<p>ಬೆಂಗಳೂರು: ವಾಯು ವಿಹಾರಕ್ಕೆ ಹೋಗಿದ್ದ ಗರ್ಭಿಣಿಯೊಬ್ಬರು ಉದ್ಯಾನದಲ್ಲೇ ಮಗುವಿಗೆ ಜನ್ಮ ನೀಡಿದ್ದು, ಆಸ್ಪತ್ರೆಗೆ ಕೊಂಡೊಯ್ಯುವ ಮಾರ್ಗ ಮಧ್ಯೆ ಅವರು ಸಾವನ್ನಪ್ಪಿದ ದಾರುಣ ಘಟನೆ ಕಮಲಾನಗರ ಸಮೀಪದ ಶಕ್ತಿಗಣಪತಿ ನಗರದಲ್ಲಿ ಭಾನುವಾರ ಸಂಭವಿಸಿದೆ.<br /> <br /> ಕಮಲಾನಗರದ ನಿವಾಸಿ ಪೂರ್ಣಿಮಾ (35) ಮೃತಪಟ್ಟವರು. ಅವರು ಬೆಳಿಗ್ಗೆ 10.30ರ ಸುಮಾರಿಗೆ ತನ್ನ ಮೂರು ವರ್ಷದ ಹೆಣ್ಣು ಮಗುವಿನೊಂದಿಗೆ ಮನೆಯ ಸಮೀಪದ ಉದ್ಯಾನಕ್ಕೆ ವಾಯುವಿಹಾರ ಮಾಡಲು ಹೋದಾಗ ಈ ದುರ್ಘಟನೆ ನಡೆದಿದೆ. <br /> <br /> ಹೆರಿಗೆ ನೋವು ಕಾಣಿಸಿಕೊಂಡು ಗಂಡು ಮಗುವಿಗೆ ಜನ್ಮ ನೀಡಿದ ಪೂರ್ಣಿಮಾ ಅವರು ತೀವ್ರ ರಕ್ತ ಸ್ರಾವದಿಂದಾಗಿ ಪ್ರಜ್ಞೆ ಕಳೆದುಕೊಂಡರು. ಈ ವೇಳೆ ಅವರ ಹೆಣ್ಣು ಮಗು ನವಜಾತ ಶಿಶುವಿನ ಮೇಲೆ ಮರಳು ಹಾಕಿ ಆಟವಾಡಲಾರಂಭಿಸಿದೆ. <br /> <br /> `ಹೆಣ್ಣು ಮಗುವೊಂದು ಶಿಶುವಿನ ಮೇಲೆ ಮರಳು ಹಾಕಿ ಆಟವಾಡುತ್ತಿತ್ತು. ಮಗು ಸಾವನ್ನಪ್ಪಿರಬಹುದು ಎಂಬ ಆತಂಕದಿಂದ ಹತ್ತಿರ ಹೋದಾಗ ಮಗು ಇನ್ನು ಉಸಿರಾಡುತ್ತಿತ್ತು. ಕೂಡಲೇ ತಾಯಿ ಹಾಗೂ ನವಜಾತ ಶಿಶುವನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. <br /> <br /> ಇಬ್ಬರನ್ನೂ ವಾಣಿ ವಿಲಾಸ ಆಸ್ಪತ್ರೆಗೆ ವರ್ಗಾಯಿಸುವಂತೆ ಖಾಸಗಿ ಆಸ್ಪತ್ರೆಯ ವೈದ್ಯರು ಆದೇಶಿಸಿದ ಹಿನ್ನೆಲೆಯಲ್ಲಿ ಅವರನ್ನು ವಾಣಿ ವಿಲಾಸ ಆಸ್ಪತ್ರೆಗೆ ಕೊಂಡೊಯ್ಯುವಾಗ ತಾಯಿ ಸಾವನ್ನಪ್ಪಿದರು~ ಎಂದು ಪಾಲಿಕೆಯ ಸ್ಥಳೀಯ ಸದಸ್ಯರೊಬ್ಬರ ಕಚೇರಿಯಲ್ಲಿ ಉದ್ಯೋಗಿಯಾಗಿದ್ದ ಸುರೇಶ್ ತಿಳಿಸಿದರು.<br /> <br /> `ಆಸ್ಪತ್ರೆಗೆ ಬರುವ ಮೊದಲೇ ತಾಯಿ ಸಾವನ್ನಪ್ಪಿದ್ದರು. ಮಗು 3.3 ಕೆ.ಜಿ ತೂಕವಿದ್ದು, ಆರೋಗ್ಯವಾಗಿದೆ. ಮಗುವನ್ನು ತೀವ್ರ ನಿಗಾ ಘಟಕದಲ್ಲಿ ಇಡಲಾಗಿದೆ~ ಎಂದು ಡಾ. ಎನ್. ಬಿ.ಶಕುಂತಲಾ ತಿಳಿಸಿದರು.<br /> <br /> `ಬಡಗಿಯಾಗಿದ್ದ ರಮೇಶ್ ಅವರನ್ನು ವಿವಾಹವಾಗಿದ್ದ ಪೂರ್ಣಿಮಾ ಮೂರು ವರ್ಷದಿಂದ ಪತಿಯಿಂದ ದೂರ ಉಳಿದಿದ್ದರು. ಅಕ್ಕಲಕ್ಷ್ಮಿಯೊಂದಿಗೆ ಕಮಲಾನಗರದಲ್ಲಿ ವಾಸಿಸುತ್ತಿದ್ದರು~ ಎಂದು ಪೊಲೀಸರು ಹೇಳಿದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂಗಳೂರು: ವಾಯು ವಿಹಾರಕ್ಕೆ ಹೋಗಿದ್ದ ಗರ್ಭಿಣಿಯೊಬ್ಬರು ಉದ್ಯಾನದಲ್ಲೇ ಮಗುವಿಗೆ ಜನ್ಮ ನೀಡಿದ್ದು, ಆಸ್ಪತ್ರೆಗೆ ಕೊಂಡೊಯ್ಯುವ ಮಾರ್ಗ ಮಧ್ಯೆ ಅವರು ಸಾವನ್ನಪ್ಪಿದ ದಾರುಣ ಘಟನೆ ಕಮಲಾನಗರ ಸಮೀಪದ ಶಕ್ತಿಗಣಪತಿ ನಗರದಲ್ಲಿ ಭಾನುವಾರ ಸಂಭವಿಸಿದೆ.<br /> <br /> ಕಮಲಾನಗರದ ನಿವಾಸಿ ಪೂರ್ಣಿಮಾ (35) ಮೃತಪಟ್ಟವರು. ಅವರು ಬೆಳಿಗ್ಗೆ 10.30ರ ಸುಮಾರಿಗೆ ತನ್ನ ಮೂರು ವರ್ಷದ ಹೆಣ್ಣು ಮಗುವಿನೊಂದಿಗೆ ಮನೆಯ ಸಮೀಪದ ಉದ್ಯಾನಕ್ಕೆ ವಾಯುವಿಹಾರ ಮಾಡಲು ಹೋದಾಗ ಈ ದುರ್ಘಟನೆ ನಡೆದಿದೆ. <br /> <br /> ಹೆರಿಗೆ ನೋವು ಕಾಣಿಸಿಕೊಂಡು ಗಂಡು ಮಗುವಿಗೆ ಜನ್ಮ ನೀಡಿದ ಪೂರ್ಣಿಮಾ ಅವರು ತೀವ್ರ ರಕ್ತ ಸ್ರಾವದಿಂದಾಗಿ ಪ್ರಜ್ಞೆ ಕಳೆದುಕೊಂಡರು. ಈ ವೇಳೆ ಅವರ ಹೆಣ್ಣು ಮಗು ನವಜಾತ ಶಿಶುವಿನ ಮೇಲೆ ಮರಳು ಹಾಕಿ ಆಟವಾಡಲಾರಂಭಿಸಿದೆ. <br /> <br /> `ಹೆಣ್ಣು ಮಗುವೊಂದು ಶಿಶುವಿನ ಮೇಲೆ ಮರಳು ಹಾಕಿ ಆಟವಾಡುತ್ತಿತ್ತು. ಮಗು ಸಾವನ್ನಪ್ಪಿರಬಹುದು ಎಂಬ ಆತಂಕದಿಂದ ಹತ್ತಿರ ಹೋದಾಗ ಮಗು ಇನ್ನು ಉಸಿರಾಡುತ್ತಿತ್ತು. ಕೂಡಲೇ ತಾಯಿ ಹಾಗೂ ನವಜಾತ ಶಿಶುವನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. <br /> <br /> ಇಬ್ಬರನ್ನೂ ವಾಣಿ ವಿಲಾಸ ಆಸ್ಪತ್ರೆಗೆ ವರ್ಗಾಯಿಸುವಂತೆ ಖಾಸಗಿ ಆಸ್ಪತ್ರೆಯ ವೈದ್ಯರು ಆದೇಶಿಸಿದ ಹಿನ್ನೆಲೆಯಲ್ಲಿ ಅವರನ್ನು ವಾಣಿ ವಿಲಾಸ ಆಸ್ಪತ್ರೆಗೆ ಕೊಂಡೊಯ್ಯುವಾಗ ತಾಯಿ ಸಾವನ್ನಪ್ಪಿದರು~ ಎಂದು ಪಾಲಿಕೆಯ ಸ್ಥಳೀಯ ಸದಸ್ಯರೊಬ್ಬರ ಕಚೇರಿಯಲ್ಲಿ ಉದ್ಯೋಗಿಯಾಗಿದ್ದ ಸುರೇಶ್ ತಿಳಿಸಿದರು.<br /> <br /> `ಆಸ್ಪತ್ರೆಗೆ ಬರುವ ಮೊದಲೇ ತಾಯಿ ಸಾವನ್ನಪ್ಪಿದ್ದರು. ಮಗು 3.3 ಕೆ.ಜಿ ತೂಕವಿದ್ದು, ಆರೋಗ್ಯವಾಗಿದೆ. ಮಗುವನ್ನು ತೀವ್ರ ನಿಗಾ ಘಟಕದಲ್ಲಿ ಇಡಲಾಗಿದೆ~ ಎಂದು ಡಾ. ಎನ್. ಬಿ.ಶಕುಂತಲಾ ತಿಳಿಸಿದರು.<br /> <br /> `ಬಡಗಿಯಾಗಿದ್ದ ರಮೇಶ್ ಅವರನ್ನು ವಿವಾಹವಾಗಿದ್ದ ಪೂರ್ಣಿಮಾ ಮೂರು ವರ್ಷದಿಂದ ಪತಿಯಿಂದ ದೂರ ಉಳಿದಿದ್ದರು. ಅಕ್ಕಲಕ್ಷ್ಮಿಯೊಂದಿಗೆ ಕಮಲಾನಗರದಲ್ಲಿ ವಾಸಿಸುತ್ತಿದ್ದರು~ ಎಂದು ಪೊಲೀಸರು ಹೇಳಿದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>