<p><strong>ನಯ್ ಪೈ ತಾವ್ (ಪಿಟಿಐ): </strong>ಪಾಕಿಸ್ತಾನದಲ್ಲಿರುವ ತಮ್ಮ ಹುಟ್ಟೂರಿಗೆ ಭೇಟಿ ನೀಡುವ ಬಯಕೆ ಯನ್ನು ಪ್ರಧಾನಿ ಮನಮೋಹನ್ ಸಿಂಗ್ ವ್ಯಕ್ತಪಡಿಸಿದ್ದರು. ಆದರೆ ಅವರ ಅಧಿಕಾರಾವಧಿಯಲ್ಲಿ ಈ ಬಯಕೆ ಈಡೇರುವ ಸಾಧ್ಯತೆ ಕಡಿಮೆ ಎಂದು ಮೂಲಗಳು ತಿಳಿಸಿವೆ.<br /> <br /> 1932 ಸೆ. 26ರಂದು ಪಂಜಾಬ್ ಪ್ರಾಂತ್ಯದ ಘಾಹ್ ಗ್ರಾಮದಲ್ಲಿ ಸಿಂಗ್ ಜನಿಸಿದ್ದರು. 81 ವರ್ಷದ ಹಿಂದೆ ತಾವು ಹುಟ್ಟಿ ಬೆಳೆದಿದ್ದ ಊರಿಗೆ ಭೇಟಿ ನೀಡಬೇಕೆಂದು ಅವರು ಬಯಕೆ ವ್ಯಕ್ತಪಡಿಸಿದ್ದರು.<br /> <br /> ಪಾಕ್ಗೆ ಭೇಟಿ ನೀಡುವಂತೆ ಅಲ್ಲಿನ ಪ್ರಧಾನಿ ನವಾಜ್ ಶರೀಫ್ ಆಹ್ವಾನ ನೀಡಿದ್ದರೂ ಈ ಭೇಟಿಯಲ್ಲಿ ಭಾರತ– ಪಾಕ್ ನಡುವಿನ ವಿವಾದಾತ್ಮಕ ವಿಚಾರಗಳು ಇತ್ಯರ್ಥ ಆಗುವ ಸಾಧ್ಯತೆ ಇದ್ದಲ್ಲಿ ಮಾತ್ರ ಅಲ್ಲಿಗೆ ಪ್ರವಾಸ ಕೈಗೊಳ್ಳುವುದಾಗಿ ಸಿಂಗ್ ಹೇಳಿದ್ದರು.<br /> <br /> ಅಲ್ಲದೇ 26/11 ರ ಮುಂಬೈ ದಾಳಿಕೋರರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳುವಲ್ಲಿ ನಿಧಾನಗತಿ ತೋರುತ್ತಿರುವ ಪಾಕ್ ಕ್ರಮಕ್ಕೆ ಸಿಂಗ್ ಅಸಂತೋಷ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಇನ್ನೇನು ಚುನಾವಣೆ ಘೋಷಣೆಯಾಗಲಿದ್ದು, ಪ್ರಧಾನಿ ಪಾಕಿಸ್ತಾನ ಭೇಟಿ ಅಸಂಭವವಾಗಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನಯ್ ಪೈ ತಾವ್ (ಪಿಟಿಐ): </strong>ಪಾಕಿಸ್ತಾನದಲ್ಲಿರುವ ತಮ್ಮ ಹುಟ್ಟೂರಿಗೆ ಭೇಟಿ ನೀಡುವ ಬಯಕೆ ಯನ್ನು ಪ್ರಧಾನಿ ಮನಮೋಹನ್ ಸಿಂಗ್ ವ್ಯಕ್ತಪಡಿಸಿದ್ದರು. ಆದರೆ ಅವರ ಅಧಿಕಾರಾವಧಿಯಲ್ಲಿ ಈ ಬಯಕೆ ಈಡೇರುವ ಸಾಧ್ಯತೆ ಕಡಿಮೆ ಎಂದು ಮೂಲಗಳು ತಿಳಿಸಿವೆ.<br /> <br /> 1932 ಸೆ. 26ರಂದು ಪಂಜಾಬ್ ಪ್ರಾಂತ್ಯದ ಘಾಹ್ ಗ್ರಾಮದಲ್ಲಿ ಸಿಂಗ್ ಜನಿಸಿದ್ದರು. 81 ವರ್ಷದ ಹಿಂದೆ ತಾವು ಹುಟ್ಟಿ ಬೆಳೆದಿದ್ದ ಊರಿಗೆ ಭೇಟಿ ನೀಡಬೇಕೆಂದು ಅವರು ಬಯಕೆ ವ್ಯಕ್ತಪಡಿಸಿದ್ದರು.<br /> <br /> ಪಾಕ್ಗೆ ಭೇಟಿ ನೀಡುವಂತೆ ಅಲ್ಲಿನ ಪ್ರಧಾನಿ ನವಾಜ್ ಶರೀಫ್ ಆಹ್ವಾನ ನೀಡಿದ್ದರೂ ಈ ಭೇಟಿಯಲ್ಲಿ ಭಾರತ– ಪಾಕ್ ನಡುವಿನ ವಿವಾದಾತ್ಮಕ ವಿಚಾರಗಳು ಇತ್ಯರ್ಥ ಆಗುವ ಸಾಧ್ಯತೆ ಇದ್ದಲ್ಲಿ ಮಾತ್ರ ಅಲ್ಲಿಗೆ ಪ್ರವಾಸ ಕೈಗೊಳ್ಳುವುದಾಗಿ ಸಿಂಗ್ ಹೇಳಿದ್ದರು.<br /> <br /> ಅಲ್ಲದೇ 26/11 ರ ಮುಂಬೈ ದಾಳಿಕೋರರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳುವಲ್ಲಿ ನಿಧಾನಗತಿ ತೋರುತ್ತಿರುವ ಪಾಕ್ ಕ್ರಮಕ್ಕೆ ಸಿಂಗ್ ಅಸಂತೋಷ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಇನ್ನೇನು ಚುನಾವಣೆ ಘೋಷಣೆಯಾಗಲಿದ್ದು, ಪ್ರಧಾನಿ ಪಾಕಿಸ್ತಾನ ಭೇಟಿ ಅಸಂಭವವಾಗಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>