<p><strong>ಕೊಳ್ಳೇಗಾಲ</strong>: ಯಜಮಾನರು ಮತ್ತು ಮುಖಂಡರ ಮಧ್ಯಸ್ಥಿಕೆಯಲ್ಲಿ ಪ್ರೇಮಿಗಳು ಇಲ್ಲಿನ ಉಪನೋಂದಣಿ ಕಚೇರಿಯಲ್ಲಿ ವಿವಾಹವಾಗುವ ಮೂಲಕ ಬುಧವಾರ ದಾಂಪತ್ಯಕ್ಕೆ ಅಡಿಯಿಟ್ಟರು.<br /> <br /> ಪಟ್ಟಣ ವ್ಯಾಪ್ತಿಯ ಮುತ್ತಾಪುರ ಹುಂಡಿ ಎಸ್. ಮಹೇಶ್ ಮತ್ತು ಅದೇ ಗ್ರಾಮದ ರುಕ್ಮಿಣಿ ಎರಡು ವರ್ಷಗಳಿಂದ ಪರಸ್ಪರ ಪ್ರೇಮಿಸಿ ವಿವಾಹವಾದರು.<br /> <br /> ಮದುವೆಗೆ ಹುಡುಗಿ ಮನೆಯವರು ಒಪ್ಪಿಗೆ ನೀಡದ ಕಾರಣ ರುಕ್ಷ್ಮಿಣಿ ಕುಲಸ್ಥರು ಗ್ರಾಮದಲ್ಲಿ ನ್ಯಾಯ ಪಂಚಾಯಿತಿ ನಡೆಸಿದ್ದರು. ಗ್ರಾಮಸ್ಥರ ಸಮ್ಮುಖದಲ್ಲಿಯೇ ಮಂಗಳವಾರ ತಾಳಿಕಟ್ಟಿಸುವ ಮೂಲಕ ವಿವಾಹ ನೆರವೇರಿತ್ತು. ವಿವಾಹದ ನಂತರ ಮಹೇಶ್ ಮನೆಗೆ ಕರೆದುಕೊಂಡು ಹೋಗಲು ನಿರಾಕರಿಸಿದ ಕಾರಣ ಈ ಬಗ್ಗೆ ರುಕ್ಷ್ಮಿಣಿ ಪಟ್ಟಣ ಪೊಲೀಸರಿಗೆ ದೂರು ನೀಡಿದ್ದರು.<br /> <br /> ಸಬ್ ಇನ್ಸ್ಪೆಕ್ಟರ್ ಸಂದೀಪ್ಕುಮಾರ್, ಹುಡುಗ-ಹುಡುಗಿ ಕಡೆಯ ಯಜಮಾನರು ಠಾಣೆಯಲ್ಲಿ ಸಭೆ ನಡೆಸಿ, ಪರಸ್ಪರ ಒಪ್ಪಿಗೆ ಸೂಚಿಸಿದರು. ಯಜಮಾನರುಗಳ ಸಮ್ಮುಖದಲ್ಲೇ ಸಬ್ರಿಜಿಸ್ಟ್ರಾರ್ ಕಚೇರಿಯಲ್ಲಿ ವಿವಾಹ ನೋಂದಣಿ ಏರ್ಪಟ್ಟಿತು. ಹೊರಗೆ ಪ್ರೇಮಿಗಳು ಪರಸ್ಪರ ಹಾರ ಬದಲಾಯಿಸಿ, ಹೊಸ ಬಾಳಿಗೆ ಮುನ್ನುಡಿ ಬರೆದರು.<br /> <br /> ಲಿಂಗರಾಜು, ಸಿದ್ದರಾಜು, ಮಹೇಶ್ಮನೋಹರ್, ರವಿ, ಸಿದ್ದರಾಜು, ಬಸಂತ್ ಮೋಟಾಯ್, ಜಗದೀಶ್, ರಾಜು, ಕೆಂಚ ಇತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೊಳ್ಳೇಗಾಲ</strong>: ಯಜಮಾನರು ಮತ್ತು ಮುಖಂಡರ ಮಧ್ಯಸ್ಥಿಕೆಯಲ್ಲಿ ಪ್ರೇಮಿಗಳು ಇಲ್ಲಿನ ಉಪನೋಂದಣಿ ಕಚೇರಿಯಲ್ಲಿ ವಿವಾಹವಾಗುವ ಮೂಲಕ ಬುಧವಾರ ದಾಂಪತ್ಯಕ್ಕೆ ಅಡಿಯಿಟ್ಟರು.<br /> <br /> ಪಟ್ಟಣ ವ್ಯಾಪ್ತಿಯ ಮುತ್ತಾಪುರ ಹುಂಡಿ ಎಸ್. ಮಹೇಶ್ ಮತ್ತು ಅದೇ ಗ್ರಾಮದ ರುಕ್ಮಿಣಿ ಎರಡು ವರ್ಷಗಳಿಂದ ಪರಸ್ಪರ ಪ್ರೇಮಿಸಿ ವಿವಾಹವಾದರು.<br /> <br /> ಮದುವೆಗೆ ಹುಡುಗಿ ಮನೆಯವರು ಒಪ್ಪಿಗೆ ನೀಡದ ಕಾರಣ ರುಕ್ಷ್ಮಿಣಿ ಕುಲಸ್ಥರು ಗ್ರಾಮದಲ್ಲಿ ನ್ಯಾಯ ಪಂಚಾಯಿತಿ ನಡೆಸಿದ್ದರು. ಗ್ರಾಮಸ್ಥರ ಸಮ್ಮುಖದಲ್ಲಿಯೇ ಮಂಗಳವಾರ ತಾಳಿಕಟ್ಟಿಸುವ ಮೂಲಕ ವಿವಾಹ ನೆರವೇರಿತ್ತು. ವಿವಾಹದ ನಂತರ ಮಹೇಶ್ ಮನೆಗೆ ಕರೆದುಕೊಂಡು ಹೋಗಲು ನಿರಾಕರಿಸಿದ ಕಾರಣ ಈ ಬಗ್ಗೆ ರುಕ್ಷ್ಮಿಣಿ ಪಟ್ಟಣ ಪೊಲೀಸರಿಗೆ ದೂರು ನೀಡಿದ್ದರು.<br /> <br /> ಸಬ್ ಇನ್ಸ್ಪೆಕ್ಟರ್ ಸಂದೀಪ್ಕುಮಾರ್, ಹುಡುಗ-ಹುಡುಗಿ ಕಡೆಯ ಯಜಮಾನರು ಠಾಣೆಯಲ್ಲಿ ಸಭೆ ನಡೆಸಿ, ಪರಸ್ಪರ ಒಪ್ಪಿಗೆ ಸೂಚಿಸಿದರು. ಯಜಮಾನರುಗಳ ಸಮ್ಮುಖದಲ್ಲೇ ಸಬ್ರಿಜಿಸ್ಟ್ರಾರ್ ಕಚೇರಿಯಲ್ಲಿ ವಿವಾಹ ನೋಂದಣಿ ಏರ್ಪಟ್ಟಿತು. ಹೊರಗೆ ಪ್ರೇಮಿಗಳು ಪರಸ್ಪರ ಹಾರ ಬದಲಾಯಿಸಿ, ಹೊಸ ಬಾಳಿಗೆ ಮುನ್ನುಡಿ ಬರೆದರು.<br /> <br /> ಲಿಂಗರಾಜು, ಸಿದ್ದರಾಜು, ಮಹೇಶ್ಮನೋಹರ್, ರವಿ, ಸಿದ್ದರಾಜು, ಬಸಂತ್ ಮೋಟಾಯ್, ಜಗದೀಶ್, ರಾಜು, ಕೆಂಚ ಇತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>