<p><strong>ಉನಾ, ಗುಜರಾತ್: </strong>70ನೇ ಸ್ವಾತಂತ್ರ್ಯ ದಿನಾಚರಣೆಯಂದು ಗುಜರಾತ್ನ ಉನಾದಲ್ಲಿ ನಡೆಯುತ್ತಿರುವ ದಲಿತ ಮಹಾಸಮ್ಮೇಳನಕ್ಕೆ ಸಾಗರೋಪಾದಿಯಲ್ಲಿ ಜನ ಹರಿದುಬಂದಿದ್ದಾರೆ.</p>.<p>ರೋಹಿತ್ ವೇಮುಲ ಅವರ ತಾಯಿ ರಾಧಿಕಾ ವೇಮುಲ ರಾಷ್ಟ್ರಧ್ವಜ ಹಾರಿಸುವ ಮೂಲಕ ಈ ಬೃಹತ್ ದಲಿತ ಸಮಾವೇಶಕ್ಕೆ ಚಾಲನೆ ನೀಡಿದ್ದಾರೆ.</p>.<p>ದಲಿತರ ಮೇಲಿನ ದೌರ್ಜನ್ಯದಿಂದ ದೇಶದ ಗಮನ ಸೆಳೆದಿದ್ದ ಉನಾ ಈಗ ಹೊಸ ದಲಿತ ಚಳವಳಿಯ ಆರಂಭಕ್ಕೆ ಸಾಕ್ಷಿಯಾಗಿದೆ.</p>.<p>ಜೆಎನ್ಯು ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯ ಕುಮಾರ್, ರೋಹಿತ್ ವೇಮುಲ ಸೋದರ ಸೇರಿದಂತೆ ಸಾವಿರಾರು ಮಂದಿ ಯುವಕರು ಸಮಾವೇಶದಲ್ಲಿ ಭಾಗವಹಿಸಿದ್ದಾರೆ.<br /> <br /> ಉನಾದಲ್ಲಿ ನಡೆದ ದಲಿತರ ಮೇಲಿನ ದೌರ್ಜನ್ಯವನ್ನು ಖಂಡಿಸಿ ಅಹಮದಾಬಾದ್ನಲ್ಲಿ ಆಗಸ್ಟ್ 4ರಂದು ಆರಂಭಗೊಂಡ ‘ದಲಿತ ಅಸ್ಮಿತಾ ಯಾತ್ರೆ’ ಸ್ವಾತಂತ್ರ್ಯ ದಿನಾಚರಣೆಯಂದು ಉನಾ ಸೇರಿದೆ.</p>.<p>‘ಉನಾ ಚಲೊ’ ಘೋಷಣೆಯೊಂದಿಗೆ ದಲಿತ ಅಸ್ಮಿತಾ ಯಾತ್ರೆ 10 ದಿನಗಳ ಕಾಲ ಹಲವು ಹಳ್ಳಿಗಳ ಮೂಲಕ ಹಾದು ಉನಾ ತಲುಪಿದೆ. ಸಮಾವೇಶದಲ್ಲಿ ನೆರೆದಿರುವ ಯುವಕರು ಅಂಬೇಡ್ಕರ್ ಭಾವಚಿತ್ರಗಳನ್ನು ಹಿಡಿದು ‘ಜೈ ಭೀಮ್, ಜೈ ಭೀಮ್’ ಎಂದು ಘೋಷಣೆ ಕೂಗುತ್ತಿದ್ದಾರೆ.</p>.<p><strong>ಯಾತ್ರೆ ಮಾರ್ಗ </strong><strong>ಮಧ್ಯೆ </strong><strong>ಹಲ್ಲೆ</strong><br /> ದಲಿತ ಅಸ್ಮಿತಾ ಯಾತ್ರೆ ಸಾಗಿ ಬಂದ ಹಲವು ಹಳ್ಳಿಗಳಲ್ಲಿ ಗೋರಕ್ಷಕರು ಯಾತ್ರೆಯಲ್ಲಿ ಭಾಗವಹಿಸಿದ್ದವರ ಮೇಲೆ ಹಲ್ಲೆ ನಡೆಸಿದ್ದಾರೆ.<br /> <br /> <strong>ಆಗಸ್ಟ್ 13ರಂದು ಹೈದರಾಬಾದ್ನಿಂದ </strong><strong>ರೈಲಿನಲ್ಲಿ ಹೊರಟ ರೋಹಿತ್ ವೇಮುಲ ತಾಯಿ ರಾಧಿಕಾ ಮತ್ತು ರೋಹಿತ್ ಸಹೋದರ ರಾಜ</strong><br /> </p>.<p><br/>&#13; <br/>&#13; <strong>ದಲಿತ ಮಹಾಸಮ್ಮೇಳನದ ವಿಡಿಯೊ</strong></p><p><iframe allowfullscreen="true" allowtransparency="true" frameborder="0" height="315" scrolling="no" src="https://www.facebook.com/plugins/video.php?href=https%3A%2F%2Fwww.facebook.com%2Ffreethinker%2Fvideos%2F10154412778968609%2F&amp;show_text=0&amp;width=560" style="border:none;overflow:hidden" width="560"/></p><p><strong>ಮುಸ್ಲಿಮರ ಬೆಂಬಲ</strong><br/>&#13; ದಲಿತ ಸಮಾವೇಶಕ್ಕೆ ದಲಿತರು ಮಾತ್ರವಲ್ಲದೆ ಹೆಚ್ಚಿನ ಸಂಖ್ಯೆಯ ಮುಸ್ಲಿಮರೂ ಸೇರಿದ್ದಾರೆ. ‘ಗುಜರಾತ್ನಲ್ಲಿ ಕೋಮುವಾದಕ್ಕೆ ವಿರುದ್ಧದ ದನಿ ಗಟ್ಟಿಗೊಳ್ಳುತ್ತಿದೆ’ ಎಂದು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ವಿಶ್ಲೇಷಿಸಿದ್ದಾರೆ.<br/>&#13; <br/>&#13; ದಲಿತ ಮಹಾಸಮ್ಮೇಳನದಲ್ಲಿ ಭಾರೀ ಸಂಖ್ಯೆಯಲ್ಲಿ ಜನ ಸೇರಿರುವ ಸುದ್ದಿ ಹಾಗೂ ವಿಡಿಯೊ ಫೇಸ್ಬುಕ್ ಮೂಲಕ ವೈರಲ್ ಆಗಿದೆ. ಸಮ್ಮೇಳನದ ವಿಡಿಯೊಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಜನ ವೀಕ್ಷಿಸಿ, ಶೇರ್ ಮಾಡಿದ್ದಾರೆ.</p><p><iframe allowfullscreen="true" allowtransparency="true" frameborder="0" height="315" scrolling="no" src="https://www.facebook.com/plugins/video.php?href=https%3A%2F%2Fwww.facebook.com%2Ffreethinker%2Fvideos%2F10154412638468609%2F&amp;show_text=0&amp;width=560" style="border:none;overflow:hidden" width="560"/></p></p></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಉನಾ, ಗುಜರಾತ್: </strong>70ನೇ ಸ್ವಾತಂತ್ರ್ಯ ದಿನಾಚರಣೆಯಂದು ಗುಜರಾತ್ನ ಉನಾದಲ್ಲಿ ನಡೆಯುತ್ತಿರುವ ದಲಿತ ಮಹಾಸಮ್ಮೇಳನಕ್ಕೆ ಸಾಗರೋಪಾದಿಯಲ್ಲಿ ಜನ ಹರಿದುಬಂದಿದ್ದಾರೆ.</p>.<p>ರೋಹಿತ್ ವೇಮುಲ ಅವರ ತಾಯಿ ರಾಧಿಕಾ ವೇಮುಲ ರಾಷ್ಟ್ರಧ್ವಜ ಹಾರಿಸುವ ಮೂಲಕ ಈ ಬೃಹತ್ ದಲಿತ ಸಮಾವೇಶಕ್ಕೆ ಚಾಲನೆ ನೀಡಿದ್ದಾರೆ.</p>.<p>ದಲಿತರ ಮೇಲಿನ ದೌರ್ಜನ್ಯದಿಂದ ದೇಶದ ಗಮನ ಸೆಳೆದಿದ್ದ ಉನಾ ಈಗ ಹೊಸ ದಲಿತ ಚಳವಳಿಯ ಆರಂಭಕ್ಕೆ ಸಾಕ್ಷಿಯಾಗಿದೆ.</p>.<p>ಜೆಎನ್ಯು ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯ ಕುಮಾರ್, ರೋಹಿತ್ ವೇಮುಲ ಸೋದರ ಸೇರಿದಂತೆ ಸಾವಿರಾರು ಮಂದಿ ಯುವಕರು ಸಮಾವೇಶದಲ್ಲಿ ಭಾಗವಹಿಸಿದ್ದಾರೆ.<br /> <br /> ಉನಾದಲ್ಲಿ ನಡೆದ ದಲಿತರ ಮೇಲಿನ ದೌರ್ಜನ್ಯವನ್ನು ಖಂಡಿಸಿ ಅಹಮದಾಬಾದ್ನಲ್ಲಿ ಆಗಸ್ಟ್ 4ರಂದು ಆರಂಭಗೊಂಡ ‘ದಲಿತ ಅಸ್ಮಿತಾ ಯಾತ್ರೆ’ ಸ್ವಾತಂತ್ರ್ಯ ದಿನಾಚರಣೆಯಂದು ಉನಾ ಸೇರಿದೆ.</p>.<p>‘ಉನಾ ಚಲೊ’ ಘೋಷಣೆಯೊಂದಿಗೆ ದಲಿತ ಅಸ್ಮಿತಾ ಯಾತ್ರೆ 10 ದಿನಗಳ ಕಾಲ ಹಲವು ಹಳ್ಳಿಗಳ ಮೂಲಕ ಹಾದು ಉನಾ ತಲುಪಿದೆ. ಸಮಾವೇಶದಲ್ಲಿ ನೆರೆದಿರುವ ಯುವಕರು ಅಂಬೇಡ್ಕರ್ ಭಾವಚಿತ್ರಗಳನ್ನು ಹಿಡಿದು ‘ಜೈ ಭೀಮ್, ಜೈ ಭೀಮ್’ ಎಂದು ಘೋಷಣೆ ಕೂಗುತ್ತಿದ್ದಾರೆ.</p>.<p><strong>ಯಾತ್ರೆ ಮಾರ್ಗ </strong><strong>ಮಧ್ಯೆ </strong><strong>ಹಲ್ಲೆ</strong><br /> ದಲಿತ ಅಸ್ಮಿತಾ ಯಾತ್ರೆ ಸಾಗಿ ಬಂದ ಹಲವು ಹಳ್ಳಿಗಳಲ್ಲಿ ಗೋರಕ್ಷಕರು ಯಾತ್ರೆಯಲ್ಲಿ ಭಾಗವಹಿಸಿದ್ದವರ ಮೇಲೆ ಹಲ್ಲೆ ನಡೆಸಿದ್ದಾರೆ.<br /> <br /> <strong>ಆಗಸ್ಟ್ 13ರಂದು ಹೈದರಾಬಾದ್ನಿಂದ </strong><strong>ರೈಲಿನಲ್ಲಿ ಹೊರಟ ರೋಹಿತ್ ವೇಮುಲ ತಾಯಿ ರಾಧಿಕಾ ಮತ್ತು ರೋಹಿತ್ ಸಹೋದರ ರಾಜ</strong><br /> </p>.<p><br/>&#13; <br/>&#13; <strong>ದಲಿತ ಮಹಾಸಮ್ಮೇಳನದ ವಿಡಿಯೊ</strong></p><p><iframe allowfullscreen="true" allowtransparency="true" frameborder="0" height="315" scrolling="no" src="https://www.facebook.com/plugins/video.php?href=https%3A%2F%2Fwww.facebook.com%2Ffreethinker%2Fvideos%2F10154412778968609%2F&amp;show_text=0&amp;width=560" style="border:none;overflow:hidden" width="560"/></p><p><strong>ಮುಸ್ಲಿಮರ ಬೆಂಬಲ</strong><br/>&#13; ದಲಿತ ಸಮಾವೇಶಕ್ಕೆ ದಲಿತರು ಮಾತ್ರವಲ್ಲದೆ ಹೆಚ್ಚಿನ ಸಂಖ್ಯೆಯ ಮುಸ್ಲಿಮರೂ ಸೇರಿದ್ದಾರೆ. ‘ಗುಜರಾತ್ನಲ್ಲಿ ಕೋಮುವಾದಕ್ಕೆ ವಿರುದ್ಧದ ದನಿ ಗಟ್ಟಿಗೊಳ್ಳುತ್ತಿದೆ’ ಎಂದು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ವಿಶ್ಲೇಷಿಸಿದ್ದಾರೆ.<br/>&#13; <br/>&#13; ದಲಿತ ಮಹಾಸಮ್ಮೇಳನದಲ್ಲಿ ಭಾರೀ ಸಂಖ್ಯೆಯಲ್ಲಿ ಜನ ಸೇರಿರುವ ಸುದ್ದಿ ಹಾಗೂ ವಿಡಿಯೊ ಫೇಸ್ಬುಕ್ ಮೂಲಕ ವೈರಲ್ ಆಗಿದೆ. ಸಮ್ಮೇಳನದ ವಿಡಿಯೊಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಜನ ವೀಕ್ಷಿಸಿ, ಶೇರ್ ಮಾಡಿದ್ದಾರೆ.</p><p><iframe allowfullscreen="true" allowtransparency="true" frameborder="0" height="315" scrolling="no" src="https://www.facebook.com/plugins/video.php?href=https%3A%2F%2Fwww.facebook.com%2Ffreethinker%2Fvideos%2F10154412638468609%2F&amp;show_text=0&amp;width=560" style="border:none;overflow:hidden" width="560"/></p></p></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>