<p>ಬೆಂಗಳೂರಿನ ಬಹಳ ಮುಖ್ಯವೆನಿಸುವ ಸ್ಥಳಗಳಲ್ಲೇ ಸೈನ್ ಬೋರ್ಡ್ ಇಲ್ಲದ ಅವ್ಯವಸ್ಥೆ ಕುರಿತು ಲೇಖಕ ಎಸ್.ಆರ್.ರಾಮಕೃಷ್ಣ ಅವರು ಬರೆದಿದ್ದ `ಫಲಕಗಳಿಲ್ಲದ ನಗರ~ (ಫೆ.20) ಲೇಖನಕ್ಕೆ ಬಿಬಿಎಂಪಿ ಎಚ್ಚೆತ್ತುಕೊಂಡಿದೆ.<br /> <br /> ಸರಿಯಾದ ರಸ್ತೆ ಫಲಕಗಳಿಲ್ಲದೇ ಪ್ರಯಾಣಿಕರು ಅನುಭವಿಸುತ್ತಿದ್ದ ಪಜೀತಿಗೆ ಕಡಿವಾಣ ಹಾಕುವ ಸಲುವಾಗಿ ನಗರದೆಲ್ಲೆಡೆ ಈಗ ರಸ್ತೆ ಸೂಚಕ ಫಲಕಗಳನ್ನು ಹಾಕಲು ತೀರ್ಮಾನಿಸಿದೆ. ಇದು `ಸ್ವಪ್ನ ನಗರಿ~ ಫಲಶ್ರುತಿ. <br /> <br /> ನಗರದಾದ್ಯಂತ ರಸ್ತೆ ಕವಲೊಡೆದ ಹಲವು ಜಾಗಗಳಿವೆ. ಅಲ್ಲೆಲ್ಲಾ ಯಾವ ರಸ್ತೆ ಎಲ್ಲಿಗೆ ಹೋಗುತ್ತದೆ ಎಂದು ಸೂಚಿಸುವ ಒಂದು ಫಲಕವೂ ಇರಲಿಲ್ಲ. ಇದರಿಂದಾಗುವ ತೊಂದರೆಗಳನ್ನು ಕುರಿತು ಲೇಖಕರು ತಮ್ಮ ಲೇಖನದಲ್ಲಿ ವಿವಿಧ ಮಜಲುಗಳಲ್ಲಿ ಬಿಚ್ಚಿಟ್ಟಿದ್ದರು. <br /> <br /> ದೇವನಹಳ್ಳಿ ವಿಮಾನ ನಿಲ್ದಾಣದಿಂದ ಬರುವಾಗ ಸಿಗುವ ವಿಂಡ್ಸರ್ ಮ್ಯೋನರ್ ಹತ್ತಿರ ಇರುವ ಸೇತುವೆ ಏರಿದರೆ ಎಲ್ಲಿ ಹೋಗುತ್ತದೆ, ಏರದಿದ್ದರೆ ಎಲ್ಲಿ ಹೋಗುತ್ತದೆ ಎಂದು ಹೇಳುವ ಯಾವ ಫಲಕವೂ ಇರಲಿಲ್ಲ. ಇಲ್ಲಿ ದಾರಿ ತಪ್ಪಿ ಪರದಾಡಿದವರ ಸಂಖ್ಯೆ ಅಧಿಕ.<br /> <br /> ವಿಂಡ್ಸರ್ ಮ್ಯಾನರ್ ಸೇತುವೆ ಪ್ರಯಾಣಿಕರ ದಾರಿ ತಪ್ಪಿಸುವ ಪ್ರಮುಖ ಸ್ಥಳಗಳಲ್ಲಿ ಒಂದು ಎಂಬ ಕುಖ್ಯಾತಿಗೆ ಕೂಡ ಪಾತ್ರವಾಗಿದೆ. ಬಿಬಿಎಂಪಿ ತನ್ನ ತಪ್ಪನ್ನು ನಿವಾರಿಸಿ ಪ್ರಯಾಣಿಕರಿಗೆ ಸರಿ ದಾರಿ ತೋರುವ ನಿಟ್ಟಿನಲ್ಲಿ ಈಗ ನಗರದಾದ್ಯಂತ ಫಲಕಗಳನ್ನು ಹಾಕಿಸುವ ಕಾರ್ಯಕ್ಕೆ ಚಾಲನೆ ನೀಡಿದೆ. <br /> <br /> ಹಂತ ಹಂತವಾಗಿ ನಡೆಯುವ ಈ ಕಾರ್ಯದ ಪ್ರಥಮದಲ್ಲಿ ವಿಂಡ್ಸರ್ ಮ್ಯಾನರ್, ಕಾಮರಾಜ ರಸ್ತೆ ಹಾಗೂ ಡಿಕಿನ್ಸನ್ ರಸ್ತೆಯಲ್ಲಿ ಸೈನ್ಬೋರ್ಡ್ಗಳನ್ನು ಹಾಕಿಸಿದೆ. <br /> <br /> ಯಾವ ರಸ್ತೆಗಳು ಎಲ್ಲೆಲ್ಲಿಗೆ ಹೋಗುತ್ತವೆ ಎಂಬುದನ್ನು ಇಲ್ಲಿ ಸ್ಪಷ್ಟವಾಗಿ ಸೂಚಿಸಲಾಗಿದೆ. ಮುಂದಿನ 45ರಿಂದ 60 ದಿನದಲ್ಲಿ ಸಂಚಾರದ ಪ್ರತಿ ನಿಮಿಷವೂ ಮುಖ್ಯ ಎನ್ನುವಂಥ ಸ್ಥಳಗಳ್ಲ್ಲಲೆಲ್ಲಾ ಸರಿಯಾದ ರಸ್ತೆ ಸೂಚಕ ಫಲಕಗಳು ತಲೆ ಎತ್ತಲಿವೆ. ಬಿಬಿಎಂಪಿ ಕೊನೆಗೂ ಎಚ್ಚೆತ್ತುಕೊಂಡಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂಗಳೂರಿನ ಬಹಳ ಮುಖ್ಯವೆನಿಸುವ ಸ್ಥಳಗಳಲ್ಲೇ ಸೈನ್ ಬೋರ್ಡ್ ಇಲ್ಲದ ಅವ್ಯವಸ್ಥೆ ಕುರಿತು ಲೇಖಕ ಎಸ್.ಆರ್.ರಾಮಕೃಷ್ಣ ಅವರು ಬರೆದಿದ್ದ `ಫಲಕಗಳಿಲ್ಲದ ನಗರ~ (ಫೆ.20) ಲೇಖನಕ್ಕೆ ಬಿಬಿಎಂಪಿ ಎಚ್ಚೆತ್ತುಕೊಂಡಿದೆ.<br /> <br /> ಸರಿಯಾದ ರಸ್ತೆ ಫಲಕಗಳಿಲ್ಲದೇ ಪ್ರಯಾಣಿಕರು ಅನುಭವಿಸುತ್ತಿದ್ದ ಪಜೀತಿಗೆ ಕಡಿವಾಣ ಹಾಕುವ ಸಲುವಾಗಿ ನಗರದೆಲ್ಲೆಡೆ ಈಗ ರಸ್ತೆ ಸೂಚಕ ಫಲಕಗಳನ್ನು ಹಾಕಲು ತೀರ್ಮಾನಿಸಿದೆ. ಇದು `ಸ್ವಪ್ನ ನಗರಿ~ ಫಲಶ್ರುತಿ. <br /> <br /> ನಗರದಾದ್ಯಂತ ರಸ್ತೆ ಕವಲೊಡೆದ ಹಲವು ಜಾಗಗಳಿವೆ. ಅಲ್ಲೆಲ್ಲಾ ಯಾವ ರಸ್ತೆ ಎಲ್ಲಿಗೆ ಹೋಗುತ್ತದೆ ಎಂದು ಸೂಚಿಸುವ ಒಂದು ಫಲಕವೂ ಇರಲಿಲ್ಲ. ಇದರಿಂದಾಗುವ ತೊಂದರೆಗಳನ್ನು ಕುರಿತು ಲೇಖಕರು ತಮ್ಮ ಲೇಖನದಲ್ಲಿ ವಿವಿಧ ಮಜಲುಗಳಲ್ಲಿ ಬಿಚ್ಚಿಟ್ಟಿದ್ದರು. <br /> <br /> ದೇವನಹಳ್ಳಿ ವಿಮಾನ ನಿಲ್ದಾಣದಿಂದ ಬರುವಾಗ ಸಿಗುವ ವಿಂಡ್ಸರ್ ಮ್ಯೋನರ್ ಹತ್ತಿರ ಇರುವ ಸೇತುವೆ ಏರಿದರೆ ಎಲ್ಲಿ ಹೋಗುತ್ತದೆ, ಏರದಿದ್ದರೆ ಎಲ್ಲಿ ಹೋಗುತ್ತದೆ ಎಂದು ಹೇಳುವ ಯಾವ ಫಲಕವೂ ಇರಲಿಲ್ಲ. ಇಲ್ಲಿ ದಾರಿ ತಪ್ಪಿ ಪರದಾಡಿದವರ ಸಂಖ್ಯೆ ಅಧಿಕ.<br /> <br /> ವಿಂಡ್ಸರ್ ಮ್ಯಾನರ್ ಸೇತುವೆ ಪ್ರಯಾಣಿಕರ ದಾರಿ ತಪ್ಪಿಸುವ ಪ್ರಮುಖ ಸ್ಥಳಗಳಲ್ಲಿ ಒಂದು ಎಂಬ ಕುಖ್ಯಾತಿಗೆ ಕೂಡ ಪಾತ್ರವಾಗಿದೆ. ಬಿಬಿಎಂಪಿ ತನ್ನ ತಪ್ಪನ್ನು ನಿವಾರಿಸಿ ಪ್ರಯಾಣಿಕರಿಗೆ ಸರಿ ದಾರಿ ತೋರುವ ನಿಟ್ಟಿನಲ್ಲಿ ಈಗ ನಗರದಾದ್ಯಂತ ಫಲಕಗಳನ್ನು ಹಾಕಿಸುವ ಕಾರ್ಯಕ್ಕೆ ಚಾಲನೆ ನೀಡಿದೆ. <br /> <br /> ಹಂತ ಹಂತವಾಗಿ ನಡೆಯುವ ಈ ಕಾರ್ಯದ ಪ್ರಥಮದಲ್ಲಿ ವಿಂಡ್ಸರ್ ಮ್ಯಾನರ್, ಕಾಮರಾಜ ರಸ್ತೆ ಹಾಗೂ ಡಿಕಿನ್ಸನ್ ರಸ್ತೆಯಲ್ಲಿ ಸೈನ್ಬೋರ್ಡ್ಗಳನ್ನು ಹಾಕಿಸಿದೆ. <br /> <br /> ಯಾವ ರಸ್ತೆಗಳು ಎಲ್ಲೆಲ್ಲಿಗೆ ಹೋಗುತ್ತವೆ ಎಂಬುದನ್ನು ಇಲ್ಲಿ ಸ್ಪಷ್ಟವಾಗಿ ಸೂಚಿಸಲಾಗಿದೆ. ಮುಂದಿನ 45ರಿಂದ 60 ದಿನದಲ್ಲಿ ಸಂಚಾರದ ಪ್ರತಿ ನಿಮಿಷವೂ ಮುಖ್ಯ ಎನ್ನುವಂಥ ಸ್ಥಳಗಳ್ಲ್ಲಲೆಲ್ಲಾ ಸರಿಯಾದ ರಸ್ತೆ ಸೂಚಕ ಫಲಕಗಳು ತಲೆ ಎತ್ತಲಿವೆ. ಬಿಬಿಎಂಪಿ ಕೊನೆಗೂ ಎಚ್ಚೆತ್ತುಕೊಂಡಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>