<p><strong>ಮುಂಬೈ (ಪಿಟಿಐ):</strong> ಪ್ರಸಕ್ತ ಸಾಲಿನ ಐಪಿಎಲ್ ಸಂಭ್ರಮಕ್ಕೆ ಬಿಸಿಸಿಐ ಸಜ್ಜುಗೊಳ್ಳುತ್ತಿರುವಾಗಲೇ, ಬಾಂಬೆ ಹೈಕೋರ್ಟ್ನಲ್ಲಿ ಇದೀಗ ಸಾರ್ವಜನಿಕ ಹಿತಾಸಕ್ತಿಯ ಅರ್ಜಿ (ಪಿಐಎಲ್)ಯೊಂದು ವಿವಾದಕ್ಕೆ ಎಡೆಕೊಟ್ಟಿದೆ.</p>.<p>ಸಂತೋಷ್ ಪಚಾಲಗ್ ಎಂಬುವವರು ಸಲ್ಲಿಸಿರುವ ಈ ಅರ್ಜಿಯಲ್ಲಿ `ಹಿಂದಿನ ಪಂದ್ಯಗಳ ಭದ್ರತಾ ವ್ಯವಸ್ಥೆಗಾಗಿ ಬಿಸಿಸಿಐಯವರು ಮುಂಬೈ ಪೊಲೀಸರಿಗೆ 5,17,73,238 ರೂಪಾಯಿಗಳಷ್ಟು ಹಣ ನೀಡಬೇಕಿದೆ~ ಎಂದು ತಿಳಿಸಿದ್ದಾರೆ.</p>.<p>`2010ರ ಮಾರ್ಚ್ನಲ್ಲಿ ಡಿ.ವೈ. ಪಾಟೀಲ್ ಕ್ರೀಡಾಂಗಣದಲ್ಲಿ ಆರು ಪಂದ್ಯಗಳು ನಡೆದಿದ್ದವು. ಆಗ 3,345 ಪೊಲೀಸರಿಂದ ಭದ್ರತಾ ವ್ಯವಸ್ಥೆ ಮಾಡಲಾಗಿತ್ತು. ಆಗ ನವಿಮುಂಬೈನಲ್ಲಿ ಪೊಲೀಸರ ಕೊರತೆ ಇದ್ದುದರಿಂದ ಪುಣೆ ಮತ್ತು ಸತಾರಗಳಿಂದಲೂ ಪೊಲೀಸರನ್ನು ಕರೆಸಲಾಗಿತ್ತು~ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.</p>.<p>`ಬಿಸಿಸಿಐನವರು ಪೊಲೀಸರಿಗೆ ಸಲ್ಲಿಸಬೇಕಿರುವ ಬಾಕಿ ಹಣವನ್ನು ಸಂದಾಯ ಮಾಡುವವರೆಗೆ ಏಪ್ರಿಲ್ 4ರಿಂದ ಆರಂಭವಾಗುವ ಐಪಿಎಲ್ ಪಂದ್ಯಗಳಿಗೆ ಯಾವುದೇ ರೀತಿಯ ಭದ್ರತಾ ವ್ಯವಸ್ಥೆ ನೀಡಬಾರದೆಂದು ಪೊಲೀಸರಿಗೆ ನಿರ್ದೇಶನ ನೀಡಬೇಕು~ ಎಂದು ಅರ್ಜಿಯಲ್ಲಿ ನ್ಯಾಯಾಲಯಕ್ಕೆ ಮನವಿ ಮಾಡಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ (ಪಿಟಿಐ):</strong> ಪ್ರಸಕ್ತ ಸಾಲಿನ ಐಪಿಎಲ್ ಸಂಭ್ರಮಕ್ಕೆ ಬಿಸಿಸಿಐ ಸಜ್ಜುಗೊಳ್ಳುತ್ತಿರುವಾಗಲೇ, ಬಾಂಬೆ ಹೈಕೋರ್ಟ್ನಲ್ಲಿ ಇದೀಗ ಸಾರ್ವಜನಿಕ ಹಿತಾಸಕ್ತಿಯ ಅರ್ಜಿ (ಪಿಐಎಲ್)ಯೊಂದು ವಿವಾದಕ್ಕೆ ಎಡೆಕೊಟ್ಟಿದೆ.</p>.<p>ಸಂತೋಷ್ ಪಚಾಲಗ್ ಎಂಬುವವರು ಸಲ್ಲಿಸಿರುವ ಈ ಅರ್ಜಿಯಲ್ಲಿ `ಹಿಂದಿನ ಪಂದ್ಯಗಳ ಭದ್ರತಾ ವ್ಯವಸ್ಥೆಗಾಗಿ ಬಿಸಿಸಿಐಯವರು ಮುಂಬೈ ಪೊಲೀಸರಿಗೆ 5,17,73,238 ರೂಪಾಯಿಗಳಷ್ಟು ಹಣ ನೀಡಬೇಕಿದೆ~ ಎಂದು ತಿಳಿಸಿದ್ದಾರೆ.</p>.<p>`2010ರ ಮಾರ್ಚ್ನಲ್ಲಿ ಡಿ.ವೈ. ಪಾಟೀಲ್ ಕ್ರೀಡಾಂಗಣದಲ್ಲಿ ಆರು ಪಂದ್ಯಗಳು ನಡೆದಿದ್ದವು. ಆಗ 3,345 ಪೊಲೀಸರಿಂದ ಭದ್ರತಾ ವ್ಯವಸ್ಥೆ ಮಾಡಲಾಗಿತ್ತು. ಆಗ ನವಿಮುಂಬೈನಲ್ಲಿ ಪೊಲೀಸರ ಕೊರತೆ ಇದ್ದುದರಿಂದ ಪುಣೆ ಮತ್ತು ಸತಾರಗಳಿಂದಲೂ ಪೊಲೀಸರನ್ನು ಕರೆಸಲಾಗಿತ್ತು~ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.</p>.<p>`ಬಿಸಿಸಿಐನವರು ಪೊಲೀಸರಿಗೆ ಸಲ್ಲಿಸಬೇಕಿರುವ ಬಾಕಿ ಹಣವನ್ನು ಸಂದಾಯ ಮಾಡುವವರೆಗೆ ಏಪ್ರಿಲ್ 4ರಿಂದ ಆರಂಭವಾಗುವ ಐಪಿಎಲ್ ಪಂದ್ಯಗಳಿಗೆ ಯಾವುದೇ ರೀತಿಯ ಭದ್ರತಾ ವ್ಯವಸ್ಥೆ ನೀಡಬಾರದೆಂದು ಪೊಲೀಸರಿಗೆ ನಿರ್ದೇಶನ ನೀಡಬೇಕು~ ಎಂದು ಅರ್ಜಿಯಲ್ಲಿ ನ್ಯಾಯಾಲಯಕ್ಕೆ ಮನವಿ ಮಾಡಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>