<p><strong>ಬೆಂಗಳೂರು:</strong> ಮಿದುಳಿನ ಭಾಗದಲ್ಲಿ ಗುಂಡು ತೂರಿ ಹೊರಬಂದ ಪರಿಣಾಮ ಚಲನೆ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ ಉತ್ತರ ಇರಾಕಿನ ಯುವಕನಿಗೆ ನಗರದ ಬಿಜಿಎಸ್ ಗ್ಲೋಬಲ್ ಆಸ್ಪತ್ರೆಯ ವೈದ್ಯರ ತಂಡ ಡೀಪ್ ಬ್ರೈನ್ ಸ್ಟಿಮ್ಯುಲೇಷನ್ ಚಿಕಿತ್ಸೆ ನೀಡಿದ್ದು, ಯುವಕನ ಆರೋಗ್ಯ ಸ್ಥಿತಿ ಸುಧಾರಿಸಿದೆ.<br /> <br /> ನಗರದಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಆಸ್ಪತ್ರೆಯ ಉಪಾಧ್ಯಕ್ಷ ಡಾ.ಎನ್.ಕೆ. ವೆಂಕಟರಮಣ, `ಉತ್ತರ ಇರಾಕ್ನ ಅಸುಲೇಮಾನಿಯಾ ಪ್ರದೇಶದ ಬಾವೆಲ್ ಫಾತಿ ಮಹಮ್ಮದ್ ಅವರು ಕೈ, ಕಾಲುಗಳ ಅಸಮರ್ಪಕ ಚಲನೆಯಿಂದ (ಡಿಸ್ಟೋನಿಯಾ) ಬಳಲುತ್ತಿದ್ದರು. ಬಲಗೈ ಮುಂದಕ್ಕೆ ಬಾಗಿತ್ತು. ಕಾಲುಗಳು ಹಿಂದಕ್ಕೆ ವಾಲಿದ್ದವು. ಬಲಗಾಲಿನ ಬೆರಳುಗಳು ಮಾತ್ರ ನೆಲಗೆ ತಗುಲುತ್ತಿತ್ತು~ ಎಂದು ಹೇಳಿದರು.<br /> <br /> `ಬಾವೆಲ್ ಅವರು ಎರಡು ವರ್ಷದ ಮಗುವಾಗಿದ್ದಾಗ ಅವರ ತಲೆಯ ಎಡ ಮೇಲ್ಭಾಗದಿಂದ ಒಳಗೆ ನುಗ್ಗಿದ ಗುಂಡು ಮಿದುಳಿನ ಒಳಗೆ ತೂರಿ ಕುತ್ತಿಗೆಯ ಹಿಂಭಾಗದಿಂದ ಹೊರಗೆ ಹೋಗಿತ್ತು. ಆ ಬಳಿಕ ಎರಡು ವರ್ಷ ಕಾಲ ಮಗುವಿಗೆ ಸ್ಥಳೀಯ ಆಸ್ಪತ್ರೆಗೆ ಚಿಕಿತ್ಸೆ ಕೊಡಿಸಲಾಯಿತು. <br /> <br /> ಏಳು ತಿಂಗಳ ಕಾಲ ಮಗು ಕೋಮಾ ಸ್ಥಿತಿಯಲ್ಲಿತ್ತು. ಅಲ್ಲಿಂದ ಮಗುವಿನ ದೇಹದಲ್ಲಿ ಅಂಗವೈಕಲ್ಯ ಕಾಣಿಸಿಕೊಳ್ಳಲಾರಂಭಿಸಿತು~ ಎಂದು ವಿವರಿಸಿದರು.<br /> <br /> `ಆ ಬಾಲಕನಿಗೆ ಈಗ 19 ವರ್ಷ. ಆತ ಆಸ್ಪತ್ರೆಗೆ ಬಂದಾಗ ಕೈಗಳನ್ನು ಬಳಸಲು ಕಷ್ಟಪಡುತ್ತಿದ್ದ. ಸರಿಯಾಗಿ ನಡೆಯಲು ಆಗುತ್ತಿರಲಿಲ್ಲ. ಕಣ್ಣುಗಳನ್ನು ತೆರೆಯಲು ಸಾಧ್ಯವಾಗುತ್ತಿರಲಿಲ್ಲ. ನಂತರ ಸಿ.ಟಿ ಮತ್ತು ಎಂಆರ್ಐ ಸ್ಕ್ಯಾನ್ ನಡೆಸಲಾಯಿತು. <br /> <br /> ತಲೆಯ ಎಡಭಾಗದಲ್ಲಿ ಒಂದು ಇಂಚು ಸುತ್ತಳತೆಯ ರಂಧ್ರ ಮಾಡಿ ಅದರ ಮೂಲಕ ಡಿಬಿಎಸ್ ಎಲೆಕ್ಟ್ರೋಡ್ ಅಳವಡಿಸಲಾಯಿತು. ಬಳಿಕ ಡಿಬಿಎಸ್ ಬ್ಯಾಟರಿಯನ್ನು ಭುಜದ ಮೂಳೆಯಡಿ ಸೃಷ್ಟಿಸಲಾದ ವಿಶೇಷ ಸ್ಥಾನದಲ್ಲಿ ಅಳವಡಿಸಲಾಗಿದ್ದು, ಎರಡನ್ನೂ ಸಂಪರ್ಕಿಸಲಾಗಿದೆ~ ಎಂದು ಮಾಹಿತಿ ನೀಡಿದರು.<br /> <br /> `ಮಿದುಳಿನ ಆಸಕ್ತಿಯನ್ನು ವೃದ್ಧಿಸುವ ಭಾಗವನ್ನು ಉತ್ತೇಜಿಸುವ ಸಲುವಾಗಿ ಬ್ಯಾಟರಿಯಿಂದ ವಿವಿಧ ವೋಲ್ಟೇಜ್ನ ವಿದ್ಯುತ್ ಪ್ರವಹಿಸಿ ಪರೀಕ್ಷಿಸಲಾಗುತ್ತಿದೆ. ಕೈಯಲ್ಲಿ ಹಿಡಿಯಬಹುದಾದ ಸಾಧನದ ಮೂಲಕ ಈ ಪ್ರಕ್ರಿಯೆಯನ್ನು ನಿಯಂತ್ರಿಸಲಾಗುವುದು~ ಎಂದರು.<br /> <br /> `ಬಾವೆಲ್ನ ದೇಹಸ್ಥಿತಿಯಲ್ಲಿ ಈಗ ಶೇ 40ರಷ್ಟು ಸುಧಾರಣೆ ಕಂಡುಬಂದಿದೆ. ಅವರ ನಡಿಗೆ ಶೈಲಿ ಬದಲಾಗಿದೆ. ಕೆಲ ತಿಂಗಳಲ್ಲೇ ಶೇ 90ರಷ್ಟು ಸುಧಾರಣೆ ಕಾಣುವ ನಿರೀಕ್ಷೆಯಿದೆ~ ಎಂದು ಹೇಳಿದರು.<br /> <br /> ಬಾವೆಲ್ಗೆ ಚಿಕಿತ್ಸೆ ನೀಡಿದ ನರರೋಗತಜ್ಞ ಡಾ.ಎಲ್.ಕೆ. ಪ್ರಶಾಂತ್, `ಮುಂದಿನ ಆರು ವಾರಗಳಲ್ಲಿ ಯುವಕನಲ್ಲಿ ಉಂಟಾಗುವ ಸುಧಾರಣೆಯನ್ನು ಗಮನಿಸಿ ಬಳಿಕ ಪ್ರೋಗ್ರಾಮಿಂಗ್ ಪ್ರಕ್ರಿಯೆಯನ್ನು ಅಂತಿಮಗೊಳಿಸಲಾಗುವುದು~ ಎಂದರು.<br /> <br /> ಬಾವೆಲ್ನ ತಾಯಿ ರೋಷ್ನಾ, `ಮಗನ ಚಿಕಿತ್ಸೆಗಾಗಿ ಹಲವು ರಾಷ್ಟ್ರಗಳ ತಜ್ಞರನ್ನು ಸಂಪರ್ಕಿಸಿದರೂ ಪ್ರಯೋಜನವಾಗಲಿಲ್ಲ. ಆದರೆ ಬಿಜಿಎಸ್ ಆಸ್ಪತ್ರೆಯ ವೈದ್ಯರು ಗುಣಮಟ್ಟದ ಚಿಕಿತ್ಸೆ ನೀಡಿದ್ದು, ಆತನಲ್ಲಿ ಸಾಕಷ್ಟು ಸುಧಾರಣೆ ಕಂಡುಬಂದಿದೆ. ಇದಕ್ಕಾಗಿ ವೈದ್ಯರಿಗೆ ಅಭಿನಂದನೆ ಸಲ್ಲಿಸುತ್ತೇನೆ~ ಎಂದು ಭಾವುಕರಾಗಿ ನುಡಿದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಮಿದುಳಿನ ಭಾಗದಲ್ಲಿ ಗುಂಡು ತೂರಿ ಹೊರಬಂದ ಪರಿಣಾಮ ಚಲನೆ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ ಉತ್ತರ ಇರಾಕಿನ ಯುವಕನಿಗೆ ನಗರದ ಬಿಜಿಎಸ್ ಗ್ಲೋಬಲ್ ಆಸ್ಪತ್ರೆಯ ವೈದ್ಯರ ತಂಡ ಡೀಪ್ ಬ್ರೈನ್ ಸ್ಟಿಮ್ಯುಲೇಷನ್ ಚಿಕಿತ್ಸೆ ನೀಡಿದ್ದು, ಯುವಕನ ಆರೋಗ್ಯ ಸ್ಥಿತಿ ಸುಧಾರಿಸಿದೆ.<br /> <br /> ನಗರದಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಆಸ್ಪತ್ರೆಯ ಉಪಾಧ್ಯಕ್ಷ ಡಾ.ಎನ್.ಕೆ. ವೆಂಕಟರಮಣ, `ಉತ್ತರ ಇರಾಕ್ನ ಅಸುಲೇಮಾನಿಯಾ ಪ್ರದೇಶದ ಬಾವೆಲ್ ಫಾತಿ ಮಹಮ್ಮದ್ ಅವರು ಕೈ, ಕಾಲುಗಳ ಅಸಮರ್ಪಕ ಚಲನೆಯಿಂದ (ಡಿಸ್ಟೋನಿಯಾ) ಬಳಲುತ್ತಿದ್ದರು. ಬಲಗೈ ಮುಂದಕ್ಕೆ ಬಾಗಿತ್ತು. ಕಾಲುಗಳು ಹಿಂದಕ್ಕೆ ವಾಲಿದ್ದವು. ಬಲಗಾಲಿನ ಬೆರಳುಗಳು ಮಾತ್ರ ನೆಲಗೆ ತಗುಲುತ್ತಿತ್ತು~ ಎಂದು ಹೇಳಿದರು.<br /> <br /> `ಬಾವೆಲ್ ಅವರು ಎರಡು ವರ್ಷದ ಮಗುವಾಗಿದ್ದಾಗ ಅವರ ತಲೆಯ ಎಡ ಮೇಲ್ಭಾಗದಿಂದ ಒಳಗೆ ನುಗ್ಗಿದ ಗುಂಡು ಮಿದುಳಿನ ಒಳಗೆ ತೂರಿ ಕುತ್ತಿಗೆಯ ಹಿಂಭಾಗದಿಂದ ಹೊರಗೆ ಹೋಗಿತ್ತು. ಆ ಬಳಿಕ ಎರಡು ವರ್ಷ ಕಾಲ ಮಗುವಿಗೆ ಸ್ಥಳೀಯ ಆಸ್ಪತ್ರೆಗೆ ಚಿಕಿತ್ಸೆ ಕೊಡಿಸಲಾಯಿತು. <br /> <br /> ಏಳು ತಿಂಗಳ ಕಾಲ ಮಗು ಕೋಮಾ ಸ್ಥಿತಿಯಲ್ಲಿತ್ತು. ಅಲ್ಲಿಂದ ಮಗುವಿನ ದೇಹದಲ್ಲಿ ಅಂಗವೈಕಲ್ಯ ಕಾಣಿಸಿಕೊಳ್ಳಲಾರಂಭಿಸಿತು~ ಎಂದು ವಿವರಿಸಿದರು.<br /> <br /> `ಆ ಬಾಲಕನಿಗೆ ಈಗ 19 ವರ್ಷ. ಆತ ಆಸ್ಪತ್ರೆಗೆ ಬಂದಾಗ ಕೈಗಳನ್ನು ಬಳಸಲು ಕಷ್ಟಪಡುತ್ತಿದ್ದ. ಸರಿಯಾಗಿ ನಡೆಯಲು ಆಗುತ್ತಿರಲಿಲ್ಲ. ಕಣ್ಣುಗಳನ್ನು ತೆರೆಯಲು ಸಾಧ್ಯವಾಗುತ್ತಿರಲಿಲ್ಲ. ನಂತರ ಸಿ.ಟಿ ಮತ್ತು ಎಂಆರ್ಐ ಸ್ಕ್ಯಾನ್ ನಡೆಸಲಾಯಿತು. <br /> <br /> ತಲೆಯ ಎಡಭಾಗದಲ್ಲಿ ಒಂದು ಇಂಚು ಸುತ್ತಳತೆಯ ರಂಧ್ರ ಮಾಡಿ ಅದರ ಮೂಲಕ ಡಿಬಿಎಸ್ ಎಲೆಕ್ಟ್ರೋಡ್ ಅಳವಡಿಸಲಾಯಿತು. ಬಳಿಕ ಡಿಬಿಎಸ್ ಬ್ಯಾಟರಿಯನ್ನು ಭುಜದ ಮೂಳೆಯಡಿ ಸೃಷ್ಟಿಸಲಾದ ವಿಶೇಷ ಸ್ಥಾನದಲ್ಲಿ ಅಳವಡಿಸಲಾಗಿದ್ದು, ಎರಡನ್ನೂ ಸಂಪರ್ಕಿಸಲಾಗಿದೆ~ ಎಂದು ಮಾಹಿತಿ ನೀಡಿದರು.<br /> <br /> `ಮಿದುಳಿನ ಆಸಕ್ತಿಯನ್ನು ವೃದ್ಧಿಸುವ ಭಾಗವನ್ನು ಉತ್ತೇಜಿಸುವ ಸಲುವಾಗಿ ಬ್ಯಾಟರಿಯಿಂದ ವಿವಿಧ ವೋಲ್ಟೇಜ್ನ ವಿದ್ಯುತ್ ಪ್ರವಹಿಸಿ ಪರೀಕ್ಷಿಸಲಾಗುತ್ತಿದೆ. ಕೈಯಲ್ಲಿ ಹಿಡಿಯಬಹುದಾದ ಸಾಧನದ ಮೂಲಕ ಈ ಪ್ರಕ್ರಿಯೆಯನ್ನು ನಿಯಂತ್ರಿಸಲಾಗುವುದು~ ಎಂದರು.<br /> <br /> `ಬಾವೆಲ್ನ ದೇಹಸ್ಥಿತಿಯಲ್ಲಿ ಈಗ ಶೇ 40ರಷ್ಟು ಸುಧಾರಣೆ ಕಂಡುಬಂದಿದೆ. ಅವರ ನಡಿಗೆ ಶೈಲಿ ಬದಲಾಗಿದೆ. ಕೆಲ ತಿಂಗಳಲ್ಲೇ ಶೇ 90ರಷ್ಟು ಸುಧಾರಣೆ ಕಾಣುವ ನಿರೀಕ್ಷೆಯಿದೆ~ ಎಂದು ಹೇಳಿದರು.<br /> <br /> ಬಾವೆಲ್ಗೆ ಚಿಕಿತ್ಸೆ ನೀಡಿದ ನರರೋಗತಜ್ಞ ಡಾ.ಎಲ್.ಕೆ. ಪ್ರಶಾಂತ್, `ಮುಂದಿನ ಆರು ವಾರಗಳಲ್ಲಿ ಯುವಕನಲ್ಲಿ ಉಂಟಾಗುವ ಸುಧಾರಣೆಯನ್ನು ಗಮನಿಸಿ ಬಳಿಕ ಪ್ರೋಗ್ರಾಮಿಂಗ್ ಪ್ರಕ್ರಿಯೆಯನ್ನು ಅಂತಿಮಗೊಳಿಸಲಾಗುವುದು~ ಎಂದರು.<br /> <br /> ಬಾವೆಲ್ನ ತಾಯಿ ರೋಷ್ನಾ, `ಮಗನ ಚಿಕಿತ್ಸೆಗಾಗಿ ಹಲವು ರಾಷ್ಟ್ರಗಳ ತಜ್ಞರನ್ನು ಸಂಪರ್ಕಿಸಿದರೂ ಪ್ರಯೋಜನವಾಗಲಿಲ್ಲ. ಆದರೆ ಬಿಜಿಎಸ್ ಆಸ್ಪತ್ರೆಯ ವೈದ್ಯರು ಗುಣಮಟ್ಟದ ಚಿಕಿತ್ಸೆ ನೀಡಿದ್ದು, ಆತನಲ್ಲಿ ಸಾಕಷ್ಟು ಸುಧಾರಣೆ ಕಂಡುಬಂದಿದೆ. ಇದಕ್ಕಾಗಿ ವೈದ್ಯರಿಗೆ ಅಭಿನಂದನೆ ಸಲ್ಲಿಸುತ್ತೇನೆ~ ಎಂದು ಭಾವುಕರಾಗಿ ನುಡಿದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>