<p><strong>ಸಂಡೂರು (ಬಳ್ಳಾರಿ ಜಿಲ್ಲೆ):</strong> ಮಾಜಿ ಸಚಿವ ಜನಾರ್ದನ ರೆಡ್ಡಿ ಒಡೆತನದ ಅಸೋಸಿಯೇಟೆಡ್ಮೈನಿಂಗ್ (ಎಎಂಸಿ) ಗಣಿ ಪ್ರದೇಶದಲ್ಲಿ ಸಿಬಿಐ ತಂಡ ಭಾನುವಾರ ಸರ್ವೆ ಕಾರ್ಯ ನಡೆಸಿತು.<br /> <br /> ರಾಮಘಡ ಅರಣ್ಯ ಪ್ರದೇಶದಲ್ಲಿರುವ ಎಎಂಸಿ ಗಣಿ ಪ್ರದೇಶದಲ್ಲಿ ಶನಿವಾರದಿಂದಲೇ ಕಾರ್ಯ ಆರಂಭಿಸಿರುವ ಸಿಬಿಐ ಡಿ.ಐ.ಜಿ. ಹಿತೇಂದ್ರ , ಎಸ್.ಪಿ.ಸುಬ್ರಹ್ಮಣ್ಯೇಶ್ವರ ರಾವ್ ನೇತೃತ್ವದ ತಂಡವು ಅದಿರು ಬಗೆದ ಪ್ರಮಾಣವನ್ನು ಅಳತೆ ಮಾಡಲು ಮುಂದಾಗಿದೆ.<br /> <br /> ನಿಗದಿತ ಕಾರ್ಯಕ್ರಮದಂತೆ ಸಿಬಿಐ ತಂಡ ಭಾನುವಾರ ತ್ರೀ-ಡಿ ಲೇಸರ್ ಕಾರ್ಯಾಚರಣೆ ನಡೆಸಬೇಕಿತ್ತು. ಆದರೆ ಅಧಿಕಾರಿಗಳು ಬಿಸಿಲಿನಿಂದ ಬಸವಳಿದ ಕಾರಣ ಹಾಗೂ ಗಡಿ ಗುರುತು ಮತ್ತು ಆಳವಾದ ಅದಿರು ತೆಗೆದ ತೆಗ್ಗುಗಳ ಅಳತೆಗೆ ಹೆಚ್ಚು ಸಮಯ ಹಿಡಿಯುತ್ತಿರುವ ಕಾರಣ ತ್ರೀ-ಡಿ ಲೇಸರ್ ಯಂತ್ರ ಸೋಮವಾರ ಬಳಕೆಯಾಗುವ ನಿರೀಕ್ಷೆಯಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಂಡೂರು (ಬಳ್ಳಾರಿ ಜಿಲ್ಲೆ):</strong> ಮಾಜಿ ಸಚಿವ ಜನಾರ್ದನ ರೆಡ್ಡಿ ಒಡೆತನದ ಅಸೋಸಿಯೇಟೆಡ್ಮೈನಿಂಗ್ (ಎಎಂಸಿ) ಗಣಿ ಪ್ರದೇಶದಲ್ಲಿ ಸಿಬಿಐ ತಂಡ ಭಾನುವಾರ ಸರ್ವೆ ಕಾರ್ಯ ನಡೆಸಿತು.<br /> <br /> ರಾಮಘಡ ಅರಣ್ಯ ಪ್ರದೇಶದಲ್ಲಿರುವ ಎಎಂಸಿ ಗಣಿ ಪ್ರದೇಶದಲ್ಲಿ ಶನಿವಾರದಿಂದಲೇ ಕಾರ್ಯ ಆರಂಭಿಸಿರುವ ಸಿಬಿಐ ಡಿ.ಐ.ಜಿ. ಹಿತೇಂದ್ರ , ಎಸ್.ಪಿ.ಸುಬ್ರಹ್ಮಣ್ಯೇಶ್ವರ ರಾವ್ ನೇತೃತ್ವದ ತಂಡವು ಅದಿರು ಬಗೆದ ಪ್ರಮಾಣವನ್ನು ಅಳತೆ ಮಾಡಲು ಮುಂದಾಗಿದೆ.<br /> <br /> ನಿಗದಿತ ಕಾರ್ಯಕ್ರಮದಂತೆ ಸಿಬಿಐ ತಂಡ ಭಾನುವಾರ ತ್ರೀ-ಡಿ ಲೇಸರ್ ಕಾರ್ಯಾಚರಣೆ ನಡೆಸಬೇಕಿತ್ತು. ಆದರೆ ಅಧಿಕಾರಿಗಳು ಬಿಸಿಲಿನಿಂದ ಬಸವಳಿದ ಕಾರಣ ಹಾಗೂ ಗಡಿ ಗುರುತು ಮತ್ತು ಆಳವಾದ ಅದಿರು ತೆಗೆದ ತೆಗ್ಗುಗಳ ಅಳತೆಗೆ ಹೆಚ್ಚು ಸಮಯ ಹಿಡಿಯುತ್ತಿರುವ ಕಾರಣ ತ್ರೀ-ಡಿ ಲೇಸರ್ ಯಂತ್ರ ಸೋಮವಾರ ಬಳಕೆಯಾಗುವ ನಿರೀಕ್ಷೆಯಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>