<p><strong>ಯಳಂದೂರು</strong>: ತೆಂಗಿನ ಗರಿಗಳ ಹೊದಿಕೆಯೇ ಚಪ್ಪರ. ಮಣ್ಣಿನ ನೆಲವೇ ಹಾಸಿಗೆ. ಮಳೆಗೆ ಸೋರುವ ಮಾಳಿಗೆ. ಬಿಸಿಲಿನಲ್ಲೇ ಕಲಿಯಬೇಕಾದ ಅನಿವಾರ್ಯತೆ.<br /> <br /> -ಇದು ತಾಲ್ಲೂಕಿನ ದೊಡ್ಡ ಗ್ರಾಮಗಳಲ್ಲಿ ಒಂದಾಗಿರುವ ಕೆಸ್ತೂರು ಗ್ರಾಮದ ಹೊಸ ಉಪ್ಪಾರ ಬಡಾವಣೆಯ ಅಂಗವಾಡಿ ಕೇಂದ್ರದ ದುಃಸ್ಥಿತಿ.<br /> ಇಲ್ಲಿನ 6 ಕೇಂದ್ರಗಳಿಗೆ ಸ್ವಂತ ಹಾಗೂ ಸುಸಜ್ಜಿತ ಕಟ್ಟಡಗಳಿವೆ. 2006ರಲ್ಲಿ ಆರಂಭವಾದ ಈ ಅಂಗನವಾಡಿಗೆ ಸ್ವಂತಕಟ್ಟಡದ ಭಾಗ್ಯ ಲಭಿಸಿಲ್ಲ. ಹಾಗಾಗಿ ತೆಂಗಿನಗರಿಯ ಜೋಪಡಿ ಚಿಣ್ಣರ ಕಲಿಕಾ ಕೇಂದ್ರವಾಗಿ ಮಾರ್ಪಟ್ಟಿದೆ. ಪ್ರಸ್ತುತ ಈ ಕೇಂದ್ರದಲ್ಲಿ 22 ಮಕ್ಕಳು ಕಲಿಯುತ್ತಿದ್ದಾರೆ.<br /> <br /> ಹಿಂದುಳಿದ ವರ್ಗದ ಮಕ್ಕಳ ಸಂಖ್ಯೆಯೇ ಇಲ್ಲಿ ಹೆಚ್ಚಾಗಿದೆ. ಇವರೆಲ್ಲ ಸೌಲಭ್ಯ ವಂಚಿತರಾಗಿ ಕಲಿಯುವ ಅನಿವಾರ್ಯತೆ ಇಲ್ಲಿ ಸ್ಟಷ್ಟಿಯಾಗಿದೆ.<br /> ಮಳೆ ಬಂದರೆ ಈ ಕೇಂದ್ರವು ಸೋರುತ್ತದೆ. ಅನಿವಾರ್ಯವಾಗಿ ಮಕ್ಕಳನ್ನು ಮಳೆಗಾಲದಲ್ಲಿ ಮನೆಗಳಿಗೆ ಕಳುಹಿಸುವ ಸ್ಥಿತಿ ನಿರ್ಮಾಣವಾಗುತ್ತದೆ.<br /> <br /> ಈ ಕೇಂದ್ರಕ್ಕೆ ತಿಂಗಳಿಗೆ ರೂ 200 ಬಾಡಿಗೆ ನೀಡಲಾಗುತ್ತಿದೆ. ಕೇಂದ್ರದ ಮುಂದೆ ನಾಮಫಲಕ ಸಹ ಅಳವಡಿಸಿಲ್ಲ. ಜತೆಗೆ ಮಕ್ಕಳಿಗೆ ಕಲಿಕಾ ಸಾಮಗ್ರಿ ಹಾಗೂ ಆಹಾರ ಸಾಮಗ್ರಿಗಳ ಇಡಲು ಸ್ಥಳಾವಕಾಶವಿಲ್ಲ. ಮಕ್ಕಳನ್ನು ಇಂತಹ ಕೇಂದ್ರಕ್ಕೆ ಕಳುಹಿಸುವುದು ಅನಿವಾರ್ಯವಾಗಿದೆ ಎಂಬುದು ಪೋಷಕರ ಅಳಲು.</p>.<p><span style="color: rgb(139, 69, 19);">ಸ್ವಂತ ಕಟ್ಟಡ ನಿರ್ಮಿಸಲು ನಿವೇಶನ ಕೇಳಲಾಗಿದೆ. ಆದರೆ, ಸ್ಥಳಾವಕಾಶ ಇನ್ನೂ ಲಭಿಸಿಲ್ಲ. ಬೇರೆ ಕಟ್ಟಡದಲ್ಲಿ ಅಂಗನವಾಡಿ ಕೇಂದ್ರ ನಡೆಸಲು ಗ್ರಾಮಸ್ಥರು ಸ್ಥಳ ನೀಡಿದರೆ ಸೂಕ್ತವಾಗುತ್ತದೆ. ಹೊಸ ಕಟ್ಟಡ ನಿರ್ಮಾಣಕ್ಕೆ ಶೀಘ್ರದಲ್ಲೇ ಕ್ರಮ ಕೈಗೊಳ್ಳಲಾಗುವುದು</span><br /> <em>ಗೌಸಿಯಾ ಫಿರ್ದೂಸ್, ಮೇಲ್ವಿಚಾರಕಿ</em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಳಂದೂರು</strong>: ತೆಂಗಿನ ಗರಿಗಳ ಹೊದಿಕೆಯೇ ಚಪ್ಪರ. ಮಣ್ಣಿನ ನೆಲವೇ ಹಾಸಿಗೆ. ಮಳೆಗೆ ಸೋರುವ ಮಾಳಿಗೆ. ಬಿಸಿಲಿನಲ್ಲೇ ಕಲಿಯಬೇಕಾದ ಅನಿವಾರ್ಯತೆ.<br /> <br /> -ಇದು ತಾಲ್ಲೂಕಿನ ದೊಡ್ಡ ಗ್ರಾಮಗಳಲ್ಲಿ ಒಂದಾಗಿರುವ ಕೆಸ್ತೂರು ಗ್ರಾಮದ ಹೊಸ ಉಪ್ಪಾರ ಬಡಾವಣೆಯ ಅಂಗವಾಡಿ ಕೇಂದ್ರದ ದುಃಸ್ಥಿತಿ.<br /> ಇಲ್ಲಿನ 6 ಕೇಂದ್ರಗಳಿಗೆ ಸ್ವಂತ ಹಾಗೂ ಸುಸಜ್ಜಿತ ಕಟ್ಟಡಗಳಿವೆ. 2006ರಲ್ಲಿ ಆರಂಭವಾದ ಈ ಅಂಗನವಾಡಿಗೆ ಸ್ವಂತಕಟ್ಟಡದ ಭಾಗ್ಯ ಲಭಿಸಿಲ್ಲ. ಹಾಗಾಗಿ ತೆಂಗಿನಗರಿಯ ಜೋಪಡಿ ಚಿಣ್ಣರ ಕಲಿಕಾ ಕೇಂದ್ರವಾಗಿ ಮಾರ್ಪಟ್ಟಿದೆ. ಪ್ರಸ್ತುತ ಈ ಕೇಂದ್ರದಲ್ಲಿ 22 ಮಕ್ಕಳು ಕಲಿಯುತ್ತಿದ್ದಾರೆ.<br /> <br /> ಹಿಂದುಳಿದ ವರ್ಗದ ಮಕ್ಕಳ ಸಂಖ್ಯೆಯೇ ಇಲ್ಲಿ ಹೆಚ್ಚಾಗಿದೆ. ಇವರೆಲ್ಲ ಸೌಲಭ್ಯ ವಂಚಿತರಾಗಿ ಕಲಿಯುವ ಅನಿವಾರ್ಯತೆ ಇಲ್ಲಿ ಸ್ಟಷ್ಟಿಯಾಗಿದೆ.<br /> ಮಳೆ ಬಂದರೆ ಈ ಕೇಂದ್ರವು ಸೋರುತ್ತದೆ. ಅನಿವಾರ್ಯವಾಗಿ ಮಕ್ಕಳನ್ನು ಮಳೆಗಾಲದಲ್ಲಿ ಮನೆಗಳಿಗೆ ಕಳುಹಿಸುವ ಸ್ಥಿತಿ ನಿರ್ಮಾಣವಾಗುತ್ತದೆ.<br /> <br /> ಈ ಕೇಂದ್ರಕ್ಕೆ ತಿಂಗಳಿಗೆ ರೂ 200 ಬಾಡಿಗೆ ನೀಡಲಾಗುತ್ತಿದೆ. ಕೇಂದ್ರದ ಮುಂದೆ ನಾಮಫಲಕ ಸಹ ಅಳವಡಿಸಿಲ್ಲ. ಜತೆಗೆ ಮಕ್ಕಳಿಗೆ ಕಲಿಕಾ ಸಾಮಗ್ರಿ ಹಾಗೂ ಆಹಾರ ಸಾಮಗ್ರಿಗಳ ಇಡಲು ಸ್ಥಳಾವಕಾಶವಿಲ್ಲ. ಮಕ್ಕಳನ್ನು ಇಂತಹ ಕೇಂದ್ರಕ್ಕೆ ಕಳುಹಿಸುವುದು ಅನಿವಾರ್ಯವಾಗಿದೆ ಎಂಬುದು ಪೋಷಕರ ಅಳಲು.</p>.<p><span style="color: rgb(139, 69, 19);">ಸ್ವಂತ ಕಟ್ಟಡ ನಿರ್ಮಿಸಲು ನಿವೇಶನ ಕೇಳಲಾಗಿದೆ. ಆದರೆ, ಸ್ಥಳಾವಕಾಶ ಇನ್ನೂ ಲಭಿಸಿಲ್ಲ. ಬೇರೆ ಕಟ್ಟಡದಲ್ಲಿ ಅಂಗನವಾಡಿ ಕೇಂದ್ರ ನಡೆಸಲು ಗ್ರಾಮಸ್ಥರು ಸ್ಥಳ ನೀಡಿದರೆ ಸೂಕ್ತವಾಗುತ್ತದೆ. ಹೊಸ ಕಟ್ಟಡ ನಿರ್ಮಾಣಕ್ಕೆ ಶೀಘ್ರದಲ್ಲೇ ಕ್ರಮ ಕೈಗೊಳ್ಳಲಾಗುವುದು</span><br /> <em>ಗೌಸಿಯಾ ಫಿರ್ದೂಸ್, ಮೇಲ್ವಿಚಾರಕಿ</em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>