<p>ಜಮಖಂಡಿ: ಸರಕಾರಿ ಮತ್ತು ಖಾಸಗಿ ಕ್ಷೇತ್ರಗಳೆರಡ ರಲ್ಲೂ ಸಾಕಷ್ಟು ಉದ್ಯೋಗಾವಕಾಶಗಳು ಇವೆ. ಆದರೆ ಉದ್ಯೋಗಶೀಲ ಪದವೀಧರರ ಕೊರತೆ ಇದೆ ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಎಂಬಿಎ ವಿಭಾಗದ ಪ್ರಾಧ್ಯಾಪಕ ಮಹಾಂತೇಶ ಕುರಿ ಅಭಿಪ್ರಾಯ ಪಟ್ಟರು.<br /> <br /> ಸ್ಥಳೀಯ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ವಾಣಿಜ್ಯ ಮತ್ತು ಕಾರ್ಯನಿರ್ವಹಣಾ ವಿಭಾಗಗಳ ಅಶ್ರಯದಲ್ಲಿ ಭಾನುವಾರ ಏರ್ಪಡಿಸಿದ್ದ `ಜೀವನವೃತ್ತಿ ಅಭಿವೃದ್ಧಿ~ ಹಾಗೂ `ಇ-ಬ್ಯಾಂಕಿಂಗ್~ ಕುರಿತ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.<br /> <br /> ಉದ್ಯೋಗ ಗಿಟ್ಟಿಸಿಕೊಳ್ಳಲು ಇಂದಿನ ಪದವೀ ಧರರು ಸಂವಹನ ಕಲೆ ಮೈಗೂಡಿಸಿಕೊಳ್ಳುವುದು, ಇಂಗ್ಲಿಷ್ ಭಾಷೆಯಲ್ಲಿ ನಿರರ್ಗಳವಾಗಿ ಮಾತನಾಡು ವುದನ್ನು ಕಲಿಯುವುದು ಮತ್ತು ಉತ್ತಮ ನಡವಳಿಕೆ ಬೆಳೆಸಿಕೊಳ್ಳುವುದು ಅಗತ್ಯವಿದೆ. ಉದ್ಯೋಗ ಮಾಡು ವ ಸಂಸ್ಥೆಯ ಸಂಸ್ಕೃತಿಯನ್ನು ಅರಿತು ಅದಕ್ಕನು ಗುಣವಾಗಿ ವ್ಯಕ್ತಿತ್ವ ಬದಲಾವಣೆ ಮಾಡಿಕೊಳ್ಳ ಬೇಕಾಗುತ್ತದೆ ಎಂದರು.<br /> <br /> ಎಕ್ಸಿಸ್ ಬ್ಯಾಂಕ್ ಸ್ಥಳೀಯ ಶಾಖೆಯ ವ್ಯವಸ್ಥಾಪಕ ಅನಂತ ಕುಲಕರ್ಣಿ ಮಾತನಾಡಿ, ಇಂಟರ್ನೆಟ್ ತಂತ್ರಜ್ಞಾನ ಬಳಸಿಕೊಂಡು ಮನೆಯಲ್ಲಿ ಕುಳಿತು ಬ್ಯಾಂಕುಗಳ ಜೊತೆಗೆ ವ್ಯವಹಾರ ಮಾಡುವ ಇ- ಬ್ಯಾಂಕಿಂಗ್ ವ್ಯವಸ್ಥೆ ಭಾರತ ದೇಶಕ್ಕೆ ಹೊಸದೆನಿಸಿ ದರೂ ಸಹ ಪ್ರಪಂಚದ ಇತರ ದೇಶಗಳಲ್ಲಿ ಆ ವ್ಯವಸ್ಥೆಗೆ ಶತಮಾನಗಳ ಇತಿಹಾಸವಿದೆ ಎಂದರು.<br /> <br /> ಪ್ರಾಚಾರ್ಯೆ ಬಿ.ಯಶೋದ ಅಧ್ಯಕ್ಷತೆ ವಹಿಸಿ ಮಾತನಾಡಿ, ಚಲಾವಣೆಯಲ್ಲಿರುವ ನಾಣ್ಯದಂತಾಗಲು ಆಂತರಿಕ ಮತ್ತು ಬಾಹ್ಯ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕು ಎಂದು ವಿದ್ಯಾರ್ಥಿನಿಯರಿಗೆ ಕಿವಿಮಾತು ಹೇಳಿದರು.<br /> <br /> ಬಿಎಲ್ಡಿಇಎ ಕಾಲೇಜಿನ ಭೌತಶಾಸ್ತ್ರ ವಿಭಾಗ ಮುಖ್ಯಸ್ಥ ಡಾ.ಟಿ.ಪಿ.ಗಿರಡ್ಡಿ ಮುಖ್ಯ ಅತಿಥಿಯಾಗಿ ಮಾತನಾಡಿ, ಲಭ್ಯವಿರುವ ಸೌಲಭ್ಯಗಳ ಅರಿವು ಇದ್ದಾಗ ಮಾತ್ರ ಅವುಗಳ ಬಳಕೆ ಸಾಧ್ಯವಾಗುತ್ತದೆ. ಆ ನಿಟ್ಟಿನಲ್ಲಿ ವಿಚಾರ ಸಂಕಿರಣಕ್ಕೆ ಆಯ್ಕೆ ಮಾಡಿಕೊಂಡ ವಿಷಯಗಳು ಸೂಕ್ತವಾಗಿವೆ ಎಂದರು.<br /> <br /> ಪ್ರೊ.ಎಸ್.ಎಸ್.ಹಳೇಮನಿ, ಪ್ರೊ.ಎಲ್.ಎಸ್. ಕೋರೆ, ಗಾಯಿತ್ರಿ ತುಂಗಳ ವೇದಿಕೆಯಲ್ಲಿದ್ದರು. ರಾಜಶ್ರೀ ಕೊಹಿನೂರ ಪ್ರಾರ್ಥನೆ ಗೀತೆ ಹಾಡಿದರು. ಪದ್ಮಜಾ ಶೆಟ್ಟಿ ಸ್ವಾಗತಿಸಿದರು. ಕವಿತಾ ಕೊಣ್ಣೂರ ಹಾಗೂ ಸಂಗಡಿಗರು ನಾಡಗೀತೆ ಹಾಡಿದರು. ವಿಜಯಲಕ್ಷ್ಮೀ ಹೊಸಮನಿ ನಿರೂಪಿಸಿದರು. ಶಿಲ್ಪಾ ಬಣಕಾರ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಜಮಖಂಡಿ: ಸರಕಾರಿ ಮತ್ತು ಖಾಸಗಿ ಕ್ಷೇತ್ರಗಳೆರಡ ರಲ್ಲೂ ಸಾಕಷ್ಟು ಉದ್ಯೋಗಾವಕಾಶಗಳು ಇವೆ. ಆದರೆ ಉದ್ಯೋಗಶೀಲ ಪದವೀಧರರ ಕೊರತೆ ಇದೆ ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಎಂಬಿಎ ವಿಭಾಗದ ಪ್ರಾಧ್ಯಾಪಕ ಮಹಾಂತೇಶ ಕುರಿ ಅಭಿಪ್ರಾಯ ಪಟ್ಟರು.<br /> <br /> ಸ್ಥಳೀಯ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ವಾಣಿಜ್ಯ ಮತ್ತು ಕಾರ್ಯನಿರ್ವಹಣಾ ವಿಭಾಗಗಳ ಅಶ್ರಯದಲ್ಲಿ ಭಾನುವಾರ ಏರ್ಪಡಿಸಿದ್ದ `ಜೀವನವೃತ್ತಿ ಅಭಿವೃದ್ಧಿ~ ಹಾಗೂ `ಇ-ಬ್ಯಾಂಕಿಂಗ್~ ಕುರಿತ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.<br /> <br /> ಉದ್ಯೋಗ ಗಿಟ್ಟಿಸಿಕೊಳ್ಳಲು ಇಂದಿನ ಪದವೀ ಧರರು ಸಂವಹನ ಕಲೆ ಮೈಗೂಡಿಸಿಕೊಳ್ಳುವುದು, ಇಂಗ್ಲಿಷ್ ಭಾಷೆಯಲ್ಲಿ ನಿರರ್ಗಳವಾಗಿ ಮಾತನಾಡು ವುದನ್ನು ಕಲಿಯುವುದು ಮತ್ತು ಉತ್ತಮ ನಡವಳಿಕೆ ಬೆಳೆಸಿಕೊಳ್ಳುವುದು ಅಗತ್ಯವಿದೆ. ಉದ್ಯೋಗ ಮಾಡು ವ ಸಂಸ್ಥೆಯ ಸಂಸ್ಕೃತಿಯನ್ನು ಅರಿತು ಅದಕ್ಕನು ಗುಣವಾಗಿ ವ್ಯಕ್ತಿತ್ವ ಬದಲಾವಣೆ ಮಾಡಿಕೊಳ್ಳ ಬೇಕಾಗುತ್ತದೆ ಎಂದರು.<br /> <br /> ಎಕ್ಸಿಸ್ ಬ್ಯಾಂಕ್ ಸ್ಥಳೀಯ ಶಾಖೆಯ ವ್ಯವಸ್ಥಾಪಕ ಅನಂತ ಕುಲಕರ್ಣಿ ಮಾತನಾಡಿ, ಇಂಟರ್ನೆಟ್ ತಂತ್ರಜ್ಞಾನ ಬಳಸಿಕೊಂಡು ಮನೆಯಲ್ಲಿ ಕುಳಿತು ಬ್ಯಾಂಕುಗಳ ಜೊತೆಗೆ ವ್ಯವಹಾರ ಮಾಡುವ ಇ- ಬ್ಯಾಂಕಿಂಗ್ ವ್ಯವಸ್ಥೆ ಭಾರತ ದೇಶಕ್ಕೆ ಹೊಸದೆನಿಸಿ ದರೂ ಸಹ ಪ್ರಪಂಚದ ಇತರ ದೇಶಗಳಲ್ಲಿ ಆ ವ್ಯವಸ್ಥೆಗೆ ಶತಮಾನಗಳ ಇತಿಹಾಸವಿದೆ ಎಂದರು.<br /> <br /> ಪ್ರಾಚಾರ್ಯೆ ಬಿ.ಯಶೋದ ಅಧ್ಯಕ್ಷತೆ ವಹಿಸಿ ಮಾತನಾಡಿ, ಚಲಾವಣೆಯಲ್ಲಿರುವ ನಾಣ್ಯದಂತಾಗಲು ಆಂತರಿಕ ಮತ್ತು ಬಾಹ್ಯ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕು ಎಂದು ವಿದ್ಯಾರ್ಥಿನಿಯರಿಗೆ ಕಿವಿಮಾತು ಹೇಳಿದರು.<br /> <br /> ಬಿಎಲ್ಡಿಇಎ ಕಾಲೇಜಿನ ಭೌತಶಾಸ್ತ್ರ ವಿಭಾಗ ಮುಖ್ಯಸ್ಥ ಡಾ.ಟಿ.ಪಿ.ಗಿರಡ್ಡಿ ಮುಖ್ಯ ಅತಿಥಿಯಾಗಿ ಮಾತನಾಡಿ, ಲಭ್ಯವಿರುವ ಸೌಲಭ್ಯಗಳ ಅರಿವು ಇದ್ದಾಗ ಮಾತ್ರ ಅವುಗಳ ಬಳಕೆ ಸಾಧ್ಯವಾಗುತ್ತದೆ. ಆ ನಿಟ್ಟಿನಲ್ಲಿ ವಿಚಾರ ಸಂಕಿರಣಕ್ಕೆ ಆಯ್ಕೆ ಮಾಡಿಕೊಂಡ ವಿಷಯಗಳು ಸೂಕ್ತವಾಗಿವೆ ಎಂದರು.<br /> <br /> ಪ್ರೊ.ಎಸ್.ಎಸ್.ಹಳೇಮನಿ, ಪ್ರೊ.ಎಲ್.ಎಸ್. ಕೋರೆ, ಗಾಯಿತ್ರಿ ತುಂಗಳ ವೇದಿಕೆಯಲ್ಲಿದ್ದರು. ರಾಜಶ್ರೀ ಕೊಹಿನೂರ ಪ್ರಾರ್ಥನೆ ಗೀತೆ ಹಾಡಿದರು. ಪದ್ಮಜಾ ಶೆಟ್ಟಿ ಸ್ವಾಗತಿಸಿದರು. ಕವಿತಾ ಕೊಣ್ಣೂರ ಹಾಗೂ ಸಂಗಡಿಗರು ನಾಡಗೀತೆ ಹಾಡಿದರು. ವಿಜಯಲಕ್ಷ್ಮೀ ಹೊಸಮನಿ ನಿರೂಪಿಸಿದರು. ಶಿಲ್ಪಾ ಬಣಕಾರ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>