ದಿನ ಭವಿಷ್ಯ: ಈ ರಾಶಿಯವರು ಸಮಸ್ಯೆ ಬಗೆಹರಿಸಲು ಜಾಣತನ, ಬುದ್ಧಿವಂತಿಕೆ ಬಳಸಿಕೊಳ್ಳಿ
Published 27 ಅಕ್ಟೋಬರ್ 2025, 23:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಕೊನೆ ಕ್ಷಣದವರೆಗೂ ಜೊತೆಯನ್ನು ಕೊಡುವಂಥ ಸ್ನೇಹಿತರನ್ನು ಸಂಪಾದನೆ ಮಾಡುವಿರಿ. ಕಾರ್ಮಿಕ ವರ್ಗದವರ ಹೆಚ್ಚಿನ ಬೇಡಿಕೆಗಳು ವ್ಯವಸ್ಥಾಪಕರಿಂದ ಈಡೇರಲಿವೆ. ಹಿತವಾದ ಆಹಾರ ಸೇವಿಸಿರಿ.
27 ಅಕ್ಟೋಬರ್ 2025, 23:30 IST
ವೃಷಭ
ಸ್ವಚ್ಛಂದವಾಗಿ ಯೌವನವನ್ನು ಅನುಭವಿಸುತ್ತಿರುವ ನಿಮಗೆ ಮದುವೆ ಎನ್ನುವ ಹೆಚ್ಚುವರಿ ಜವಾಬ್ದಾರಿಯನ್ನು ಹೊರೆಸಲು ಪರಿವಾರದವರೆಲ್ಲರೂ ಕಾತರರಾಗುವರು. ಕೆಲವು ಪ್ರಶ್ನೆಗಳಿಗೆ ಉತ್ತರ ಸಿಗದಂತೆ ಆಗಲಿದೆ.
27 ಅಕ್ಟೋಬರ್ 2025, 23:30 IST
ಮಿಥುನ
ಆತ್ಮಗೌರವಕ್ಕೆ ಹೆಚ್ಚು ಪ್ರಾಶಸ್ತ ನೀಡುವ ನಿಮಗೆ ಅಹಿತಕರ ಘಟನೆ ಮರೆಯಲು ಹೆಚ್ಚಿನ ಸಮಯ ಬೇಕಾಗುವುದು. ಭೂಸಂಬಂಧಿ ವ್ಯವಹಾರದಲ್ಲಿರುವವರಿಗೆ ಧನಲಾಭ. ಸಾಲ ತೀರಿಸುವ ಬಗ್ಗೆ ಯೋಚಿಸಿ.
27 ಅಕ್ಟೋಬರ್ 2025, 23:30 IST
ಕರ್ಕಾಟಕ
ಸಹಾಯ ಗುಣ ಹೊಂದಿರುವ ಕಾರಣದಿಂದ ಸಹಪಾಠಿಗಳೊಂದಿಗಿನ ಬಾಂಧವ್ಯ ಉತ್ತಮಗೊಳ್ಳುವುದು. ಮನುಷ್ಯ ಪ್ರಯತ್ನದ ಜತೆ ಆಂಜನೇಯನ ಮೊರೆ ಹೋಗುವುದರಿಂದ ಕಾರ್ಯಸಿದ್ಧಿ.
27 ಅಕ್ಟೋಬರ್ 2025, 23:30 IST
ಸಿಂಹ
ಸಂಪರ್ಕ ಸಾಧನದಂತಹ ಉದ್ಯೋಗದಲ್ಲಿ ನಿರತರಾದ ವ್ಯಕ್ತಿಗಳಿಗೆ ಸನ್ಮಾನ ಅಥವಾ ವಿಶೇಷ ಗೌರವಗಳು ಲಭಿಸಲಿವೆ. ಕೆಲಸ ಕಾರ್ಯಗಳಲ್ಲಿ ಉತ್ಸಾಹವನ್ನು ಕಾಣುವಿರಿ. ಅಸಮರ್ಪಕ ನಿರ್ಧಾರಗಳನ್ನು ಕೈಗೊಳ್ಳದಿರಿ.
27 ಅಕ್ಟೋಬರ್ 2025, 23:30 IST
ಕನ್ಯಾ
ಕಾರ್ಯಸಾಧನೆಗೆ ಪ್ರಯತ್ನದ ಹೊರತಾಗಿ ದೈವಬಲ ಇರಬೇಕಾಗುತ್ತದೆ ಎಂದು ಅರಿತುಕೊಂಡು ಅದಕ್ಕೆ ಬೇಕಾದ ವ್ಯವಸ್ಥೆ ಮಾಡಿ. ವದಂತಿಗಳಿಗೆ ಬೆಲೆಕೊಟ್ಟು ತೀರ್ಮಾನಕ್ಕೆ ಬರುವುದು ಸರಿಯಲ್ಲ.
27 ಅಕ್ಟೋಬರ್ 2025, 23:30 IST
ತುಲಾ
ಮನೆಗೆ ಹೊಂದಿಕೊಂಡಂತೆ ಇರುವಂತಹ ದೇವಾಲಯದ ಜೀರ್ಣೊದ್ಧಾರ ಮಾಡುವ ಮಾತುಕತೆ ಆಗಬಹುದು. ಹವಾನಿಯಂತ್ರಣದ ವಾತಾವರಣವು ಸರಿಹೋಗದೆ ಇರಬಹುದು. ಅಲರ್ಜಿ ಉಂಟಾಗಬಹುದು.
27 ಅಕ್ಟೋಬರ್ 2025, 23:30 IST
ವೃಶ್ಚಿಕ
ಮನೆಯಲ್ಲಿ ನಿಮ್ಮ ಶಕ್ತಿಗೂ ಮೀರಿ ನೀವು ಜವಾಬ್ದಾರಿಗಳನ್ನು ತೆಗೆದುಕೊಳ್ಳುತ್ತಿದ್ದರೂ ಇತರರು ಲಘುವಾಗಿ ಮಾತನಾಡಿದಾಗ ಕೋಪ ಬಂದರೂ ಸುಮ್ಮನಿರಬೇಕಾದ ಪರಿಸ್ಥಿತಿ ನಿಮ್ಮನ್ನು ಹೈರಾಣಾಗಿಸುತ್ತದೆ.
27 ಅಕ್ಟೋಬರ್ 2025, 23:30 IST
ಧನು
ತಂತ್ರಜ್ಞಾನದಲ್ಲಿ ಅನುಭವವು ಹೊಸ ಕಾರ್ಯಕ್ಷೇತ್ರದಲ್ಲಿ ಕಡಿಮೆ ಎಂದು ಅನ್ನಿಸುವುದು. ಸುಮುಹೂರ್ತದಲ್ಲಿ ನಡೆದ ಒಳ್ಳೆಯ ಕಾರ್ಯಕ್ರಮ ಉತ್ತಮ ಫಲ ನೀಡುವುದರಲ್ಲಿ ಸಂಶಯವಿಲ್ಲ.
27 ಅಕ್ಟೋಬರ್ 2025, 23:30 IST
ಮಕರ
ಸಮಸ್ಯೆ ಬಗೆಹರಿಸಲು ಜಾಣತನ, ಬುದ್ಧಿವಂತಿಕೆ ಬಳಸಿಕೊಳ್ಳಿ. ನಿತ್ಯದ ಕೆಲಸಗಳಲ್ಲಿ ಬದಲಾವಣೆ ಇರುವುದಿಲ್ಲ. ಖುಷಿ ಕೊಡುವ ಹವ್ಯಾಸದ ಕೆಲಸಗಳನ್ನು ಎಷ್ಟೇ ಬಿಡುವಿಲ್ಲದ ದಿನವಾಗಿದ್ದರೂ ಮಾಡುವಿರಿ.
27 ಅಕ್ಟೋಬರ್ 2025, 23:30 IST
ಕುಂಭ
ಸಹಜೀವನದಲ್ಲಿ ದೊರೆಯುವ ಸಹಕಾರ ಹಾಗೂ ಖುಷಿಯನ್ನು ಒಬ್ಬಂಟಿಯಾಗಿ ಜೀವಿಸುತ್ತಿರುವ ಬಹಳವಾಗಿ ನೆನೆಸಿಕೊಳ್ಳುವಿರಿ. ಉದ್ಯೋಗದಲ್ಲಿ ಕಂಡುಬಂದ ತಾಂತ್ರಿಕ ಸಮಸ್ಯೆ ನಿವಾರಣೆಯಾಗುವುದು.
27 ಅಕ್ಟೋಬರ್ 2025, 23:30 IST
ಮೀನ
ಕೂದಲೆಳೆಯಷ್ಟು ತಪ್ಪುಗಳನ್ನು ಮಾಡಿದ್ದಕ್ಕೆ ಆತಂಕಕ್ಕೆ ಒಳಗಾಗುವ ಪರಿಸ್ಥಿತಿ ಎದುರಾಗಬಹುದು. ವೈಯಕ್ತಿಕ ತೃಪ್ತಿ ಧ್ಯೇಯೋದ್ದೇಶ ತಿಳಿದು ಸಮಾಜಮುಖಿ ಆಗಬೇಕಾಗುತ್ತದೆ.
27 ಅಕ್ಟೋಬರ್ 2025, 23:30 IST