<p><strong>ನವದೆಹಲಿ:</strong> ಬೆಳೆಗಾರರ ತೀವ್ರ ವಿರೋಧ ಮತ್ತು ಒತ್ತಡಕ್ಕೆ ಮಣಿದ ಕೇಂದ್ರ ಸರ್ಕಾರವು, ಈರುಳ್ಳಿ ರಫ್ತು ಮೇಲಿನ ನಿಷೇಧವನ್ನು ಮಂಗಳವಾರ ರದ್ದುಗೊಳಿಸಿದೆ.<br /> <br /> ಈ ನಿರ್ಧಾರದಿಂದ ರೈತರಿಗೆ ನೆರವಾಗದಿದ್ದರೂ ಈರುಳ್ಳಿಯ ಚಿಲ್ಲರೆ ಮಾರಾಟ ದರ ಹೆಚ್ಚಲು ಕಾರಣವಾಗಲಿದೆ. ಆಹಾರಕ್ಕೆ ಸಂಬಂಧಿಸಿದ ಹಿರಿಯ ಸಚಿವರನ್ನು ಒಳಗೊಂಡ ಸಮಿತಿಯು, ಪ್ರಣವ್ ಮುಖರ್ಜಿ ನೇತೃತ್ವದಲ್ಲಿ ಸಭೆ ಸೇರಿ ಈ ನಿರ್ಧಾರ ಕೈಗೊಂಡಿತು. <br /> <br /> ಇದೊಂದು ಸಕಾಲಿಕ ನಿರ್ಧಾರವಾಗಿದೆ ಎಂದು ಮಹಾರಾಷ್ಟ್ರ ಮತ್ತು ಕರ್ನಾಟಕದ ಬೆಳೆಗಾರರು ಸ್ವಾಗತಿಸಿದ್ದಾರೆ. ನಿಷೇಧದ ಫಲವಾಗಿ ಬೆಳೆಗಾರರು ಅಂದಾಜು ರೂ.150 ಕೋಟಿಗಳಷ್ಟು ನಷ್ಟಕ್ಕೆ ಗುರಿಯಾಗಿದ್ದಾರೆ.<br /> <br /> `ಈರುಳ್ಳಿ ರಫ್ತು ಮೇಲಿನ ನಿಷೇಧ ರದ್ದುಗೊಳಿಸಲಾಗಿದೆ. ಹದಿನೈದು ದಿನಗಳ ನಂತರ ಮತ್ತೆ ಪರಿಸ್ಥಿತಿ ಪರಾಮರ್ಶಿಸಲಾಗುವುದು~ ಎಂದು ಆಹಾರ ಸಚಿವ ಕೆ. ವಿ. ಥಾಮಸ್ ಅವರು ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದರು. <br /> <br /> ಪೂರೈಕೆ ಪ್ರಮಾಣ ಕಡಿಮೆಯಾಗಿ ನವದೆಹಲಿಯಲ್ಲಿ ಈರುಳ್ಳಿ ಬೆಲೆಯು ಅತ್ಯಲ್ಪ ಅವಧಿಯಲ್ಲಿ ಪ್ರತಿ ಕೆಜಿಗೆ ರೂ.15ರಿಂದ ರೂ.25ಕ್ಕೆ ತಲುಪಿತ್ತು. ಈ ಹಿನ್ನೆಲೆಯಲ್ಲಿ, ದೇಶದ ಇತರ ಭಾಗದಲ್ಲಿಯೂ ಬೆಲೆ ಪರಿಸ್ಥಿತಿ ಕೈಮೀರಿ ಹೋಗಬಾರದು ಮತ್ತು ಸ್ಥಳೀಯ ಮಾರುಕಟ್ಟೆಗಳಲ್ಲಿ ಲಭ್ಯತೆ ಪ್ರಮಾಣ ಹೆಚ್ಚಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ಈ ತಿಂಗಳ 9ರಂದು ರಫ್ತು ನಿಷೇಧ ಆದೇಶ ಹೊರಡಿಸಿತ್ತು. <br /> ರಫ್ತು ನಿಷೇಧ ಜಾರಿಗೆ ಬರುತ್ತಿದ್ದಂತೆ ದೆಹಲಿಯಲ್ಲಿ ಬೆಲೆಯು ಪ್ರತಿ ಕೆಜಿಗೆ ರೂ.2 ರಿಂದ ರೂ.5ರಂತೆ ಕಡಿಮೆಯಾಗಿತ್ತು. <br /> <br /> ರಫ್ತು ಉತ್ಸಾಹ ಕುಗ್ಗಿಸಲು ಕನಿಷ್ಠ ರಫ್ತು ಬೆಲೆಯನ್ನು (ಎಂಇಪಿ) ಪ್ರತಿ ಟನ್ಗೆ 475 ಡಾಲರ್ಗಳಿಗೆ (ರೂ.22,800) ನಿಗದಿ ಮಾಡಲಾಗಿದೆ. ರಫ್ತು ನಿಷೇಧ ಆದೇಶ ಹೊರಡಿಸಿದಾಗಲೂ `ಎಂಇಪಿ~ ಇದೇ ದರದಲ್ಲಿತ್ತು. ಪ್ರತಿ 15 ದಿನಗಳಿಗೊಮ್ಮೆ `ಎಂಇಪಿ~ ಪರಾಮರ್ಶಿಸಲಾಗುವುದು ಎಂದು ವಾಣಿಜ್ಯ ಕಾರ್ಯದರ್ಶಿ ರಾಹುಲ್ ಖುಲ್ಲರ್ ಹೇಳಿದ್ದಾರೆ.<br /> <br /> ಈರುಳ್ಳಿ ಬೆಳೆಯುವ ಪ್ರಮುಖ ರಾಜ್ಯಗಳಾದ ಮಹಾರಾಷ್ಟ್ರ, ಗುಜರಾತ್ ಮತ್ತು ಕರ್ನಾಟಕದಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಮಳೆಯಾಗಿದ್ದರಿಂದ ಎರಡು ಮೂರು ವಾರಗಳ ಹಿಂದೆ ಈರುಳ್ಳಿ ಪೂರೈಕೆಯಲ್ಲಿ ಅಡಚಣೆ ಕಂಡು ಬಂದಿತ್ತು.<br /> <br /> <strong>ಬೆಳೆಗಾರರ ಪ್ರತಿಭಟನೆ: </strong>ಕರ್ನಾಟಕ ಮತ್ತು ಮಹಾರಾಷ್ಟ್ರದ ಬೆಳೆಗಾರರಿಂದ ರಫ್ತು ನಿಷೇಧಕ್ಕೆ ತೀವ್ರ ಪ್ರತಿಭಟನೆ ವ್ಯಕ್ತವಾಗಿತ್ತು. ಈ ನಿರ್ಧಾರದಿಂದ ತಮಗೆ ನ್ಯಾಯಯುತವಾಗಿ ಸಿಗಬೇಕಾದ ಬೆಲೆ ದೊರೆಯುವುದಿಲ್ಲ ಎಂದು ರೈತರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. <br /> <br /> ತಮ್ಮ ಆಕ್ರೋಶದ ಪ್ರತೀಕವಾಗಿ ಬೆಳೆಗಾರರು ಅನೇಕ ಕಡೆಗಳಲ್ಲಿ ಮಾರುಕಟ್ಟೆಗೆ ಈರುಳ್ಳಿ ತರುವುದನ್ನೂ ನಿಲ್ಲಿಸಿದ್ದರು. ಬೆಳೆಗಾರರ ಪ್ರತಿಭಟನೆ ಕಾರಣಕ್ಕೇನೆ ಸರ್ಕಾರ ರಫ್ತು ನಿಷೇಧ ಬಗ್ಗೆ ಮರು ಚಿಂತನೆ ನಡೆಸಿತ್ತು.<br /> <br /> ಹಬ್ಬಹರಿದಿನಗಳಲ್ಲಿ ಈರುಳ್ಳಿ ಪೂರೈಕೆಯಲ್ಲಿ ಕುಸಿತ ಕಂಡುಬರುವುದು ಮತ್ತು ಬೆಲೆಗಳು ನಾಗಾಲೋಟದಲ್ಲಿ ಏರುವುದು ದೇಶದಾದ್ಯಂತ ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ನೋಟವಾಗಿದೆ.<br /> <br /> ಭಾರತವು ಪ್ರಮುಖವಾಗಿ ಮಲೇಷ್ಯಾ, ಶ್ರೀಲಂಕಾ, ದುಬೈ, ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳಿಗೆ ಈರುಳ್ಳಿ ರಫ್ತು ಮಾಡುತ್ತಿದೆ. ಸಕ್ಕರೆಯ ಸಂಗ್ರಹ ಮಿತಿಯನ್ನು ಎರಡು ತಿಂಗಳವರೆಗೆ ನಿಗದಿಪಡಿಸಿರುವುದನ್ನು ಸಚಿವರ ತಂಡವು ನವೆಂಬರ್ 30ರವರೆಗೆ ವಿಸ್ತರಿಸಿದೆ.<br /> <br /> ಖಾದ್ಯ ತೈಲ, ಎಣ್ಣೆಬೀಜ ಮತ್ತು ಬೇಳೆಕಾಳುಗಳ ಸಂಗ್ರಹ ಮಿತಿಯನ್ನು ಮುಂದಿನ ವರ್ಷದ ಸೆಪ್ಟೆಂಬರ್ 30ರವರೆಗೆ ವಿಸ್ತರಿಸಿ ನಿರ್ಧಾರ ಕೈಗೊಳ್ಳಲಾಗಿದೆ.<br /> <br /> ನವೆಂಬರ್, ಡಿಸೆಂಬರ್ ಮತ್ತು ಜನವರಿ ತಿಂಗಳಲ್ಲಿ ಈರುಳ್ಳಿ ಪೂರೈಕೆ ಸಾಕಷ್ಟು ಪ್ರಮಾಣದಲ್ಲಿ ಇರಲಿದೆ. ಇದರಿಂದ ಬೆಲೆಗಳು ಉತ್ಪಾದನಾ ವೆಚ್ಚಕ್ಕಿಂತ ಕಡಿಮೆಯಾಗಬಹುದು ಎಂದೂ ಕೃಷಿ ಸಚಿವ ಪವಾರ್ ಅಭಿಪ್ರಾಯಪಟ್ಟಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಬೆಳೆಗಾರರ ತೀವ್ರ ವಿರೋಧ ಮತ್ತು ಒತ್ತಡಕ್ಕೆ ಮಣಿದ ಕೇಂದ್ರ ಸರ್ಕಾರವು, ಈರುಳ್ಳಿ ರಫ್ತು ಮೇಲಿನ ನಿಷೇಧವನ್ನು ಮಂಗಳವಾರ ರದ್ದುಗೊಳಿಸಿದೆ.<br /> <br /> ಈ ನಿರ್ಧಾರದಿಂದ ರೈತರಿಗೆ ನೆರವಾಗದಿದ್ದರೂ ಈರುಳ್ಳಿಯ ಚಿಲ್ಲರೆ ಮಾರಾಟ ದರ ಹೆಚ್ಚಲು ಕಾರಣವಾಗಲಿದೆ. ಆಹಾರಕ್ಕೆ ಸಂಬಂಧಿಸಿದ ಹಿರಿಯ ಸಚಿವರನ್ನು ಒಳಗೊಂಡ ಸಮಿತಿಯು, ಪ್ರಣವ್ ಮುಖರ್ಜಿ ನೇತೃತ್ವದಲ್ಲಿ ಸಭೆ ಸೇರಿ ಈ ನಿರ್ಧಾರ ಕೈಗೊಂಡಿತು. <br /> <br /> ಇದೊಂದು ಸಕಾಲಿಕ ನಿರ್ಧಾರವಾಗಿದೆ ಎಂದು ಮಹಾರಾಷ್ಟ್ರ ಮತ್ತು ಕರ್ನಾಟಕದ ಬೆಳೆಗಾರರು ಸ್ವಾಗತಿಸಿದ್ದಾರೆ. ನಿಷೇಧದ ಫಲವಾಗಿ ಬೆಳೆಗಾರರು ಅಂದಾಜು ರೂ.150 ಕೋಟಿಗಳಷ್ಟು ನಷ್ಟಕ್ಕೆ ಗುರಿಯಾಗಿದ್ದಾರೆ.<br /> <br /> `ಈರುಳ್ಳಿ ರಫ್ತು ಮೇಲಿನ ನಿಷೇಧ ರದ್ದುಗೊಳಿಸಲಾಗಿದೆ. ಹದಿನೈದು ದಿನಗಳ ನಂತರ ಮತ್ತೆ ಪರಿಸ್ಥಿತಿ ಪರಾಮರ್ಶಿಸಲಾಗುವುದು~ ಎಂದು ಆಹಾರ ಸಚಿವ ಕೆ. ವಿ. ಥಾಮಸ್ ಅವರು ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದರು. <br /> <br /> ಪೂರೈಕೆ ಪ್ರಮಾಣ ಕಡಿಮೆಯಾಗಿ ನವದೆಹಲಿಯಲ್ಲಿ ಈರುಳ್ಳಿ ಬೆಲೆಯು ಅತ್ಯಲ್ಪ ಅವಧಿಯಲ್ಲಿ ಪ್ರತಿ ಕೆಜಿಗೆ ರೂ.15ರಿಂದ ರೂ.25ಕ್ಕೆ ತಲುಪಿತ್ತು. ಈ ಹಿನ್ನೆಲೆಯಲ್ಲಿ, ದೇಶದ ಇತರ ಭಾಗದಲ್ಲಿಯೂ ಬೆಲೆ ಪರಿಸ್ಥಿತಿ ಕೈಮೀರಿ ಹೋಗಬಾರದು ಮತ್ತು ಸ್ಥಳೀಯ ಮಾರುಕಟ್ಟೆಗಳಲ್ಲಿ ಲಭ್ಯತೆ ಪ್ರಮಾಣ ಹೆಚ್ಚಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ಈ ತಿಂಗಳ 9ರಂದು ರಫ್ತು ನಿಷೇಧ ಆದೇಶ ಹೊರಡಿಸಿತ್ತು. <br /> ರಫ್ತು ನಿಷೇಧ ಜಾರಿಗೆ ಬರುತ್ತಿದ್ದಂತೆ ದೆಹಲಿಯಲ್ಲಿ ಬೆಲೆಯು ಪ್ರತಿ ಕೆಜಿಗೆ ರೂ.2 ರಿಂದ ರೂ.5ರಂತೆ ಕಡಿಮೆಯಾಗಿತ್ತು. <br /> <br /> ರಫ್ತು ಉತ್ಸಾಹ ಕುಗ್ಗಿಸಲು ಕನಿಷ್ಠ ರಫ್ತು ಬೆಲೆಯನ್ನು (ಎಂಇಪಿ) ಪ್ರತಿ ಟನ್ಗೆ 475 ಡಾಲರ್ಗಳಿಗೆ (ರೂ.22,800) ನಿಗದಿ ಮಾಡಲಾಗಿದೆ. ರಫ್ತು ನಿಷೇಧ ಆದೇಶ ಹೊರಡಿಸಿದಾಗಲೂ `ಎಂಇಪಿ~ ಇದೇ ದರದಲ್ಲಿತ್ತು. ಪ್ರತಿ 15 ದಿನಗಳಿಗೊಮ್ಮೆ `ಎಂಇಪಿ~ ಪರಾಮರ್ಶಿಸಲಾಗುವುದು ಎಂದು ವಾಣಿಜ್ಯ ಕಾರ್ಯದರ್ಶಿ ರಾಹುಲ್ ಖುಲ್ಲರ್ ಹೇಳಿದ್ದಾರೆ.<br /> <br /> ಈರುಳ್ಳಿ ಬೆಳೆಯುವ ಪ್ರಮುಖ ರಾಜ್ಯಗಳಾದ ಮಹಾರಾಷ್ಟ್ರ, ಗುಜರಾತ್ ಮತ್ತು ಕರ್ನಾಟಕದಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಮಳೆಯಾಗಿದ್ದರಿಂದ ಎರಡು ಮೂರು ವಾರಗಳ ಹಿಂದೆ ಈರುಳ್ಳಿ ಪೂರೈಕೆಯಲ್ಲಿ ಅಡಚಣೆ ಕಂಡು ಬಂದಿತ್ತು.<br /> <br /> <strong>ಬೆಳೆಗಾರರ ಪ್ರತಿಭಟನೆ: </strong>ಕರ್ನಾಟಕ ಮತ್ತು ಮಹಾರಾಷ್ಟ್ರದ ಬೆಳೆಗಾರರಿಂದ ರಫ್ತು ನಿಷೇಧಕ್ಕೆ ತೀವ್ರ ಪ್ರತಿಭಟನೆ ವ್ಯಕ್ತವಾಗಿತ್ತು. ಈ ನಿರ್ಧಾರದಿಂದ ತಮಗೆ ನ್ಯಾಯಯುತವಾಗಿ ಸಿಗಬೇಕಾದ ಬೆಲೆ ದೊರೆಯುವುದಿಲ್ಲ ಎಂದು ರೈತರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. <br /> <br /> ತಮ್ಮ ಆಕ್ರೋಶದ ಪ್ರತೀಕವಾಗಿ ಬೆಳೆಗಾರರು ಅನೇಕ ಕಡೆಗಳಲ್ಲಿ ಮಾರುಕಟ್ಟೆಗೆ ಈರುಳ್ಳಿ ತರುವುದನ್ನೂ ನಿಲ್ಲಿಸಿದ್ದರು. ಬೆಳೆಗಾರರ ಪ್ರತಿಭಟನೆ ಕಾರಣಕ್ಕೇನೆ ಸರ್ಕಾರ ರಫ್ತು ನಿಷೇಧ ಬಗ್ಗೆ ಮರು ಚಿಂತನೆ ನಡೆಸಿತ್ತು.<br /> <br /> ಹಬ್ಬಹರಿದಿನಗಳಲ್ಲಿ ಈರುಳ್ಳಿ ಪೂರೈಕೆಯಲ್ಲಿ ಕುಸಿತ ಕಂಡುಬರುವುದು ಮತ್ತು ಬೆಲೆಗಳು ನಾಗಾಲೋಟದಲ್ಲಿ ಏರುವುದು ದೇಶದಾದ್ಯಂತ ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ನೋಟವಾಗಿದೆ.<br /> <br /> ಭಾರತವು ಪ್ರಮುಖವಾಗಿ ಮಲೇಷ್ಯಾ, ಶ್ರೀಲಂಕಾ, ದುಬೈ, ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳಿಗೆ ಈರುಳ್ಳಿ ರಫ್ತು ಮಾಡುತ್ತಿದೆ. ಸಕ್ಕರೆಯ ಸಂಗ್ರಹ ಮಿತಿಯನ್ನು ಎರಡು ತಿಂಗಳವರೆಗೆ ನಿಗದಿಪಡಿಸಿರುವುದನ್ನು ಸಚಿವರ ತಂಡವು ನವೆಂಬರ್ 30ರವರೆಗೆ ವಿಸ್ತರಿಸಿದೆ.<br /> <br /> ಖಾದ್ಯ ತೈಲ, ಎಣ್ಣೆಬೀಜ ಮತ್ತು ಬೇಳೆಕಾಳುಗಳ ಸಂಗ್ರಹ ಮಿತಿಯನ್ನು ಮುಂದಿನ ವರ್ಷದ ಸೆಪ್ಟೆಂಬರ್ 30ರವರೆಗೆ ವಿಸ್ತರಿಸಿ ನಿರ್ಧಾರ ಕೈಗೊಳ್ಳಲಾಗಿದೆ.<br /> <br /> ನವೆಂಬರ್, ಡಿಸೆಂಬರ್ ಮತ್ತು ಜನವರಿ ತಿಂಗಳಲ್ಲಿ ಈರುಳ್ಳಿ ಪೂರೈಕೆ ಸಾಕಷ್ಟು ಪ್ರಮಾಣದಲ್ಲಿ ಇರಲಿದೆ. ಇದರಿಂದ ಬೆಲೆಗಳು ಉತ್ಪಾದನಾ ವೆಚ್ಚಕ್ಕಿಂತ ಕಡಿಮೆಯಾಗಬಹುದು ಎಂದೂ ಕೃಷಿ ಸಚಿವ ಪವಾರ್ ಅಭಿಪ್ರಾಯಪಟ್ಟಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>