ಇನ್ ದಿ ಸ್ಪಾಟ್ಲೈಟ್~ ತೆಗೆದುಕೊಂಡ ಸಮಯ 2 ನಿಮಿಷ 32.10 ಸೆಕೆಂಡ್ ಮಾತ್ರ.<br /> <br /> ಈ ರೇಸ್ ಪ್ರಾರಂಭಕ್ಕೆ ಮುನ್ನ ಏಕೆಕೆ ಎಂಟರ್ಪ್ರೈಸಸ್ ಮನರಂಜನೆ ಕಾರ್ಯಕ್ರಮ ಆಯೋಜಿಸಿತ್ತು. ಇದಕ್ಕೆ ಸ್ಯಾಂಡಲ್ವುಡ್ನ ತಾರಾ ಬಳಗದವರು ರಂಗು ತುಂಬಿದರು. <br /> <br /> ಸುದೀಪ್, ಐಂದ್ರಿತಾ ರೇ, ಮಾಧುರಿ ಭಟ್ಟಾಚಾರ್ಯ, ಹಿರಿಯ ನಟ ಅಂಬರೀಶ್ ಹಾಗೂ ಸುಮಲತಾ ಸೇರಿದಂತೆ ಇತರ ನಟ ನಟಿಯರು ರೇಸ್ನ ರಂಗು ಹೆಚ್ಚಿಸಿದರು. ಇದು ರೇಸ್ ಪ್ರಿಯರ ಉತ್ಸಾಹವನ್ನು ಇಮ್ಮಡಿಸಿತು.<br /> <br /> ಆಕರ್ಷಕ ನೃತ್ಯ ಹಾಗೂ ಸೆಲೆಬ್ರಿಟಿ ಕ್ರಿಕೆಟ್ ಲೀಗ್ `ಕರ್ನಾಟಕ ಬುಲ್ಡೋಜರ್ಸ್~ ತಂಡದ ಟೈಟಲ್ ಹಾಡನ್ನು ಭರ್ಜರಿಯಾಗಿ ಗ್ರ್ಯಾಂಡ್ ಸ್ಟ್ಯಾಂಡ್ ಎದುರಿನ ದೊಡ್ಡ ವೇದಿಕೆಯಲ್ಲಿ ಏರ್ಪಡಿಸಲಾಗಿತ್ತು. ಈ ಕ್ರಿಕೆಟ್ ತಂಡದ ಆಟಗಾರರು ಕಾರ್ಯಕ್ರಮಕ್ಕೆ ಆಗಮಿಸಿ ಅಭಿಮಾನಿಗಳ ಸಂಭ್ರಮಕ್ಕೆ ಇಂಬು ನೀಡಿದರು. <br /> <br /> `ಇನ್ವಿಟೇಶನ್ ಕಪ್~ ಯಾವುದೇ ತೊಂದರೆಯಿಲ್ಲದೆ ಮುಕ್ತಾಯವಾಯಿತು. ಇದಕ್ಕಾಗಿ ಬೆಂಗಳೂರು ಟರ್ಫ್ ಕ್ಲಬ್ (ಬಿಟಿಸಿ) ಅಧ್ಯಕ್ಷ ಡಾ.ಕೆ.ಎಂ.ಶ್ರೀನಿವಾಸ ಗೌಡ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು. ರೇಸ್ಪ್ರಿಯರಿಗೆ, ಮಾಲೀಕರಿಗೆ, ಟ್ರೈನರ್ಸ್, ಜಾಕಿಗಳಿಗೆ ಮತ್ತು ಎಲ್ಲಾ ಕಾರ್ಮಿಕರಿಗೆ ಧನ್ಯವಾದ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ನಿರೀಕ್ಷೆ ಮಾಡಿದಂತೆ `ಇನ್ ದಿ ಸ್ಪಾಟ್ಲೈಟ್~ ಭಾನುವಾರ ನಡೆದ ಸುವರ್ಣ ಮಹೋತ್ಸವದ `ಏಕೆಕೆ ಎಂಟರ್ಟೈನ್ಮೆಂಟ್ ಗೋಲ್ಡನ್ ಜುಬಿಲಿ ಇಂಡಿಯನ್ ಟರ್ಫ್ ಇನ್ವಿಟೇಶನ್ ಕಪ್~ನಲ್ಲಿ ನಿರಾಯಾಸ ಗೆಲುವು ಪಡೆಯಿತು. <br /> <br /> ಈ ಗೆಲುವಿನೊಂದಿಗೆ 2011-12 ಸಾಲಿನ `ಶ್ರೇಷ್ಠ ಕುದುರೆ~ಯ ಪಟ್ಟ ತನ್ನದಾಗಿಸಿಕೊಂಡಿತು. ಅಷ್ಟೇ ಅಲ್ಲ ತನ್ನ ಮಾಲೀಕನಿಗೆ 3 ಲಕ್ಷ ರೂ. ಮೌಲ್ಯದ ಟ್ರೋಫಿ ಮತ್ತು ಮೊದಲನೇ ಬಹುಮಾನ 60 ಲಕ್ಷ ರೂ.ಗಳನ್ನು ದೊರಕಿಸಿಕೊಟ್ಟಿತು. <br /> <br /> ಕಣದಲ್ಲಿ ಒಟ್ಟು 9 ಸ್ಪರ್ಧಿಗಳು ಭಾಗವಹಿಸಿದ್ದವು. 2400 ಮೀಟರ್ ದೂರದ ಈ ರೇಸ್ಗೆ ಚಾಲನೆ ದೊರೆತ ಕೂಡಲೆ `ಸದರ್ನ್ ಬೇ~ ಮೂಂಚೂಣಿಯಲ್ಲಿತ್ತು. `ಇನ್ ದಿ ಸ್ಪಾಟ್ಲೈಟ್~ ಎರಡನೇ ಮತ್ತು `ಸ್ಮಾಶಿಂಗ್~ ಮೂರನೇ ಸ್ಥಾನದಲ್ಲಿ ತಮ್ಮ ಅವಕಾಶಕ್ಕಾಗಿ ಕಾಯತೊಡಗಿದವು. ಆದರೇ 1400 ಮೀಟರ್ ದಾಟುತ್ತಿದ್ದಂತೆ, ``ಇನ್ ದಿ ಸ್ಪಾಟ್ಲೈಟ್~ ಮುನ್ನಡೆ ಸಾಧಿಸಿತು. ನಂತರ 55 ಪೈಸೆಯ ಫೇವರಿಟ್ ಆಗಿದ್ದ ಈ ನಾಲ್ಕು ವರ್ಷದ ಹೆಣ್ಣು ಕುದುರೆ ಹಿಂತಿರುಗಿ ನೋಡದೇ ಗೆಲುವಿನ ಹಾದಿಯಲ್ಲಿ ತನ್ನ ಓಟ ಮುಂದುವರಿಸಿತು.<br /> <br /> ಕುದುರೆ ಗೆಲುವಿನ ಗೆರೆ ದಾಟುತ್ತಿದ್ದಂತೆಯೆ, ಬೆಂಗಳೂರು ಟರ್ಫ್ ಕ್ಲಬ್ ಆವರಣದಲ್ಲಿ ಕಿಕ್ಕಿರಿದು ತುಂಬಿದ್ದ ರೇಸ್ ಪ್ರಿಯರು ಒಕ್ಕೊರಲಿನಿಂದ `ಇನ್ ದಿ ಸ್ಪಾಟ್ಲೈಟ್~ಗೆ ಪ್ರಶಂಸಿದರು. <br /> <br /> ಕೊನೆಯ ಫರ್ಲಾಂಗ್ನಲ್ಲಿ `ಸ್ಮಾಶಿಂಗ್~ ಮುನ್ನುಗಿ ಎರಡನೇ ಸ್ಥಾನ ಪಡೆಯಿತು. `ಸದರ್ನ್ ಬೇ~ ಮೂರನೇ ಹಾಗೂ `ಟೊರೊಲೊಕೊ~ ನಾಲ್ಕನೇ ಸ್ಥಾನ ಪಡೆದವು. ಈ ರೇಸ್ ಕ್ರಮಿಸಲು `ಇನ್ ದಿ ಸ್ಪಾಟ್ಲೈಟ್~ ತೆಗೆದುಕೊಂಡ ಸಮಯ 2 ನಿಮಿಷ 32.10 ಸೆಕೆಂಡ್ ಮಾತ್ರ.<br /> <br /> ಈ ರೇಸ್ ಪ್ರಾರಂಭಕ್ಕೆ ಮುನ್ನ ಏಕೆಕೆ ಎಂಟರ್ಪ್ರೈಸಸ್ ಮನರಂಜನೆ ಕಾರ್ಯಕ್ರಮ ಆಯೋಜಿಸಿತ್ತು. ಇದಕ್ಕೆ ಸ್ಯಾಂಡಲ್ವುಡ್ನ ತಾರಾ ಬಳಗದವರು ರಂಗು ತುಂಬಿದರು. <br /> <br /> ಸುದೀಪ್, ಐಂದ್ರಿತಾ ರೇ, ಮಾಧುರಿ ಭಟ್ಟಾಚಾರ್ಯ, ಹಿರಿಯ ನಟ ಅಂಬರೀಶ್ ಹಾಗೂ ಸುಮಲತಾ ಸೇರಿದಂತೆ ಇತರ ನಟ ನಟಿಯರು ರೇಸ್ನ ರಂಗು ಹೆಚ್ಚಿಸಿದರು. ಇದು ರೇಸ್ ಪ್ರಿಯರ ಉತ್ಸಾಹವನ್ನು ಇಮ್ಮಡಿಸಿತು.<br /> <br /> ಆಕರ್ಷಕ ನೃತ್ಯ ಹಾಗೂ ಸೆಲೆಬ್ರಿಟಿ ಕ್ರಿಕೆಟ್ ಲೀಗ್ `ಕರ್ನಾಟಕ ಬುಲ್ಡೋಜರ್ಸ್~ ತಂಡದ ಟೈಟಲ್ ಹಾಡನ್ನು ಭರ್ಜರಿಯಾಗಿ ಗ್ರ್ಯಾಂಡ್ ಸ್ಟ್ಯಾಂಡ್ ಎದುರಿನ ದೊಡ್ಡ ವೇದಿಕೆಯಲ್ಲಿ ಏರ್ಪಡಿಸಲಾಗಿತ್ತು. ಈ ಕ್ರಿಕೆಟ್ ತಂಡದ ಆಟಗಾರರು ಕಾರ್ಯಕ್ರಮಕ್ಕೆ ಆಗಮಿಸಿ ಅಭಿಮಾನಿಗಳ ಸಂಭ್ರಮಕ್ಕೆ ಇಂಬು ನೀಡಿದರು. <br /> <br /> `ಇನ್ವಿಟೇಶನ್ ಕಪ್~ ಯಾವುದೇ ತೊಂದರೆಯಿಲ್ಲದೆ ಮುಕ್ತಾಯವಾಯಿತು. ಇದಕ್ಕಾಗಿ ಬೆಂಗಳೂರು ಟರ್ಫ್ ಕ್ಲಬ್ (ಬಿಟಿಸಿ) ಅಧ್ಯಕ್ಷ ಡಾ.ಕೆ.ಎಂ.ಶ್ರೀನಿವಾಸ ಗೌಡ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು. ರೇಸ್ಪ್ರಿಯರಿಗೆ, ಮಾಲೀಕರಿಗೆ, ಟ್ರೈನರ್ಸ್, ಜಾಕಿಗಳಿಗೆ ಮತ್ತು ಎಲ್ಲಾ ಕಾರ್ಮಿಕರಿಗೆ ಧನ್ಯವಾದ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>