<p><strong>ಆಲಮಟ್ಟಿ:</strong> ಕೃಷ್ಣಾ ಮೇಲ್ದಂಡೆ ಯೋಜನೆ (ಯುಕೆಪಿ) ರಾಜ್ಯದ ಅತ್ಯಂತ ಪ್ರಮುಖ ಯೋಜನೆ. ಸಾವಿರಾರು ಹೆಕ್ಟೇರ್ ಭೂಮಿಯನ್ನು ನೀರಾವರಿ ಮಾಡಬೇಕಾದ ಯೋಜನೆ ಇದು. ಯೋಜನೆ ಆರಂಭವಾಗಿದ್ದು 60ರ ದಶಕದಲ್ಲಿ. ಆದರೆ ಇದುವರೆಗೆ ಉದ್ದೇಶ ಮಾತ್ರ ಈಡೇರಿಲ್ಲ.</p>.<p>ವಿಜಾಪುರ, ಬಾಗಲಕೋಟೆ, ಗುಲ್ಬರ್ಗ, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಈ ಯೋಜನೆ ಜಾರಿಯಾಗಲಿದೆ. ಕೃಷ್ಣಾ ಕೊಳ್ಳ ರಾಜ್ಯದ ಶೇಕಡಾ 70ಕ್ಕೂ ಹೆಚ್ಚು ಭಾಗವನ್ನು ಆವರಿಸಿದ್ದರೆ, ಅದರಲ್ಲಿ ಮೇಲ್ದಂಡೆ ಯೋಜನೆಯದ್ದು ಸಿಂಹಪಾಲು.</p>.<p>ಮಹಾರಾಷ್ಟ್ರದಿಂದ ಹರಿದು ಬರುವ ಕೃಷ್ಣಾ ನದಿ ನೀರು ಕರ್ನಾಟಕದ ನೆಲವನ್ನು ದಾಟಿ ಆಂಧ್ರಪ್ರದೇಶದಲ್ಲಿ ಬಂಗಾಳಕೊಲ್ಲಿಯನ್ನು ಸೇರುವುದಕ್ಕಿಂತ ಮುಂಚೆ, ನೀರಿನ ಸದುಪಯೋಗ ಆಗಲೆಂಬ ಸದಾಶಯದಿಂದ ಮೇಲ್ದಂಡೆ ಯೋಜನೆಗೆ ನಾಂದಿ ಹಾಡಿದ್ದು ಈಗ ಇತಿಹಾಸ.</p>.<p>ಕೃಷ್ಣಾ ಕೊಳ್ಳದ ಆಯಕಟ್ಟಿನ ಸ್ಥಳವಾದ ಆಲಮಟ್ಟಿಯಲ್ಲಿ ಬೃಹತ್ ಅಣೆಕಟ್ಟೆ ನಿರ್ಮಿಸುವ ಮೂಲಕ ಯೋಜನೆಯನ್ನು ಜಾರಿಗೆ ತರಬೇಕು, ರಾಜ್ಯದ ಉತ್ತರ ಭಾಗವನ್ನು ಹಸಿರು ಮಾಡಬೇಕೆಂಬ ಕನಸಿನೊಂದಿಗೆ 1963-1964ರಲ್ಲಿ ಯೋಜನೆಗೆ ಚಾಲನೆ ನೀಡಲಾಯಿತು. ಪ್ರಾರಂಭದ ದಿನದಿಂದಲೇ ಮಹಾರಾಷ್ಟ್ರ, ಕರ್ನಾಟಕ ಮತ್ತು ಆಂಧ್ರಪ್ರದೇಶದ ನಡುವೆ ನೀರಿನ ಬಳಕೆಗೆ ಸಂಬಂಧಿಸಿದಂತೆ ವಿವಾದ ಶುರುವಾಯಿತು. ವಿವಾದದ ನಡುವೆಯೇ 1964ರಲ್ಲಿ ಆಲಮಟ್ಟಿ ಅಣೆಕಟ್ಟೆಗೆ ಶಂಕುಸ್ಥಾಪನೆಯೂ ನಡೆಯಿತು.</p>.<p>ಮತ್ತೊಂದೆಡೆ ಆರ್.ಎಸ್.ಬಚಾವತ್ ನ್ಯಾಯಮಂಡಳಿಯನ್ನೂ ರಚಿಸಲಾಯಿತು. ಮೂರೂ ರಾಜ್ಯಗಳಿಗೆ ನೀರು ಹಂಚಿಕೆಯ ಪ್ರಮಾಣವನ್ನು ನಿಗದಿಪಡಿಸಿದ ಬಚಾವತ್ ನ್ಯಾಯಮಂಡಳಿ, ನಿಗದಿ ಪಡಿಸಿದ ನೀರನ್ನು 2000 ಇಸವಿ ವೇಳೆಗೆ ‘ಎ’ ಸ್ಕೀಂನಲ್ಲಿ ಬಳಸಿಕೊಳ್ಳುವಂತೆ 1973ರಲ್ಲಿ ಐತೀರ್ಪು ನೀಡಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಆಲಮಟ್ಟಿ:</strong> ಕೃಷ್ಣಾ ಮೇಲ್ದಂಡೆ ಯೋಜನೆ (ಯುಕೆಪಿ) ರಾಜ್ಯದ ಅತ್ಯಂತ ಪ್ರಮುಖ ಯೋಜನೆ. ಸಾವಿರಾರು ಹೆಕ್ಟೇರ್ ಭೂಮಿಯನ್ನು ನೀರಾವರಿ ಮಾಡಬೇಕಾದ ಯೋಜನೆ ಇದು. ಯೋಜನೆ ಆರಂಭವಾಗಿದ್ದು 60ರ ದಶಕದಲ್ಲಿ. ಆದರೆ ಇದುವರೆಗೆ ಉದ್ದೇಶ ಮಾತ್ರ ಈಡೇರಿಲ್ಲ.</p>.<p>ವಿಜಾಪುರ, ಬಾಗಲಕೋಟೆ, ಗುಲ್ಬರ್ಗ, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಈ ಯೋಜನೆ ಜಾರಿಯಾಗಲಿದೆ. ಕೃಷ್ಣಾ ಕೊಳ್ಳ ರಾಜ್ಯದ ಶೇಕಡಾ 70ಕ್ಕೂ ಹೆಚ್ಚು ಭಾಗವನ್ನು ಆವರಿಸಿದ್ದರೆ, ಅದರಲ್ಲಿ ಮೇಲ್ದಂಡೆ ಯೋಜನೆಯದ್ದು ಸಿಂಹಪಾಲು.</p>.<p>ಮಹಾರಾಷ್ಟ್ರದಿಂದ ಹರಿದು ಬರುವ ಕೃಷ್ಣಾ ನದಿ ನೀರು ಕರ್ನಾಟಕದ ನೆಲವನ್ನು ದಾಟಿ ಆಂಧ್ರಪ್ರದೇಶದಲ್ಲಿ ಬಂಗಾಳಕೊಲ್ಲಿಯನ್ನು ಸೇರುವುದಕ್ಕಿಂತ ಮುಂಚೆ, ನೀರಿನ ಸದುಪಯೋಗ ಆಗಲೆಂಬ ಸದಾಶಯದಿಂದ ಮೇಲ್ದಂಡೆ ಯೋಜನೆಗೆ ನಾಂದಿ ಹಾಡಿದ್ದು ಈಗ ಇತಿಹಾಸ.</p>.<p>ಕೃಷ್ಣಾ ಕೊಳ್ಳದ ಆಯಕಟ್ಟಿನ ಸ್ಥಳವಾದ ಆಲಮಟ್ಟಿಯಲ್ಲಿ ಬೃಹತ್ ಅಣೆಕಟ್ಟೆ ನಿರ್ಮಿಸುವ ಮೂಲಕ ಯೋಜನೆಯನ್ನು ಜಾರಿಗೆ ತರಬೇಕು, ರಾಜ್ಯದ ಉತ್ತರ ಭಾಗವನ್ನು ಹಸಿರು ಮಾಡಬೇಕೆಂಬ ಕನಸಿನೊಂದಿಗೆ 1963-1964ರಲ್ಲಿ ಯೋಜನೆಗೆ ಚಾಲನೆ ನೀಡಲಾಯಿತು. ಪ್ರಾರಂಭದ ದಿನದಿಂದಲೇ ಮಹಾರಾಷ್ಟ್ರ, ಕರ್ನಾಟಕ ಮತ್ತು ಆಂಧ್ರಪ್ರದೇಶದ ನಡುವೆ ನೀರಿನ ಬಳಕೆಗೆ ಸಂಬಂಧಿಸಿದಂತೆ ವಿವಾದ ಶುರುವಾಯಿತು. ವಿವಾದದ ನಡುವೆಯೇ 1964ರಲ್ಲಿ ಆಲಮಟ್ಟಿ ಅಣೆಕಟ್ಟೆಗೆ ಶಂಕುಸ್ಥಾಪನೆಯೂ ನಡೆಯಿತು.</p>.<p>ಮತ್ತೊಂದೆಡೆ ಆರ್.ಎಸ್.ಬಚಾವತ್ ನ್ಯಾಯಮಂಡಳಿಯನ್ನೂ ರಚಿಸಲಾಯಿತು. ಮೂರೂ ರಾಜ್ಯಗಳಿಗೆ ನೀರು ಹಂಚಿಕೆಯ ಪ್ರಮಾಣವನ್ನು ನಿಗದಿಪಡಿಸಿದ ಬಚಾವತ್ ನ್ಯಾಯಮಂಡಳಿ, ನಿಗದಿ ಪಡಿಸಿದ ನೀರನ್ನು 2000 ಇಸವಿ ವೇಳೆಗೆ ‘ಎ’ ಸ್ಕೀಂನಲ್ಲಿ ಬಳಸಿಕೊಳ್ಳುವಂತೆ 1973ರಲ್ಲಿ ಐತೀರ್ಪು ನೀಡಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>