<p>ನಟ ಸಾಧುಕೋಕಿಲ ಸಿನಿಮಾಗಳಲ್ಲಿ ಕಾಣಿಸಿಕೊಳ್ಳದ ಪಾತ್ರ, ಎತ್ತಿದ ಅವತಾರಗಳೇ ಇಲ್ಲ ಎನ್ನಬಹುದು. ಇದೀಗ ಅವರು `ಗುಂಡುಗಲಿ~ಗಳ ಕುಡಿತವನ್ನು ಬಿಡಿಸುವ ಬೋಧನಾತ್ಮಕ, ಕುಡಿತದಿಂದ ಕೆಡುಕು ಎಂಬ ಹಳೆಯ ಸಂದೇಶವನ್ನು `ನೈಂಟಿ~ (ಗುಂಡನ್ನು 90 ಎಂ.ಎಲ್ ಪ್ರಮಾಣದಲ್ಲಿ ಅಳೆಯುತ್ತಾರೆ)ಯಲ್ಲಿ ಸಾರಿದ್ದಾರೆ. ಇದರ ನಿರ್ದೇಶಕರು `ಜಮಾನ~ದಂಥ ಉತ್ತಮ ಸಿನಿಮಾ ನಿರ್ದೇಶಿಸಿದ ಶಂಕರ್.<br /> <br /> ಕುಡಿತ ಬೇಡ ಎಂಬುದನ್ನು ಬಾರ್ ಒಂದರಲ್ಲಿರುವ ಕುಡುಕರಿಗೆ ಹೇಳುವ, ಅವರ ಪ್ರಯತ್ನದಿಂದಾಗಿ ಕುಡಿತ ಬಿಡುವಂತೆ ಮಾಡುವ ಪಾತ್ರ ಸಾಧುಕೋಕಿಲ ಅವರದು. ಇಲ್ಲಿ ಅವರದು ನಾಯಕ ಪಾತ್ರ ಕೂಡ.ಅವರು ಈ ಸಮಾಜ ಸುಧಾರಣೆ ಮಾಡಲೆಂದೇ ಬಾರಿಗೆ ಹೋದವರಲ್ಲ.<br /> <br /> ನಿರ್ದೇಶಕರಾಗಿರುವ ಅವರು ತಮ್ಮ ಹೊಸ ಸಿನಿಮಾಕ್ಕಾಗಿ ಕಥೆ ಹುಡುಕಲು ಕುಡುಕ ಗೆಳೆಯನೊಂದಿಗೆ ಅಲ್ಲಿಗೆ ಹೋಗುತ್ತಾರೆ. ಅಲ್ಲಿನ ಕುಡುಕರ ಕತೆಗಳನ್ನು ಕೇಳಿ ಅವರಲ್ಲಿ ಕೆಲವರ ಕುಡಿತದ ಚಟವನ್ನು ಬಿಡಿಸುತ್ತಾರೆ.<br /> <br /> ಈ ಸಾಮಾನ್ಯ ಕತೆಯನ್ನು ಧಾರಾವಾಹಿಗಳ ಕಂತುಗಳ ರೀತಿಯಲ್ಲಿ ಎಳೆಎಳೆಯಾಗಿ ಎಳೆದು ನಿರ್ದೇಶಕ ಶಂಕರ್ ಚಿತ್ರಿಸುತ್ತಾರೆ. ಕೆಲವು ಕಡೆ ಕುಡಿತದ ಕೆಡಕುಗಳನ್ನು ತೋರುವ ಸಾಕ್ಷ್ಯಚಿತ್ರದಂತೆಯೂ ಸಿನಿಮಾ ಕಾಣುತ್ತದೆ. <br /> <br /> ಆದರೆ ಕೆಲವೆಡೆ ತಬಲಾ ನಾಣಿ ಅವರ ಪಂಚ್ ಇರುವ ಸಂಭಾಷಣೆಯೇ ಕೊಂಚ ತಮಾಷೆಯ ಅಲೆಗಳನ್ನು ಪ್ರೇಕ್ಷಕರಲ್ಲಿ ಮೂಡಿಸುತ್ತದೆ. ನಾಣಿ ಅವರ ಸಂಭಾಷಣೆಯಿಂದಾಗಿ ಅದು ಕೇಳುವಂತೆ ಆಗುತ್ತದೆ!<br /> <br /> ಸಿನಿಮಾದ ವಸ್ತು ಹೊಸದೇನಲ್ಲ. ಈಗಾಗಲೇ ನಿರ್ದೇಶಕ ಗುರುಪ್ರಸಾದ್ `ಎದ್ದೇಳು ಮಂಜುನಾಥ~ದಲ್ಲಿ ಇದನ್ನು ಪ್ರಯೋಗಿಸಿ ಯಶಸ್ವಿಯಾಗಿದ್ದಾರೆ. ಅದರಲ್ಲೂ ತಬಲಾ ನಾಣಿ ಕೆಲಸ ಮಾಡಿದ್ದರು. ಇಲ್ಲಿ ಕೇವಲ ಅವರ ಸಂಭಾಷಣೆಯಷ್ಟೆ ಪರಿಣಾಮ ಬೀರಿದೆ. <br /> <br /> ಚಿತ್ರಕತೆ, ನಿರೂಪಣೆಯಲ್ಲಿ ಧಮ್ ಇಲ್ಲದಿರುವುದರಿಂದ ಅಷ್ಟಾಗಿ `ನೈಂಟಿ~ ಪ್ರೇಕ್ಷಕರಿಗೆ ಕಿಕ್ ಕೊಡುವುದಿಲ್ಲ. ಅಷ್ಟಿದ್ದರೂ ಸಾಧು ಕಿಕ್ ಹೊಡೆಯಲು ಪ್ರಜ್ಞಾ ಎಂಬ ಕನ್ನಡ ಕಲಾವಿದೆಯನ್ನು ಐಟಂ ಸಾಂಗ್ ಒಂದರಲ್ಲಿ ಕುಣಿಸಿದ್ದಾರೆ.<br /> <br /> ಇದರೊಂದಿಗೆ ಇನ್ನೊಂದು ಐಟಂ ಸಾಂಗ್ ಪಡ್ಡೆ ಹೈಕಳಿಗೆ ಕೊಂಚ ಸಮಾಧಾನ ನೀಡಬಹುದು. ಶಕೀಲಾ ಎಂಬ ಅಂದಕಾಲತ್ತಿಲ್ ಹಾಟ್ ಬೆಡಗಿಯನ್ನು ಕೂಲ್ ಆಗಿ ತೋರಿಸಲಾಗಿದೆ ಎಂಬುದು ಕುಟುಂಬವಂತರಿಗೆ ಕೊಂಚ ಸಮಾಧಾನ ಕೊಡುತ್ತದೆ. ಅದು ಕೆಲ ಪ್ರೇಕ್ಷಕರಲ್ಲಿ ಅಸಮಾಧಾನ ಹುಟ್ಟಿಸುವ ಸಾಧ್ಯತೆಯೂ ಇದೆ!<br /> <br /> ಸಿನಿಮಾದಲ್ಲಿ ಬುಲೆಟ್ ಪ್ರಕಾಶ್, ಬಿರಾದಾರ್, ರಂಗಾಯಣ ರಘು, ರಾಜು ತಾಳಿಕೋಟೆಯಂಥ ಕನ್ನಡದ ಹಾಸ್ಯ ಕಲಾವಿದರಿದ್ದಾರೆ. ರಾಜು ತಾಳಿಕೋಟೆ ತಮ್ಮ ಕ್ಯಾಸೆಟ್ಗಳಿಂದ ಉತ್ತರ ಕರ್ನಾಟಕದಲ್ಲಿ ಪ್ರಸಿದ್ಧರಾದವರು. <br /> <br /> ಅಂಥ ಕ್ಯಾಸೆಟ್ ಪ್ರಸಂಗಗಳ ಕೆಲವು ಮಾದರಿಗಳು ಇಲ್ಲಿ ಬಳಕೆಯಾಗಿವೆ. ಕೆಲವು ಹಾಡುಗಳೂ ಅದೇ ರೀತಿಯಲ್ಲಿವೆ. ಸಾಧು ಮತ್ತು ಮನು ಸಂಗೀತ, ಕೃಷ್ಣಕುಮಾರ್ ಛಾಯಾಗ್ರಹಣದಲ್ಲಿ ಹೇಳುವಂಥದ್ದೇನಿಲ್ಲ.<br /> <br /> `ಕುಡಿಯೋದೆ ನನ್ನ ವೀಕ್ನೆಸ್ಸು~ ಅಂದರು ನಟ ರವಿಚಂದ್ರನ್. ಅಂಥದ್ದನ್ನೇ ದೈನಿಕದ ಕಾಯಕವನ್ನಾಗಿ ಮಾಡಿಕೊಂಡವರಿಗೆ, `ಕುಡಿದು ಕುಪ್ಪಳಿಸುವವರಿಗೆ~ ಅದನ್ನು ಬಿಡಲು ನಿರ್ದೇಶಕ ಶಂಕರ್ ಸಿನಿಮಾದ ಮೂಲಕ ಉಪದೇಶ ಮಾಡಿದ್ದಾರೆ.<br /> <br /> ಸಿನಿಮಾದ ನಿರ್ಮಾಪಕ ಹಾಗೂ ನಾಯಕರಾಗಿ ಸಾಧು, ನಿರ್ದೇಶಕ ಶಂಕರ್ ಅವರ ಕಾಯಕವೇನೊ ಜನ- ಜಗ ಮೆಚ್ಚುವಂಥದ್ದು. ಅದನ್ನು ನಶೆ ಏರಿದವರ, ಅವರಿಂದ ಪೀಡಿತರಾದವರ ಮನಕ್ಕೆ ನಾಟುವಂತೆ ಮಾಡಿಲ್ಲ ಎನ್ನುವುದೇ ಸಿನಿಮಾದ ಬಹು ದೊಡ್ಡ ಕೊರತೆಯಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ನಟ ಸಾಧುಕೋಕಿಲ ಸಿನಿಮಾಗಳಲ್ಲಿ ಕಾಣಿಸಿಕೊಳ್ಳದ ಪಾತ್ರ, ಎತ್ತಿದ ಅವತಾರಗಳೇ ಇಲ್ಲ ಎನ್ನಬಹುದು. ಇದೀಗ ಅವರು `ಗುಂಡುಗಲಿ~ಗಳ ಕುಡಿತವನ್ನು ಬಿಡಿಸುವ ಬೋಧನಾತ್ಮಕ, ಕುಡಿತದಿಂದ ಕೆಡುಕು ಎಂಬ ಹಳೆಯ ಸಂದೇಶವನ್ನು `ನೈಂಟಿ~ (ಗುಂಡನ್ನು 90 ಎಂ.ಎಲ್ ಪ್ರಮಾಣದಲ್ಲಿ ಅಳೆಯುತ್ತಾರೆ)ಯಲ್ಲಿ ಸಾರಿದ್ದಾರೆ. ಇದರ ನಿರ್ದೇಶಕರು `ಜಮಾನ~ದಂಥ ಉತ್ತಮ ಸಿನಿಮಾ ನಿರ್ದೇಶಿಸಿದ ಶಂಕರ್.<br /> <br /> ಕುಡಿತ ಬೇಡ ಎಂಬುದನ್ನು ಬಾರ್ ಒಂದರಲ್ಲಿರುವ ಕುಡುಕರಿಗೆ ಹೇಳುವ, ಅವರ ಪ್ರಯತ್ನದಿಂದಾಗಿ ಕುಡಿತ ಬಿಡುವಂತೆ ಮಾಡುವ ಪಾತ್ರ ಸಾಧುಕೋಕಿಲ ಅವರದು. ಇಲ್ಲಿ ಅವರದು ನಾಯಕ ಪಾತ್ರ ಕೂಡ.ಅವರು ಈ ಸಮಾಜ ಸುಧಾರಣೆ ಮಾಡಲೆಂದೇ ಬಾರಿಗೆ ಹೋದವರಲ್ಲ.<br /> <br /> ನಿರ್ದೇಶಕರಾಗಿರುವ ಅವರು ತಮ್ಮ ಹೊಸ ಸಿನಿಮಾಕ್ಕಾಗಿ ಕಥೆ ಹುಡುಕಲು ಕುಡುಕ ಗೆಳೆಯನೊಂದಿಗೆ ಅಲ್ಲಿಗೆ ಹೋಗುತ್ತಾರೆ. ಅಲ್ಲಿನ ಕುಡುಕರ ಕತೆಗಳನ್ನು ಕೇಳಿ ಅವರಲ್ಲಿ ಕೆಲವರ ಕುಡಿತದ ಚಟವನ್ನು ಬಿಡಿಸುತ್ತಾರೆ.<br /> <br /> ಈ ಸಾಮಾನ್ಯ ಕತೆಯನ್ನು ಧಾರಾವಾಹಿಗಳ ಕಂತುಗಳ ರೀತಿಯಲ್ಲಿ ಎಳೆಎಳೆಯಾಗಿ ಎಳೆದು ನಿರ್ದೇಶಕ ಶಂಕರ್ ಚಿತ್ರಿಸುತ್ತಾರೆ. ಕೆಲವು ಕಡೆ ಕುಡಿತದ ಕೆಡಕುಗಳನ್ನು ತೋರುವ ಸಾಕ್ಷ್ಯಚಿತ್ರದಂತೆಯೂ ಸಿನಿಮಾ ಕಾಣುತ್ತದೆ. <br /> <br /> ಆದರೆ ಕೆಲವೆಡೆ ತಬಲಾ ನಾಣಿ ಅವರ ಪಂಚ್ ಇರುವ ಸಂಭಾಷಣೆಯೇ ಕೊಂಚ ತಮಾಷೆಯ ಅಲೆಗಳನ್ನು ಪ್ರೇಕ್ಷಕರಲ್ಲಿ ಮೂಡಿಸುತ್ತದೆ. ನಾಣಿ ಅವರ ಸಂಭಾಷಣೆಯಿಂದಾಗಿ ಅದು ಕೇಳುವಂತೆ ಆಗುತ್ತದೆ!<br /> <br /> ಸಿನಿಮಾದ ವಸ್ತು ಹೊಸದೇನಲ್ಲ. ಈಗಾಗಲೇ ನಿರ್ದೇಶಕ ಗುರುಪ್ರಸಾದ್ `ಎದ್ದೇಳು ಮಂಜುನಾಥ~ದಲ್ಲಿ ಇದನ್ನು ಪ್ರಯೋಗಿಸಿ ಯಶಸ್ವಿಯಾಗಿದ್ದಾರೆ. ಅದರಲ್ಲೂ ತಬಲಾ ನಾಣಿ ಕೆಲಸ ಮಾಡಿದ್ದರು. ಇಲ್ಲಿ ಕೇವಲ ಅವರ ಸಂಭಾಷಣೆಯಷ್ಟೆ ಪರಿಣಾಮ ಬೀರಿದೆ. <br /> <br /> ಚಿತ್ರಕತೆ, ನಿರೂಪಣೆಯಲ್ಲಿ ಧಮ್ ಇಲ್ಲದಿರುವುದರಿಂದ ಅಷ್ಟಾಗಿ `ನೈಂಟಿ~ ಪ್ರೇಕ್ಷಕರಿಗೆ ಕಿಕ್ ಕೊಡುವುದಿಲ್ಲ. ಅಷ್ಟಿದ್ದರೂ ಸಾಧು ಕಿಕ್ ಹೊಡೆಯಲು ಪ್ರಜ್ಞಾ ಎಂಬ ಕನ್ನಡ ಕಲಾವಿದೆಯನ್ನು ಐಟಂ ಸಾಂಗ್ ಒಂದರಲ್ಲಿ ಕುಣಿಸಿದ್ದಾರೆ.<br /> <br /> ಇದರೊಂದಿಗೆ ಇನ್ನೊಂದು ಐಟಂ ಸಾಂಗ್ ಪಡ್ಡೆ ಹೈಕಳಿಗೆ ಕೊಂಚ ಸಮಾಧಾನ ನೀಡಬಹುದು. ಶಕೀಲಾ ಎಂಬ ಅಂದಕಾಲತ್ತಿಲ್ ಹಾಟ್ ಬೆಡಗಿಯನ್ನು ಕೂಲ್ ಆಗಿ ತೋರಿಸಲಾಗಿದೆ ಎಂಬುದು ಕುಟುಂಬವಂತರಿಗೆ ಕೊಂಚ ಸಮಾಧಾನ ಕೊಡುತ್ತದೆ. ಅದು ಕೆಲ ಪ್ರೇಕ್ಷಕರಲ್ಲಿ ಅಸಮಾಧಾನ ಹುಟ್ಟಿಸುವ ಸಾಧ್ಯತೆಯೂ ಇದೆ!<br /> <br /> ಸಿನಿಮಾದಲ್ಲಿ ಬುಲೆಟ್ ಪ್ರಕಾಶ್, ಬಿರಾದಾರ್, ರಂಗಾಯಣ ರಘು, ರಾಜು ತಾಳಿಕೋಟೆಯಂಥ ಕನ್ನಡದ ಹಾಸ್ಯ ಕಲಾವಿದರಿದ್ದಾರೆ. ರಾಜು ತಾಳಿಕೋಟೆ ತಮ್ಮ ಕ್ಯಾಸೆಟ್ಗಳಿಂದ ಉತ್ತರ ಕರ್ನಾಟಕದಲ್ಲಿ ಪ್ರಸಿದ್ಧರಾದವರು. <br /> <br /> ಅಂಥ ಕ್ಯಾಸೆಟ್ ಪ್ರಸಂಗಗಳ ಕೆಲವು ಮಾದರಿಗಳು ಇಲ್ಲಿ ಬಳಕೆಯಾಗಿವೆ. ಕೆಲವು ಹಾಡುಗಳೂ ಅದೇ ರೀತಿಯಲ್ಲಿವೆ. ಸಾಧು ಮತ್ತು ಮನು ಸಂಗೀತ, ಕೃಷ್ಣಕುಮಾರ್ ಛಾಯಾಗ್ರಹಣದಲ್ಲಿ ಹೇಳುವಂಥದ್ದೇನಿಲ್ಲ.<br /> <br /> `ಕುಡಿಯೋದೆ ನನ್ನ ವೀಕ್ನೆಸ್ಸು~ ಅಂದರು ನಟ ರವಿಚಂದ್ರನ್. ಅಂಥದ್ದನ್ನೇ ದೈನಿಕದ ಕಾಯಕವನ್ನಾಗಿ ಮಾಡಿಕೊಂಡವರಿಗೆ, `ಕುಡಿದು ಕುಪ್ಪಳಿಸುವವರಿಗೆ~ ಅದನ್ನು ಬಿಡಲು ನಿರ್ದೇಶಕ ಶಂಕರ್ ಸಿನಿಮಾದ ಮೂಲಕ ಉಪದೇಶ ಮಾಡಿದ್ದಾರೆ.<br /> <br /> ಸಿನಿಮಾದ ನಿರ್ಮಾಪಕ ಹಾಗೂ ನಾಯಕರಾಗಿ ಸಾಧು, ನಿರ್ದೇಶಕ ಶಂಕರ್ ಅವರ ಕಾಯಕವೇನೊ ಜನ- ಜಗ ಮೆಚ್ಚುವಂಥದ್ದು. ಅದನ್ನು ನಶೆ ಏರಿದವರ, ಅವರಿಂದ ಪೀಡಿತರಾದವರ ಮನಕ್ಕೆ ನಾಟುವಂತೆ ಮಾಡಿಲ್ಲ ಎನ್ನುವುದೇ ಸಿನಿಮಾದ ಬಹು ದೊಡ್ಡ ಕೊರತೆಯಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>