<p>ಮಂಗಳೂರು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಸ್ನಾತಕೋತ್ತರ ವಿಭಾಗದಲ್ಲಿ ಓದುತ್ತಿರುವ ಈ ಹುಡುಗನನ್ನು ಪೊಲೀಸರು ಬಂಧಿಸಿದ್ದಾರೆ. ಈತ `ನಕ್ಸಲೀಯ~ ಎಂಬ ಹಣೆಪಟ್ಟಿಯನ್ನು ಕಟ್ಟಿದ್ದಾರೆ.<br /> <br /> ಬೆಳ್ತಂಗಡಿಯಿಂದ ಬಸ್ಸಿಳಿದು ದುರ್ಗಮ ಕಾಡಿನಲ್ಲಿ ಎರಡು ಗಂಟೆಗಳ ಕಾಲ ಬೆಟ್ಟಗುಡ್ಡಗಳ ದಾರಿಯಲ್ಲಿ ನಡೆದರೆ ಕುತ್ಲೂರು ಎಂಬ ಮಲೆಕುಡಿಯರ ಹಾಡಿ ಸಿಗುತ್ತದೆ. ಆದಿವಾಸಿ ಗಿರಿಜನರ ಈ ಹಾಡಿಯಲ್ಲಿ ಏಕೈಕ ವಿದ್ಯಾವಂತ ವಿಠಲ ಮಲೆಕುಡಿಯ. ಈತ ಬಿ.ಎ ಓದಿ ಪತ್ರಿಕೋದ್ಯಮದಲ್ಲಿ ಎಂ.ಎ ಮಾಡುತ್ತಿದ್ದಾನೆ.<br /> <br /> ಈಚೆಗೆ ಆರ್ಟ್ ಆಫ್ ಲಿವಿಂಗ್ನ ಶ್ರೀಶ್ರೀ ರವಿಶಂಕರ ಗುರೂಜಿ `ಸರ್ಕಾರಿ ಶಾಲೆಗಳಲ್ಲಿ ಓದುವವರು ನಕ್ಸಲೀಯರಾಗುತ್ತಾರೆ~ಎಂಬ ಹೇಳಿಕೆಯನ್ನು ದಯಪಾಲಿಸಿದ್ದರು. ಈ ವಿಠಲ ಮಲೆಕುಡಿಯ ಪ್ರೈಮರಿಯಿಂದ ಹೈಸ್ಕೂಲಿನ ತನಕ ಓದಿದ್ದು ಸರ್ಕಾರಿ ಶಾಲೆಯಲ್ಲಿ. ಸರ್ಕಾರಿ ಕಾಲೇಜಿನಲ್ಲೂ ಓದಿ ಪದವಿ ಪಡೆದ `ಅಪರಾಧ~ ಬೇರೆ ಮಾಡಿರುವ ಈ ವಿಠಲ ಈಗ ಸರ್ಕಾರಿ ಅನುದಾನದಲ್ಲಿ ನಡೆಯುವ ವಿಶ್ವವಿದ್ಯಾಲಯದಲ್ಲೇ ಎಂ.ಎ. ಓದುತ್ತಿದ್ದಾನೆ ಅಂದರೆ ಈತ ಖಡಕ್ ನಕ್ಸಲೀಯನೇ ಆಗಿರಬೇಕಲ್ಲವೇ? <br /> <br /> ವಾಸ್ತವ ಸ್ಥಿತಿ ಬೇರೆಯೇ ಇದೆ; ಆದಿವಾಸಿ ಮಲೆಕುಡಿಯರು ತಲೆತಲಾಂತರಗಳಿಂದ ಇಲ್ಲಿ ಜೀವಿಸುತ್ತಿದ್ದಾರೆ. ಕಾಡಿನ ಉತ್ಪನ್ನಗಳನ್ನು ಸಂಗ್ರಹಿಸಿ ನಾಡಲ್ಲಿ ಮಾರಿ ಬದುಕು ಸವೆಸುತ್ತಿದ್ದಾರೆ. ಇವರಿಗೆ ಕಾಡೇ ಜೀವನಾಡಿ. ನಾಗರಿಕತೆಯಿಂದ ಬಲುದೂರವಿರುವ ಇವರು ಇಂದಿಗೂ ಶಿಕ್ಷಣದ ಕಡೆ ಮುಖ ಮಾಡಿಲ್ಲ.<br /> <br /> ಈ ಪರಿಸರದಲ್ಲಿ ಹುಟ್ಟಿದ ವಿಠಲ ಹೇಗೋ ಸರ್ಕಾರಿ ಶಾಲೆಗೆ ಸೇರಿದ. ಮಲೆಕುಡಿಯರಿಗೆ ಅರಣ್ಯ ಇಲಾಖೆಯಿಂದ, ಇನ್ನಿತರೆ `ಕಾಡುರಕ್ಷಕ~ರಿಂದ ತೊಂದರೆ ಶುರುವಿಟ್ಟ ಮೇಲೆ ಪ್ರಮುಖ ಪತ್ರಿಕೆಗಳ ಬಂದಿಬ್ಬರು ವರದಿಗಾರರು ಈ ಹಾಡಿಗೆ ಹೋಗಿ ಸುದ್ದಿ ಸಂಗ್ರಹಿಸಿ ಮಲೆಕುಡಿಯರ ಸಮಸ್ಯೆಗಳ ಬಗ್ಗೆ ಆಗಾಗ ಬರೆಯತೊಡಗಿದರು. <br /> <br /> ಈ ಪತ್ರಕರ್ತರನ್ನು ಕಂಡ ವಿಠಲ ಆಕರ್ಷಿತನಾಗಿ ತಾನೂ ಪತ್ರಕರ್ತನಾಗಬೇಕೆಂದು ಹೊರಟ, ಈ ಪತ್ರಕರ್ತರಿಗೆ ಕಿರಿಯ ಮಿತ್ರನಾದ. ಈ ಕಾರಣಕ್ಕೆ ತನ್ನ ಪತ್ರಕರ್ತ ಮಿತ್ರರೊಂದಿಗೆ ಪ್ರಗತಿಪರ ಚಟುವಟಿಕೆಗಳಲ್ಲಿ ಭಾಗಿಯಾಗತೊಡಗಿದ. ನಿಧಾನವಾಗಿ ಎಎಫ್ಐ, ಡಿವೈಎಫ್ಐಗಳಲ್ಲಿ ಕೆಲಸ ಮಾಡತೊಡಗಿದ. ಈ ಹುಡುಗನನ್ನು ಬಿ.ಎ. ಮಾಡಿಸಿ ಪತ್ರಿಕೋದ್ಯಮ ಎಂ.ಎ.ಗೆ ಸೇರಿಸಿದ್ದೂ ಈ ಪತ್ರಕರ್ತರೇ.<br /> <br /> ಹೀಗಿರುವಾಗ ನ್ಯಾಷನಲ್ ಪಾರ್ಕ್ಗಾಗಿ ಈ ಕುತ್ಲೂರಿನ ಮೂಲ ನಿವಾಸಿ ಮಲೆಕುಡಿಯರನ್ನು ಒಕ್ಕಲೆಬ್ಬಿಸಲು ಸರ್ಕಾರ ಕೈ ಹಾಕಿತು. ಜಿಲ್ಲಾಧಿಕಾರಿಯ ಕಚೇರಿಯಲ್ಲಿ ಸಭೆ ಕರೆದು ಒಂದೊಂದೇ ಮಲೆಕುಡಿಯರ ಕುಟುಂಬವನ್ನು ಓಲೈಸುತ್ತಾ ಆ ಮುಗ್ಧ ಆದಿವಾಸಿಗಳು ವಾಸಿಸುವ ಗುಡಿಸಲು, ಮರಮಟ್ಟು, ಹಸು ಎಮ್ಮೆಗಳೊಂದಿಗೆ ಅಷ್ಟಿಷ್ಟು ಆಹಾರ ಧಾನ್ಯ ಬೆಳೆಯುತ್ತಿದ್ದ ಸಣ್ಣಪುಟ್ಟ ಜಮೀನು (ಮಲೆಕುಡಿಯರಿಗೆ ಸೇರಿದೆ ಎಂಬ ದಾಖಲಾತಿಯಂತೆ) ಎಲ್ಲವನ್ನೂ ಲೆಕ್ಕ ಹಾಕಿದರೆ ಸುಮಾರು 30 ರಿಂದ 40 ಲಕ್ಷ ಬೆಲೆ ಬಾಳುತ್ತದೆ.<br /> <br /> ಈ ಲೆಕ್ಕವನ್ನೆಲ್ಲ ಪ್ರಾಮಾಣಿಕವಾಗಿ ಒಪ್ಪಿಸುವ ಅಧಿಕಾರಿಗಳು ಕಡೆಗೆ 10 ಲಕ್ಷ ಪರಿಹಾರಕ್ಕೆ ಆ ಮುಗ್ಧರನ್ನು ಒಪ್ಪಿಸಿ ಎತ್ತಂಗಂಡಿಗೆ ಪುಸಲಾಯಿಸುತ್ತಿದ್ದರು. ಈ ಶೋಷಣೆಯನ್ನು ಅರ್ಥಮಾಡಿಕೊಂಡ ವಿಠಲ ಪತ್ರಕರ್ತ ಮಿತ್ರರೊಂದಿಗೆ ಸೇರಿ ಪ್ರತಿಭಟಿಸಿದ.<br /> <br /> ಸರ್ಕಾರದ ಬಲವಂತಕ್ಕೆ ಮಣಿದು ಕುತ್ಲೂರಿನ ನಲವತ್ತು ಗುಡಿಸಲುಗಳ 24 ಕುಟುಂಬಗಳು ಹಾಡಿ ತೊರೆದು ಅಲೆಮಾರಿಗಳಾಗಿ ಹೊರಟು ಹೋದವು. ಮಿಕ್ಕ ಗುಡಿಸಲುವಾಸಿ ಮಲೆಕುಡಿಯರು ವಿಠಲನೊಂದಿಗೆ ನಿಂತರು. <br /> <br /> ಸುಪ್ರೀಂ ಕೋರ್ಟಿನ ತೀರ್ಪುಗಳ ಪ್ರಕಾರ ಆದಿವಾಸಿಗಳನ್ನು ಬಲವಂತದಿಂದ ಎತ್ತಂಗಡಿ ಮಾಡುವಂತಿಲ್ಲ. ಅಂತೆಯೇ ಕಾಡಿನ ಉತ್ಪನ್ನ ಸಂಗ್ರಹಿಸಲೂ ಅಡ್ಡಿಪಡಿಸುವಂತಿಲ್ಲ. ಈ ಕಾರಣಕ್ಕೆ ಸರ್ಕಾರಿ ಅಧಿಕಾರಿಗಳು ಅಸಹಾಯಕರಾದರು. ಪೊಲೀಸ್ `ಸಹಕಾರ~ ಪಡೆಯುವುದು ಇವರಿಗೆ ಅನಿವಾರ್ಯವಾಯಿತು, ವಿಠಲನೊಬ್ಬನೇ ಅಡ್ಡಿ ಆಗಿದ್ದರಿಂದ ಅವನ ಮೇಲೆ ಕಣ್ಣಿಟ್ಟರು. <br /> <br /> ಇವನ ಹೋರಾಟಕ್ಕೆ ಬೆಂಬಲವಾಗಿ ನಿಂತ ಅವರ ಮುದಿ ಅಪ್ಪನನ್ನು ಬೆದರಿಸಿ ನಕ್ಸಲೀಯ ಬೆಂಬಲಿಗ ಎಂದು ಹಣೆ ಪಟ್ಟಿ ಕಟ್ಟಿ ಕಾಲು ಮುರಿಯುವಂತೆ ಹೊಡೆದರು. ಅಪ್ಪನ ಮೇಲೆ ಪೊಲೀಸ್ ದೌರ್ಜನ್ಯ ನಡೆಯುತ್ತಿರುವುದನ್ನು ತಿಳಿದು ವಿಶ್ವವಿದ್ಯಾಲಯದ ಹಾಸ್ಟೆಲ್ನಲ್ಲಿ ಓದುತ್ತಿದ್ದ ವಿಠಲ ಹಾಡಿಗೆ ಓಡಿ ಬಂದ. <br /> <br /> ಪೊಲೀಸರು ವಿಠಲನನ್ನು ಬಂಧಿಸಿ ಜೈಲಲ್ಲಿಟ್ಟರು. ಹಾಸ್ಟೆಲ್ ಮತ್ತು ಕಾಲೇಜಿನಲ್ಲಿ ನೂರಕ್ಕೆ ನೂರು ಪರ್ಸೆಂಟ್ ಅಟೆಂಡೆನ್ಸ್ ಇದ್ದ ವಿಠಲನನ್ನು `ವಿಕ್ಟಿಮೈಸ್~ ಮಾಡಲು ಪೊಲೀಸರ ಬಳಿ ದಾಖಲೆಯಿರಲಿಲ್ಲ. ಇದಕ್ಕೆ ಪೊಲೀಸರ ಜತೆ ಸಖ್ಯವಿದ್ದ ಪತ್ರಿಕೆಯೊಂದನ್ನು ಬಳಸಿಕೊಂಡ ಪೊಲೀಸರು `ವಿಠಲ 2011ರಲ್ಲಿ ನಕ್ಸಲೀಯರ ಸಭೆಯಲ್ಲಿ ಭಾಗವಹಿಸಿದ್ದ~ ಎಂದು ಬರೆಸಿದರು. <br /> <br /> ರಾತ್ರಿ ಹಗಲು ವಿಶ್ವವಿದ್ಯಾಲಯವನ್ನು ಬಿಟ್ಟು, ಹೊರ ಹೋಗದ ವಿಠಲನ ದಾಖಲಾತಿಯನ್ನು ಕಂಡು ಆ ಪತ್ರಿಕೆ ಮತ್ತೆ ತಿದ್ದುಪಡಿ ಹಾಕಿ `2001ರಲ್ಲಿ ವಿಠಲ ನಕ್ಸಲೀಯ ಚಟುವಟಿಕೆಯಲ್ಲಿ ಸಕ್ರಿಯನಾಗಿ ಪಾಲುಗೊಂಡಿದ್ದ~ ಎಂದು ಬರೆಯಿತು. ಇದೀಗ 23 ವರ್ಷ ವಯಸ್ಸಾಗಿರುವ ವಿಠಲ 12 ವರ್ಷಗಳ ಹಿಂದೆ 6ನೇ ತರಗತಿಯಲ್ಲಿ ಓದುತಿದ್ದ 11 ವರ್ಷದ ಬಾಲಕ ಎಂಬ ಸತ್ಯ ಆ ಪತ್ರಿಕೆಗೂ, ಪೊಲೀಸರಿಗೂ ಅರಿವಿಗೆ ಬಾರದಾಯಿತು!<br /> <br /> ವಿಠಲನ ಹಾಗೂ ತಂದೆಯನ್ನು ಬಂಧಿಸಿದಾಗ ಈ `ನಕ್ಸಲೀಯ~ರ ಮನೆಯಲ್ಲಿ 200 ಗ್ರಾಂ ಸಕ್ಕರೆ ಹಾಗೂ 150 ಗ್ರಾಂ ಚಾ ಪುಡಿಯೊಂದಿಗೆ `ಭಗತ್ಸಿಂಗ್~ರ ಪುಸ್ತಕವೊಂದನ್ನು ವಶಪಡಿಸಿಕೊಳ್ಳಲಾಯಿತು. `ಈ ಬಡವರು 200 ಗ್ರಾಂ ಸಕ್ಕರೆ, 150 ಗ್ರಾಂ ಚಾ ಪುಡಿಯನ್ನು ಯಾಕೆ ಇಟ್ಟುಕೊಂಡಿದ್ದರು?~ ಎನ್ನುವುದು ಪೊಲೀಸರ ಅನುಮಾನಕ್ಕೆ ಗ್ರಾಸವಾದರೆ ಭಗತ್ಸಿಂಗ್ ಪುಸ್ತಕ ವಿಠಲ `ನಕ್ಸಲೀಯ~ಎಂದು ನಿರೂಪಿಸಲು ಆಧಾರವಾಯಿತು! <br /> <br /> ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮೇಲ್ಜಾತಿಯವರು ತಿಂದುಬಿಟ್ಟ ಎಂಜಲೆಲೆಗಳ ಮೇಲೆ ಹೊರಳಾಡುವವರು ಬಹುತೇಕ ಈ ಮಲೆಕುಡಿಯರೆ. ಶಿಕ್ಷಣದಿಂದ, ನಾಗರಿಕತೆಯಿಂದ ವಂಚಿತರಾದ ಈ ನಿರ್ಗತಿಕ ಆದಿವಾಸಿ ಜನಾಂಗದಲ್ಲಿ ಹುಟ್ಟಿ ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ಶಿಕ್ಷಣ ಪಡೆದು ಸಂವಿಧಾನಬದ್ಧವಾಗಿ ತನ್ನ ಹಕ್ಕುಗಳನ್ನು ಪಡೆಯಲು ಯತ್ನಿಸಿದ ಏಕೈಕ ವಿದ್ಯಾವಂತ ವಿಠಲ ಇಂದು `ನಕ್ಸಲೀಯ~ನಾಗಿ ಮಂಗಳೂರು ಜೈಲಿನಲ್ಲಿ ಕೊಳೆಯುತ್ತಿದ್ದಾನೆ. ಇವನು ಪತ್ರಕರ್ತನಾಗಬೇಕೆಂಬ ಅಭಿಲಾಷೆ ಜೈಲಿನ ಗೋಡೆಗಳ ನಡುವೆ ಕಮರುತ್ತಿದೆ..</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮಂಗಳೂರು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಸ್ನಾತಕೋತ್ತರ ವಿಭಾಗದಲ್ಲಿ ಓದುತ್ತಿರುವ ಈ ಹುಡುಗನನ್ನು ಪೊಲೀಸರು ಬಂಧಿಸಿದ್ದಾರೆ. ಈತ `ನಕ್ಸಲೀಯ~ ಎಂಬ ಹಣೆಪಟ್ಟಿಯನ್ನು ಕಟ್ಟಿದ್ದಾರೆ.<br /> <br /> ಬೆಳ್ತಂಗಡಿಯಿಂದ ಬಸ್ಸಿಳಿದು ದುರ್ಗಮ ಕಾಡಿನಲ್ಲಿ ಎರಡು ಗಂಟೆಗಳ ಕಾಲ ಬೆಟ್ಟಗುಡ್ಡಗಳ ದಾರಿಯಲ್ಲಿ ನಡೆದರೆ ಕುತ್ಲೂರು ಎಂಬ ಮಲೆಕುಡಿಯರ ಹಾಡಿ ಸಿಗುತ್ತದೆ. ಆದಿವಾಸಿ ಗಿರಿಜನರ ಈ ಹಾಡಿಯಲ್ಲಿ ಏಕೈಕ ವಿದ್ಯಾವಂತ ವಿಠಲ ಮಲೆಕುಡಿಯ. ಈತ ಬಿ.ಎ ಓದಿ ಪತ್ರಿಕೋದ್ಯಮದಲ್ಲಿ ಎಂ.ಎ ಮಾಡುತ್ತಿದ್ದಾನೆ.<br /> <br /> ಈಚೆಗೆ ಆರ್ಟ್ ಆಫ್ ಲಿವಿಂಗ್ನ ಶ್ರೀಶ್ರೀ ರವಿಶಂಕರ ಗುರೂಜಿ `ಸರ್ಕಾರಿ ಶಾಲೆಗಳಲ್ಲಿ ಓದುವವರು ನಕ್ಸಲೀಯರಾಗುತ್ತಾರೆ~ಎಂಬ ಹೇಳಿಕೆಯನ್ನು ದಯಪಾಲಿಸಿದ್ದರು. ಈ ವಿಠಲ ಮಲೆಕುಡಿಯ ಪ್ರೈಮರಿಯಿಂದ ಹೈಸ್ಕೂಲಿನ ತನಕ ಓದಿದ್ದು ಸರ್ಕಾರಿ ಶಾಲೆಯಲ್ಲಿ. ಸರ್ಕಾರಿ ಕಾಲೇಜಿನಲ್ಲೂ ಓದಿ ಪದವಿ ಪಡೆದ `ಅಪರಾಧ~ ಬೇರೆ ಮಾಡಿರುವ ಈ ವಿಠಲ ಈಗ ಸರ್ಕಾರಿ ಅನುದಾನದಲ್ಲಿ ನಡೆಯುವ ವಿಶ್ವವಿದ್ಯಾಲಯದಲ್ಲೇ ಎಂ.ಎ. ಓದುತ್ತಿದ್ದಾನೆ ಅಂದರೆ ಈತ ಖಡಕ್ ನಕ್ಸಲೀಯನೇ ಆಗಿರಬೇಕಲ್ಲವೇ? <br /> <br /> ವಾಸ್ತವ ಸ್ಥಿತಿ ಬೇರೆಯೇ ಇದೆ; ಆದಿವಾಸಿ ಮಲೆಕುಡಿಯರು ತಲೆತಲಾಂತರಗಳಿಂದ ಇಲ್ಲಿ ಜೀವಿಸುತ್ತಿದ್ದಾರೆ. ಕಾಡಿನ ಉತ್ಪನ್ನಗಳನ್ನು ಸಂಗ್ರಹಿಸಿ ನಾಡಲ್ಲಿ ಮಾರಿ ಬದುಕು ಸವೆಸುತ್ತಿದ್ದಾರೆ. ಇವರಿಗೆ ಕಾಡೇ ಜೀವನಾಡಿ. ನಾಗರಿಕತೆಯಿಂದ ಬಲುದೂರವಿರುವ ಇವರು ಇಂದಿಗೂ ಶಿಕ್ಷಣದ ಕಡೆ ಮುಖ ಮಾಡಿಲ್ಲ.<br /> <br /> ಈ ಪರಿಸರದಲ್ಲಿ ಹುಟ್ಟಿದ ವಿಠಲ ಹೇಗೋ ಸರ್ಕಾರಿ ಶಾಲೆಗೆ ಸೇರಿದ. ಮಲೆಕುಡಿಯರಿಗೆ ಅರಣ್ಯ ಇಲಾಖೆಯಿಂದ, ಇನ್ನಿತರೆ `ಕಾಡುರಕ್ಷಕ~ರಿಂದ ತೊಂದರೆ ಶುರುವಿಟ್ಟ ಮೇಲೆ ಪ್ರಮುಖ ಪತ್ರಿಕೆಗಳ ಬಂದಿಬ್ಬರು ವರದಿಗಾರರು ಈ ಹಾಡಿಗೆ ಹೋಗಿ ಸುದ್ದಿ ಸಂಗ್ರಹಿಸಿ ಮಲೆಕುಡಿಯರ ಸಮಸ್ಯೆಗಳ ಬಗ್ಗೆ ಆಗಾಗ ಬರೆಯತೊಡಗಿದರು. <br /> <br /> ಈ ಪತ್ರಕರ್ತರನ್ನು ಕಂಡ ವಿಠಲ ಆಕರ್ಷಿತನಾಗಿ ತಾನೂ ಪತ್ರಕರ್ತನಾಗಬೇಕೆಂದು ಹೊರಟ, ಈ ಪತ್ರಕರ್ತರಿಗೆ ಕಿರಿಯ ಮಿತ್ರನಾದ. ಈ ಕಾರಣಕ್ಕೆ ತನ್ನ ಪತ್ರಕರ್ತ ಮಿತ್ರರೊಂದಿಗೆ ಪ್ರಗತಿಪರ ಚಟುವಟಿಕೆಗಳಲ್ಲಿ ಭಾಗಿಯಾಗತೊಡಗಿದ. ನಿಧಾನವಾಗಿ ಎಎಫ್ಐ, ಡಿವೈಎಫ್ಐಗಳಲ್ಲಿ ಕೆಲಸ ಮಾಡತೊಡಗಿದ. ಈ ಹುಡುಗನನ್ನು ಬಿ.ಎ. ಮಾಡಿಸಿ ಪತ್ರಿಕೋದ್ಯಮ ಎಂ.ಎ.ಗೆ ಸೇರಿಸಿದ್ದೂ ಈ ಪತ್ರಕರ್ತರೇ.<br /> <br /> ಹೀಗಿರುವಾಗ ನ್ಯಾಷನಲ್ ಪಾರ್ಕ್ಗಾಗಿ ಈ ಕುತ್ಲೂರಿನ ಮೂಲ ನಿವಾಸಿ ಮಲೆಕುಡಿಯರನ್ನು ಒಕ್ಕಲೆಬ್ಬಿಸಲು ಸರ್ಕಾರ ಕೈ ಹಾಕಿತು. ಜಿಲ್ಲಾಧಿಕಾರಿಯ ಕಚೇರಿಯಲ್ಲಿ ಸಭೆ ಕರೆದು ಒಂದೊಂದೇ ಮಲೆಕುಡಿಯರ ಕುಟುಂಬವನ್ನು ಓಲೈಸುತ್ತಾ ಆ ಮುಗ್ಧ ಆದಿವಾಸಿಗಳು ವಾಸಿಸುವ ಗುಡಿಸಲು, ಮರಮಟ್ಟು, ಹಸು ಎಮ್ಮೆಗಳೊಂದಿಗೆ ಅಷ್ಟಿಷ್ಟು ಆಹಾರ ಧಾನ್ಯ ಬೆಳೆಯುತ್ತಿದ್ದ ಸಣ್ಣಪುಟ್ಟ ಜಮೀನು (ಮಲೆಕುಡಿಯರಿಗೆ ಸೇರಿದೆ ಎಂಬ ದಾಖಲಾತಿಯಂತೆ) ಎಲ್ಲವನ್ನೂ ಲೆಕ್ಕ ಹಾಕಿದರೆ ಸುಮಾರು 30 ರಿಂದ 40 ಲಕ್ಷ ಬೆಲೆ ಬಾಳುತ್ತದೆ.<br /> <br /> ಈ ಲೆಕ್ಕವನ್ನೆಲ್ಲ ಪ್ರಾಮಾಣಿಕವಾಗಿ ಒಪ್ಪಿಸುವ ಅಧಿಕಾರಿಗಳು ಕಡೆಗೆ 10 ಲಕ್ಷ ಪರಿಹಾರಕ್ಕೆ ಆ ಮುಗ್ಧರನ್ನು ಒಪ್ಪಿಸಿ ಎತ್ತಂಗಂಡಿಗೆ ಪುಸಲಾಯಿಸುತ್ತಿದ್ದರು. ಈ ಶೋಷಣೆಯನ್ನು ಅರ್ಥಮಾಡಿಕೊಂಡ ವಿಠಲ ಪತ್ರಕರ್ತ ಮಿತ್ರರೊಂದಿಗೆ ಸೇರಿ ಪ್ರತಿಭಟಿಸಿದ.<br /> <br /> ಸರ್ಕಾರದ ಬಲವಂತಕ್ಕೆ ಮಣಿದು ಕುತ್ಲೂರಿನ ನಲವತ್ತು ಗುಡಿಸಲುಗಳ 24 ಕುಟುಂಬಗಳು ಹಾಡಿ ತೊರೆದು ಅಲೆಮಾರಿಗಳಾಗಿ ಹೊರಟು ಹೋದವು. ಮಿಕ್ಕ ಗುಡಿಸಲುವಾಸಿ ಮಲೆಕುಡಿಯರು ವಿಠಲನೊಂದಿಗೆ ನಿಂತರು. <br /> <br /> ಸುಪ್ರೀಂ ಕೋರ್ಟಿನ ತೀರ್ಪುಗಳ ಪ್ರಕಾರ ಆದಿವಾಸಿಗಳನ್ನು ಬಲವಂತದಿಂದ ಎತ್ತಂಗಡಿ ಮಾಡುವಂತಿಲ್ಲ. ಅಂತೆಯೇ ಕಾಡಿನ ಉತ್ಪನ್ನ ಸಂಗ್ರಹಿಸಲೂ ಅಡ್ಡಿಪಡಿಸುವಂತಿಲ್ಲ. ಈ ಕಾರಣಕ್ಕೆ ಸರ್ಕಾರಿ ಅಧಿಕಾರಿಗಳು ಅಸಹಾಯಕರಾದರು. ಪೊಲೀಸ್ `ಸಹಕಾರ~ ಪಡೆಯುವುದು ಇವರಿಗೆ ಅನಿವಾರ್ಯವಾಯಿತು, ವಿಠಲನೊಬ್ಬನೇ ಅಡ್ಡಿ ಆಗಿದ್ದರಿಂದ ಅವನ ಮೇಲೆ ಕಣ್ಣಿಟ್ಟರು. <br /> <br /> ಇವನ ಹೋರಾಟಕ್ಕೆ ಬೆಂಬಲವಾಗಿ ನಿಂತ ಅವರ ಮುದಿ ಅಪ್ಪನನ್ನು ಬೆದರಿಸಿ ನಕ್ಸಲೀಯ ಬೆಂಬಲಿಗ ಎಂದು ಹಣೆ ಪಟ್ಟಿ ಕಟ್ಟಿ ಕಾಲು ಮುರಿಯುವಂತೆ ಹೊಡೆದರು. ಅಪ್ಪನ ಮೇಲೆ ಪೊಲೀಸ್ ದೌರ್ಜನ್ಯ ನಡೆಯುತ್ತಿರುವುದನ್ನು ತಿಳಿದು ವಿಶ್ವವಿದ್ಯಾಲಯದ ಹಾಸ್ಟೆಲ್ನಲ್ಲಿ ಓದುತ್ತಿದ್ದ ವಿಠಲ ಹಾಡಿಗೆ ಓಡಿ ಬಂದ. <br /> <br /> ಪೊಲೀಸರು ವಿಠಲನನ್ನು ಬಂಧಿಸಿ ಜೈಲಲ್ಲಿಟ್ಟರು. ಹಾಸ್ಟೆಲ್ ಮತ್ತು ಕಾಲೇಜಿನಲ್ಲಿ ನೂರಕ್ಕೆ ನೂರು ಪರ್ಸೆಂಟ್ ಅಟೆಂಡೆನ್ಸ್ ಇದ್ದ ವಿಠಲನನ್ನು `ವಿಕ್ಟಿಮೈಸ್~ ಮಾಡಲು ಪೊಲೀಸರ ಬಳಿ ದಾಖಲೆಯಿರಲಿಲ್ಲ. ಇದಕ್ಕೆ ಪೊಲೀಸರ ಜತೆ ಸಖ್ಯವಿದ್ದ ಪತ್ರಿಕೆಯೊಂದನ್ನು ಬಳಸಿಕೊಂಡ ಪೊಲೀಸರು `ವಿಠಲ 2011ರಲ್ಲಿ ನಕ್ಸಲೀಯರ ಸಭೆಯಲ್ಲಿ ಭಾಗವಹಿಸಿದ್ದ~ ಎಂದು ಬರೆಸಿದರು. <br /> <br /> ರಾತ್ರಿ ಹಗಲು ವಿಶ್ವವಿದ್ಯಾಲಯವನ್ನು ಬಿಟ್ಟು, ಹೊರ ಹೋಗದ ವಿಠಲನ ದಾಖಲಾತಿಯನ್ನು ಕಂಡು ಆ ಪತ್ರಿಕೆ ಮತ್ತೆ ತಿದ್ದುಪಡಿ ಹಾಕಿ `2001ರಲ್ಲಿ ವಿಠಲ ನಕ್ಸಲೀಯ ಚಟುವಟಿಕೆಯಲ್ಲಿ ಸಕ್ರಿಯನಾಗಿ ಪಾಲುಗೊಂಡಿದ್ದ~ ಎಂದು ಬರೆಯಿತು. ಇದೀಗ 23 ವರ್ಷ ವಯಸ್ಸಾಗಿರುವ ವಿಠಲ 12 ವರ್ಷಗಳ ಹಿಂದೆ 6ನೇ ತರಗತಿಯಲ್ಲಿ ಓದುತಿದ್ದ 11 ವರ್ಷದ ಬಾಲಕ ಎಂಬ ಸತ್ಯ ಆ ಪತ್ರಿಕೆಗೂ, ಪೊಲೀಸರಿಗೂ ಅರಿವಿಗೆ ಬಾರದಾಯಿತು!<br /> <br /> ವಿಠಲನ ಹಾಗೂ ತಂದೆಯನ್ನು ಬಂಧಿಸಿದಾಗ ಈ `ನಕ್ಸಲೀಯ~ರ ಮನೆಯಲ್ಲಿ 200 ಗ್ರಾಂ ಸಕ್ಕರೆ ಹಾಗೂ 150 ಗ್ರಾಂ ಚಾ ಪುಡಿಯೊಂದಿಗೆ `ಭಗತ್ಸಿಂಗ್~ರ ಪುಸ್ತಕವೊಂದನ್ನು ವಶಪಡಿಸಿಕೊಳ್ಳಲಾಯಿತು. `ಈ ಬಡವರು 200 ಗ್ರಾಂ ಸಕ್ಕರೆ, 150 ಗ್ರಾಂ ಚಾ ಪುಡಿಯನ್ನು ಯಾಕೆ ಇಟ್ಟುಕೊಂಡಿದ್ದರು?~ ಎನ್ನುವುದು ಪೊಲೀಸರ ಅನುಮಾನಕ್ಕೆ ಗ್ರಾಸವಾದರೆ ಭಗತ್ಸಿಂಗ್ ಪುಸ್ತಕ ವಿಠಲ `ನಕ್ಸಲೀಯ~ಎಂದು ನಿರೂಪಿಸಲು ಆಧಾರವಾಯಿತು! <br /> <br /> ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮೇಲ್ಜಾತಿಯವರು ತಿಂದುಬಿಟ್ಟ ಎಂಜಲೆಲೆಗಳ ಮೇಲೆ ಹೊರಳಾಡುವವರು ಬಹುತೇಕ ಈ ಮಲೆಕುಡಿಯರೆ. ಶಿಕ್ಷಣದಿಂದ, ನಾಗರಿಕತೆಯಿಂದ ವಂಚಿತರಾದ ಈ ನಿರ್ಗತಿಕ ಆದಿವಾಸಿ ಜನಾಂಗದಲ್ಲಿ ಹುಟ್ಟಿ ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ಶಿಕ್ಷಣ ಪಡೆದು ಸಂವಿಧಾನಬದ್ಧವಾಗಿ ತನ್ನ ಹಕ್ಕುಗಳನ್ನು ಪಡೆಯಲು ಯತ್ನಿಸಿದ ಏಕೈಕ ವಿದ್ಯಾವಂತ ವಿಠಲ ಇಂದು `ನಕ್ಸಲೀಯ~ನಾಗಿ ಮಂಗಳೂರು ಜೈಲಿನಲ್ಲಿ ಕೊಳೆಯುತ್ತಿದ್ದಾನೆ. ಇವನು ಪತ್ರಕರ್ತನಾಗಬೇಕೆಂಬ ಅಭಿಲಾಷೆ ಜೈಲಿನ ಗೋಡೆಗಳ ನಡುವೆ ಕಮರುತ್ತಿದೆ..</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>