<p><strong>ಹೊನ್ನಾವರ:</strong> ತಾಲ್ಲೂಕಿನ ಕರ್ಕಿಯ ಸಮೀಪ ರಾಷ್ಟ್ರೀಯ ಹೆದ್ದಾರಿಯ ಪಕ್ಕದ ಬಾಡಿಗೆ ಕಟ್ಟಡವೊಂದರಲ್ಲಿ ಕೆಲ ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ಸಹಾಯ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಗೆ (ಎಆರ್ಟಿಓ ಕಚೇರಿ) ಇದೀಗ ಸೂರಿಲ್ಲದೆ ಅಲೆಮಾರಿಯಾಗಬೇಕಾದ ದುಃಸ್ಥಿತಿ ಒದಗಿ ಬಂದಿದೆ.<br /> <br /> ಸಾಕಷ್ಟು ಹಣವಿದ್ದರೂ ಸ್ವಂತ ಕಟ್ಟಡ ಹೊಂದಲು ಸಾಧ್ಯವಾಗಿಲ್ಲ. ಇದರ ಬಾಡಿಗೆ ಕಟ್ಟಡ ಕೂಡ ಹೆದ್ದಾರಿ ವಿಸ್ತರಣೆಗೆ ಎರವಾಗುಗುತ್ತಿದೆ.<br /> <br /> ಕುಮಟಾ, ಹೊನ್ನಾವರ ಹಾಗೂ ಭಟ್ಕಳ ತಾಲ್ಲೂಕುಗಳ ಕಾರ್ಯವ್ಯಾಪ್ತಿಯನ್ನು ಹೊಂದಿರುವ ಈ ಎಆರ್ಟಿಓ ಕಚೇರಿಗೆ ಸ್ವಂತ ಕಟ್ಟಡಕ್ಕಾಗಿ ವರ್ಷಗಳ ಹಿಂದೆಯೇ 3 ಕೋಟಿ ರೂಪಾಯಿ ಮಂಜೂರಾಗಿದೆಯಾದರೂ ತಾಲ್ಲೂಕಿನಲ್ಲೆಲ್ಲಿಯೂ ಕಟ್ಟಡ ನಿರ್ಮಿಸಲು ಅಗತ್ಯ ಜಾಗ ಸಿಗದ ಕಾರಣ ಹಣ ಹಾಗೆಯೇ ಕೊಳೆಯುತ್ತಿದೆ.<br /> <br /> ಕಟ್ಟಡ ನಿರ್ಮಾಣಕ್ಕೆ ನಿಗದಿತ ಅವಧಿಯೊಳಗೆ ಅಗತ್ಯ ಜಾಗ ದೊರಕಿಸಿಕೊಳ್ಳಲು ಸಂಬಂಧಿಸಿದವರು ವಿಫಲವಾದ ಕಾರಣ ಈ ಹಣದಲ್ಲಿ ಒಂದೂವರೆ ಕೋಟಿ ರೂಪಾಯಿಯನ್ನು ಬೇರೊಂದು ಆರ್ಟಿಓ ಕಚೇರಿ ಕಟ್ಟಡ ನಿರ್ಮಾಣಕ್ಕೆ ಬಳಸಿಕೊಳ್ಳಲಾಗಿದೆ ಎನ್ನಲಾಗಿದೆ.<br /> <br /> ಕಚೇರಿ ನಿರ್ಮಾಣಕ್ಕೆ ಅಗತ್ಯ ಜಾಗವನ್ನು ಲೀಸ್ ಮೇಲೆ ಕೊಡಲು ಮಂಕಿ ಗ್ರಾಮ ಪಂಚಾಯ್ತಿ ಒಪ್ಪಿದ್ದ ಕಾರಣ 2 ವರ್ಷಗಳ ಹಿಂದೆ ಈ ಕಚೇರಿ ಕಟ್ಟಡವನ್ನು ಮಂಕಿಯಲ್ಲಿ ನಿರ್ಮಿಸಲು ನಡೆಸಿದ್ದ ತಯಾರಿಯನ್ನು ಕುಮಟಾ ಕ್ಷೇತ್ರದ ಅಂದಿನ ಶಾಸಕರು ವಿರೋಧಿಸಿದ ಕಾರಣ ಆ ಕೆಲಸ ನೆನೆಗುದಿಗೆ ಬೀಳುವಂತಾಗಿತ್ತು. ಹೊನ್ನಾವರ ಪಟ್ಟಣದ ಸಮೀಪವೇ ಜಾಗ ಕೊಡಿಸುವ ಈ ಶಾಸಕರ ಭರವಸೆ ಜಾರಿಗೆ ಬರದ ಕಾರಣ ಇಲಾಖೆಗೆ ಕಟ್ಟಡ `ಅಲ್ಲೂ ಇಲ್ಲ ಇಲ್ಲೂ ಇಲ್ಲ' ಎನ್ನುವ ಪರಿಸ್ಥಿತಿ ನಿರ್ಮಾಣವಾಯಿತು.<br /> <br /> ಜಾಗ ಕೊಡಬೇಕೆಂದು ಅರಣ್ಯ ಇಲಾಖೆಗೆ ಸಲ್ಲಿಸಿರುವ ಮನವಿ ಬೆಟ್ಟದಷ್ಟಾಗಿದೆಯಾದರೂ ಇಲಾಖೆ ಇದಕ್ಕೆ ಒಪ್ಪಿಗೆ ಕೊಡುವ ಸೂಚನೆ ಕಂಡು ಬರುತ್ತಿಲ್ಲ. ಮಂಜೂರಿ ನೀಡದಿರುವುದಕ್ಕೆ ಅರಣ್ಯ ಇಲಾಖೆ `ಅರಣ್ಯ ಸಂರಕ್ಷಣಾ ಕಾಯ್ದೆ 1980' ಕಾರಣ ನೀಡಿದೆ.<br /> <br /> ರಾಮತೀರ್ಥದಲ್ಲಿನ ಕೃಷಿ ಮಾರುಕಟ್ಟೆ ಸಮಿತಿಯ ಪಾಳು ಬಿದ್ದ ಜಾಗವನ್ನು ಎಆರ್ಟಿಓ ಕಚೇರಿ ಕಟ್ಟಡದ ನಿರ್ಮಾಣಕ್ಕೆ ನೀಡಲು ಸಮಿತಿ ವಿರೋಧಿಸಿದ್ದು ಇಲಾಖೆಯ ಸ್ವಂತ ಕಟ್ಟಡದ ಕನಸಿಗೆ ಮತ್ತೊಮ್ಮೆ ಹಿನ್ನಡೆಯಾಗುವಂತೆ ಮಾಡಿದೆ.<br /> <br /> `ಭಟ್ಕಳ ಹಾಗೂ ಕುಮಟಾ ವಿಧಾನಸಭಾ ಕ್ಷೇತ್ರಗಳೆರಡರ ಶಾಸಕರ ಉಪಸ್ಥಿತಿಯಲ್ಲೇ ನಡೆದ ಹಲವು ಕೆಡಿಪಿ ಸಭೆಗಳಲ್ಲಿ ಎಆರ್ಟಿಓ ಕಚೇರಿಯ ಕಟ್ಟಡ ನಿರ್ಮಾಣದ ವಿಷಯ ಪ್ರಸ್ತಾಪವಾಗಿದೆ ಯಾದರೂ ಈ ಕುರಿತಂತೆ ಗಂಭೀರ ಚರ್ಚೆಯಾಗಲಿ ಅಥವಾ ಪ್ರಯತ್ನವಾಗಲಿ ನಡೆದಿಲ್ಲ' ಎಂದು ಎಆರ್ಟಿಓ ಕಚೇರಿಯ ಸಿಬ್ಬಂದಿಯೊಬ್ಬರು ವಿಷಾದ ವ್ಯಕ್ತಪಡಿಸಿದರು.<br /> <br /> `ಎಆರ್ಟಿಓ ಕಚೇರಿ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕನಿಷ್ಠ 8 ಗುಂಟೆ ಜಾಗ ಒದಗಿಸಿಕೊಟ್ಟಲ್ಲಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಬಹುದು. ನಿರ್ಮಾಣಕ್ಕೆ ಹಣದ ಕೊರತೆಯಿಲ್ಲ' ಎಂದು ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಆರ್.ಜಿ.ಭಟ್ಟ ತಿಳಿಸಿದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊನ್ನಾವರ:</strong> ತಾಲ್ಲೂಕಿನ ಕರ್ಕಿಯ ಸಮೀಪ ರಾಷ್ಟ್ರೀಯ ಹೆದ್ದಾರಿಯ ಪಕ್ಕದ ಬಾಡಿಗೆ ಕಟ್ಟಡವೊಂದರಲ್ಲಿ ಕೆಲ ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ಸಹಾಯ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಗೆ (ಎಆರ್ಟಿಓ ಕಚೇರಿ) ಇದೀಗ ಸೂರಿಲ್ಲದೆ ಅಲೆಮಾರಿಯಾಗಬೇಕಾದ ದುಃಸ್ಥಿತಿ ಒದಗಿ ಬಂದಿದೆ.<br /> <br /> ಸಾಕಷ್ಟು ಹಣವಿದ್ದರೂ ಸ್ವಂತ ಕಟ್ಟಡ ಹೊಂದಲು ಸಾಧ್ಯವಾಗಿಲ್ಲ. ಇದರ ಬಾಡಿಗೆ ಕಟ್ಟಡ ಕೂಡ ಹೆದ್ದಾರಿ ವಿಸ್ತರಣೆಗೆ ಎರವಾಗುಗುತ್ತಿದೆ.<br /> <br /> ಕುಮಟಾ, ಹೊನ್ನಾವರ ಹಾಗೂ ಭಟ್ಕಳ ತಾಲ್ಲೂಕುಗಳ ಕಾರ್ಯವ್ಯಾಪ್ತಿಯನ್ನು ಹೊಂದಿರುವ ಈ ಎಆರ್ಟಿಓ ಕಚೇರಿಗೆ ಸ್ವಂತ ಕಟ್ಟಡಕ್ಕಾಗಿ ವರ್ಷಗಳ ಹಿಂದೆಯೇ 3 ಕೋಟಿ ರೂಪಾಯಿ ಮಂಜೂರಾಗಿದೆಯಾದರೂ ತಾಲ್ಲೂಕಿನಲ್ಲೆಲ್ಲಿಯೂ ಕಟ್ಟಡ ನಿರ್ಮಿಸಲು ಅಗತ್ಯ ಜಾಗ ಸಿಗದ ಕಾರಣ ಹಣ ಹಾಗೆಯೇ ಕೊಳೆಯುತ್ತಿದೆ.<br /> <br /> ಕಟ್ಟಡ ನಿರ್ಮಾಣಕ್ಕೆ ನಿಗದಿತ ಅವಧಿಯೊಳಗೆ ಅಗತ್ಯ ಜಾಗ ದೊರಕಿಸಿಕೊಳ್ಳಲು ಸಂಬಂಧಿಸಿದವರು ವಿಫಲವಾದ ಕಾರಣ ಈ ಹಣದಲ್ಲಿ ಒಂದೂವರೆ ಕೋಟಿ ರೂಪಾಯಿಯನ್ನು ಬೇರೊಂದು ಆರ್ಟಿಓ ಕಚೇರಿ ಕಟ್ಟಡ ನಿರ್ಮಾಣಕ್ಕೆ ಬಳಸಿಕೊಳ್ಳಲಾಗಿದೆ ಎನ್ನಲಾಗಿದೆ.<br /> <br /> ಕಚೇರಿ ನಿರ್ಮಾಣಕ್ಕೆ ಅಗತ್ಯ ಜಾಗವನ್ನು ಲೀಸ್ ಮೇಲೆ ಕೊಡಲು ಮಂಕಿ ಗ್ರಾಮ ಪಂಚಾಯ್ತಿ ಒಪ್ಪಿದ್ದ ಕಾರಣ 2 ವರ್ಷಗಳ ಹಿಂದೆ ಈ ಕಚೇರಿ ಕಟ್ಟಡವನ್ನು ಮಂಕಿಯಲ್ಲಿ ನಿರ್ಮಿಸಲು ನಡೆಸಿದ್ದ ತಯಾರಿಯನ್ನು ಕುಮಟಾ ಕ್ಷೇತ್ರದ ಅಂದಿನ ಶಾಸಕರು ವಿರೋಧಿಸಿದ ಕಾರಣ ಆ ಕೆಲಸ ನೆನೆಗುದಿಗೆ ಬೀಳುವಂತಾಗಿತ್ತು. ಹೊನ್ನಾವರ ಪಟ್ಟಣದ ಸಮೀಪವೇ ಜಾಗ ಕೊಡಿಸುವ ಈ ಶಾಸಕರ ಭರವಸೆ ಜಾರಿಗೆ ಬರದ ಕಾರಣ ಇಲಾಖೆಗೆ ಕಟ್ಟಡ `ಅಲ್ಲೂ ಇಲ್ಲ ಇಲ್ಲೂ ಇಲ್ಲ' ಎನ್ನುವ ಪರಿಸ್ಥಿತಿ ನಿರ್ಮಾಣವಾಯಿತು.<br /> <br /> ಜಾಗ ಕೊಡಬೇಕೆಂದು ಅರಣ್ಯ ಇಲಾಖೆಗೆ ಸಲ್ಲಿಸಿರುವ ಮನವಿ ಬೆಟ್ಟದಷ್ಟಾಗಿದೆಯಾದರೂ ಇಲಾಖೆ ಇದಕ್ಕೆ ಒಪ್ಪಿಗೆ ಕೊಡುವ ಸೂಚನೆ ಕಂಡು ಬರುತ್ತಿಲ್ಲ. ಮಂಜೂರಿ ನೀಡದಿರುವುದಕ್ಕೆ ಅರಣ್ಯ ಇಲಾಖೆ `ಅರಣ್ಯ ಸಂರಕ್ಷಣಾ ಕಾಯ್ದೆ 1980' ಕಾರಣ ನೀಡಿದೆ.<br /> <br /> ರಾಮತೀರ್ಥದಲ್ಲಿನ ಕೃಷಿ ಮಾರುಕಟ್ಟೆ ಸಮಿತಿಯ ಪಾಳು ಬಿದ್ದ ಜಾಗವನ್ನು ಎಆರ್ಟಿಓ ಕಚೇರಿ ಕಟ್ಟಡದ ನಿರ್ಮಾಣಕ್ಕೆ ನೀಡಲು ಸಮಿತಿ ವಿರೋಧಿಸಿದ್ದು ಇಲಾಖೆಯ ಸ್ವಂತ ಕಟ್ಟಡದ ಕನಸಿಗೆ ಮತ್ತೊಮ್ಮೆ ಹಿನ್ನಡೆಯಾಗುವಂತೆ ಮಾಡಿದೆ.<br /> <br /> `ಭಟ್ಕಳ ಹಾಗೂ ಕುಮಟಾ ವಿಧಾನಸಭಾ ಕ್ಷೇತ್ರಗಳೆರಡರ ಶಾಸಕರ ಉಪಸ್ಥಿತಿಯಲ್ಲೇ ನಡೆದ ಹಲವು ಕೆಡಿಪಿ ಸಭೆಗಳಲ್ಲಿ ಎಆರ್ಟಿಓ ಕಚೇರಿಯ ಕಟ್ಟಡ ನಿರ್ಮಾಣದ ವಿಷಯ ಪ್ರಸ್ತಾಪವಾಗಿದೆ ಯಾದರೂ ಈ ಕುರಿತಂತೆ ಗಂಭೀರ ಚರ್ಚೆಯಾಗಲಿ ಅಥವಾ ಪ್ರಯತ್ನವಾಗಲಿ ನಡೆದಿಲ್ಲ' ಎಂದು ಎಆರ್ಟಿಓ ಕಚೇರಿಯ ಸಿಬ್ಬಂದಿಯೊಬ್ಬರು ವಿಷಾದ ವ್ಯಕ್ತಪಡಿಸಿದರು.<br /> <br /> `ಎಆರ್ಟಿಓ ಕಚೇರಿ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕನಿಷ್ಠ 8 ಗುಂಟೆ ಜಾಗ ಒದಗಿಸಿಕೊಟ್ಟಲ್ಲಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಬಹುದು. ನಿರ್ಮಾಣಕ್ಕೆ ಹಣದ ಕೊರತೆಯಿಲ್ಲ' ಎಂದು ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಆರ್.ಜಿ.ಭಟ್ಟ ತಿಳಿಸಿದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>