<p>ಬೆಂಗಳೂರಿನ ಒಂದಲ್ಲಾ ಒಂದು ಕಡೆ ಪ್ರತಿದಿನವೂ ಕಲಾಕೃತಿಗಳ ಪ್ರದರ್ಶನ ನಡೆಯುತ್ತಲೇ ಇರುತ್ತದೆ. ಇಲ್ಲಿನ ಕಲಾವಿದರು ಮಾತ್ರವಲ್ಲದೆ, ದೇಶದ ವಿವಿಧ ಭಾಗಗಳ ಕಲಾವಿದರು ಕೂಡ ತಮ್ಮ ಕಲಾಕೃತಿಗಳನ್ನು ಬೆಂಗಳೂರಿನ ಗ್ಯಾಲರಿಗಳಲ್ಲಿ ಪ್ರದರ್ಶಿಸುವುದುಂಟು. <br /> <br /> ಈ ಮಟ್ಟಿಗೆ ಕಲಾವಿದರ ಕಲಾಭಿವ್ಯಕ್ತಿಗೆ ಬೆಂಗಳೂರಿನಲ್ಲಿ ಸಾಕಷ್ಟು ಅವಕಾಶವಿದ್ದರೂ, ಆ ಅವಕಾಶ ಎಲ್ಲ ವರ್ಗದ ಕಲಾವಿದರಿಗೂ ಎಟಕುವಂತಹದ್ದಲ್ಲ. ಗ್ಯಾಲರಿಗಳೊಂದಿಗೆ ಹಣಕಾಸಿನ ಲೆಕ್ಕಾಚಾರವೂ ತಳುಕು ಹಾಕಿಕೊಂಡಿದೆ. <br /> <br /> ಈ ಕಾರಣದಿಂದಲೇ, ತಮ್ಮ ಕಲಾಕೃತಿಗಳನ್ನು ಎಲ್ಲಿಯೂ ಪ್ರದರ್ಶಿಸಲಾಗದ ಅಸಹಾಯಕ ಗ್ರಾಮೀಣ ಕಲಾವಿದರು ಸಾಕಷ್ಟು ಮಂದಿಯಿದ್ದಾರೆ. ಇಂಥವರ ನೆರವಿಗೆಂದೇ ಬೆಂಗಳೂರಿನಲ್ಲಿ ಗ್ಯಾಲರಿಯೊಂದಿದೆ, ಅದುವೇ- `ವಿನ್ಸೆಂಟ್ ಆರ್ಟ್ ಗ್ಯಾಲರಿ~.<br /> <br /> ಹತ್ತರಲ್ಲಿ ಇನ್ನೊಂದು ಎನ್ನುವ ಮಾದರಿಯದಲ್ಲದ `ವಿನ್ಸೆಂಟ್ ಆರ್ಟ್ ಗ್ಯಾಲರಿ~ಯ ರೂವಾರಿ ಜಗದೀಶ್ ಕಡೂರು. ಇವರ ಗ್ಯಾಲರಿಯಲ್ಲಿ ಗ್ರಾಮೀಣ ಪ್ರದೇಶಗಳ ಹಾಗೂ ಸಣ್ಣಪುಟ್ಟ ಪಟ್ಟಣಗಳ ಕಲಾವಿದರ ಕಲಾಕೃತಿಗಳಿಗೆ ಮೊದಲ ಆದ್ಯತೆ. ಇಲ್ಲಿ ಹಣಕಾಸಿನ ಲೆಕ್ಕಾಚಾರಕ್ಕೆ ಎರಡನೇ ಸ್ಥಾನ. ಅಂದಹಾಗೆ, ಜಗದೀಶ್ ಸ್ವತಃ ಕಲಾವಿದರು ಕೂಡ.<br /> <br /> ಆ ಕಾರಣದಿಂದಲೇ ಇತರ ಕಲಾವಿದರ ತವಕತಲ್ಲಣಗಳನ್ನು ಅರ್ಥ ಮಾಡಿಕೊಳ್ಳುವುದು ಅವರಿಗೆ ಸಾಧ್ಯವಾಗಿದೆ. ಅಲ್ಲದೇ ಅವರಿಗೆ ಗ್ಯಾಲರಿ ಸ್ಥಳವನ್ನು ಉಚಿತವಾಗಿ ನೀಡಿರುವುದು ರೂಟ್ ಮಾಂಟೆಸರಿ ಶಾಲೆ. ಅದರಿಂದ ಜಗದೀಶ್ ಕಡಿಮೆ ಖರ್ಚಿನಲ್ಲಿ ಕಲಾಕೃತಿ ಪ್ರದರ್ಶನಕ್ಕೆ ಅವಕಾಶ ನೀಡಲು ಸಾಧ್ಯವಾಗಿದೆ.<br /> <br /> ಜಗದೀಶ್ ಅವರದ್ದೊಂದು ವಿಶಿಷ್ಟ ಕಲಾಜಗತ್ತು. ಕುಂಚ ಹಿಡಿಯುವುದರ ಜೊತೆಗೆ ಶಿಲ್ಪಿಯೂ ಆಗಿರುವ ಅವರದ್ದು ಕಲಾ ವಿಮರ್ಶೆಯಲ್ಲೂ ಭರವಸೆಯ ವ್ಯವಸಾಯ. ಮೂಲತಃ ಚಿಕ್ಕಮಗಳೂರು ಪರಿಸರದ ಅವರು ತಮ್ಮನ್ನು ತಾವು ಬಣ್ಣಿಸಿಕೊಳ್ಳುವುದು- `ದೊಡ್ಡ ಕನಸುಗಳನ್ನು ಹೊತ್ತ ಸ್ಲಂ ನಿವಾಸಿ~. <br /> <br /> ಗ್ರಾಮೀಣ ಪ್ರದೇಶ ಹಾಗೂ ಸಣ್ಣಪಟ್ಟಣಗಳಲ್ಲಿ ನೆಲೆಸಿರುವ ಉದಯೋನ್ಮುಖ ಕಲಾವಿದರಿಗೆ ತಮ್ಮ ಕೈಲಾದ ಸಹಾಯ ನೀಡುವುದು ಅವರ ಹಂಬಲ. ಹೊಟ್ಟೆಪಾಡಿಗಾಗಿ ಬೆಂಗಳೂರಿನಲ್ಲಿ ಇರುವುದಾಗಿ ಹೇಳುವ ಅವರು, `ಹೊಟ್ಟೆಪಾಡು ನಮಗೆ ಇಷ್ಟವಿಲ್ಲದ ಹಲವು ಕೆಲಸಗಳನ್ನು ಮಾಡಲು ಪ್ರೇರೇಪಿಸುತ್ತದೆ~ ಎನ್ನುತ್ತಾರೆ.<br /> <br /> ಚಿಕ್ಕಮಗಳೂರಿನ ಶಾಂತಿನಿಕೇತನ ಶಾಲೆಯಲ್ಲಿ ಪದವಿ ಪಡೆದಿರುವ ಜಗದೀಶ್, `ಮೈಸೂರು ದಸರಾ ಪ್ರಶಸ್ತಿ~ಯನ್ನು ಮೂರು ಬಾರಿ ಪಡೆದಿರುವ ಪ್ರತಿಭಾವಂತ. `ಮೊದಲ ಏಕವ್ಯಕ್ತಿ ಪ್ರದರ್ಶನ ನಡೆದಾಗ ಮಾಧ್ಯಮದವರು ನನ್ನ ಕಲೆ ಗುರುತಿಸಿ ಹುಡುಕಿಕೊಂಡು ಬಂದಾಗ ಸಿಕ್ಕಾಪಟ್ಟೆ ಖುಷಿಯಾಗಿತ್ತು. ಕುಣಿದು ಕುಪ್ಪಳಿಸಿದ್ದೆ. <br /> <br /> ಆದರೆ ಇಂದಿನ ಮಾತೇ ಬೇರೆ~ ಎನ್ನುವ ಅವರು ಬೆಂಗಳೂರಿನ ಜಯನಗರದಲ್ಲಿ ಇರುವ ತಮ್ಮ ಸ್ಟುಡಿಯೋದಲ್ಲಿ ಚಿತ್ರಕಲೆ ಬಗ್ಗೆ ಆಸಕ್ತಿ ಇರುವವರಿಗೆ ಕಲಿಸುತ್ತಿದ್ದಾರೆ. ಸ್ಟುಡಿಯೋವನ್ನು ಶಾಲೆಯಾಗಿ ವಿಸ್ತರಿಸುವ ಕನಸು ಅವರದು.<br /> <br /> ಜಗದೀಶ್ರ ಇತ್ತೀಚಿನ ಕಲಾಭಿವ್ಯಕ್ತಿಯ ಆಸಕ್ತಿಯ ವಿಷಯ `ಮಹಿಳೆ~. ಸ್ತ್ರೀಲೋಕಕ್ಕೆ ಸಂಬಂಧಿಸಿದ ಕಲಾಕೃತಿಗಳನ್ನು ರೂಪಿಸುತ್ತಿರುವ ಅವರು ಮಹಿಳೆಯರ ದೈಹಿಕ ಲಕ್ಷಣ, ಅವರ ಸ್ವಾತಂತ್ರ್ಯದ ಹುಡುಕಾಟ ಮತ್ತು ವಿಶ್ವದಲ್ಲಿ ಅವರ ಗುರುತಿಸುವಿಕೆ ಬಗ್ಗೆ ಕೆಲಸ ಮಾಡುತ್ತಿದ್ದಾರೆ. ಈ ಸ್ತ್ರೀಲೋಕದ ಮಜಲುಗಳ ಹುಡುಕಾಟಕ್ಕೆ ಅವರ ಮಡದಿಯೇ ಸ್ಫೂರ್ತಿಯಂತೆ. <br /> <br /> ಪ್ರಸ್ತುತ ನಗರದ ಮಹಿಳೆಯರನ್ನು ಚಿತ್ರಿಸುವುದರಲ್ಲಿ ಜಗದೀಶ್ ನಿರತರಾಗಿದ್ದಾರೆ. ನಗರದ ಮಹಿಳೆಯರು ಅನುಭವಿಸುತ್ತಿರುವ ಸ್ಥೂಲಶರೀರದ ಸಮಸ್ಯೆಯನ್ನು ಕಲೆಯ ಮೂಲಕ ಬಿಂಬಿಸುವ ಪ್ರಯತ್ನ ಅವರದ್ದು. <br /> <br /> `ನಾನು ಮಂಗಳೂರಿನ ಹುಡುಗಿಯರನ್ನು ನೋಡಿ ಬೆಳೆದವನು. ಅವರಲ್ಲಿ ಪ್ರಾದೇಶಿಕವಾಗಿ ವಿಶಿಷ್ಟ ದೈಹಿಕ ಲಕ್ಷಣ ಇರುತ್ತದೆ. ಅದಷ್ಟೇ ನನ್ನ ಕಲೆಗೆ ಸಾಕಾಗುವುದಿಲ್ಲ. ನಗರದ ಮಹಿಳೆಯರು ತುಂಬಾ ಭಿನ್ನವಾಗಿರುತ್ತಾರೆ. ಅವರ ದಪ್ಪ ದೇಹದಲ್ಲಿಯೂ ಒಂದು ಸೌಂದರ್ಯ ಇರುತ್ತದೆ~ ಎಂದು ತಮ್ಮದೇ ಸೌಂದರ್ಯಮೀಮಾಂಸೆ ಮಂಡಿಸುತ್ತಾರೆ. <br /> ಜಗದೀಶ್ರ ಸಂಪರ್ಕ ಸಂಖ್ಯೆ: 98863 25655.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂಗಳೂರಿನ ಒಂದಲ್ಲಾ ಒಂದು ಕಡೆ ಪ್ರತಿದಿನವೂ ಕಲಾಕೃತಿಗಳ ಪ್ರದರ್ಶನ ನಡೆಯುತ್ತಲೇ ಇರುತ್ತದೆ. ಇಲ್ಲಿನ ಕಲಾವಿದರು ಮಾತ್ರವಲ್ಲದೆ, ದೇಶದ ವಿವಿಧ ಭಾಗಗಳ ಕಲಾವಿದರು ಕೂಡ ತಮ್ಮ ಕಲಾಕೃತಿಗಳನ್ನು ಬೆಂಗಳೂರಿನ ಗ್ಯಾಲರಿಗಳಲ್ಲಿ ಪ್ರದರ್ಶಿಸುವುದುಂಟು. <br /> <br /> ಈ ಮಟ್ಟಿಗೆ ಕಲಾವಿದರ ಕಲಾಭಿವ್ಯಕ್ತಿಗೆ ಬೆಂಗಳೂರಿನಲ್ಲಿ ಸಾಕಷ್ಟು ಅವಕಾಶವಿದ್ದರೂ, ಆ ಅವಕಾಶ ಎಲ್ಲ ವರ್ಗದ ಕಲಾವಿದರಿಗೂ ಎಟಕುವಂತಹದ್ದಲ್ಲ. ಗ್ಯಾಲರಿಗಳೊಂದಿಗೆ ಹಣಕಾಸಿನ ಲೆಕ್ಕಾಚಾರವೂ ತಳುಕು ಹಾಕಿಕೊಂಡಿದೆ. <br /> <br /> ಈ ಕಾರಣದಿಂದಲೇ, ತಮ್ಮ ಕಲಾಕೃತಿಗಳನ್ನು ಎಲ್ಲಿಯೂ ಪ್ರದರ್ಶಿಸಲಾಗದ ಅಸಹಾಯಕ ಗ್ರಾಮೀಣ ಕಲಾವಿದರು ಸಾಕಷ್ಟು ಮಂದಿಯಿದ್ದಾರೆ. ಇಂಥವರ ನೆರವಿಗೆಂದೇ ಬೆಂಗಳೂರಿನಲ್ಲಿ ಗ್ಯಾಲರಿಯೊಂದಿದೆ, ಅದುವೇ- `ವಿನ್ಸೆಂಟ್ ಆರ್ಟ್ ಗ್ಯಾಲರಿ~.<br /> <br /> ಹತ್ತರಲ್ಲಿ ಇನ್ನೊಂದು ಎನ್ನುವ ಮಾದರಿಯದಲ್ಲದ `ವಿನ್ಸೆಂಟ್ ಆರ್ಟ್ ಗ್ಯಾಲರಿ~ಯ ರೂವಾರಿ ಜಗದೀಶ್ ಕಡೂರು. ಇವರ ಗ್ಯಾಲರಿಯಲ್ಲಿ ಗ್ರಾಮೀಣ ಪ್ರದೇಶಗಳ ಹಾಗೂ ಸಣ್ಣಪುಟ್ಟ ಪಟ್ಟಣಗಳ ಕಲಾವಿದರ ಕಲಾಕೃತಿಗಳಿಗೆ ಮೊದಲ ಆದ್ಯತೆ. ಇಲ್ಲಿ ಹಣಕಾಸಿನ ಲೆಕ್ಕಾಚಾರಕ್ಕೆ ಎರಡನೇ ಸ್ಥಾನ. ಅಂದಹಾಗೆ, ಜಗದೀಶ್ ಸ್ವತಃ ಕಲಾವಿದರು ಕೂಡ.<br /> <br /> ಆ ಕಾರಣದಿಂದಲೇ ಇತರ ಕಲಾವಿದರ ತವಕತಲ್ಲಣಗಳನ್ನು ಅರ್ಥ ಮಾಡಿಕೊಳ್ಳುವುದು ಅವರಿಗೆ ಸಾಧ್ಯವಾಗಿದೆ. ಅಲ್ಲದೇ ಅವರಿಗೆ ಗ್ಯಾಲರಿ ಸ್ಥಳವನ್ನು ಉಚಿತವಾಗಿ ನೀಡಿರುವುದು ರೂಟ್ ಮಾಂಟೆಸರಿ ಶಾಲೆ. ಅದರಿಂದ ಜಗದೀಶ್ ಕಡಿಮೆ ಖರ್ಚಿನಲ್ಲಿ ಕಲಾಕೃತಿ ಪ್ರದರ್ಶನಕ್ಕೆ ಅವಕಾಶ ನೀಡಲು ಸಾಧ್ಯವಾಗಿದೆ.<br /> <br /> ಜಗದೀಶ್ ಅವರದ್ದೊಂದು ವಿಶಿಷ್ಟ ಕಲಾಜಗತ್ತು. ಕುಂಚ ಹಿಡಿಯುವುದರ ಜೊತೆಗೆ ಶಿಲ್ಪಿಯೂ ಆಗಿರುವ ಅವರದ್ದು ಕಲಾ ವಿಮರ್ಶೆಯಲ್ಲೂ ಭರವಸೆಯ ವ್ಯವಸಾಯ. ಮೂಲತಃ ಚಿಕ್ಕಮಗಳೂರು ಪರಿಸರದ ಅವರು ತಮ್ಮನ್ನು ತಾವು ಬಣ್ಣಿಸಿಕೊಳ್ಳುವುದು- `ದೊಡ್ಡ ಕನಸುಗಳನ್ನು ಹೊತ್ತ ಸ್ಲಂ ನಿವಾಸಿ~. <br /> <br /> ಗ್ರಾಮೀಣ ಪ್ರದೇಶ ಹಾಗೂ ಸಣ್ಣಪಟ್ಟಣಗಳಲ್ಲಿ ನೆಲೆಸಿರುವ ಉದಯೋನ್ಮುಖ ಕಲಾವಿದರಿಗೆ ತಮ್ಮ ಕೈಲಾದ ಸಹಾಯ ನೀಡುವುದು ಅವರ ಹಂಬಲ. ಹೊಟ್ಟೆಪಾಡಿಗಾಗಿ ಬೆಂಗಳೂರಿನಲ್ಲಿ ಇರುವುದಾಗಿ ಹೇಳುವ ಅವರು, `ಹೊಟ್ಟೆಪಾಡು ನಮಗೆ ಇಷ್ಟವಿಲ್ಲದ ಹಲವು ಕೆಲಸಗಳನ್ನು ಮಾಡಲು ಪ್ರೇರೇಪಿಸುತ್ತದೆ~ ಎನ್ನುತ್ತಾರೆ.<br /> <br /> ಚಿಕ್ಕಮಗಳೂರಿನ ಶಾಂತಿನಿಕೇತನ ಶಾಲೆಯಲ್ಲಿ ಪದವಿ ಪಡೆದಿರುವ ಜಗದೀಶ್, `ಮೈಸೂರು ದಸರಾ ಪ್ರಶಸ್ತಿ~ಯನ್ನು ಮೂರು ಬಾರಿ ಪಡೆದಿರುವ ಪ್ರತಿಭಾವಂತ. `ಮೊದಲ ಏಕವ್ಯಕ್ತಿ ಪ್ರದರ್ಶನ ನಡೆದಾಗ ಮಾಧ್ಯಮದವರು ನನ್ನ ಕಲೆ ಗುರುತಿಸಿ ಹುಡುಕಿಕೊಂಡು ಬಂದಾಗ ಸಿಕ್ಕಾಪಟ್ಟೆ ಖುಷಿಯಾಗಿತ್ತು. ಕುಣಿದು ಕುಪ್ಪಳಿಸಿದ್ದೆ. <br /> <br /> ಆದರೆ ಇಂದಿನ ಮಾತೇ ಬೇರೆ~ ಎನ್ನುವ ಅವರು ಬೆಂಗಳೂರಿನ ಜಯನಗರದಲ್ಲಿ ಇರುವ ತಮ್ಮ ಸ್ಟುಡಿಯೋದಲ್ಲಿ ಚಿತ್ರಕಲೆ ಬಗ್ಗೆ ಆಸಕ್ತಿ ಇರುವವರಿಗೆ ಕಲಿಸುತ್ತಿದ್ದಾರೆ. ಸ್ಟುಡಿಯೋವನ್ನು ಶಾಲೆಯಾಗಿ ವಿಸ್ತರಿಸುವ ಕನಸು ಅವರದು.<br /> <br /> ಜಗದೀಶ್ರ ಇತ್ತೀಚಿನ ಕಲಾಭಿವ್ಯಕ್ತಿಯ ಆಸಕ್ತಿಯ ವಿಷಯ `ಮಹಿಳೆ~. ಸ್ತ್ರೀಲೋಕಕ್ಕೆ ಸಂಬಂಧಿಸಿದ ಕಲಾಕೃತಿಗಳನ್ನು ರೂಪಿಸುತ್ತಿರುವ ಅವರು ಮಹಿಳೆಯರ ದೈಹಿಕ ಲಕ್ಷಣ, ಅವರ ಸ್ವಾತಂತ್ರ್ಯದ ಹುಡುಕಾಟ ಮತ್ತು ವಿಶ್ವದಲ್ಲಿ ಅವರ ಗುರುತಿಸುವಿಕೆ ಬಗ್ಗೆ ಕೆಲಸ ಮಾಡುತ್ತಿದ್ದಾರೆ. ಈ ಸ್ತ್ರೀಲೋಕದ ಮಜಲುಗಳ ಹುಡುಕಾಟಕ್ಕೆ ಅವರ ಮಡದಿಯೇ ಸ್ಫೂರ್ತಿಯಂತೆ. <br /> <br /> ಪ್ರಸ್ತುತ ನಗರದ ಮಹಿಳೆಯರನ್ನು ಚಿತ್ರಿಸುವುದರಲ್ಲಿ ಜಗದೀಶ್ ನಿರತರಾಗಿದ್ದಾರೆ. ನಗರದ ಮಹಿಳೆಯರು ಅನುಭವಿಸುತ್ತಿರುವ ಸ್ಥೂಲಶರೀರದ ಸಮಸ್ಯೆಯನ್ನು ಕಲೆಯ ಮೂಲಕ ಬಿಂಬಿಸುವ ಪ್ರಯತ್ನ ಅವರದ್ದು. <br /> <br /> `ನಾನು ಮಂಗಳೂರಿನ ಹುಡುಗಿಯರನ್ನು ನೋಡಿ ಬೆಳೆದವನು. ಅವರಲ್ಲಿ ಪ್ರಾದೇಶಿಕವಾಗಿ ವಿಶಿಷ್ಟ ದೈಹಿಕ ಲಕ್ಷಣ ಇರುತ್ತದೆ. ಅದಷ್ಟೇ ನನ್ನ ಕಲೆಗೆ ಸಾಕಾಗುವುದಿಲ್ಲ. ನಗರದ ಮಹಿಳೆಯರು ತುಂಬಾ ಭಿನ್ನವಾಗಿರುತ್ತಾರೆ. ಅವರ ದಪ್ಪ ದೇಹದಲ್ಲಿಯೂ ಒಂದು ಸೌಂದರ್ಯ ಇರುತ್ತದೆ~ ಎಂದು ತಮ್ಮದೇ ಸೌಂದರ್ಯಮೀಮಾಂಸೆ ಮಂಡಿಸುತ್ತಾರೆ. <br /> ಜಗದೀಶ್ರ ಸಂಪರ್ಕ ಸಂಖ್ಯೆ: 98863 25655.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>