<p>ಚಿತ್ರದುರ್ಗ: ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಮುರುಘಾಮಠದ ಆವರಣದಲ್ಲಿ ಕೃಷಿ ಮೇಳ ಆಯೋಜಿಸಲಾಗಿದೆ.<br /> <br /> ಭಾನುವಾರ ತೋಟಗಾರಿಕೆ ಮತ್ತು ಸಕ್ಕರೆ ಸಚಿವ ಎಸ್.ಎ. ರವೀಂದ್ರನಾಥ್ ಕೃಷಿ ಮೇಳಕ್ಕೆ ಚಾಲನೆ ನೀಡಿದರು.<br /> <br /> ಮೇಳದಲ್ಲಿ ವಿವಿಧ ಮಹಿಳಾ ಸಂಘ-ಸಂಸ್ಥೆಗಳಿಂದ 2000ಕ್ಕೂ ಹೆಚ್ಚು ಮಹಿಳೆಯರು ಭಾಗವಹಿಸಿದ್ದರು. ಕೃಷಿ ಮೇಳದಲ್ಲಿ ರಾಕರ್ ಸ್ಪ್ರೆಯರ್, ಬೇವಿನ ಹಿಂಡಿ, ಮಿಶ್ರಣ ಹಿಂಡಿ, ಎಲೆಗೊಬ್ಬರ, ಕೋಳಿಗೊಬ್ಬರ, ಲಾನ್ ಮೂವರ್, ಹಿಪ್ಪುನೇರಳೆ ತಳಿಗಳು, ಪಶುಪಾಲನಾ ಮತ್ತು ಹೈನುಗಾರಿಕೆ, ಬಾಳೆ, ಸಪೋಟ ಮುಂತಾದವನ್ನು ಪ್ರದರ್ಶಿಸಲಾಗಿದೆ.<br /> <br /> ಕೃಷಿ, ತೋಟಗಾರಿಕೆ, ಸಹಕಾರ, ನೀರಾವರಿ, ಪಶು ಸಂಗೋಪನೆ, ಅರಣ್ಯ, ರೇಷ್ಮೆ, ಜಲಾನಯನ ಇಲಾಖೆ ಹಾಗೂ ಕೃಷಿ ತಂತ್ರಜ್ಞರ ಸಂಸ್ಥೆ, ಕೃಷಿ ವಿಜ್ಞಾನ ಕೇಂದ್ರ, ರೈತ ಸಂಘಗಳು, ಜಲ ಸಂವರ್ಧನ ಇಲಾಖೆ, ಜಿಲ್ಲಾ ಪಂಚಾಯ್ತಿ ಮತ್ತು ಕೃಷಿ ಸಮಾಜದ ಸಹಯೋಗದಲ್ಲಿ ಕೃಷಿ ಮೇಳ ಆಯೋಜಿಸಲಾಗಿದೆ.<br /> <br /> ಮೇಳದಲ್ಲಿ ಮಾತನಾಡಿದ ಮುರುಘಾಮಠದ ಶಿವಮೂರ್ತಿ ಮುರುಘಾ ಶರಣರು, ಮಠದ ಹಿಂಭಾಗದ 10 ಎಕರೆ ಪ್ರದೇಶದಲ್ಲಿ ಸಾವಯವ ಪದ್ಧತಿಯಲ್ಲಿ ಮೂರ್ನಾಲ್ಕು ಬಗೆಯ ಕೃಷಿ ಬೆಳೆಯನ್ನು ಬೆಳೆಯಲಾಗಿದೆ. ಬೆಳೆ ಉತ್ತಮವಾಗಿ ಬಂದಿದ್ದು, ಇದರಲ್ಲಿನ ಟೊಮೆಟೊ, ಮೆಣಸಿನ ಕಾಯಿ, ಕೊತ್ತುಂಬರಿಯನ್ನು ನಿತ್ಯ ದಾಸೋಹಕ್ಕೆ ಬಳಸಿಕೊಳ್ಳಲಾಗುತ್ತಿದೆ ಎಂದರು. <br /> <br /> ರೈತರು ಇಂದು ಹೊಲಗಳಿಗೆ ಹೋಗಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳದೇ ಐಷಾರಾಮಿ ಜೀವನಕ್ಕೆ ಮಾರುಹೋಗಿ ಒಣ ರಾಜಕೀಯ ಚರ್ಚೆಗಳನ್ನು ನಡೆಸುತ್ತಾ ವ್ಯರ್ಥ ಕಾಲಹರಣ ಮಾಡುತ್ತಿದ್ದಾರೆ ಎಂದು ನುಡಿದರು. <br /> <br /> ಕೇಂದ್ರದ ಮಾಜಿ ಸಚಿವ ಸಿದ್ದು ನ್ಯಾಮಗೌಡ ಪಾಟೀಲ್ ಮಾತನಾಡಿ, ನಾಯಕರಾದವರೂ ರೈತರಿಗೆ ಅಗತ್ಯವಿರುವ ಯೋಜನೆಗಳ ರೂಪಿಸುವ ಮತ್ತು ಅನುಷ್ಠಾನಗೊಳಿಸುವ ಬಗ್ಗೆ ಸದಾ ಚಿಂತನೆ ಕೈಗೊಳ್ಳಬೇಕಿದೆ ಎಂದು ನುಡಿದರು. <br /> <br /> ಕೃಷ್ಣಾನದಿ ತೀರದಲ್ಲಿ ಬ್ಯಾರೇಜ್ ನಿರ್ಮಾಣ ಮಾಡಲು ಸರ್ಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗದ ಹಿನ್ನೆಲೆಯಲ್ಲಿ ರೈತರ ನೆರವಿಂದಲೇ 25 ಅಡಿ ಎತ್ತರದ ಬ್ಯಾರೇಜ್ ನಿರ್ಮಾಣ ಮಾಡಲಾಗಿದೆ. ಬ್ಯಾರೇಜ್ ಹಿನ್ನೀರು ಸುಮಾರು 45 ಕಿ.ಮೀ ಇದ್ದು, 27 ಹಳ್ಳಿಗಳ 3 ಲಕ್ಷ ಜನರಿಗೆ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರು, 35ಸಾವಿರ ಎಕರೆ ನೀರಾವರಿಗೆ ಅನುಕೂಲವಾಗಿದ್ದು, ಪ್ರಸ್ತುತ ಸುಮಾರು 70ಸಾವಿರ ಎಕರೆಗೆ ಅನುಕೂಲವಾಗಿದೆ ಎಂದು ಹೇಳಿದರು. <br /> <br /> ಇದೇ ಮಾದರಿಯಲ್ಲಿಯೇ 7, 300 ಜನ ರೈತರು ಒಗ್ಗೂಡಿ ಸುಮಾರು ್ಙ 22 ಕೋಟಿ ವಂತಿಗೆ ಕಲೆ ಹಾಕಿ ಹಾಗೂ ಜೆ.ಎಚ್. ಪಟೇಲ್ ಸರ್ಕಾರದಲ್ಲಿ ್ಙ. 2 ಕೋಟಿ ಸಹಕಾರದಿಂದ 2001ರಲ್ಲಿ ಸಕ್ಕರೆ ಕಾರ್ಖಾನೆ ಆರಂಭಿಸಲಾಯಿತು. ಕಾರ್ಖಾನೆಯಿಂದ ಸುಮಾರು 30 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ ಎಂದು ವಿವರಿಸಿದರು.<br /> <br /> ತಿಪಟೂರು ಷಡಕ್ಷರಮಠದ ರುದ್ರಮುನಿ ಸ್ವಾಮೀಜಿ ಮಾತನಾಡಿದರು. <br /> ಬೆಲ್ಜಿಯಂನ ಎಲೋಡಿ ನ್ಯೂಬೆನ್, ರೈತಸಂಘದ ನುಲೇನೂರು ಶಂಕರಪ್ಪ ಹಾಜರಿದ್ದರು. ನೀರಾವರಿ ಹೋರಾಟ ಸಮಿತಿ ಕಾರ್ಯಾಧ್ಯಕ್ಷ ಮುರುಘರಾಜೇಂದ್ರ ಒಡೆಯರ್ ಸ್ವಾಗತಿಸಿದರು. ಶೈಲಾ ಶಿವಕುಮಾರ್ ಕಾರ್ಯಕ್ರಮ ನಿರೂಪಿಸಿದರು. <br /> <br /> <strong>ಬಸವತತ್ವ ಧ್ವಜಾರೋಹಣ </strong><br /> ಧ್ವಜ ಎಂಬುದು ಒಂದು ಸಂಕೇತ ಮತ್ತು ಭಾಷೆ. ಅದು ಜನಾಂಗಕ್ಕೆ ಆವಶ್ಯ. ಸತ್ಯವನ್ನು ಸೂಚಿಸುವ ಶಕ್ತಿಯ ಅರಿವಿನ ಅಂಶ ಎಂದು ಸಾಹಿತಿ ಹಾಗೂ ಮಾಜಿ ಸಚಿವೆ ಬಿ.ಟಿ. ಲಲಿತಾ ನಾಯಕ್ ಹೇಳಿದರು.<br /> <br /> ಮುರುಘಾ ಮಠದಲ್ಲಿ ಭಾನುವಾರ ಬೆಳಿಗ್ಗೆ ಬಸವತತ್ವ ಧ್ವಜಾರೋಹಣ ನೇರವೇರಿಸಿ ಮಾತನಾಡಿದ ಅವರು, ಮರದ ನೆರಳನ್ನು ಪೂಜಿಸುವ ನಾವು ಮರವನ್ನು ಮರೆಯುತ್ತಿದ್ದೇವೆ. ಆ ಮರವೇ ಧ್ವಜದ ಸಂಕೇತ ಎಂದರು. <br /> <br /> ಸಹಜ ಶಿವಯೋಗ: ಶರಣ ಸಂಸ್ಕೃತಿ ಎನ್ನುವುದು ಶ್ರಮದ ಸಂಸ್ಕೃತಿ ಕಾಯಕದ ಮೂಲಕ ಬೆವರನ್ನು ಸುರಿಸುವುದು ಆರೋಗ್ಯಪೂರ್ಣವಾದುದು ಎಂದು ಶಿವಮೂರ್ತಿ ಮುರುಘಾಶರಣರು ಹೇಳಿದರು.<br /> ಸಹಜಶಿವಯೋಗದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಶರಣರು ಪಾತ್ರೆ ತಿಕ್ಕುವಾಗ, ಕಸ ಗುಡಿಸುವಾಗ, ಉಳುಮೆ ಮಾಡುವಾಗ ಬರುವ ಬೆವರು ಆರೋಗ್ಯಪೂರ್ಣವಾದುದು ಎಂದರು.<br /> <br /> ನೇತೃತ್ವ ವಹಿಸಿದ್ದ ಗುರುಬಸವಸ್ವಾಮೀಜಿ ಮಾತನಾಡಿ, ಮಾನವ ಬಹಳ ಸಮಸ್ಯೆಗಳ ಸುಳಿಯಲ್ಲಿದ್ದಾನೆ. ಇದರಿಂದ ಹೇಗೆ ಹೊರಬರಬೇಕೆಂದು ತಿಳಿಸಿಕೊಡಲು ಸಹಜ ಶಿವಯೋಗದಂತಹ ಆರೋಗ್ಯಪೂರ್ಣ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ ಎಂದರು. <br /> <br /> ರವೀಂದ್ರ ಪಟ್ಟಣಶೆಟ್ಟಿ ಹಾಗೂ ಡಾ.ಎಸ್.ಬಿ. ಹಂದ್ರಾಳ ಅವರನ್ನು ಗೌರವಿಸಲಾಯಿತು. ಬಸವ ಭೃಂಗೀಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕಲ್ಮೇಶ್ ಪಾಟೀಲ್, ಜಿ. ಬೆನಕಪ್ಪ, ಬಿ.ಟಿ. ಕುಮುದಾನಾಯಕ್ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಚಿತ್ರದುರ್ಗ: ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಮುರುಘಾಮಠದ ಆವರಣದಲ್ಲಿ ಕೃಷಿ ಮೇಳ ಆಯೋಜಿಸಲಾಗಿದೆ.<br /> <br /> ಭಾನುವಾರ ತೋಟಗಾರಿಕೆ ಮತ್ತು ಸಕ್ಕರೆ ಸಚಿವ ಎಸ್.ಎ. ರವೀಂದ್ರನಾಥ್ ಕೃಷಿ ಮೇಳಕ್ಕೆ ಚಾಲನೆ ನೀಡಿದರು.<br /> <br /> ಮೇಳದಲ್ಲಿ ವಿವಿಧ ಮಹಿಳಾ ಸಂಘ-ಸಂಸ್ಥೆಗಳಿಂದ 2000ಕ್ಕೂ ಹೆಚ್ಚು ಮಹಿಳೆಯರು ಭಾಗವಹಿಸಿದ್ದರು. ಕೃಷಿ ಮೇಳದಲ್ಲಿ ರಾಕರ್ ಸ್ಪ್ರೆಯರ್, ಬೇವಿನ ಹಿಂಡಿ, ಮಿಶ್ರಣ ಹಿಂಡಿ, ಎಲೆಗೊಬ್ಬರ, ಕೋಳಿಗೊಬ್ಬರ, ಲಾನ್ ಮೂವರ್, ಹಿಪ್ಪುನೇರಳೆ ತಳಿಗಳು, ಪಶುಪಾಲನಾ ಮತ್ತು ಹೈನುಗಾರಿಕೆ, ಬಾಳೆ, ಸಪೋಟ ಮುಂತಾದವನ್ನು ಪ್ರದರ್ಶಿಸಲಾಗಿದೆ.<br /> <br /> ಕೃಷಿ, ತೋಟಗಾರಿಕೆ, ಸಹಕಾರ, ನೀರಾವರಿ, ಪಶು ಸಂಗೋಪನೆ, ಅರಣ್ಯ, ರೇಷ್ಮೆ, ಜಲಾನಯನ ಇಲಾಖೆ ಹಾಗೂ ಕೃಷಿ ತಂತ್ರಜ್ಞರ ಸಂಸ್ಥೆ, ಕೃಷಿ ವಿಜ್ಞಾನ ಕೇಂದ್ರ, ರೈತ ಸಂಘಗಳು, ಜಲ ಸಂವರ್ಧನ ಇಲಾಖೆ, ಜಿಲ್ಲಾ ಪಂಚಾಯ್ತಿ ಮತ್ತು ಕೃಷಿ ಸಮಾಜದ ಸಹಯೋಗದಲ್ಲಿ ಕೃಷಿ ಮೇಳ ಆಯೋಜಿಸಲಾಗಿದೆ.<br /> <br /> ಮೇಳದಲ್ಲಿ ಮಾತನಾಡಿದ ಮುರುಘಾಮಠದ ಶಿವಮೂರ್ತಿ ಮುರುಘಾ ಶರಣರು, ಮಠದ ಹಿಂಭಾಗದ 10 ಎಕರೆ ಪ್ರದೇಶದಲ್ಲಿ ಸಾವಯವ ಪದ್ಧತಿಯಲ್ಲಿ ಮೂರ್ನಾಲ್ಕು ಬಗೆಯ ಕೃಷಿ ಬೆಳೆಯನ್ನು ಬೆಳೆಯಲಾಗಿದೆ. ಬೆಳೆ ಉತ್ತಮವಾಗಿ ಬಂದಿದ್ದು, ಇದರಲ್ಲಿನ ಟೊಮೆಟೊ, ಮೆಣಸಿನ ಕಾಯಿ, ಕೊತ್ತುಂಬರಿಯನ್ನು ನಿತ್ಯ ದಾಸೋಹಕ್ಕೆ ಬಳಸಿಕೊಳ್ಳಲಾಗುತ್ತಿದೆ ಎಂದರು. <br /> <br /> ರೈತರು ಇಂದು ಹೊಲಗಳಿಗೆ ಹೋಗಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳದೇ ಐಷಾರಾಮಿ ಜೀವನಕ್ಕೆ ಮಾರುಹೋಗಿ ಒಣ ರಾಜಕೀಯ ಚರ್ಚೆಗಳನ್ನು ನಡೆಸುತ್ತಾ ವ್ಯರ್ಥ ಕಾಲಹರಣ ಮಾಡುತ್ತಿದ್ದಾರೆ ಎಂದು ನುಡಿದರು. <br /> <br /> ಕೇಂದ್ರದ ಮಾಜಿ ಸಚಿವ ಸಿದ್ದು ನ್ಯಾಮಗೌಡ ಪಾಟೀಲ್ ಮಾತನಾಡಿ, ನಾಯಕರಾದವರೂ ರೈತರಿಗೆ ಅಗತ್ಯವಿರುವ ಯೋಜನೆಗಳ ರೂಪಿಸುವ ಮತ್ತು ಅನುಷ್ಠಾನಗೊಳಿಸುವ ಬಗ್ಗೆ ಸದಾ ಚಿಂತನೆ ಕೈಗೊಳ್ಳಬೇಕಿದೆ ಎಂದು ನುಡಿದರು. <br /> <br /> ಕೃಷ್ಣಾನದಿ ತೀರದಲ್ಲಿ ಬ್ಯಾರೇಜ್ ನಿರ್ಮಾಣ ಮಾಡಲು ಸರ್ಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗದ ಹಿನ್ನೆಲೆಯಲ್ಲಿ ರೈತರ ನೆರವಿಂದಲೇ 25 ಅಡಿ ಎತ್ತರದ ಬ್ಯಾರೇಜ್ ನಿರ್ಮಾಣ ಮಾಡಲಾಗಿದೆ. ಬ್ಯಾರೇಜ್ ಹಿನ್ನೀರು ಸುಮಾರು 45 ಕಿ.ಮೀ ಇದ್ದು, 27 ಹಳ್ಳಿಗಳ 3 ಲಕ್ಷ ಜನರಿಗೆ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರು, 35ಸಾವಿರ ಎಕರೆ ನೀರಾವರಿಗೆ ಅನುಕೂಲವಾಗಿದ್ದು, ಪ್ರಸ್ತುತ ಸುಮಾರು 70ಸಾವಿರ ಎಕರೆಗೆ ಅನುಕೂಲವಾಗಿದೆ ಎಂದು ಹೇಳಿದರು. <br /> <br /> ಇದೇ ಮಾದರಿಯಲ್ಲಿಯೇ 7, 300 ಜನ ರೈತರು ಒಗ್ಗೂಡಿ ಸುಮಾರು ್ಙ 22 ಕೋಟಿ ವಂತಿಗೆ ಕಲೆ ಹಾಕಿ ಹಾಗೂ ಜೆ.ಎಚ್. ಪಟೇಲ್ ಸರ್ಕಾರದಲ್ಲಿ ್ಙ. 2 ಕೋಟಿ ಸಹಕಾರದಿಂದ 2001ರಲ್ಲಿ ಸಕ್ಕರೆ ಕಾರ್ಖಾನೆ ಆರಂಭಿಸಲಾಯಿತು. ಕಾರ್ಖಾನೆಯಿಂದ ಸುಮಾರು 30 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ ಎಂದು ವಿವರಿಸಿದರು.<br /> <br /> ತಿಪಟೂರು ಷಡಕ್ಷರಮಠದ ರುದ್ರಮುನಿ ಸ್ವಾಮೀಜಿ ಮಾತನಾಡಿದರು. <br /> ಬೆಲ್ಜಿಯಂನ ಎಲೋಡಿ ನ್ಯೂಬೆನ್, ರೈತಸಂಘದ ನುಲೇನೂರು ಶಂಕರಪ್ಪ ಹಾಜರಿದ್ದರು. ನೀರಾವರಿ ಹೋರಾಟ ಸಮಿತಿ ಕಾರ್ಯಾಧ್ಯಕ್ಷ ಮುರುಘರಾಜೇಂದ್ರ ಒಡೆಯರ್ ಸ್ವಾಗತಿಸಿದರು. ಶೈಲಾ ಶಿವಕುಮಾರ್ ಕಾರ್ಯಕ್ರಮ ನಿರೂಪಿಸಿದರು. <br /> <br /> <strong>ಬಸವತತ್ವ ಧ್ವಜಾರೋಹಣ </strong><br /> ಧ್ವಜ ಎಂಬುದು ಒಂದು ಸಂಕೇತ ಮತ್ತು ಭಾಷೆ. ಅದು ಜನಾಂಗಕ್ಕೆ ಆವಶ್ಯ. ಸತ್ಯವನ್ನು ಸೂಚಿಸುವ ಶಕ್ತಿಯ ಅರಿವಿನ ಅಂಶ ಎಂದು ಸಾಹಿತಿ ಹಾಗೂ ಮಾಜಿ ಸಚಿವೆ ಬಿ.ಟಿ. ಲಲಿತಾ ನಾಯಕ್ ಹೇಳಿದರು.<br /> <br /> ಮುರುಘಾ ಮಠದಲ್ಲಿ ಭಾನುವಾರ ಬೆಳಿಗ್ಗೆ ಬಸವತತ್ವ ಧ್ವಜಾರೋಹಣ ನೇರವೇರಿಸಿ ಮಾತನಾಡಿದ ಅವರು, ಮರದ ನೆರಳನ್ನು ಪೂಜಿಸುವ ನಾವು ಮರವನ್ನು ಮರೆಯುತ್ತಿದ್ದೇವೆ. ಆ ಮರವೇ ಧ್ವಜದ ಸಂಕೇತ ಎಂದರು. <br /> <br /> ಸಹಜ ಶಿವಯೋಗ: ಶರಣ ಸಂಸ್ಕೃತಿ ಎನ್ನುವುದು ಶ್ರಮದ ಸಂಸ್ಕೃತಿ ಕಾಯಕದ ಮೂಲಕ ಬೆವರನ್ನು ಸುರಿಸುವುದು ಆರೋಗ್ಯಪೂರ್ಣವಾದುದು ಎಂದು ಶಿವಮೂರ್ತಿ ಮುರುಘಾಶರಣರು ಹೇಳಿದರು.<br /> ಸಹಜಶಿವಯೋಗದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಶರಣರು ಪಾತ್ರೆ ತಿಕ್ಕುವಾಗ, ಕಸ ಗುಡಿಸುವಾಗ, ಉಳುಮೆ ಮಾಡುವಾಗ ಬರುವ ಬೆವರು ಆರೋಗ್ಯಪೂರ್ಣವಾದುದು ಎಂದರು.<br /> <br /> ನೇತೃತ್ವ ವಹಿಸಿದ್ದ ಗುರುಬಸವಸ್ವಾಮೀಜಿ ಮಾತನಾಡಿ, ಮಾನವ ಬಹಳ ಸಮಸ್ಯೆಗಳ ಸುಳಿಯಲ್ಲಿದ್ದಾನೆ. ಇದರಿಂದ ಹೇಗೆ ಹೊರಬರಬೇಕೆಂದು ತಿಳಿಸಿಕೊಡಲು ಸಹಜ ಶಿವಯೋಗದಂತಹ ಆರೋಗ್ಯಪೂರ್ಣ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ ಎಂದರು. <br /> <br /> ರವೀಂದ್ರ ಪಟ್ಟಣಶೆಟ್ಟಿ ಹಾಗೂ ಡಾ.ಎಸ್.ಬಿ. ಹಂದ್ರಾಳ ಅವರನ್ನು ಗೌರವಿಸಲಾಯಿತು. ಬಸವ ಭೃಂಗೀಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕಲ್ಮೇಶ್ ಪಾಟೀಲ್, ಜಿ. ಬೆನಕಪ್ಪ, ಬಿ.ಟಿ. ಕುಮುದಾನಾಯಕ್ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>