<p><strong>ವಿಜಯಪುರ: </strong>ಈ ಎತ್ತಿನ ಜೋಡಿಯ ಬೆಲೆ ಬರೋಬ್ಬರಿ ₹ ಒಂಬತ್ತು ಲಕ್ಷ. ‘ಉಂಗೋಲು’ ತಳಿಯ ಇವುಗಳ ಮೂಲ ಆಂಧ್ರಪ್ರದೇಶ. ಇದೀಗ ಐದರ ಹರೆಯ. ವರ್ಷದ ಕರುಗಳಿದ್ದಾಗ ಹೈದರಾಬಾದ್ನಲ್ಲಿ ₹ 1.5 ಲಕ್ಷಕ್ಕೆ ಖರೀದಿಸಿದ ಕೊಪ್ಪಳ ಜಿಲ್ಲೆ ಗಂಗಾವತಿ ತಾಲ್ಲೂಕಿನ ಸಿದ್ದಾಪುರದ ನಾಗೇಶರಾವ್ ಈ ಜೋಡಿಯ ಮಾಲೀಕ.<br /> <br /> ನಾಲ್ಕು ವರ್ಷದಿಂದ ಈ ಆನೆ ಮರಿ ಯಂತಹ ಎತ್ತುಗಳನ್ನು ಸಾಕುತ್ತಿ ರುವ ಮಾಲೀಕನಿಗೆ ಇದು ಹೆಮ್ಮೆ. ತಮ್ಮೂರಿನ ಸುತ್ತಮುತ್ತಲ ಜಾತ್ರೆ, ವಸ್ತು ಪ್ರದರ್ಶನ, ಕೃಷಿ ಮೇಳಗಳಲ್ಲಿ ಈ ಜೋಡಿ ಪ್ರದರ್ಶಿಸಿ ಚಾಂಪಿಯನ್ ಪ್ರಶಸ್ತಿಗಳನ್ನು ಬಾಚಿಕೊಂಡಿರುವ ಖುಷಿ.<br /> <br /> ಇದೀಗ ಮಾರಾಟಕ್ಕಾಗಿ ಸಿದ್ಧೇಶ್ವರ ಜಾನುವಾರು ಜಾತ್ರೆಗೆ ಬುಧವಾರವೇ ಬಂದಿದ್ದಾರೆ. ₹ ಆರು ಲಕ್ಷದಿಂದ ₹ ಏಳು ಲಕ್ಷದವರೆಗೂ ಖರೀದಿಗೆ ಕೇಳಿದ್ದಾರೆ. ಇನ್ನೇನು ಜಾತ್ರೆ ಮುಗಿಯುತ್ತಾ ಬಂತು. ಏಳರಿಂದ ಎಂಟು ಲಕ್ಷದ ಆಸುಪಾಸು ಯಾರಾದರೂ ಖರೀದಿಸಲು ಮುಂದೆ ಬಂದರೆ ಮಾರುವೆ ಎಂದು ನಾಗೇಶರಾವ್ ‘ಪ್ರಜಾವಾಣಿ’ಗೆ ತಿಳಿಸಿದರು.<br /> <br /> ಜಾನುವಾರು ಜಾತ್ರೆಯಲ್ಲಿ ಈ ಎತ್ತುಗಳದ್ದೇ ಮಾತು. ಬಂದವರೆಲ್ಲ ಒಮ್ಮೆ ನೋಡಲು ಎತ್ತುಗಳ ಬಳಿ ಹೋಗುವರೇ. ಸೆಲ್ಫಿ ತೆಗೆದುಕೊಳ್ಳುವವರು, ತಮ್ಮ ಮೊಬೈಲ್ಗಳಲ್ಲಿ ಎತ್ತಿನ ಛಾಯಾಚಿತ್ರ ಸೆರೆ ಹಿಡಿಯಲು ಮುಂದಾಗುವವರೇ ಹೆಚ್ಚು ಎನ್ನುತ್ತಾರೆ ಸಮೀಪದಲ್ಲೇ ಜಾನುವಾರುಗಳನ್ನು ಕಟ್ಟಿಕೊಂಡಿರುವ ರೈತರು.<br /> <br /> ರೈತರ ಬಾಯಲ್ಲಿ ಆನೆ ಮರಿಯಂತಹ ಎತ್ತುಗಳು. ನಮ್ಮ ಎತ್ತುಗಳನ್ನು 2–3 ಹಾಕಿದರೆ ಇಂತಹ ಒಂದು ಎತ್ತಾಗು ತ್ತದೆ... ಎಂಬ ಉದ್ಗಾರ ಕೇಳಿ ಬರುತ್ತಿದೆ.<br /> <br /> <strong>ವಿಶೇಷ: </strong>ಐದರ ಹರೆಯದ ಎತ್ತುಗಳಾಗಿದ್ದರೂ 5–6 ಟನ್ ಭಾರ ಎಳೆಯುವ ಸಾಮರ್ಥ್ಯ. ಮುಂಜಾನೆಯಿಂದ–ಸಂಜೆವರೆಗೂ ದಣಿವರಿಯದೆ ದುಡಿಯುವ ಶಕ್ತಿ. ಎತ್ತರದ ಭುಜ. ಸಣ್ಣ ಕೊಂಬು, ಬೃಹತ್ ದೇಹ ಹೊಂದಿರುವ ಈ ಜೋಡಿ ದೇಗುಲದ ಮುಂದೆ ಪ್ರತಿಷ್ಠಾಪನೆಗೊಂಡಿರುವ ನಂದಿಯಂತೆ ಕಾಣುತ್ತವೆ. ಈ ಮೈಕಟ್ಟು ‘ಉಂಗೋಲು’ ತಳಿಯ ಜಾನುವಾರುಗಳ ವಿಶೇಷ.<br /> <br /> ಯೂಟ್ಯೂಬ್ನಲ್ಲಿ ಎತ್ತುಗಳ ಚಿತ್ರ, ವಿಡಿಯೋ ಕ್ಲಿಪ್ಪಿಂಗ್ ಹಾಕಿದ್ದು, ಡಾ.ರಾಜ್ಕುಮಾರ್ ಚಲನಚಿತ್ರ ಗೀತೆ ಅಳವಡಿಸಲಾಗಿದೆ. ಇದನ್ನು ಸಾಕಷ್ಟು ಮಂದಿ ಇಷ್ಟಪಟ್ಟಿದ್ದಾರೆ ಎನ್ನುತ್ತಾರೆ ನಾಗೇಶರಾವ್.<br /> <br /> <strong>ನಿರ್ವಹಣೆ:</strong> ಎತ್ತುಗಳ ನಿರ್ವಹಣೆಗಾಗಿ ಒಬ್ಬರನ್ನು ನೇಮಿಸಲಾಗಿದೆ. ನಿತ್ಯ ₹ 200 ಕೂಲಿ. ತಿಂಗಳ ಖರ್ಚು ₹ 20 ಸಾವಿರ ದಾಟಲಿದೆ. ಸಜ್ಜೆ, ಹುರುಳಿ, ಮೆಕ್ಕೆಜೋಳ, ಅಕ್ಕಿ ನುಚ್ಚಿನ ಮಿಶ್ರಣ ತಲಾ ಐದು ಕೆ.ಜಿ. ಮುಂಜಾನೆ–ಮುಸ್ಸಂಜೆ ತಪ್ಪದೆ ನೀಡುವ ಪೌಷ್ಟಿಕ ಆಹಾರ. ಒಟ್ಟು ದಿನಕ್ಕೆ 20 ಕೆ.ಜಿ. ಪೌಷ್ಟಿಕ ಆಹಾರ ಎರಡಕ್ಕೂ ನೀಡಲಾಗುತ್ತದೆ. ಇದರ ಜತೆಗೆ ತಲಾ ಎರಡು ಬಾಳೆಹಣ್ಣು.<br /> <br /> ಭತ್ತದ ಹುಲ್ಲು, ಹಸಿ ಮೇವು ತಿನ್ನಲು. ಕುಡಿಯಲು ಬೇಕಾದಷ್ಟು ನೀರು. ನಿತ್ಯವೂ ಕೆಲಸಕ್ಕೆ ತೆರಳುವ ಮುನ್ನ, ಇಲ್ಲವೇ ಕೆಲಸ ಮುಗಿದ ಬಳಿಕ ಶಾಂಪು ಬಳಸಿ ತಪ್ಪದೇ ಸ್ನಾನ ಮಾಡಿ ಸುತ್ತೇವೆ ಎಂದು ಮಾಲೀಕ ನಾಗೇಶರಾವ್ ಮಾಹಿತಿ ನೀಡಿದರು.<br /> <br /> <strong>***<br /> <em>ತಿಂಗಳಿಗೆ ₹ 20 ಸಾವಿರ ವೆಚ್ಚ ಮಾಡಿ ಎತ್ತುಗಳನ್ನು ಸಾಕುತ್ತಿರುವುದು ಎಂದು ಭಾರ ಎನಿಸಿಲ್ಲ. ಮನಸ್ಸಿಗೆ ಖುಷಿ ನೀಡಿದೆ.</em><br /> -ನಾಗೇಶರಾವ್, </strong>ಎತ್ತಿನ ಜೋಡಿ ಮಾಲೀಕ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಜಯಪುರ: </strong>ಈ ಎತ್ತಿನ ಜೋಡಿಯ ಬೆಲೆ ಬರೋಬ್ಬರಿ ₹ ಒಂಬತ್ತು ಲಕ್ಷ. ‘ಉಂಗೋಲು’ ತಳಿಯ ಇವುಗಳ ಮೂಲ ಆಂಧ್ರಪ್ರದೇಶ. ಇದೀಗ ಐದರ ಹರೆಯ. ವರ್ಷದ ಕರುಗಳಿದ್ದಾಗ ಹೈದರಾಬಾದ್ನಲ್ಲಿ ₹ 1.5 ಲಕ್ಷಕ್ಕೆ ಖರೀದಿಸಿದ ಕೊಪ್ಪಳ ಜಿಲ್ಲೆ ಗಂಗಾವತಿ ತಾಲ್ಲೂಕಿನ ಸಿದ್ದಾಪುರದ ನಾಗೇಶರಾವ್ ಈ ಜೋಡಿಯ ಮಾಲೀಕ.<br /> <br /> ನಾಲ್ಕು ವರ್ಷದಿಂದ ಈ ಆನೆ ಮರಿ ಯಂತಹ ಎತ್ತುಗಳನ್ನು ಸಾಕುತ್ತಿ ರುವ ಮಾಲೀಕನಿಗೆ ಇದು ಹೆಮ್ಮೆ. ತಮ್ಮೂರಿನ ಸುತ್ತಮುತ್ತಲ ಜಾತ್ರೆ, ವಸ್ತು ಪ್ರದರ್ಶನ, ಕೃಷಿ ಮೇಳಗಳಲ್ಲಿ ಈ ಜೋಡಿ ಪ್ರದರ್ಶಿಸಿ ಚಾಂಪಿಯನ್ ಪ್ರಶಸ್ತಿಗಳನ್ನು ಬಾಚಿಕೊಂಡಿರುವ ಖುಷಿ.<br /> <br /> ಇದೀಗ ಮಾರಾಟಕ್ಕಾಗಿ ಸಿದ್ಧೇಶ್ವರ ಜಾನುವಾರು ಜಾತ್ರೆಗೆ ಬುಧವಾರವೇ ಬಂದಿದ್ದಾರೆ. ₹ ಆರು ಲಕ್ಷದಿಂದ ₹ ಏಳು ಲಕ್ಷದವರೆಗೂ ಖರೀದಿಗೆ ಕೇಳಿದ್ದಾರೆ. ಇನ್ನೇನು ಜಾತ್ರೆ ಮುಗಿಯುತ್ತಾ ಬಂತು. ಏಳರಿಂದ ಎಂಟು ಲಕ್ಷದ ಆಸುಪಾಸು ಯಾರಾದರೂ ಖರೀದಿಸಲು ಮುಂದೆ ಬಂದರೆ ಮಾರುವೆ ಎಂದು ನಾಗೇಶರಾವ್ ‘ಪ್ರಜಾವಾಣಿ’ಗೆ ತಿಳಿಸಿದರು.<br /> <br /> ಜಾನುವಾರು ಜಾತ್ರೆಯಲ್ಲಿ ಈ ಎತ್ತುಗಳದ್ದೇ ಮಾತು. ಬಂದವರೆಲ್ಲ ಒಮ್ಮೆ ನೋಡಲು ಎತ್ತುಗಳ ಬಳಿ ಹೋಗುವರೇ. ಸೆಲ್ಫಿ ತೆಗೆದುಕೊಳ್ಳುವವರು, ತಮ್ಮ ಮೊಬೈಲ್ಗಳಲ್ಲಿ ಎತ್ತಿನ ಛಾಯಾಚಿತ್ರ ಸೆರೆ ಹಿಡಿಯಲು ಮುಂದಾಗುವವರೇ ಹೆಚ್ಚು ಎನ್ನುತ್ತಾರೆ ಸಮೀಪದಲ್ಲೇ ಜಾನುವಾರುಗಳನ್ನು ಕಟ್ಟಿಕೊಂಡಿರುವ ರೈತರು.<br /> <br /> ರೈತರ ಬಾಯಲ್ಲಿ ಆನೆ ಮರಿಯಂತಹ ಎತ್ತುಗಳು. ನಮ್ಮ ಎತ್ತುಗಳನ್ನು 2–3 ಹಾಕಿದರೆ ಇಂತಹ ಒಂದು ಎತ್ತಾಗು ತ್ತದೆ... ಎಂಬ ಉದ್ಗಾರ ಕೇಳಿ ಬರುತ್ತಿದೆ.<br /> <br /> <strong>ವಿಶೇಷ: </strong>ಐದರ ಹರೆಯದ ಎತ್ತುಗಳಾಗಿದ್ದರೂ 5–6 ಟನ್ ಭಾರ ಎಳೆಯುವ ಸಾಮರ್ಥ್ಯ. ಮುಂಜಾನೆಯಿಂದ–ಸಂಜೆವರೆಗೂ ದಣಿವರಿಯದೆ ದುಡಿಯುವ ಶಕ್ತಿ. ಎತ್ತರದ ಭುಜ. ಸಣ್ಣ ಕೊಂಬು, ಬೃಹತ್ ದೇಹ ಹೊಂದಿರುವ ಈ ಜೋಡಿ ದೇಗುಲದ ಮುಂದೆ ಪ್ರತಿಷ್ಠಾಪನೆಗೊಂಡಿರುವ ನಂದಿಯಂತೆ ಕಾಣುತ್ತವೆ. ಈ ಮೈಕಟ್ಟು ‘ಉಂಗೋಲು’ ತಳಿಯ ಜಾನುವಾರುಗಳ ವಿಶೇಷ.<br /> <br /> ಯೂಟ್ಯೂಬ್ನಲ್ಲಿ ಎತ್ತುಗಳ ಚಿತ್ರ, ವಿಡಿಯೋ ಕ್ಲಿಪ್ಪಿಂಗ್ ಹಾಕಿದ್ದು, ಡಾ.ರಾಜ್ಕುಮಾರ್ ಚಲನಚಿತ್ರ ಗೀತೆ ಅಳವಡಿಸಲಾಗಿದೆ. ಇದನ್ನು ಸಾಕಷ್ಟು ಮಂದಿ ಇಷ್ಟಪಟ್ಟಿದ್ದಾರೆ ಎನ್ನುತ್ತಾರೆ ನಾಗೇಶರಾವ್.<br /> <br /> <strong>ನಿರ್ವಹಣೆ:</strong> ಎತ್ತುಗಳ ನಿರ್ವಹಣೆಗಾಗಿ ಒಬ್ಬರನ್ನು ನೇಮಿಸಲಾಗಿದೆ. ನಿತ್ಯ ₹ 200 ಕೂಲಿ. ತಿಂಗಳ ಖರ್ಚು ₹ 20 ಸಾವಿರ ದಾಟಲಿದೆ. ಸಜ್ಜೆ, ಹುರುಳಿ, ಮೆಕ್ಕೆಜೋಳ, ಅಕ್ಕಿ ನುಚ್ಚಿನ ಮಿಶ್ರಣ ತಲಾ ಐದು ಕೆ.ಜಿ. ಮುಂಜಾನೆ–ಮುಸ್ಸಂಜೆ ತಪ್ಪದೆ ನೀಡುವ ಪೌಷ್ಟಿಕ ಆಹಾರ. ಒಟ್ಟು ದಿನಕ್ಕೆ 20 ಕೆ.ಜಿ. ಪೌಷ್ಟಿಕ ಆಹಾರ ಎರಡಕ್ಕೂ ನೀಡಲಾಗುತ್ತದೆ. ಇದರ ಜತೆಗೆ ತಲಾ ಎರಡು ಬಾಳೆಹಣ್ಣು.<br /> <br /> ಭತ್ತದ ಹುಲ್ಲು, ಹಸಿ ಮೇವು ತಿನ್ನಲು. ಕುಡಿಯಲು ಬೇಕಾದಷ್ಟು ನೀರು. ನಿತ್ಯವೂ ಕೆಲಸಕ್ಕೆ ತೆರಳುವ ಮುನ್ನ, ಇಲ್ಲವೇ ಕೆಲಸ ಮುಗಿದ ಬಳಿಕ ಶಾಂಪು ಬಳಸಿ ತಪ್ಪದೇ ಸ್ನಾನ ಮಾಡಿ ಸುತ್ತೇವೆ ಎಂದು ಮಾಲೀಕ ನಾಗೇಶರಾವ್ ಮಾಹಿತಿ ನೀಡಿದರು.<br /> <br /> <strong>***<br /> <em>ತಿಂಗಳಿಗೆ ₹ 20 ಸಾವಿರ ವೆಚ್ಚ ಮಾಡಿ ಎತ್ತುಗಳನ್ನು ಸಾಕುತ್ತಿರುವುದು ಎಂದು ಭಾರ ಎನಿಸಿಲ್ಲ. ಮನಸ್ಸಿಗೆ ಖುಷಿ ನೀಡಿದೆ.</em><br /> -ನಾಗೇಶರಾವ್, </strong>ಎತ್ತಿನ ಜೋಡಿ ಮಾಲೀಕ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>